ರಾಜ್ಯ

ನಾಳೆಯಿಂದ ರಾಜ್ಯಾದ್ಯಂತ ಎಸ್ ಎಸ್ಎಲ್ ಸಿ ಪರೀಕ್ಷೆ| ವಿದ್ಯಾರ್ಥಿಗಳಿಗೆ ಇಲ್ಲಿದೆ ಪ್ರಮುಖ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ‌ಹತ್ತನೇ ತರಗತಿಯ ಪರೀಕ್ಷೆಗಳು‌ ನಾಳೆಯಿಂದ ಆರಂಭವಾಗಲಿದ್ದು, ಜಿಟಿಜಿಟಿ ಮಳೆಯ ನಡುವೆಯೇ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ದತೆ ಮಾಡಿಕೊಂಡಿದೆ. ಕೊರೊನ ಆತಂಕದ ನಡುವೆಯೂ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ರೆಡಿಯಾಗಿದ್ದಾರೆ. ನಾಳೆ(ಜು.19) ಗಣಿತ, ವಿಜ್ಞಾನ, ಸಮಾಜ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯಲು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರಗೆ ಸಮಯವಿರುತ್ತದೆ. ಈ ಬಾರಿಯ ಎಸ್‌ಎಸ್‌ಎಲ್ ಸಿ ಪರೀಕ್ಷೆಗೆ ಒಟ್ಟು 8,76,581 ವಿದ್ಯಾರ್ಥಿಗಳ ನೋಂದಣಿಯಾಗಿದ್ದು, ಇದರಲ್ಲಿ 4,72,643 ಬಾಲಕರುಉ ಮತ್ತು 40,49,38 ಬಾಲಕಿಯರು ಪರೀಕ್ಷೆ […]

ನಾಳೆಯಿಂದ ರಾಜ್ಯಾದ್ಯಂತ ಎಸ್ ಎಸ್ಎಲ್ ಸಿ ಪರೀಕ್ಷೆ| ವಿದ್ಯಾರ್ಥಿಗಳಿಗೆ ಇಲ್ಲಿದೆ ಪ್ರಮುಖ ಮಾಹಿತಿ Read More »

ಫೀಸ್ ಕಟ್ಟಲಿಲ್ಲ ಎಂದು SSLC ಪರೀಕ್ಷೆಗೆ ಅವಕಾಶ ಕಲ್ಪಿಸದ ಆಳ್ವಾಸ್ | ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಶಿಕ್ಷಣ ಸಚಿವರು

ತುಮಕೂರು: ಫೀಸ್ ಕಟ್ಟಲಿಲ್ಲ ಎಂಬ ಕಾರಣಕ್ಕೆ SSLC ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಮನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಕಳೆದ ಬಾರಿಯ ಶಾಲಾ ಮತ್ತು ಹಾಸ್ಟೆಲ್ ಇತ್ಯಾದಿ ಶುಲ್ಕಗಳನ್ನು ಪಾವತಿಸಿಲ್ಲ ಎಂದು, ಮೂಡಬಿದಿರೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಆಳ್ವಾಸ್, ತನ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಈ ವರ್ಷ SSLC ಪರೀಕ್ಷೆಗೆ ಅವಕಾಶ ಕಲ್ಪಿಸಲು ನಿರಾಕರಿಸಿತ್ತು. ಹಣದ ಕೊರತೆ ಇರುವುದರಿಂದ ಪರೀಕ್ಷೆಯ ಬಳಿಕ ಬಾಕಿ

ಫೀಸ್ ಕಟ್ಟಲಿಲ್ಲ ಎಂದು SSLC ಪರೀಕ್ಷೆಗೆ ಅವಕಾಶ ಕಲ್ಪಿಸದ ಆಳ್ವಾಸ್ | ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಶಿಕ್ಷಣ ಸಚಿವರು Read More »

ರೈತನಾಯಕ ಜಿ.ಮಾದೇಗೌಡ ವಿಧಿವಶ| ಕಳಚಿದ ರೈತ ಹೋರಾಟದ ಕೊಂಡಿ|

ಮಂಡ್ಯ: ಮಾಜಿ ಸಂಸದ ಜಿ. ಮಾದೇಗೌಡ(92) ವಿಧಿವಶರಾಗಿದ್ದಾರೆ. ಕೆಎಂ ದೊಡ್ಡಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾದೇಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ. ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ಮಾದೇಗೌಡರು ಶಾಸಕರಾಗಿ, ಸಂಸದರಾಗಿಯೂ ಕಾರ್ಯನಿರ್ವಹಿಸಿದ್ದರು. ಕಾವೇರಿ ನದಿ ನೀರಿನ ಹೋರಾಟಗಳ ರೂವಾರಿಯಾಗಿದ್ದ ಅವರು, ನೀರು ಬಿಡುವ ವಿಚಾರದಲ್ಲಿ ಸರ್ಕಾರದ ನಿಲುವು ವಿರೋಧಿಸಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಗೆ ಎಲ್ಲಾ

ರೈತನಾಯಕ ಜಿ.ಮಾದೇಗೌಡ ವಿಧಿವಶ| ಕಳಚಿದ ರೈತ ಹೋರಾಟದ ಕೊಂಡಿ| Read More »

ರಾಜೀನಾಮೆಗೆ ಕೌಂಟ್ ಡೌನ್| ಕರ್ನಾಟಕ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ| ದೆಹಲಿ-ಬೆಂಗಳೂರು ಹಾರಾಟದ ಅಸಲಿಯತ್ತೇನು?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಕ್ಷಣಗಣನೆ ಪ್ರಾರಂಭವಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.ಜುಲೈ 26ಕ್ಕೆ ಯಡಿಯೂರಪ್ಪನವರು ಸರ್ಕಾರ ರಚಿಸಿ 2 ವರ್ಷ ಪೂರೈಸಲಿದ್ದು, ಮುಂದಿನ ಆಗಸ್ಟ್ ಮೊದಲ ವಾರದಲ್ಲಿ ಪದತ್ಯಾಗಕ್ಕೆ ವೇದಿಕೆ ಸಿದ್ದವಾಗಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ರಾಘವೇಂದ್ರ-ವಿಜಯೇಂದ್ರ ಜೊತೆ ನಿನ್ನೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪ, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಖುಷಿಯಾಗೇ ಇದ್ದರು. ಇಂದು ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ,

ರಾಜೀನಾಮೆಗೆ ಕೌಂಟ್ ಡೌನ್| ಕರ್ನಾಟಕ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ| ದೆಹಲಿ-ಬೆಂಗಳೂರು ಹಾರಾಟದ ಅಸಲಿಯತ್ತೇನು? Read More »

ಮೊಬೈಲ್ ಬ್ಯಾಟರಿ ಸ್ಪೋಟ: ಬಾಲಕನ ಕೈ ಛಿದ್ರ | ಪಾಲಕರೇ ಮಕ್ಕಳ ಆಟಿಕೆ ವಸ್ತುಗಳ ಮೇಲಿರಲಿ ಗಮನ

ಹಾವೇರಿ: ಆಟವಾಡುತ್ತಿದ್ದಾಗ ಮೊಬೈಲ್ ಬ್ಯಾಟರಿ ಸಿಡಿದು ಮೂರು ವರ್ಷದ ಬಾಲಕನ ಕೈ ಛಿದ್ರಗೊಂಡ ಘಟನೆ ತಾಲೂಕಿನ ಸವಣೂರು ಎಂಬಲ್ಲಿ ನಡೆದಿದೆ. ಗಾಯಗೊಂಡ ಬಾಲಕ ಇತರೆ ಮಕ್ಕಳೊಂದಿಗೆ ಮನೆಯಲ್ಲಿ ಹಳೆ ವಸ್ತುಗಳೊಂದಿಗೆ ಆಟವಾಡುತ್ತಿದ್ದ. ಆಟಿಕೆ ವಸ್ತುಗಳೊಂದಿಗೆ ಹಳೆಯ ಮೊಬೈಲ್ ಬ್ಯಾಟರಿ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳಿದ್ದವು. ಆಟವಾಡುತ್ತಿದ್ದಾಗ ಮೊಬೈಲ್ ಬ್ಯಾಟರಿ ಘರ್ಷಣೆಯಾಗಿ ಸ್ಪೋಟಗೊಂಡಿದೆ. ಪರಿಣಾಮ ಬಾಲಕನ ಕೈಯ ಮೂರು ಬೆರಳುಗಳು ತುಂಡಾಗಿವೆ. ಬ್ಯಾಟರಿ ರಾಸಾಯನಿಕಯುಕ್ತ ವಸ್ತು ಆದ ಕಾರಣ ಅದರ ಸ್ಪೋಟದಿಂದ ಮಗುವಿನ ಮುಖ ಮತ್ತು ದೇಹದ ಕೆಲವು

ಮೊಬೈಲ್ ಬ್ಯಾಟರಿ ಸ್ಪೋಟ: ಬಾಲಕನ ಕೈ ಛಿದ್ರ | ಪಾಲಕರೇ ಮಕ್ಕಳ ಆಟಿಕೆ ವಸ್ತುಗಳ ಮೇಲಿರಲಿ ಗಮನ Read More »

ರಾಷ್ಟ್ರಧ್ವಜ ನಿಯಮ ಉಲ್ಲಂಘನೆ ಮಾಡಿದ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ

ತುರುವೇಕೆರೆ: ರಾಷ್ಟ್ರಧ್ವಜವನ್ನು ಮಧ್ಯಾಹ್ನ ಸುಮಾರು 3:00 ಗಂಟೆಗೆ ಇಳಿಸಿ ನಿಯಮ ಉಲ್ಲಂಘಟನೆ ಮಾಡಿ ರಾಷ್ಟ್ರಧ್ವಜಕ್ಕೆ ಅಗೌರವ ಸೃಷ್ಟಿಸಿರುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಯಿತಿಯಲ್ಲಿ ಗುರುವಾರ ನಡೆದಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯತ್ , ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕಚೇರಿ ಆವರಣದ ಧ್ವಜ ಸ್ತಂಭದ ಮೇಲೆ ರಾಷ್ಟ್ರಧ್ವಜ ಕಡ್ಡಾಯವಾಗಿ ಹಾರಿಸುವಂತೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸುತ್ತೋಲೆ ಹೊರಡಿಸಿ ಸೂಚಿಸಲಾಗಿದೆ. ಆದರೆ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಸೂಚನೆಯನ್ನೆ

ರಾಷ್ಟ್ರಧ್ವಜ ನಿಯಮ ಉಲ್ಲಂಘನೆ ಮಾಡಿದ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ Read More »

ಕಾಲು ಜಾರಿ ಬಾವಿಗೆ ಬಿದ್ದು ಬಾಲಕ ಸಾವು

ಅಥಣಿ: ಕಾಲು ಜಾರಿ ಆಕಸ್ಮಿಕವಾಗಿ ಬಾಲಕ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ರಡ್ಡೇರಟ್ಟಿ ಗ್ರಾಮದಲ್ಲಿ ನಡೆದಿದೆ. ಆಕಾಶ್ ಯಲ್ಲಪ್ಪ ಹುಲಸದಾರ್ (5 ವ) ಮೃತಪಟ್ಟ ಬಾಲಕ. ಎಡೆಬಿಡದೆ ಸುರಿತ್ತಿರುವ ಭಾರೀ ಮಳೆಯ ನಡುವೆ ಬಾಲಕ, ಪಕ್ಕದ ಮನೆಗೆ ಹೋದ ಅಜ್ಜನನ್ನು ಹಿಂಬಾಲಿಸಿ ಓಡಿದ್ದಾನೆ. ಈ ಸಂದರ್ಭ ಬಾಲಕ ಕಾಲು ಜಾರಿ ಬಾವಿಗೆ ಬಿದ್ದಿದ್ದಾನೆ. ಬಾಲಕ ಬಾವಿಗೆ ಬಿದ್ದ ವಿಷಯ ಅಜ್ಜನ ಗಮನಕ್ಕೆ ಬರಲಿಲ್ಲ. ಅಜ್ಜ ಮನೆಗೆ ವಾಪಾಸಾದ ಬಳಿಕ ಮನೆಯವರೆಲ್ಲ ಆಕಾಶ್ ನನ್ನು ಕಾಣದೆ ಸುತ್ತಮುತ್ತ

ಕಾಲು ಜಾರಿ ಬಾವಿಗೆ ಬಿದ್ದು ಬಾಲಕ ಸಾವು Read More »

ಪತಿಯ ಕುಚಿಕು ಜೊತೆ ಹೆಂಡತಿಯ ಕುಚುಕುಚು | ಮನೆ ಕಡೆ ಸ್ವಲ್ಪ ನೋಡಿಕೋ ಎಂದಾತನ ಹೆಂಡತಿಯನ್ನೇ ಲಪಟಾಯಿಸಿದ ಸ್ನೇಹಿತ

ಬೆಂಗಳೂರು: ಹೊರ ಊರಿನಲ್ಲಿ ಕೆಲಸದಲ್ಲಿದ್ದ ಸ್ನೇಹಿತನ ಹೊಸ ಮನೆ ಕೆಲಸ ನೋಡಿಕೊಳ್ಳಲು ಬಂದ ಗೆಳೆಯನೊಂದಿಗೆ ಮನೆ ಮಾಲೀಕನ ಪತ್ನಿಯೇ ಪರಾರಿಯಾದ ಘಟನೆ ನಗರದ ಕೋಣನಕುಂಟೆ ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ದೇವರಾಜ್ ಎಂಬವರು ನೂತನ ಮನೆ ನಿರ್ಮಾಣ ಮಾಡುತ್ತಿದ್ದರು. ಜೊತೆಯಲ್ಲಿ ಕೆಲಸಕ್ಕೂ ಹೋಗುತ್ತಿದ್ದರು. ಈ ಸಮಯದಲ್ಲಿ ಊರಿನಲ್ಲೇ ಇದ್ದ ಗೆಳೆಯ ಮಹೇಶನಿಗೆ ಮನೆ ಕೆಲಸದವರನ್ನು ನೋಡಿಕೊಳ್ಳುವ ಉಸ್ತುವಾರಿ ನೀಡಿದ್ದರು. ಮನೆ ನಿರ್ಮಾಣದ ಕೆಲಸದವರನ್ನು ನೋಡಿಕೊಳ್ಳಲು ಬಂದ ಮಹೇಶ, ದೇವರಾಜ್ ರ ಹೆಂಡತಿಯನ್ನೇ ನೋಡಿಕೊಂಡಿದ್ದಾನೆ. ನಿತ್ಯ ಬರುತ್ತಿದ್ದ ದೇವರಾಜ್

ಪತಿಯ ಕುಚಿಕು ಜೊತೆ ಹೆಂಡತಿಯ ಕುಚುಕುಚು | ಮನೆ ಕಡೆ ಸ್ವಲ್ಪ ನೋಡಿಕೋ ಎಂದಾತನ ಹೆಂಡತಿಯನ್ನೇ ಲಪಟಾಯಿಸಿದ ಸ್ನೇಹಿತ Read More »

ನಂದಿಬೆಟ್ಟಕ್ಕೆ ಶನಿವಾರ-ಭಾನುವಾರ ನೋ ಎಂಟ್ರಿ

ಚಿಕ್ಕಬಳ್ಳಾಪುರ: ಶನಿವಾರ ಮತ್ತು ಭಾನುವಾರ ನಂದಿಬೆಟ್ಟವನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು, ಪ್ರವಾಸಿಗರೇ ನಂದಿಬೆಟ್ಟಕ್ಕೆ ಬರಬೇಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಲತಾ ಅವರು, ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಶನಿವಾರ ಹಾಗೂ ಭಾನುವಾರ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿಸುತ್ತಾರೆ. ಇದರಿಂದ ಕೊರೊನಾ ನಿಯಮಗಳನ್ನು ಉಲ್ಲಂಘನೆ ಅಲ್ಲದೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡುವಂತಾಗಿದೆ. ಕಳೆದ ಭಾನುವಾರ 12,000 ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬಂದು ಹೋಗಿದ್ದು, ಪ್ರವಾಸಿಗರ

ನಂದಿಬೆಟ್ಟಕ್ಕೆ ಶನಿವಾರ-ಭಾನುವಾರ ನೋ ಎಂಟ್ರಿ Read More »

ಕಾಸರಗೋಡು: ಬೈಕ್ ಢಿಕ್ಕಿ | ಪಾದಚಾರಿ ಮೃತ್ಯು

ಕಾಸರಗೋಡು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವ ಬೈಕ್ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಇಂದು (ಜು.15 ರಂದು) ನಡೆದಿದೆ. ಮೃತರನ್ನು ತೃಕ್ಕನ್ನಾಡ್ ನಿವಾಸಿ ರತೀಶ್ ( 37) ಎಂದು ಗುರುತಿಸಲಾಗಿದೆ. ಇವರು ಮೀನು ಕಾರ್ಮಿಕರಾಗಿದ್ದು, ರಾತ್ರಿ ಮನೆಗೆ ತೆರಳುತ್ತಿದ್ದಾಗ ಕಾಞ೦ಗಾಡ್ ಕಡೆಗೆ ತೆರಳುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ರತೀಶ್ ರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು: ಬೈಕ್ ಢಿಕ್ಕಿ | ಪಾದಚಾರಿ ಮೃತ್ಯು Read More »