ರಾಜ್ಯ

ಹಿಂದೂ ಸಂಪ್ರದಾಯದಂತೆ ಅದ್ಧೂರಿ ಮದುವೆಯಾದ ಮೊದಲ ಸಲಿಂಗಕಾಮಿ ದಂಪತಿಗಳು

ಸಮಗ್ರ ನ್ಯೂಸ್: ಸಲಿಂಗಕಾಮಿ ದಂಪತಿಗಳು ಅದ್ಧೂರಿ ಸಮಾರಂಭದಲ್ಲಿ ಮದುವೆಯಾದ ಘಟನೆಯೊಂದು ನಡೆದಿದೆ. ಫ್ಯಾಶನ್ ಡಿಸೈನರ್ ಅಭಿಷೇಕ್ ರೇ ಅವರು ತಮ್ಮ ಪಾಲುದಾರ ಚೈತನ್ಯ ಶರ್ಮಾ ಅವರನ್ನು ವಿವಾಹವಾದರು. ಮದುವೆಯು ಎಲ್ಲಾ ಹಿಂದೂ ಸಂಪ್ರದಾಯದಂತೆ ನೇರವೇರಿದೆ ಎಂದು ಹೇಳಲಾಗುತ್ತಿದೆ. ಪವಿತ್ರ ಅಗ್ನಿಯ ಸುತ್ತಲೂ ದಂಪತಿಗಳು ತೆಗೆದುಕೊಂಡ ಮಂತ್ರಗಳ ಮಧ್ಯೆ ಪ್ರತಿಜ್ಞೆಯನ್ನೂ ಪಠಿಸಿದರು. ನಗರವು ಸಲಿಂಗ ವಿವಾಹಕ್ಕೆ ಸಾಕ್ಷಿಯಾಗುತ್ತಿರುವುದು ಇದೇ ಮೊದಲಲ್ಲ, ಆದರೆ ಹಿಂದೂ ಸಂಪ್ರದಾಯಗಳನ್ನು ಅನುಸರಿಸಿ ನಡೆದ ಮೊದಲ ಸಲಿಂಗಕಾಮ ಮದುವೆಯಾಗಿದೆ. ಇನ್ನೂ ಅವರ ವಿವಾಹ ಸಮಾರಂಭದಲ್ಲಿ ಸ್ನೇಹಿತರು […]

ಹಿಂದೂ ಸಂಪ್ರದಾಯದಂತೆ ಅದ್ಧೂರಿ ಮದುವೆಯಾದ ಮೊದಲ ಸಲಿಂಗಕಾಮಿ ದಂಪತಿಗಳು Read More »

ಉದ್ಯೋಗಕ್ಕೆಂದು ಕುವೈಟ್‌ಗೆ ತೆರಳಿ ತೊಂದರೆಗೆ ಸಿಲುಕಿದ ಯುವಕ ಮರಳಿ ಊರಿಗೆ

ಸಮಗ್ರ ನ್ಯೂಸ್ : ಉದ್ಯೋಗಕ್ಕೆಂದು ಕುವೈಟ್‌ಗೆ ತೆರಳಿ ತೊಂದರೆಗೆ ಸಿಲುಕಿದ್ದ ಕಾರ್ಕಳ ನಿವಾಸಿ ಜಯೇಶ್‌ ಅವರು ಮುಂಬಯಿ ತಲುಪಿ ಅಲ್ಲಿಂದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಕುವೈಟ್‌ನಲ್ಲಿ ಮನೆ ನಿರ್ವಹಣೆಯ ಉದ್ಯೋಗವಿದೆ ಎಂದು ಶೃಂಗೇರಿಯ ಸಚಿನ್‌ ವೀಸಾ ಕಳುಹಿಸಿಕೊಟ್ಟಿದ್ದರು. ಅದನ್ನು ನಂಬಿದ ಜಯೇಶ್‌ ಅಲ್ಲಿಗೆ ತೆರಳಿದ್ದರು. ಆದರೆ ಅಲ್ಲಿ ಅರಬೀ ಪ್ರಜೆಯೋರ್ವ ಕುರಿ, ಆಡು ಸಾಕುವ ಫಾರ್ಮ್ಹೌಸ್‌ನಲ್ಲಿ ಕೆಲಸಕ್ಕೆ ನಿಯೋಜಿಸಿದ್ದ. ದಿನಕ್ಕೆ ಸುಮಾರು 12ರಿಂದ 14 ಗಂಟೆ ದುಡಿಯಬೇಕಿತ್ತು. ಊಟ, ತಿಂಡಿ ಸರಿಯಾಗಿ ನೀಡುತ್ತಿರಲಿಲ್ಲ. ಹಲ್ಲೆ ಕೂಡ ನಡೆಸುತ್ತಿದ್ದ.

ಉದ್ಯೋಗಕ್ಕೆಂದು ಕುವೈಟ್‌ಗೆ ತೆರಳಿ ತೊಂದರೆಗೆ ಸಿಲುಕಿದ ಯುವಕ ಮರಳಿ ಊರಿಗೆ Read More »

ಮಗಳ ಮೇಲೆ ಅತ್ಯಾಚಾರ ಎಸಗಿದ ಕುಟುಂಬದ ಮೇಲೆ ಆಕೆಯ ತಂದೆ ಕತ್ತಿಯಿಂದ ಕಡಿದು ಕೊಲೆ

ಸಮಗ್ರ ನ್ಯೂಸ್ : ತನ್ನ ಮಗಳ ಅತ್ಯಾಚಾರ ನಡೆಸಿದ ಯುವಕನ ಕುಟುಂಬದ ಆರು ಮಂದಿ ಸದಸ್ಯರನ್ನು ಸಂತ್ರಸ್ತೆಯ ತಂದೆ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆಯೊಂದು ಆಂಧ್ರಪ್ರದೇಶದ ವಿಶಾಖಪಟ್ಟಣ ಹತ್ತಿರ ನಡೆದಿದೆ. ಒಂದೇ ಕುಟುಂಬದ ಆರು ಮಂದಿ ಮೃತ ಪಟ್ಟಿದ್ದಾರೆ. ವಿಶಾಖಪಟ್ಟಣಂನ ಜತ್ತಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಎರಡು ಕುಟುಂಬಗಳ ನಡುವೆ ಹಳೆ ವೈಷಮ್ಯವಿದ್ದು, ಮೃತ ಕುಟುಂಬದ ಸದಸ್ಯರು ಕೊಲೆ

ಮಗಳ ಮೇಲೆ ಅತ್ಯಾಚಾರ ಎಸಗಿದ ಕುಟುಂಬದ ಮೇಲೆ ಆಕೆಯ ತಂದೆ ಕತ್ತಿಯಿಂದ ಕಡಿದು ಕೊಲೆ Read More »

ಶಿವಮೊಗ್ಗ: ದಿಢೀರ್ ಶಬ್ದ, ಸೀಳುಬಿಟ್ಟ ಭೂಮಿ, ಆತಂಕದಲ್ಲಿ ‌ಮಲೆನಾಡು ಜನ

ಸಮಗ್ರ ನ್ಯೂಸ್: ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ನಗರದ ಮೊದಲನೇ ಕ್ರಾಸ್ ನಲ್ಲಿ ಇಂದು ರಸ್ತೆಯಲ್ಲಿ ಜೋರಾದ ಶಬ್ದ ಬಂದಿದೆ. ಇದರಿಂದ ಭಯಭೀತರಾದ ನೆಹರು ನಗರದ ನಿವಾಸಿಗಳು ಹೊರಗೆ ಬಂದು ನೋಡಿದರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ. ಇದರಿಂದ ನೀರು ಜೋರಾಗಿ ಉಕ್ಕಿ ಹರಿದಿದೆ. ಭೂಮಿಯಿಂದ ಬಂದ ನೀರು ಮನೆಗಳಿಗೆಲ್ಲ ನುಗ್ಗಿದೆ. ಸ್ವಲ್ಪ ಸಮಯದ ನಂತರ ನೀರು ಹರಿದು ಬೇರೆ ಕಡೆ ಹೋಗಿದೆ. ದಿಢೀರ್ ಶಬ್ದದಿಂದ ಸೀಳು ಬಿಟ್ಟ ಭೂಮಿ

ಶಿವಮೊಗ್ಗ: ದಿಢೀರ್ ಶಬ್ದ, ಸೀಳುಬಿಟ್ಟ ಭೂಮಿ, ಆತಂಕದಲ್ಲಿ ‌ಮಲೆನಾಡು ಜನ Read More »

ಹೆಣ್ಣು, ಹೊನ್ನು , ಮಣ್ಣು, ಸರಳವಾಸ್ತು ಗುರೂಜಿಯ ಹೆಣ ಬಿದ್ದಿದ್ಯಾಕೆ? ಇಲ್ಲಿದೆ ಮೂರು ಕಾರಣ

ಸಮಗ್ರ ನ್ಯೂಸ್: ಸರಳ ವಾಸ್ತು ಹೆಸರಿನಲ್ಲಿ ಖ್ಯಾತಿ ಪಡೆದಿದ್ದ ಚಂದ್ರಶೇಖರ್ ಗುರೂಜಿ ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ಹೊಟೇಲ್​​ನಲ್ಲಿ ವಾಸ್ತವ್ಯ ಹೂಡಿದ್ದ ಗುರೂಜಿಯನ್ನು ಭೇಟಿ ಆಗಲು ಬಂದು ಚಾಕು ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುತ್ತಿದೆ. ಜುಲೈ 2ರಿಂದಲೂ ಹೊಟೇಲ್​ನಲ್ಲಿ ವಾಸ್ತವ್ಯ ಹೂಡಿದ್ದ ಗುರೂಜಿಯನ್ನು ಭೇಟಿಯಾಗಲು ಬಂದಿದ್ದ ಇಬ್ಬರು ಆಗಂತುಕರಲ್ಲಿ ಓರ್ವ ಕಾಲಿಗೆ ನಮಸ್ಕಾರ ಮಾಡುವಂತೆ ಮಾಡಿದ್ದಾನೆ. ಆ ವೇಳೆ ಮತ್ತೋರ್ವ ಎದೆಗೆ ಚಾಕು ಇರಿದಿದ್ದಾನೆ. ಕೂಡಲೇ ಕೆಳಕ್ಕೆ ಬಿದ್ದು ಗುರೂಜಿ

ಹೆಣ್ಣು, ಹೊನ್ನು , ಮಣ್ಣು, ಸರಳವಾಸ್ತು ಗುರೂಜಿಯ ಹೆಣ ಬಿದ್ದಿದ್ಯಾಕೆ? ಇಲ್ಲಿದೆ ಮೂರು ಕಾರಣ Read More »

ರಾಜ್ಯದಲ್ಲಿ ಮುಂದುವರಿದ ವರ್ಷಧಾರೆ|ಹಲವು ಜಿಲ್ಲೆಗಳಲ್ಲಿ ರಜೆ ಘೋಷಣೆ

ಬೆಂಗಳೂರು : ರಾಜ್ಯಾಧ್ಯಂತ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ ( Heavy Rain ). ಹಲವು ಜಿಲ್ಲೆಗಳಲ್ಲಿ ಎಡೆಬಿಡದೇ ಸುರಿಯುತ್ತಿರುವಂತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮನೆಯಿಂದ ಹೊರ ಬರಲಾಗದಂತ ಸ್ಥಿತಿಯನ್ನು ಜನರು ಎದುರಿಸುತ್ತಿದ್ದಾರೆ. ಭಾರೀ ಮಳೆಯ ಕಾರಣದಿಂದ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜು.06 ರಿಂದ 09ರವರೆಗೆ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಆಂಬಳೆ ಹಾಗೂ ಲಕ್ಕಾ ಹೋಬಳಿ ಹೊರತುಪಡಿಸಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ರಾಜ್ಯದಲ್ಲಿ ಮುಂದುವರಿದ ವರ್ಷಧಾರೆ|ಹಲವು ಜಿಲ್ಲೆಗಳಲ್ಲಿ ರಜೆ ಘೋಷಣೆ Read More »

ಕೊಡಗು: ಧಾರಾಕಾರ ಮಳೆ| ಮೊಣ್ಣಂಗೇರಿಯಲ್ಲಿ ಭೂಕುಸಿತ; ರಸ್ತೆ ಸಂಚಾರ ವ್ಯತ್ಯಯ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ಗಾಳಿ ಮಳೆ ಮುಂದುವರೆದಿದ್ದು, ಜಿಲ್ಲೆಯ ಹಲವೆಡೆ ಭೂಕುಸಿತ ಉಂಟಾಗಿದೆ. ಮಡಿಕೇರಿ – ಮಂಗಳೂರು ಹೆದ್ದಾರಿ ಮೇಲೆ ಗುಡ್ಡ ಕುಸಿತವಾಗಿ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಮಡಿಕೇರಿ ಹೊರವಲಯದ ಮೊಣ್ಣಂಗೇರಿ ಬಳಿ ಘಟನೆಯಾಗಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. 2018ರಲ್ಲಿ ಭೂಕುಸಿತವಾಗಿದ್ದ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಈಗ ಮತ್ತೆ ಅದೇ ಜಾಗದಲ್ಲಿ ಗುಡ್ಡದ ಮಣ್ಣು ಕುಸಿದಿದೆ. ಅಲ್ಲದೇ ಮಳೆಗೆ ಸೋಮವಾರ ಪೇಟೆ, ಶನಿವಾರ ಸಂತೆ ಸಮೀಪದ ಸುಳುಗಳಲೇ ಗ್ರಾಮದಲ್ಲಿ ಗೋಡೆ ಕುಸಿತವಾಗಿ ವಸಂತಮ್ಮ ಎಂಬ

ಕೊಡಗು: ಧಾರಾಕಾರ ಮಳೆ| ಮೊಣ್ಣಂಗೇರಿಯಲ್ಲಿ ಭೂಕುಸಿತ; ರಸ್ತೆ ಸಂಚಾರ ವ್ಯತ್ಯಯ Read More »

ಭಾರೀ ಮಳೆ ಹಿನ್ನಲೆ: ಕೊಡಗಿನ ಶಾಲಾ ಕಾಲೇಜುಗಳಿಗೆ ನಾಳೆ(ಜು.6) ರಜೆ ಘೋಷಣೆ

ಸಮಗ್ರ ನ್ಯೂಸ್: ಕೊಡಗು‌ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 6 ರಂದು‌ ಬುಧವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆ ಹಿನ್ನಲೆ: ಕೊಡಗಿನ ಶಾಲಾ ಕಾಲೇಜುಗಳಿಗೆ ನಾಳೆ(ಜು.6) ರಜೆ ಘೋಷಣೆ Read More »

ನಾಲ್ಕೇ ಗಂಟೆಗಳಲ್ಲಿ ಹಂತಕರ ಬಂಧಿಸಿದ ಹುಬ್ಬಳ್ಳಿ ಪೊಲೀಸರು| ಇಬ್ಬರು ಆರೋಪಿಗಳು ಅಂದರ್

ಸಮಗ್ರ ನ್ಯೂಸ್: ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್ ಬಳಿಯಲ್ಲಿ 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಹಂತಕರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕೊಲೆಯಾದ‌ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಂತಕರಾದ ಕಲಘಟಗಿ ತಾಲೂಕು ಧುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ, ಮಂಜುನಾಥ ಮರೇವಾಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ಇಬ್ಬರು ಕಾರಿನಲ್ಲಿ ಬೆಳಗಾವಿ ಕಡೆಗೆ ಹೋಗುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತನಿಖಾ ತಂಡವು

ನಾಲ್ಕೇ ಗಂಟೆಗಳಲ್ಲಿ ಹಂತಕರ ಬಂಧಿಸಿದ ಹುಬ್ಬಳ್ಳಿ ಪೊಲೀಸರು| ಇಬ್ಬರು ಆರೋಪಿಗಳು ಅಂದರ್ Read More »

ಅರ್ಧನಿಮಿಷದಲ್ಲಿ 60 ಬಾರಿ ಇರಿದು ಕೊಂದ ಹಂತಕರು| ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ದಾಖಲು

ಸಮಗ್ರ ನ್ಯೂಸ್: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಇಂದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಇದರ ಸಿಸಿ ಟಿವಿ ಫುಟೇಜ್‌ ಈಗ ಬಹಿರಂಗವಾಗಿದ್ದು, ಇದರ ದೃಶ್ಯಗಳು ಎದೆ ನಡುಗಿಸುವಂತಿದೆ. ಚಂದ್ರಶೇಖರ ಗುರೂಜಿಯವರು ಹೋಟೆಲ್‌ ರಿಸೆಪ್ಶನ್‌ ಹಾಲ್‌ ಗೆ ಸಹಜವಾಗಿಯೇ ನಡೆದುಕೊಂಡು ಬಂದಿದ್ದಾರೆ. ಅವರಿಗಾಗಿಯೇ ಕಾದು ಕುಳಿತಿದ್ದ ಹಂತಕರ ಪೈಕಿ ಓರ್ವ ಕಾಲಿಗೆ ಬಿದ್ದಿದ್ದಾನೆ. ಆತನಿಗೆ ಚಂದ್ರಶೇಖರ ಗುರೂಜಿ ಆಶೀರ್ವದಿಸುವ ಸಂದರ್ಭದಲ್ಲಿಯೇ ಮತ್ತೊಬ್ಬ ಮೊದಲಿಗೆ ಎದೆಗೆ ಚಾಕು

ಅರ್ಧನಿಮಿಷದಲ್ಲಿ 60 ಬಾರಿ ಇರಿದು ಕೊಂದ ಹಂತಕರು| ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ದಾಖಲು Read More »