Ad Widget

ಮಂಗಳೂರು: ಕೈದಿಗೆ ಗಾಂಜಾ ನೀಡಲು ಯತ್ನ : ಅನನಾಸಿನ ಹಣ್ಣು ತಂದ ವ್ಯಕ್ತಿ ಪೊಲೀಸ್ ಅತಿಥಿ

Ad Widget . Ad Widget . Ad Widget . Ad Widget . Ad Widget . Ad Widget

ಮಂಗಳೂರು: ಅನನಾಸಿನ ಹಣ್ಣಿ ನೊಳಗೆ ಗಾಂಜಾ ವನ್ನು ಇಟ್ಟು ಕೈದಿಯೋರ್ವನಿಗೆ ನೀಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

Ad Widget . Ad Widget .

ಅಬ್ದುಲ್ ಮಜೀದ್ ಬಿನ್ ಅಬ್ದುಲ್ ಖಾದ್ರಿ ಎಂಬಾತ ಬಂಧಿತ ವ್ಯಕ್ತಿ. ಈತ ಕಾರಾಗೃಹದಲ್ಲಿರುವ ರಾಜು ಯಾನೆ ರಾಜಪ್ಪ ಎನ್ನುವ ವಿಚಾರಣಾಧೀನ ಕೈದಿಗೆ ನೀಡಲೆಂದು ಆಗಸ್ಟ್ 9ರ ಬೆಳಗ್ಗೆ ಅನನಾಸು ಹಣ್ಣು ತಂದಿದ್ದ. ಜೈಲಿನ ಪ್ರವೇಶದ್ವಾರದ ಬಳಿ ಎಕ್ಸರೇ ಬ್ಯಾಗಿನಲ್ಲಿ ಹಣ್ಣನ್ನು ಪರಿಶೀಲಿಸಿದಾಗ ಹಣ್ಣಿನೊಳಗೆ ಅನುಮಾನಾಸ್ಪದ ವಸ್ತು ಇರುವುದು ಗೊತ್ತಾಯಿತು. ಅದನ್ನು ಒಡೆದು ನೋಡಿದಾಗ ಅದರೊಳಗೆ ಪ್ಲಾಸ್ಟಿಕ್ ನಲ್ಲಿ ಗಾಂಜಾದಂತೆ ತೋರುವ ವಸ್ತು ಪತ್ತೆಯಾಗಿದೆ.

ತಕ್ಷಣ ಅಬ್ದುಲ್ ಮಜೀದ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *