ಸೂರ್ಯನಿಗೆ ಬಳೆ ತೊಡಿಸಿದವರಾರು? ಪೊನ್ನಂಪೇಟೆಯಲ್ಲಿ ಕಂಡುಬಂದ ಅಪರೂಪದ ವಿದ್ಯಮಾನ
ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಅಪರೂಪದ ಬಾಹ್ಯಾಕಾಶ ವಿದ್ಯಮಾನವೊಂದು ಕಾಣಿಸಿಕೊಂಡಿದ್ದು ಸೂರ್ಯನ ಸುತ್ತ ಆಕರ್ಷಕ ಬಳೆಯ ರೀತಿ ಗೋಚರವಾಗಿದೆ. ಶುಕ್ರವಾರ ಮೂರು ಬಣ್ಣಗಳ ಬೃಹತ್ ಉಂಗುರದ ಮಾದರಿ ಪೊನ್ನಂಪೇಟೆ ತಾಲೂಕಿನ ಕೆಲವೆಡೆ ಕಾಣಿಸಿದೆ. ಬೆಳಕಿನ ವಕ್ರೀಭವನ ಮತ್ತು ಮೋಡದಲ್ಲಿನ ನೀರಿನ ಕಣಗಳಿಂದ ಉಂಗುರದ ರೀತಿ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ. ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಮತ್ತು ಶ್ರೀಮಂಗಲ ವ್ಯಾಪ್ತಿಯಲ್ಲಿ ಸೂರ್ಯನ ಸುತ್ತ ಉಂಗುರದ ಸ್ವರೂಪದಲ್ಲಿ ಕಾಣಿಸಿದೆ.
ಸೂರ್ಯನಿಗೆ ಬಳೆ ತೊಡಿಸಿದವರಾರು? ಪೊನ್ನಂಪೇಟೆಯಲ್ಲಿ ಕಂಡುಬಂದ ಅಪರೂಪದ ವಿದ್ಯಮಾನ Read More »










