ರಾಜಕೀಯ

ಕಾಂಗ್ರೆಸ್ ವಿರುದ್ದ ಬಿಜೆಪಿಯಿಂದ ‌’ಥಟ್ ಅಂತ ಹೇಳಿ’ ಅಭಿಯಾನ

ಸಮಗ್ರ ನ್ಯೂಸ್: ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ನಡೆದ ಹಳೆ ಪ್ರಕರಣಗಳನ್ನು ಮತ್ತೆ ಕೆದಕಿರುವ ಬಿಜೆಪಿ, ಸಾಮಾಜಿಕ ಜಾಲತಾಣದಲ್ಲಿ ‘ಥಟ್‌ ಅಂತ ಹೇಳಿ’ ಅಭಿಯಾನ ಪ್ರಾರಂಭಿಸಿದೆ. ಐಎಎಸ್‌ ಅಧಿಕಾರಿ ಡಿ.ಕೆ. ರವಿ ಹಾಗೂ ಡಿವೈಎಸ್‌ಪಿ ಎಂ.ಕೆ. ಗಣಪತಿ ಎಂಬ ಇಬ್ಬರು ದಕ್ಷ ಅಧಿಕಾರಿಗಳ ಸಾವಿಗೆ ಕಾರಣ ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ. ಇದಕ್ಕೆ ಉತ್ತರದ ಆಯ್ಕೆಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾಜಿ ಸಚಿವ ಕೆ.ಜೆ.ಜಾರ್ಜ್‌, ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರ ಹೆಸರನ್ನು ನೀಡಿದೆ. ಅದೇ […]

ಕಾಂಗ್ರೆಸ್ ವಿರುದ್ದ ಬಿಜೆಪಿಯಿಂದ ‌’ಥಟ್ ಅಂತ ಹೇಳಿ’ ಅಭಿಯಾನ Read More »

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮನೆಗೆ 200 ಯೂನಿಟ್ ಪ್ರೀ ವಿದ್ಯುತ್ – ಡಿಕೆಶಿ

ಸಮಗ್ರ ನ್ಯೂಸ್: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಘೋಷಣೆ ಮಾಡಿದ್ದಾರೆ. ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕದ ಜನತೆಯ ಸಂಕಷ್ಟಗಳನ್ನು ಪರಿಹಾರ ಮಾಡುವುದೇ ಪ್ರಜಾಧ್ವನಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಬೆಳಗಾವಿಯ ಈ ಭಾಗದಿಂದ ನಾಂದಿ ಹಾಡಿದ್ದೇವೆ. ಭಾರತದ ಜನತೆ ಬೆಲೆ ಏರಿಕೆಯಿಂದ ನಲುಗಿ ಹೋಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮನೆಗೆ 200 ಯೂನಿಟ್ ಪ್ರೀ ವಿದ್ಯುತ್ – ಡಿಕೆಶಿ Read More »

ವಿದ್ಯಾಕಾಶಿಯಲ್ಲಿಂದು ರಾಷ್ಟ್ರೀಯ ಯುವಜನೋತ್ಸವ| ಪ್ರಧಾನಿ ಮೋದಿ ಭರ್ಜರಿ‌ ರೋಡ್ ಶೋ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದು ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ರೋಡ್​ಶೋ ಮಾಡುವುದು ಫೈನಲ್​ ಆಗಿದೆ. ಅವಳಿ ನಗರದಲ್ಲಿ ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತಿದೆ. 5 ದಿನಗಳ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ನೆಹರೂ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹುಬ್ಬಳ್ಳಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. 2023ರ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದೆ ಬಿಜೆಪಿ. ಹಾಗಾಗಿ ಪ್ರಧಾನಿ ಮೋದಿ ಎಂಬ ಮ್ಯಾಜಿಕ್​ಮೆನ್​​ರನ್ನ ಕರೆಸಿ ಸಮಾವೇಶ ನಡೆಸುತ್ತಿದೆ. ಬರೀ ಸಮಾವೇಶ

ವಿದ್ಯಾಕಾಶಿಯಲ್ಲಿಂದು ರಾಷ್ಟ್ರೀಯ ಯುವಜನೋತ್ಸವ| ಪ್ರಧಾನಿ ಮೋದಿ ಭರ್ಜರಿ‌ ರೋಡ್ ಶೋ Read More »

ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳಿವರು| ಹೊಸ ಪ್ರಯೋಗಕ್ಕೆ ಮುಂದಾದ ಕೈ ಹೈಕಮಾಂಡ್

ಸಮಗ್ರ ‌ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಸಜ್ಜಾಗುತ್ತಿದ್ದು, ಕರಾವಳಿ ರಾಜಕೀಯದ ಮಟ್ಟಿಗೆ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಹೈಕಮಾಂಡ್ ಹೊಸಮುಖದ ಸೂತ್ರ ಜಾರಿಗೆ ತರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆಯನ್ನು ಬಹುತೇಕ ಫೈನಲ್ ಮಾಡಿದ್ದು, ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಕರಾವಳಿಯಲ್ಲಿ ಕಾಂಗ್ರೆಸ್

ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳಿವರು| ಹೊಸ ಪ್ರಯೋಗಕ್ಕೆ ಮುಂದಾದ ಕೈ ಹೈಕಮಾಂಡ್ Read More »

ಸುಳ್ಯ ತಾಲೂಕು ಆಡಳಿತದಲ್ಲಿ ಅಧಿಕಾರಿಗಳು ಆಡಿದ್ದೇ ಆಟ| ಮೌನಕ್ಕೆ ಶರಣಾದ ಜನಪ್ರತಿ”ನಿಧಿ”ಗಳು|

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಯಲ್ಲಿ ವಾಸನೆ ಬಡಿಯುತ್ತಿದ್ದು ಇದೀಗ ಇದೇ ರೀತಿಯಲ್ಲಿ ನ್ಯಾಯಾಲಯದ ಆದೇಶ ಧಿಕ್ಕರಿಸಿ ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಸುಳ್ಯದಲ್ಲಿ ಹಲವಾರು ತಿಂಗಳುಗಳ ಕಾಲ ಪೋಲೀಸ್ ಕಾವಲು ಕುಳಿತು ಕೋಮು ಸಂಘರ್ಷವನ್ನು ತಹಬದಿಗೆ ತಂದಿರುವ ಮೇನಾಲ ದರ್ಗಾ ಬಳಿಯ 155/1 ಮತ್ತು 155/ 2 ಸರ್ವೆ ನಂಬರ್ ಸರಕಾರಿ ಸ್ಥಳವಾಗಿದ್ದು ಕೆಲ ದಿನಗಳ ಹಿಂದೆ ಕಾಂಪೌಂಡ್ ವಿಚಾರವಾಗಿ ಭಾರಿ ಹೈ ಡ್ರಾಮವೇ ನಡೆದು

ಸುಳ್ಯ ತಾಲೂಕು ಆಡಳಿತದಲ್ಲಿ ಅಧಿಕಾರಿಗಳು ಆಡಿದ್ದೇ ಆಟ| ಮೌನಕ್ಕೆ ಶರಣಾದ ಜನಪ್ರತಿ”ನಿಧಿ”ಗಳು| Read More »

ಚುನಾವಣೆಯಲ್ಲಿ ಸೋಲಿಸಲು ಪಕ್ಷೇತರರಿಗೆ ಹಣ ನೀಡಿಲ್ಲವೆಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ| ವಿಜಯೇಂದ್ರ, ನಿರಾಣಿಗೆ ಸವಾಲೆಸೆದ ಯತ್ನಾಳ್

ಸಮಗ್ರ ನ್ಯೂಸ್: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪಕ್ಷೇತರ ಅಭ್ಯರ್ಥಿಗಳಿಗೆ ಒಂದು ರೂಪಾಯಿ ಹಣವನ್ನೂ ನೀಡಿಲ್ಲ ಎಂದು ಸಚಿವ ನಿರಾಣಿ ಹಾಗೂ ವಿಜಯೇಂದ್ರ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ಸನ್ನಿಧಾನದಲ್ಲಿ ಆಣೆ ಮಾಡಲಿ ಎಂದು ಶಾಸಕ ಯತ್ನಾಳ್ ಸವಾಲು ಹಾಕಿದ್ದಾರೆ. ವಿಜಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾಚಣೆಯಲ್ಲಿ ನನಗೆ ಟಿಕೆಟ್ ಕೊಡಿಸಲು, ಸೋಲಿಸಲು ನಿರಾಣಿ ಯಾರು ಎಂದು ಹರಿಹಾಯ್ದು, ಪಾಲಿಕೆ ಚುನಾವಣೆಯಲ್ಲಿ ನೀವು ಯಾರಿಗೆ ಎಷ್ಟು ಹಣ ಕೊಟ್ಟಿದ್ದೀರಿ ಎಂಬುದು ಗೊತ್ತು, ಈ ವಿಚಾರ

ಚುನಾವಣೆಯಲ್ಲಿ ಸೋಲಿಸಲು ಪಕ್ಷೇತರರಿಗೆ ಹಣ ನೀಡಿಲ್ಲವೆಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ| ವಿಜಯೇಂದ್ರ, ನಿರಾಣಿಗೆ ಸವಾಲೆಸೆದ ಯತ್ನಾಳ್ Read More »

ತಾಕತ್ತಿದ್ದರೆ ಗುದ್ದಲಿ ಪೂಜೆ ದಿನವೇ ಕಾಮಗಾರಿ ಆರಂಭಿಸಿ| ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಅರಂತೋಡು- ಎಲಿಮಲೆ‌ ರಸ್ತೆ ಕಾಮಗಾರಿಗೆ ಆಗ್ರಹ

ಸಮಗ್ರ ನ್ಯೂಸ್: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸುಳ್ಯ ತಾಲೂಕಿನ ಅರಂತೋಡು- ಅಡ್ತಲೆ- ಎಲಿಮಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಕಳೆದ ಕೆಲ ತಿಂಗಳಿನಿಂದ ಮತದಾನ ಬಹಿಷ್ಕಾರ ನಿರ್ಧಾರ ಮಾಡಿ ಅಹವಾಲು ಸಲ್ಲಿಸುತ್ತಿದ್ದು, ಈ ಬೆನ್ನಲ್ಲೇ ಶಾಸಕ ಹಾಗೂ ಸಚಿವ ಎಸ್ .ಅಂಗಾರ ಕಾಮಗಾರಿ ಗುದ್ದಲಿ ಪೂಜೆಗೆ ದಿನ ನಿಗದಿ ಮಾಡಿದ್ದಾರೆ. ಆದರೆ ಇದಕ್ಕೆ ಸೆಡ್ಡು‌ ಹೊಡೆದಿರುವ ನಾಗರಿಕ ಹಿತರಕ್ಷಣಾ ವೇದಿಕೆ ಗುದ್ದಲಿ ಪೂಜೆಗೆ ಗ್ರಾಮಸ್ಥರು ಮಾನ್ಯತೆ ನೀಡುವುದಿಲ್ಲ, ಒಂದು ವೇಳೆ ಗುದ್ದಲಿ ಪೂಜೆ

ತಾಕತ್ತಿದ್ದರೆ ಗುದ್ದಲಿ ಪೂಜೆ ದಿನವೇ ಕಾಮಗಾರಿ ಆರಂಭಿಸಿ| ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಅರಂತೋಡು- ಎಲಿಮಲೆ‌ ರಸ್ತೆ ಕಾಮಗಾರಿಗೆ ಆಗ್ರಹ Read More »

ಮನವಿ ಕೊಟ್ರೆ ಕೆಲ್ಸ ಆಗಲ್ಲ; ಸರ್ಕಾರ ದುಡ್ಡು ಕೊಟ್ರೆ ಮಾತ್ರ ಕೆಲ್ಸ ಆಗುತ್ತೆ| ಸಚಿವನಾಗಿದ್ರೂ ಬೇರೆ ಪಕ್ಷದ ಶಾಸಕನಂತೆ ಹೇಳಿಕೆ‌ ನೀಡಿದ ಎಸ್.ಅಂಗಾರ

ಸಮಗ್ರ ನ್ಯೂಸ್: ನಾಗರೀಕರು ಮನವಿ ಕೊಟ್ಟರೆ ಯಾವುದೇ ಕೆಲಸಗಳು ಆಗುವುದಿಲ್ಲ. ಕಾಮಗಾರಿ‌ ನಡೆಸಲು ಸರ್ಕಾರ ಹಣ‌ ಬಿಡುಗಡೆ‌ ಮಾಡಬೇಕು, ಮನವಿ ಕೊಟ್ಟ ಮಾತ್ರಕ್ಕೆ ಕೆಲಸವಾಗದು, ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸಚಿವರ ಈ ಒಟ್ಟಾರೆ ಹೇಳಿಕೆಯಿಂದ ಕಡಬ ತಾಲೂಕಿನ ಬಲ್ಯ ಗ್ರಾಮದ ಜನರಿಗೆ ನಾವು ಬೇರೆ ಪಕ್ಷದ ಶಾಸಕನೊಂದಿಗೆ ಮಾತನಾಡ್ತಿದ್ದೆವೆಯೋ ಎಂಬ ಅನುಮಾನ ಕಾಡಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮತದಾರರ ಆಕ್ರೋಶ ಅಲ್ಲಲ್ಲಿ ಪ್ರಕಟವಾಗತೊಡಗಿದ್ದು, ಗುದ್ದಲಿ ಪೂಜೆಗೆಂದು ಆಗಮಿಸಿದ ಸುಳ್ಯ ಶಾಸಕ , ಸಚಿವ ಎಸ್‌.ಅಂಗಾರ ಅವರಿಗೆ ‘ಮೊದಲು

ಮನವಿ ಕೊಟ್ರೆ ಕೆಲ್ಸ ಆಗಲ್ಲ; ಸರ್ಕಾರ ದುಡ್ಡು ಕೊಟ್ರೆ ಮಾತ್ರ ಕೆಲ್ಸ ಆಗುತ್ತೆ| ಸಚಿವನಾಗಿದ್ರೂ ಬೇರೆ ಪಕ್ಷದ ಶಾಸಕನಂತೆ ಹೇಳಿಕೆ‌ ನೀಡಿದ ಎಸ್.ಅಂಗಾರ Read More »

ರಾಜಕೀಯ ನಿವೃತ್ತಿ ಘೋಷಿಸಿದ ಎಸ್.ಎಂ ಕೃಷ್ಣ

ಸಮಗ್ರ ನ್ಯೂಸ್: ಮಾಜಿ ಸಿಎಂ ಎಸ್.ಎಂ ಕೃಷ್ಣ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಎಸ್ ಎಂ ಕೃಷ್ಣ ನಾನು ಹೆಚ್ಚಾಗಿ ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. 90 ವರ್ಷದ ವಯಸ್ಸಿನಲ್ಲಿ 50 ವರ್ಷದ ವ್ಯಕ್ತಿ ಹಾಗೆ ನಟಿಸೋಕೆ ಆಗುತ್ತಾ..? ಆದ್ದರಿಂದ ರಾಜಕೀಯ ಜೀವನಕ್ಕೆ ಗುಡ್ ಬೈ ಹೇಳುವ ಬಗ್ಗೆ ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ವಯಸ್ಸಿನ ಕಾರಣದಿಂದ ಸಾರ್ವಜನಿಕ ಜೀವನದಿಂದ ದೂರ ಇದ್ದೇನೆ, ಹಾಗಾಗಿ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆ

ರಾಜಕೀಯ ನಿವೃತ್ತಿ ಘೋಷಿಸಿದ ಎಸ್.ಎಂ ಕೃಷ್ಣ Read More »

ಭಾರತ್‌‌ ಜೋಡೋ ಯಾತ್ರೆಯಲ್ಲಿ ಸಹೋದರಿಯ ಅಪ್ಪಿ ಮುದ್ದಾಡಿದ ರಾಗಾ| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಭಾರತ್ ಜೋಡೋ ಯಾತ್ರೆ ಯುಪಿಗೆ ಕಾಲಿಟ್ಟಿದ್ದು, ಕಾಂಗ್ರೆಸ್ ನಾಯಕಿ ಮತ್ತು ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ಅದಕ್ಕೆ ಸೇರಿಕೊಂಡರು. ಈ ವೇಳೆ ವೇದಿಕೆ ಮೇಲೆಯೇ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ರಾಹುಲ್ ಅಪ್ಪಿ ಮುತ್ತಿಟ್ಟಿದ್ದು, ವಿಡಿಯೋ ಸಧ್ಯ ವೈರಲ್ ಆಗ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಅವರನ್ನ ಆತ್ಮೀಯವಾಗಿ ಸ್ವಾಗತಿಸಿದರು. ಇಬ್ಬರೂ ನಾಯಕರು ಒಟ್ಟಿಗೆ ವೇದಿಕೆ ಹಂಚಿಕೊಂಡು ಜನರನ್ನುದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ ರಾಹುಲ್ ಗಾಂಧಿ

ಭಾರತ್‌‌ ಜೋಡೋ ಯಾತ್ರೆಯಲ್ಲಿ ಸಹೋದರಿಯ ಅಪ್ಪಿ ಮುದ್ದಾಡಿದ ರಾಗಾ| ವಿಡಿಯೋ ವೈರಲ್ Read More »