ಕೊರೋನಾ ಓಡಿಸಲು ನೂರಾರು ಕೆಜಿ ಅನ್ನ ಮಣ್ಣಿಗೆ ಸುರಿದರು….! ಮತ್ತೆ ಮತ್ತೆ ಮೂಢನಂಬಿಕೆಯಲ್ಲಿ ಮುಳುಗುತ್ತಿದ್ದಾರೆ ಜನ

ಬಳ್ಳಾರಿ: ಗ್ರಾಮ ಗ್ರಾಮಕ್ಕೂ ಸೋಂಕು ನುಗ್ಗಿ ಮರಣ ಮೃದಂಗ ಭಾರಿಸುತ್ತಿದ್ದರೂ, ಕೊರೋನಾ ಹೋಗಲಾಡಿಸಲು ವೈಜ್ಞಾನಿಕ ಮುನ್ನೆಚ್ಟರಿಕೆ ವಹಿಸುವ ಬದಲು, ಮೌಢ್ಯದ ಕಡೆ ಮುಖ ಮಾಡಿದ ಗ್ರಾಮೀಣ ಭಾಗದ ಜನ, ಇದೀಗ ನೂರಾರು ಕೆಜಿ ಅನ್ನ ಮಣ್ಣುಪಾಲು ಮಡಿರುವ ಘಟನೆ ತಾಲೂಕಿನ ಡಿ ಕಗ್ಗಲ್ಲು ಗ್ರಾಮದಲ್ಲಿ ನಡೆದಿದೆ.

. Ad Widget . Ad Widget . Ad Widget .

ತಿನ್ನೋ ಅನ್ನ ಮಣ್ಣುಪಾಲು ಮಾಡಿದರೆ ಕೊರೊನಾ ದೂರವಾಗಲಿದೆ ಎಂಬ ಮೂಡನಂಬಿಕೆಯಲ್ಲಿ ಮುಳುಗಿರುವ ಜನ, ನೂರಾರು ಕೆಜಿ ಅನ್ನ ಮಣ್ಣುಪಾಲು ಮಾಡಿದ್ದಾರೆ. ಮನೆ ಮನೆಯಲ್ಲಿ ಅನ್ನ ಮಾಡಿಸಿ ರಾತ್ರಿ ವೇಳೆಯಲ್ಲಿ ಊರ ಆಚೆ ಚೆಲ್ಲಿ ಬಂದಿದ್ದಾರೆ. ಗ್ರಾಮದಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಹಳ್ಳಿ ಜನತೆ ಮೂಢನಂಬಿಕೆ ಕಡೆ ಮುಖ ಮಾಡಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಬಳ್ಳಾರಿ ತಾಲೂಕಿನ ಡಿ ಕಗ್ಗಲ್ಲು ಗ್ರಾಮದಲ್ಲಿ ಪ್ರತಿ ಮನೆಯಲ್ಲಿ 5 ಕೆ.ಜಿ ಅನ್ನ ಮಾಡಿ ಒಂದು ಕಡೆ ಸಂಗ್ರಹ ಮಾಡುದ್ದಾರೆ. ಬಳಿಕ ಗ್ರಾಮದ ಹೊರಭಾಗದಲ್ಲಿ ಹೋಗಿ ನೆಲಕ್ಕೆ ಸುರಿದು ಬಂದಿದ್ದಾರೆ. ಒಂದು ಕಡೆ ತುತ್ತು ಅನ್ನಕ್ಕಾಗಿ ಜನ ಪರದಾಡುತ್ತಿದ್ದರೂ ಮತ್ತೊಂದು ಕಡೆ ಮೂಢನಂಬಿಕೆಯಿಂದ ನೂರಾರು ಕೆ.ಜಿ ಅನ್ನ ಮಣ್ಣುಪಾಲಾಗಿದೆ.

Leave a Comment

Your email address will not be published. Required fields are marked *