ರಾಜ್ಯ

ಜೂನ್ 21ರಿಂದ ದೇಶವಾಸಿಗಳಿಗೆ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಜೂನ್ 21ರಿಂದ ಕೇಂದ್ರದಿಂದಲೇ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ ದೀಪಾವಳಿವರೆಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಉಚಿತ ಪಡಿತರ ವಿತರಿಸಲಾಗುವುದು ಎಂದು ತಿಳಿಸಿದರು. ಮೋದಿ ಭಾಷಣದ ಸಾರಾಂಶವೇನು?:ಕೊರೊನಾ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿದ್ದು, ಅನೇಕು ತಮ್ಮವರನ್ನು ಕಳೆದುಕೊಂಡಿದ್ದಾರೆ. ಇದು 100 ವರ್ಷಗಳಲ್ಲಿಯೇ ಅತಿ ದೊಡ್ಡ ಮಹಾಮಾರಿ. ಕೋವಿಡ್ ವಿರುದ್ಧ ಹೋರಾಟದ ವೇಳೆ ದೇಶದಲ್ಲಿಯೇ ಹೊಸ ಆರೋಗ್ಯ ವ್ಯವಸ್ಥೆ […]

ಜೂನ್ 21ರಿಂದ ದೇಶವಾಸಿಗಳಿಗೆ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ Read More »

ಜೂ.14 ರ ಬಳಿಕ ರಾಜ್ಯ ಅನ್ ಲಾಕ್ ಪ್ಲ್ಯಾನ್ ಮಾಡ್ತಿದಾರೆ ಸಿಎಂ | ಹೇಗಿರುತ್ತೆ ಅನ್ಲಾಕ್ ಗೊತ್ತಾ?

ಬೆಂಗಳೂರು: ಕೊರೊನಾ ಮಹಾಮಾರಿ ಕಟ್ಟಿ ಹಾಕಲು ವಿಧಿಸಲಾಗಿರೋ ಸೆಕೆಂಡ್ ರೌಂಡ್ ಲಾಕ್ಡೌನ್ ಇಂದಿಗೆ ಮುಗಿದಿದ್ದು, ಇವತ್ತಿನಿಂದ ಮೂರನೇ ಭಾಗ ಶುರುವಾಗಿದೆ. ಹಿಂದಿನ ಗೈಡ್ಲೈನ್ಸ್ ಪ್ರಕಾರವೇ ಜೂನ್ 14ರವರೆಗೂ ಜನ ಮನೆಯಲ್ಲೇ ಲಾಕ್ ಆಗಿರಬೇಕಿದೆ. ಆದ್ರೆ ಜೂನ್ 14 ರ ಬಳಿಕ ರಾಜ್ಯ ಅನ್ಲಾಕ್ ಆಗುತ್ತಾ ಅಥವಾ ಮುಂದುವರಿಯುತ್ತಾ ಅನ್ನೋ ಕುತೂಹಲ ಈಗ ಜನರಿಗೆ ಉಳಿದಿದೆ. ಇವತ್ತಿನಿಂದ ಮತ್ತೊಂದು ಸುತ್ತಿನ ಒಂದು ವಾರದ ಲಾಕ್ ಡೌನ್ ‌ಶುರುವಾಗಿದ್ದು, ಜೂನ್ 14 ರವರೆಗೂ ವಿಸ್ತರಣೆಯಾಗಿರೋ ಈ ಲಾಕ್ಡೌನ್ಗೆ ತೆರೆ ಎಳೆಯೋ

ಜೂ.14 ರ ಬಳಿಕ ರಾಜ್ಯ ಅನ್ ಲಾಕ್ ಪ್ಲ್ಯಾನ್ ಮಾಡ್ತಿದಾರೆ ಸಿಎಂ | ಹೇಗಿರುತ್ತೆ ಅನ್ಲಾಕ್ ಗೊತ್ತಾ? Read More »

ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ಸ್ಫೋಟ : ಕಾರ್ಮಿಕರಿಗೆ ಗಾಯ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಇಂದು ಮದ್ಯಾಹ್ನ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್ ಹಾಗೂ ರಸ್ತೆಗೆ ಸಂಚಾರ ಸಂಕೇತಗಳ ಪಟ್ಟಿಗಳನ್ನು ಹಾಕುವ ಕೆಲಸ ಕೆಲ ದಿಗಳಿಂದ ನಡೆಯತ್ತಿತ್ತು. ಸ್ಥಳದಲ್ಲಿ ರಾಸಾಯನಿಕ ಡಬ್ಬಿ ಹಾಗೂ ಇತರೆ ಸಲಕರಣೆಗಳನ್ನು ಇರಿಸಲಾಗಿತ್ತು. ಇಂದು ಕೆಲಸಗಾರರು ಬಣ್ಣವನ್ನು ರಾಸಾಯನಿಕದ ಜೊತೆ ಮಿಶ್ರಣ ಮಾಡಿ ಸಿಲಿಂಡರ್ ಬಳಸಿ ಕಾಯಿಸುತ್ತಿದ್ದರು. ಇದೇ ಸಂದರ್ಭದಲ್ಲೇ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ ಪರಿಣಾಮ 6 ಮಂದಿ

ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ಸ್ಫೋಟ : ಕಾರ್ಮಿಕರಿಗೆ ಗಾಯ Read More »

ಒಂದೇ ಮಾಸ್ಕನ್ನು ಹೆಚ್ಚಾಗಿ ಬಳಸುತ್ತೀರಾ…? | ಕೊರೋನಾ ಬರಲ್ಲ ಬ್ಲ್ಯಾಕ್ ಫಂಗಸ್ ಅಂಟುತ್ತೆ ಎಚ್ಚರ…!

ಬೆಂಗಳೂರು: ಒಂದೇ ಮಾಸ್ಕ್ ಅನ್ನು ಹೆಚ್ಚಾಗಿ ಬಳಸುವವರಿಗೆ ಎಚ್ಚರಿಕೆಯ ಸಂದೇಶವೊಂದು ರವಾನೆಯಾಗಿದ್ದು,ಇದರಿಂದ ಕೊರೊನಾ ಬದಲು ಬ್ಲಾಕ್ ಫಂಗಸ್ ಬಹುಬೇಗನೆ ಅಂಟಿಕೊಳ್ಳುತ್ತದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಈ ಸಂಬಂಧ ಏಮ್ಸ್​​​ನ ನ್ಯೂರೋಸರ್ಜನ್​​​ ವೈದ್ಯರೊಬ್ಬರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸತತ 2ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದ ಬ್ಲ್ಯಾಕ್​​ ಫಂಗಸ್​​ ಸೋಂಕು ಬರುವ ಸಂಭವ ಹೆಚ್ಚು ಎಂದಿದ್ದಾರೆ. ಈ ಮೂಲಕ ಸತತವಾಗಿ ಒಂದೇ ಮಾಸ್ಕ್ ಬಳಸುವವರಿಗೆ ವೈದ್ಯ ಡಾ. ಶರತ್ ಚಂದ್ರ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ

ಒಂದೇ ಮಾಸ್ಕನ್ನು ಹೆಚ್ಚಾಗಿ ಬಳಸುತ್ತೀರಾ…? | ಕೊರೋನಾ ಬರಲ್ಲ ಬ್ಲ್ಯಾಕ್ ಫಂಗಸ್ ಅಂಟುತ್ತೆ ಎಚ್ಚರ…! Read More »

ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸೋಣ | ಲಾಕ್ಡೌನ್ ನಿಂದ ಹಿಂದೆ ಸರಿದ ಉದ್ಧವ್ ಠಾಕ್ರೆ

ಮಹಾರಾಷ್ಟ್ರ: ರಾಜ್ಯದಲ್ಲಿ ಸದ್ಯ ಲಾಕ್ಡೌನ್ ಇದ್ದು ಹಂತಹಂತವಾಗಿ ಅನ್ಲಾಕ್ ಮಾಡಲು ರಾಜ್ಯಸರ್ಕಾರ ನಿರ್ಧರಿಸಿದೆ. ಇನ್ನು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯದ ಜನತೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ. ಸೋಮವಾರದಿಂದ ಮಹಾರಾಷ್ಟ್ರದಲ್ಲಿ ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗಲಿದೆ. ಒಂದೇ ಬಾರಿಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುತ್ತಿಲ್ಲ. ಸೋಂಕು ದೃಢೀಕರಣ ಪ್ರಮಾಣ ಮತ್ತು ಆಮ್ಲಜನಕ, ಹಾಸಿಗೆಗಳ ಲಭ್ಯತೆ ಆಧಾರದಲ್ಲಿ ರಾಜ್ಯವನ್ನು ಐದು ಹಂತಗಳಲ್ಲಿ ವಿಂಗಡಿಸಿ ಲಾಕ್‌ಡೌನ್ ತೆರವು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.ಯಾವ ರೀತಿಯ ನಿರ್ಬಂಧಗಳ ಅಗತ್ಯವಿದೆಯೆಂದು ಸ್ಥಳಿಯಾಡಳಿತ ನಿರ್ಧರಿಸಲಿದೆ. ಲಾಕ್ಡೌನ್

ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸೋಣ | ಲಾಕ್ಡೌನ್ ನಿಂದ ಹಿಂದೆ ಸರಿದ ಉದ್ಧವ್ ಠಾಕ್ರೆ Read More »

ಕಾರು-ಬೈಕ್ ಡಿಕ್ಕಿ: ಯಮನಪಾಲಾದ ಅಣ್ಣ-ತಂಗಿ ಹಾಗೂ ಮಗು

ರಾಯಚೂರು: ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂರು ವರ್ಷದ ಮಗು ಸಹಿತ ಅಣ್ಣ-ತಂಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಾಳ ಕ್ರಾಸ್ ಬಳಿ ಈ ಅಪಘಾತ ನಡೆದಿದೆ. ಲಿಂಗಸುಗೂರು ತಾಲೂಕಿನ ಗುಂತಗೋಳ ಗ್ರಾಮದ ಬಸವರಾಜ (32), ಪಲ್ಲವಿ (23) ಮತ್ತು ಸಂಗಮೇಶ (3) ಮೃತಪಟ್ಟವರು. ಬಸವರಾಜ ಮತ್ತು ಪಲ್ಲವಿ ಸೋದರ ಸಂಬಂಧಿಗಳಾಗಿದ್ದು, ಇವರು ನಾಗರಹಾಳದಲ್ಲಿನ ಸಹೋದರಿಯ ಮನೆಗೆ ಹೋಗಿ ವಾಪಸ್​ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದ

ಕಾರು-ಬೈಕ್ ಡಿಕ್ಕಿ: ಯಮನಪಾಲಾದ ಅಣ್ಣ-ತಂಗಿ ಹಾಗೂ ಮಗು Read More »

ಯಡಿಯೂರಪ್ಪನವರೇ ಕಾರ್ಯಕರ್ತರ ಆದರ್ಶ, ಅವರ ಹೇಳಿಕೆಯೇ ಪಕ್ಷದ ವಿಶೇಷತೆ – ನಳಿನ್ ಕುಮಾರ್ ಕಟೀಲ್

ಮಂಗಳೂರು, ಜೂನ್ 06; ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೀಡಿರುವ ರಾಜೀನಾಮೆ ಹೇಳಿಕೆಯ ಕುರಿತು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಯಡಿಯೂರಪ್ಪ ಹೇಳಿಕೆ ಇದು ಭಾರತೀಯ ಜನತಾ ಪಾರ್ಟಿಯ ವಿಶೇಷತೆ, ನಮ್ಮ ಕಾರ್ಯಕರ್ತರಿಗೆ ಯಡಿಯೂರಪ್ಪ ಆದರ್ಶರಾಗಿದ್ದಾರೆ. ರಾಷ್ಟ್ರ ನಾಯಕರು ಮತ್ತು ಪಕ್ಷದ ಸೂಚನೆಯಂತೆ ನಡೆಯುತ್ತೇನೆ ಎಂದು ಹೇಳಿರೋದು ಆದರ್ಶಯುತವಾಗಿದೆ” ಎಂದರು.“ಯಡಿಯೂರಪ್ಪ ಅಧಿಕಾರಕ್ಕೆ ಅಂಟಿ ಕೂತವರಲ್ಲ, ಪಕ್ಷ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.ಇದು ಬಿಜೆಪಿಯ

ಯಡಿಯೂರಪ್ಪನವರೇ ಕಾರ್ಯಕರ್ತರ ಆದರ್ಶ, ಅವರ ಹೇಳಿಕೆಯೇ ಪಕ್ಷದ ವಿಶೇಷತೆ – ನಳಿನ್ ಕುಮಾರ್ ಕಟೀಲ್ Read More »

ಶ್ರೀಲಂಕಾದಲ್ಲಿ ಭಾರೀ ಮಳೆ: ಅಪಾರ ಹಾನಿ, ಹಲವರ ಸಾವು

ಕೊಲಂಬೊ:ಶ್ರೀಲಂಕಾದಲ್ಲಿ ಭಾರಿ ಮಳೆಯಿಂದಾಗಿ 14 ಜನರು ಸಾವನ್ನಪ್ಪಿದ್ದಾರೆ ಮತ್ತು 2,45,000 ಜನರು ಹಾನಿಗೊಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೊಲ್ಲಲ್ಪಟ್ಟ 14 ಜನರಲ್ಲಿ, ಐದು ಸಾವುಗಳು ರಾಜಧಾನಿ ಕೊಲಂಬೊದಿಂದ 88 ಕಿಲೋಮೀಟರ್ ದೂರದಲ್ಲಿರುವ ಕೆಗಲ್ಲೆಯಿಂದ ವರದಿಯಾಗಿದ್ದರೆ, ಮೂರು ಸಾವುಗಳು ರತ್ನಪುರ ಜಿಲ್ಲೆಯಿಂದ ವರದಿಯಾಗಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.ಇಬ್ಬರು ನಾಪತ್ತೆಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಡಿಎಂಸಿ ಅಂಕಿಅಂಶಗಳ ಪ್ರಕಾರ, 15,658 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, 800 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಶ್ರೀಲಂಕಾದಲ್ಲಿ ಭಾರೀ ಮಳೆ: ಅಪಾರ ಹಾನಿ, ಹಲವರ ಸಾವು Read More »

ಮೊದಲ ರಾತ್ರಿ ಶೋಭನದ ಕೋಣೆಗೆ ಹಾಲನ್ಯಾಕೆ ತಗೊಂಡೋಗ್ತಾರೆ ಗೊತ್ತಾ?

ವಿವಾಹವೆಂಬುದು ಎರಡು ಹೃದಯಗಳ ಬೆಸುಗೆ. ಅದರಲ್ಲು ವಿವಾಹದ ಬಳಿಕದ ಮೊದಲ ರಾತ್ರಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಪ್ರಾಶಸ್ತ್ಯವಿದೆ. ಶೋಭನವನ್ನು ವಧು ವರನ ಜೀವನಕ್ಕೆ ಒಯ್ಯುವ ಅದೃಷ್ಟದ ಸಂಕೇತವೆಂದು ನಂಬಲಾಗಿದೆ. ಅದರಲ್ಲೂ ಮೊದಲ ರಾತ್ರಿಯಲ್ಲಿ ವಧುವಿನ ಕೈಯಲ್ಲಿರುವ ಹಾಲಿನ ಲೋಟಕ್ಕೆ ಅದರದ್ದೇ ಆದ ಮಹತ್ವವಿದೆ.ಪ್ರಾಚೀನ ಭಾರತೀಯರು ಕೃಷಿಕರಾಗಿದ್ದರಿಂದ, ಜಾನುವಾರು ಸಾಕಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ, ಮತ್ತು ಗೋವಿನ ಸಗಣಿಯಿಂದ ತುಪ್ಪದವರೆಗೆ ಪ್ರತಿದಿನ ಬಳಸಲಾಗುತ್ತದೆ. ಆರ್ಥಿಕವಾಗಿ ಸ್ಥಿರವಾದ ರೈತರು ಹೆಚ್ಚು ಜಾನುವಾರುಗಳನ್ನು ಹೊಂದಿದ್ದರು. ಅದಕ್ಕಾಗಿ ಹೈನುಗಾರಿಕೆ ಕೂಡಾ ಭಾರತೀಯರ ಸಂಸ್ಕೃತಿಯೊಳಗೆ

ಮೊದಲ ರಾತ್ರಿ ಶೋಭನದ ಕೋಣೆಗೆ ಹಾಲನ್ಯಾಕೆ ತಗೊಂಡೋಗ್ತಾರೆ ಗೊತ್ತಾ? Read More »

ಒಲವಿನ ಸೂಜಿಯ‌ ಚುಚ್ಚಿದಳೇ‌? ಹಾಳಾದ ಹೃದಯ ತಟ್ಟಿದಳೇ?

ಬೆಂಗಳೂರು: ಸದ್ಯ ಕೊರೊನಾ ತಡೆಗೆ ಎಲ್ಲೆಡೆ ವ್ಯಾಕ್ಸಿನ್ ಹಾಕಲಾಗುತ್ತಿದೆ. ಅದರಂತೆ ದೇಶದ ಜನ ಕೂಡ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ವ್ಯಾಕ್ಸಿನ್ ಗೆ ಹಾಹಾಕಾರ ಶುರುವಾಗಿದೆ. ಈ ಮಧ್ಯೆ ವ್ಯಾಕ್ಸಿನ್ ಹಾಕಿಸಿಕೊಂಡವರ ಫೋಟೊವೊಂದು ವೈರಲ್ ಆಗಿದ್ದು, ತರಹೇವಾರಿ ಕವನಗಳು ಮೂಡಿ ಬರ್ತಾ ಇವೆ. ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿರುವ ಹುಡುಗ ಇಂಜೆಕ್ಷನ್ ಚುಚ್ಚುತ್ತಿರುವ ನರ್ಸನ್ನೇ ನೋಡುತ್ತಿದ್ದಾನೆ. ಯಾವ ಸೋಷಿಯಲ್ ಮೀಡಿಯಾದಲ್ಲೇ ನೋಡಿದ್ರು ಈ ಫೋಟೊ ಹರಿದಾಡ್ತಾ ಇದೆ. ಆ ಫೋಟೊ ಮೇಲೆ ಕವನಗಳ ಸುರಿಮಳೆಯೇ ಸುರಿಯುತ್ತಿದೆ. ಅದರಲ್ಲೂ ಎಷ್ಡರ ಮಟ್ಟಿಗೆ ವೈರಲ್

ಒಲವಿನ ಸೂಜಿಯ‌ ಚುಚ್ಚಿದಳೇ‌? ಹಾಳಾದ ಹೃದಯ ತಟ್ಟಿದಳೇ? Read More »