ರಾಜ್ಯ

ಶರವೂರು: ಮಾ. 4ರಂದು ಹೊನಲು ಬೆಳಕಿನ ಹಗ್ಗಜಗ್ಗಾಟ

ಸಮಗ್ರ ನ್ಯೂಸ್: ಶ್ರೀದೇವಿ ತುಳುನಾಡ ಬಳಗ ಆಶ್ರಯದಲ್ಲಿ ಶರವೂರು ನಗ್ರಿಯಲ್ಲಿ ಪುರುಷರ ಮತ್ತು‌ ಮಹಿಳೆಯರ ಹೊನಲು ಬೆಳಕಿನ ಗ್ರಿಪ್ ಮತ್ತು ಲೆವೆಲ್ ಮಾದರಿಯ ಹಗ್ಗಜಗ್ಗಾಟ ಮಾ.4 ರಂದು ನಡೆಯಲಿದೆ. ಶ್ರೀ ದೇವಿ ತುಳುನಾಡ ಬಳಗ ಶರವೂರ ನಗ್ರಿ ಇದರ ಆಶ್ರಯದಲ್ಲಿ ದಿ. ನಂದೀಪ್ ಅವರ ಸ್ಮರಣಾರ್ಥ 510 ಕೆ.ಜಿ ಪುರುಷರ, ಮಹಿಳೆಯರ ಹಗ್ಗಜಗ್ಗಾಟ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಗಳನ್ನು ಸಂಪರ್ಕಿಸಬಹುದು. 7899587221, 7204064320, 9611573410

ಶರವೂರು: ಮಾ. 4ರಂದು ಹೊನಲು ಬೆಳಕಿನ ಹಗ್ಗಜಗ್ಗಾಟ Read More »

ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೆ ಸಮಿತಿ ರಚಿಸಿ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ತೀರ್ಮಾನಿಸಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯನ್ನು ಪರಿಶೀಲಿಸಿದ ಸರ್ಕಾರವು ಈಗಾಗಲೇ ಹಳೆಯ ಪಿಂಚಣಿ ಯೋಜನೆ (Defined – Persion Scheme)ಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು

ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೆ ಸಮಿತಿ ರಚಿಸಿ ಸರ್ಕಾರ ಆದೇಶ Read More »

ಮಡಿಕೇರಿ: ಹುಲಿ ದಾಳಿಗೆ ಕಾಡುಕೋಣ ಬಲಿ

ಸಮಗ್ರ ನ್ಯೂಸ್: ಹುಲಿ ದಾಳಿಗೆ ಕಾಡು ಕೋಣವೊಂದು ಬಲಿಯಾಗಿರುವ ಘಟನೆ ಪಾಲಿಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗೌರಿಬೆಟ್ಟ ಎಸ್ಟೇಟ್ ನಲ್ಲಿ ನಡೆದಿದೆ. ಇಂದು ಬೆಳಗ್ಗೆ ಕಾರ್ಮಿಕರು ಕೆಲಸಕ್ಕೆಂದು ತೋಟಕ್ಕೆ ತೆರಳಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದ್ದು ನೆನ್ನೆ ತಡ ರಾತ್ರಿ ಕಾಡು ಕೋಣದ ಮೇಲೆ ಹುಲಿ ದಾಳಿ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಳೆದ ಹಲವಾರು ದಿನಗಳಿಂದ ಈ ಭಾಗದಲ್ಲಿ ಹುಲಿಯೊಂದು ಓಡಾಟ ನಡೆಸುತ್ತಿರುವ ಬಗ್ಗೆ ಆತಂಕ

ಮಡಿಕೇರಿ: ಹುಲಿ ದಾಳಿಗೆ ಕಾಡುಕೋಣ ಬಲಿ Read More »

ಬದಲಾಯ್ತು ರಾಹುಲ್ ಗಾಂಧಿ ಲುಕ್| ಹೊಸ ಲುಕ್ ನಲ್ಲಿ ಕೇಂಬ್ರಿಡ್ಜ್ ವಿವಿನಲ್ಲಿ ಉಪನ್ಯಾಸ

ಸಮಗ್ರ ನ್ಯೂಸ್: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಬುಧವಾರ ಬ್ರಿಟನ್‌ಗೆ ಆಗಮಿಸಿದ್ದಾರೆ. ರಾಹುಲ್ ಗಾಂಧಿ ಬ್ರಿಟನ್​ಗೆ ತೆರಳುವ ಮುನ್ನ ತಮ್ಮ ಲುಕ್​ನಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದ ತಮ್ಮ ಗಡ್ಡವನ್ನು ಟ್ರಿಮ್ ಮಾಡಿಕೊಂಡಿದ್ದಾರೆ. ಉಪನ್ಯಾಸ ನೀಡಲು ತೆರಳುತ್ತಿದ್ದಂತೆ ರಾಹುಲ್ ಗಾಂಧಿ ಲುಕ್ ಬದಲಾಗಿದೆ. ಟೀ-ಶರ್ಟ್ ಕಳಚಿಟ್ಟು ಕೋಟು, ಟೈ ಧರಿಸಿ ಮಿಂಚುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಕೊನೆಗೊಳ್ಳುವವರೆಗೆ ತಮ್ಮ ಗಡ್ಡ ಟ್ರಿಮ್

ಬದಲಾಯ್ತು ರಾಹುಲ್ ಗಾಂಧಿ ಲುಕ್| ಹೊಸ ಲುಕ್ ನಲ್ಲಿ ಕೇಂಬ್ರಿಡ್ಜ್ ವಿವಿನಲ್ಲಿ ಉಪನ್ಯಾಸ Read More »

ಎಎಪಿಗೆ ಬಿಗ್ ಶಾಕ್| ಪೊರಕೆ ಬಿಟ್ಟು ಕಮಲ ಹಿಡಿದ ನಿವೃತ್ತ ಎಡಿಜಿಪಿ ಭಾಸ್ಕರ ರಾವ್

ಸಮಗ್ರ ನ್ಯೂಸ್: ಆಮ್‌ ಆದ್ಮಿ ಪಕ್ಷದಲ್ಲಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ ಬುಧವಾರ ಅಧಿಕೃತವಾಗಿ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದರು. ಬಳಿಕ ಮಾತನಾಡಿದ ಅವರು, ನಾನು ಬಿಜೆಪಿಗೆ ಹೆಚ್ಚಿನ ಕೊಡುಗೆ ನೀಡಬಹುದು ಎಂದು ಭಾವಿಸುತ್ತೇನೆ. ಬಿಜೆಪಿಯು ದೇಶವ್ಯಾಪಿ ಸಂಘಟನೆ ಹೊಂದಿರುವ ಪಕ್ಷ. ಪ್ರಧಾನಿ ಮೋದಿಯವರ ದೂರದೃಷ್ಟಿ ನನ್ನನ್ನು ಪಕ್ಷಕ್ಕೆ ಸೇರಲು ಪ್ರೇರೇಪಿಸಿತು. ಆಪ್ ದೊಡ್ಡದಾಗಿ ಬೆಳೆಯಲ್ಲ. ಅವರು ಒಂದು ಕೂಟದ

ಎಎಪಿಗೆ ಬಿಗ್ ಶಾಕ್| ಪೊರಕೆ ಬಿಟ್ಟು ಕಮಲ ಹಿಡಿದ ನಿವೃತ್ತ ಎಡಿಜಿಪಿ ಭಾಸ್ಕರ ರಾವ್ Read More »

ಬಾಯ್ಲರ್ ಬ್ಲಾಸ್ಟ್; ಮೂವರು ಗಂಭೀರ

ಸಮಗ್ರ ನ್ಯೂಸ್: ಬಾಯ್ಲರ್ ಸಿಡಿದು ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರು ನಗರದ ಅನೇಕಲ್ ನ ಬೊಮ್ಮಸಂದ್ರದಲ್ಲಿ ನಡೆದಿದೆ. ಬೊಮ್ಮಸಂದ್ರದ ಬಾಲ್ ಫಾರ್ಮ ಕಂಪನಿಯಲ್ಲಿ ಈ ದುರಂತ ಸಂಭವಿಸಿದೆ. ಪರಿಣಾಮ ಪ್ರದೀಪ್, ಮುರುಗನ್, ಕಿರಣ್ ಎಂಬ ಮೂವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಮೈ ಮೇಲೆ ಭಾರಿ ಪ್ರಮಾಣದ ಕೆಮಿಕಲ್ ಬಿದ್ದು ತೀವ್ರತರದ ಗಾಯಗಳಾಗಿದೆ. ಗಾಯಾಳುಗಳನ್ನು ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಬಾಯ್ಲರ್ ಬ್ಲಾಸ್ಟ್; ಮೂವರು ಗಂಭೀರ Read More »

ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಾಪಾಸ್| ವೇತನ ಹೆಚ್ಚಳದ ಬೆನ್ನಲ್ಲೇ ಬಂದ್ ಕೈಬಿಟ್ಟ ನೌಕರರು

ಸಮಗ್ರ ನ್ಯೂಸ್: ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇಕಡಾ 17ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಮುಷ್ಕರನಿರತ ನೌಕರರು ತಮ್ಮ ಮುಷ್ಕರ ಕೈಬಿಟ್ಟು ಸೇವೆಗೆ ಮರಳಿದ್ದಾರೆ. ಸರ್ಕಾರ ನಾವು ಹೇಳಿದಷ್ಟು ವೇತನ ಹೆಚ್ಚಳ ಮಾಡಿಲ್ಲ, ನಾವು ಶೇಕಡಾ 40ರಷ್ಟು ವೇತನ ಹೆಚ್ಚಳ ಮಾಡುವಂತೆ ಕೇಳಿದ್ದೆವು, ಸರ್ಕಾರ ತನ್ನ ಇತಿಮಿತಿಯಲ್ಲಿ ಶೇಕಡಾ 17ರಷ್ಟು ಹೆಚ್ಚಳ ಮಾಡಿದೆ. ಹಾಗಾಗಿ ತಕ್ಷಣದಿಂದ ಮುಷ್ಕರ ಕೈಬಿಡಲು ತೀರ್ಮಾನಿಸಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಾಪಾಸ್| ವೇತನ ಹೆಚ್ಚಳದ ಬೆನ್ನಲ್ಲೇ ಬಂದ್ ಕೈಬಿಟ್ಟ ನೌಕರರು Read More »

ಕಾಳಿಂಗ ಸರ್ಪದ ವಿರಾಟ ರೂಪ ದರ್ಶನ| ಬರೋಬ್ಬರಿ 6 ಅಡಿ ಹೆಡೆ ಎತ್ತಿ ನಿಂತ ಸರ್ಪ| ಇಲ್ಲಿದೆ ವೈರಲ್ ವಿಡಿಯೋ…

ಸಮಗ್ರ ನ್ಯೂಸ್: ಕಾಳಿಂಗ ಸರ್ಪದ ಈ ವಿರಾಟ ರೂಪ ನಿಜಕ್ಕೂ ಅಪರೂಪವಾದದ್ದು. ಕಾಳಿಂಗ ಸರ್ಪ ಬಹಳ ಉದ್ದನೆಯ ಹಾವು. ಇದು ಸರಾಸರಿ 3.6-4 ಮೀಟರ್‌ನಷ್ಟು ಉದ್ದವಿರುತ್ತದೆ. ನಾಗರಹಾವು ಸರಾಸರಿ ಉದ್ದ 1.3-2 ಮೀಟರ್ ಇರುತ್ತದೆ. ಅಪರೂಪದಲ್ಲಿ 2.5-3 ಮೀಟರ್‌ ಉದ್ದವೂ ಕೆಲವೊಮ್ಮೆ ಕಂಡು ಬರುತ್ತವೆ. ಈ ಹಾವು ಬರೋಬ್ಬರಿ 6 ಅಡಿಯಷ್ಟು ಎತ್ತರಕ್ಕೆ ತನ್ನ ಹೆಡೆ ಎತ್ತಿದೆ. ಅಷ್ಟೇ ಅಲ್ಲ ತನ್ನ ದೇಹದ ಮೂರನೇ ಒಂದು ಭಾಗವನ್ನ ಗಾಳಿಯಲ್ಲಿ ತೇಲಿಸುವ ಮೂಲಕ ಗಮನ ಸೆಳೆದಿದೆ. ಆಳೆತ್ತರಕ್ಕೆ ಹೆಡೆ

ಕಾಳಿಂಗ ಸರ್ಪದ ವಿರಾಟ ರೂಪ ದರ್ಶನ| ಬರೋಬ್ಬರಿ 6 ಅಡಿ ಹೆಡೆ ಎತ್ತಿ ನಿಂತ ಸರ್ಪ| ಇಲ್ಲಿದೆ ವೈರಲ್ ವಿಡಿಯೋ… Read More »

ರಾಜ್ಯ ಸರ್ಕಾರಿ ನೌಕರರ ವೇತನ‌ ಶೇ.17ರಷ್ಟು ಹೆಚ್ಚಳ| ರಾಜ್ಯ ಸರ್ಕಾರದಿಂದ ಮಧ್ಯಂತರ ಘೋಷಣೆ

ಸಮಗ್ರ ನ್ಯೂಸ್: ಏಳನೇ ವೇತನ ಆಯೋಗದ ವರದಿ ಜಾರಿ ಸೇರುವಂತೆ ಹಲವು ಮುಂದಿಟ್ಟು ರಾಜ್ಯಾದ್ಯಂತ ಸರ್ಕಾರಿ ನೌಕರರು ಇಂದಿನಿಂದ ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತು ನಿರ್ಧಾರವನ್ನು ತೆಗೆದುಕೊಂಡಿದೆ. ತಕ್ಷಣಕ್ಕೆ ಸರ್ಕಾರಿ ನೌಕರರ ವೇತನದಲ್ಲಿ ಶೇ.17ರಷ್ಟು ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿಯವರು, ಮಧ್ಯಂತರ ಪರಿಹಾರ ವೇತನ ಘೋಷಣೆ ಮಾಡಿದ್ದೇವೆ. ವರದಿ ಬಂದ ತಕ್ಷಣ ಏಳನೇ ವೇತನ ಆಯೋಗದ ವೇತನ ಜಾರಿ ಮಾಡಲಿದ್ದೇವೆ ಎಂದರು. ಇನ್ನು ಎನ್‌ಪಿಎಸ್‌

ರಾಜ್ಯ ಸರ್ಕಾರಿ ನೌಕರರ ವೇತನ‌ ಶೇ.17ರಷ್ಟು ಹೆಚ್ಚಳ| ರಾಜ್ಯ ಸರ್ಕಾರದಿಂದ ಮಧ್ಯಂತರ ಘೋಷಣೆ Read More »

ಕನ್ನಡಿಗರ ಅಸ್ಮಿತೆಗೆ ಕೊಡಲಿಯೇಟು| ಭದ್ರಾವತಿಯ ಉಕ್ಕಿನ ಕಾರ್ಖಾನೆ ಅಭದ್ರ| ಕನ್ನಡಿಗರೇ ಸ್ಥಾಪಿಸಿದ ಸಂಸ್ಥೆಗೆ ಬೀಗ ಜಡಿದ ಬಿಜೆಪಿ

ಸಮಗ್ರ ನ್ಯೂಸ್: ಬಿಜೆಪಿಯ ಆತ್ಮನಿರ್ಭರ್ ಎಂಬುದು, ಇರುವುದನ್ನೆಲ್ಲ ಖಾಸಗಿಯವರಿಗೆ ಮಾರುವುದು, ಖಾಸಗಿಯವರಿಗೂ ಬೇಡವಾದರೆ ಮುಚ್ಚುವುದು ಎನ್ನುವಲ್ಲಿಗೆ ಬಂದು ಮುಟ್ಟಿದೆ. ಅಚ್ಛೇ ದಿನ್ ಎಂದು ಭ್ರಮೆ ಹುಟ್ಟಿಸಿದ್ದವರು ತಂದಿಡುತ್ತಿರುವುದು ಮಾತ್ರ ಕರಾಳ ದಿನಗಳು ಎಂಬುದಕ್ಕೆ ವಿಐಎಸ್‌ಎಲ್ಗೆ ಬೀಗ ಹಾಕುತ್ತಿರುವುದೂ ಮತ್ತೊಂದು ಸಾಕ್ಷಿ. ಮೊನ್ನೆಯಷ್ಟೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಬಂದಿಳಿಯಿತು. ಬಿಜೆಪಿ ಸರಕಾರ ತನ್ನ ಬೆನ್ನು ತಾನೇ ತಟ್ಟಿಕೊಂಡಿತು. ಇದು ಡಬಲ್ ಇಂಜಿನ್ ಸರಕಾರದ ಕ್ರಾಂತಿ ಎಂದು ಹಾಡಿಹೊಗಳಲಾಯಿತು. ಆದರೆ, ಅದೇ ಮಲೆನಾಡಿನ ನೆಲದ ಹಮ್ಮೆಯಾಗಿದ್ದ, ಕರ್ನಾಟಕ

ಕನ್ನಡಿಗರ ಅಸ್ಮಿತೆಗೆ ಕೊಡಲಿಯೇಟು| ಭದ್ರಾವತಿಯ ಉಕ್ಕಿನ ಕಾರ್ಖಾನೆ ಅಭದ್ರ| ಕನ್ನಡಿಗರೇ ಸ್ಥಾಪಿಸಿದ ಸಂಸ್ಥೆಗೆ ಬೀಗ ಜಡಿದ ಬಿಜೆಪಿ Read More »