ರಾಜ್ಯ

ಸುಳ್ಯ: ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ

ಸಮಗ್ರ ನ್ಯೂಸ್: ಬಿಜೆಪಿ ರೈತ ಮೋರ್ಚಾ ಕರ್ನಾಟಕ, ಸುಳ್ಯ ಬಿಜೆಪಿ ಮಂಡಲದ ವತಿಯಿಂದ ರಾಜ್ಯ ಸರಕಾರ ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಸರಕಾರದ ನಡೆ ಖಂಡಿಸಿ ಸುಳ್ಯ ತಾಲೂಕು ಕಛೇರಿ ಬಳಿ ಸೋಮವಾರ ಪ್ರತಿಭಟನಾ ಸಭೆ ನಡೆಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸರಕಾರದ ಜನ-ವಿರೋಧಿ ನೀತಿಯಿಂದ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ಬಂದಿದೆ. ಸರಕಾರ ರೈತ ಪರ ಎಂದು ಪ್ರಚಾರ ಮಾಡಿ ಇಂದು ರೈತ ವಿರೋಧಿ ನೀತಿ ಅನುಸರಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವ

ಸುಳ್ಯ: ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ Read More »

ಪ್ರಜ್ವಲ್ ರೇವಣ್ಣಗೆ ಮತ್ತೆ ಸಂಕಷ್ಟ| ಮಧ್ಯಂತರ ಅರ್ಜಿ ವಜಾ

ಸಮಗ್ರ ನ್ಯೂಸ್: ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಪ್ರಜ್ವಲ್​​​​ಗೆ ಮತ್ತೆ ಸಂಕಷ್ಟ ಎದುರಾಗಿದೆ. ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಈ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಪ್ರಜ್ವಲ್ ರೇವಣ್ಣ ಅವರನ್ನು ಹಾಸನ ಸಂಸದ ಸ್ಥಾನದಿಂದ ಅನರ್ಹ‌ಮಾಡಿ ಹೈಕೋರ್ಟ್ ಆದೇಶ ಮಾಡಿತ್ತು. ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು, ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವವರೆಗೆ ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ

ಪ್ರಜ್ವಲ್ ರೇವಣ್ಣಗೆ ಮತ್ತೆ ಸಂಕಷ್ಟ| ಮಧ್ಯಂತರ ಅರ್ಜಿ ವಜಾ Read More »

ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟದ ಬಂದ್ ವಾಪಾಸ್| ಸಾರಿಗೆ ಸಚಿವರಿಂದ‌ ಬೇಡಿಕೆ ಈಡೇರಿಸುವ ಭರವಸೆ

ಸಮಗ್ರ ನ್ಯೂಸ್: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಹೋರಾಟವನ್ನು ಖಾಸಗಿ ಸಾರಿಗೆ ಒಕ್ಕೂಟಗಳು ಹಿಂದಕ್ಕೆ ಪಡೆದಿವೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಹೋರಾಟ ನಿರತರ ಮನವಿ ಆಲಿಸಿದ ಬಳಿಕ ಬಂದ್ ಸಂಘಟನೆಗಳು ಕೈ ಬಿಟ್ಟಿವೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಖಾಸಗಿ ಸಾರಿಗೆ ಒಕ್ಕೂಟದ ಪ್ರಮುಖ ನಟರಾಜ್ ಶರ್ಮಾ, ನಾವು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಸ್ವತಃ ಸಾರಿಗೆ ಸಚಿವರೇ ಆಗಮಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ನಾಳೆಯಿಂದಲೇ

ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟದ ಬಂದ್ ವಾಪಾಸ್| ಸಾರಿಗೆ ಸಚಿವರಿಂದ‌ ಬೇಡಿಕೆ ಈಡೇರಿಸುವ ಭರವಸೆ Read More »

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ| ಮರು ತನಿಖೆಗೆ ಅಫೀಲು ರೆಡಿ!?

ಸಮಗ್ರ ನ್ಯೂಸ್: ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳದ ಮಣ್ಣಸಂಕ ಬಳಿ ಕೊಲೆಯಾದ ಕು.ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಲಭ್ಯವಾಗಿದೆ. ಜು.17ರಂದು ಆರೋಪಿ ಸಂತೋಷ್ ರಾವ್ ನನ್ನು ದೋಷಮುಕ್ತಗೊಳಿಸಿ ಸಿಬಿಐ ಕೋರ್ಟ್ ಕೇಸು ಖುಲಾಸೆಗೊಳಿಸಿದ ಬಳಿಕ ಇದೀಗ ಸೌಜನ್ಯಳಿಗೆ ನ್ಯಾಯಕ್ಕಾಗಿ ಮತ್ತೆ ನ್ಯಾಯಾಲಯದ ಕದ ತಟ್ಟಲಾಗುತ್ತಿದೆ. ಈ ಕುರಿತಂತೆ ಸೌಜನ್ಯ ಕುಟುಂಬಸ್ಥರು ಹೈಕೋರ್ಟ್ ಗೆ ಮರು ತನಿಖೆಗೆಗಾಗಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಸದ್ಯ ಎಲ್ಲಾ ವಿಚಾರಗಳು ಕಾನೂನು ಚೌಕಟ್ಟಿನೊಳಗೆ ನಡೆಯುತ್ತಿದ್ದು, ಈ ನಡುವೆ

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ| ಮರು ತನಿಖೆಗೆ ಅಫೀಲು ರೆಡಿ!? Read More »

ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟ ಕ್ರೈಸ್ತ ಪಾದ್ರಿ|ಗುರುತಿನ ಚೀಟಿಯನ್ನು ವಾಪಸ್ ಪಡೆದುಕೊಂಡಭಾರತೀಯ ಆಂಗ್ಲಿಕನ್ ಚರ್ಚ್

ಸಮಗ್ರ ನ್ಯೂಸ್: ಶಬರಿಮಲೆ ವಿಚಾರದಲ್ಲಿ ಕೇರಳದಲ್ಲಿ ಮತ್ತೊಂದ ವಿವಾದ ಉಂಟಾಗಿದ್ದು, 41 ದಿನಗಳ ವೃತ ಆಚರಿಸಿ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದ ಕ್ರೈಸ್ತ ಪಾದ್ರಿಯೊಬ್ಬರ ಮೇಲೆ ಚರ್ಚ್ ನ ಪಾದ್ರಿಯಾಗಿ ಕರ್ತವ್ಯಗಳನ್ನು ನಿರ್ವಹಿಸದಂತೆ ಭಾರತೀಯ ಆಂಗ್ಲಿಕನ್ ಚರ್ಚ್ ನಿರ್ಬಂಧ ವಿಧಿಸಿದೆ. ತಿರುವನಂತಪುರಂ ಮೂಲದವರಾದ ಪಾದ್ರಿ ರೆವರೆಂಡ್ ಡಾ ಮನೋಜ್ ಕೆಜಿ ಅವರು, ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದಾಗಿನಿಂದ ಸುದ್ದಿಯಲ್ಲಿದ್ದಾರೆ. ಇದು ತಮ್ಮ ಧರ್ಮದೆಡೆಗಿನ ಸಂಪೂರ್ಣ ಬದ್ಧತೆಯನ್ನು ಉಳಿಸಿಕೊಂಡು, ಇತರೆ ಧರ್ಮಗಳ ಕುರಿತು ಕಲಿಯುವ ಪ್ರಯತ್ನದ ಭಾಗವಾಗಿದೆ

ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟ ಕ್ರೈಸ್ತ ಪಾದ್ರಿ|ಗುರುತಿನ ಚೀಟಿಯನ್ನು ವಾಪಸ್ ಪಡೆದುಕೊಂಡಭಾರತೀಯ ಆಂಗ್ಲಿಕನ್ ಚರ್ಚ್ Read More »

ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ; ಐವರು ಸಾವು

ಸಮಗ್ರ ನ್ಯೂಸ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ‌ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ರಾಯಚೂರಿನ ಮಾಬಮ್ಮ(35), ಮಸ್ಕಿ ಮೂಲದ ರಮೇಶ್(40), ಬೆಂಗಳೂರು ಮೂಲದ ಪಾರ್ವತಮ್ಮ(45) ಸೇರಿ ಐವರು ಮೃತಪಟ್ಟ ದುರ್ದೈವಿಗಳು. ಬಸ್ ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸಾರಿಗೆ ಬಸ್‍ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ

ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ; ಐವರು ಸಾವು Read More »

ಹವಾಮಾನ ವರದಿ| ರಾಜ್ಯಾದ್ಯಂತ ಸೆ.17ರವರೆಗೂ ಉತ್ತಮ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಸೆಪ್ಟೆಂಬರ್ 17ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಸಾಧಾರಣ ಮಳೆಯಾಗಲಿದೆ, ಸೆಪ್ಟೆಂಬರ್ 16-17ರಂದು ಅತ್ಯಧಿಕ ಮಳೆ ಸುರಿಯಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ,

ಹವಾಮಾನ ವರದಿ| ರಾಜ್ಯಾದ್ಯಂತ ಸೆ.17ರವರೆಗೂ ಉತ್ತಮ ಮಳೆ ಸಾಧ್ಯತೆ Read More »

ಉದಯನಿಧಿ ಮಾತನಾಡಿದ್ದು ತಪ್ಪಲ್ಲ, ರಾಜಕಾರಣಿಗಳು ಧರ್ಮವನ್ನು ಗುತ್ತಿಗೆ ತಗೊಂಡಿದ್ದಾರಾ? ಪ್ರಕಾಶ್ ರೈ

ಸಮಗ್ರ ನ್ಯೂಸ್: ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್‌ ಮಾತಾಡಿದ್ದರಲ್ಲಿ ತಪ್ಪೇನಿದೆ? ಅಸ್ಪೃಶ್ಯತೆ ಹೋಗಬೇಕೋ ಇಲ್ಲವೋ? ಉದಯನಿಧಿ ಅವರ ಹೇಳಿಕೆಯನ್ನ ತಿರುಚಲಾಗಿದೆ ಎಂದು ಬಹುಭಾಷಾ ನಟ ಪ್ರಕಾಶ ರೈ ಹೇಳಿದರು. ‘ಎಲ್ಲಾ ಧರ್ಮಗಳಲ್ಲೂ ವಿಕೃತಿ ಇದೆ. ನಾನು ಯಾವ ಧರ್ಮದ ವಿರೋಧಿಯೂ ಅಲ್ಲ. ಆದರೆ ಧರ್ಮ ರಕ್ಷಕರು ಎಂದು ರಾಜಕಾರಣಿಗಳು ಬಿಂಬಿಸಲ್ಪಟ್ಟು ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಯಾವ ರಾಜಕಾರಣಿಯೂ ಧರ್ಮವನ್ನು ಗುತ್ತಿಗೆ ಪಡೆದಿಲ್ಲ. ನನಗೆ ದೇಶವೇ ಧರ್ಮ’ ಎಂದು ಹೇಳಿದ್ದಾರೆ

ಉದಯನಿಧಿ ಮಾತನಾಡಿದ್ದು ತಪ್ಪಲ್ಲ, ರಾಜಕಾರಣಿಗಳು ಧರ್ಮವನ್ನು ಗುತ್ತಿಗೆ ತಗೊಂಡಿದ್ದಾರಾ? ಪ್ರಕಾಶ್ ರೈ Read More »

‘ಅಬ್ಬಾ..! ಇದು ಹೊಟೇಲ್ ಮೆನ್ಯೂ ಅಂದ್ಕೊಂಡ್ರಾ| ಮದುವೆ ಊಟದ ಮೆನ್ಯೂ!!

ಸಮಗ್ರ ನ್ಯೂಸ್: ಕೆಲವೊಂದು ದೊಡ್ಡ ಹೋಟೆಲ್​​ಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ ಮೆನ್ಯೂ ನೋಡಿದರೆ ತಲೆ ಸುತ್ತಿ ಬರುತ್ತದೆ. ಸಾಮಾನ್ಯ ಜನರು ಆ ಮೆನ್ಯೂನಲ್ಲಿರುವ ಕೆಲವೊಂದು ತಿನಿಸುಗಳ ಹೆಸರುಗಳನ್ನು ಹಿಂದೆಲ್ಲೂ ಕೇಳಿಯೇ ಇರುವುದಿಲ್ಲ, ಓದಲೂ ಬರುವುದಿಲ್ಲ. ಕೆಲವೊಂದು ಖಾದ್ಯಗಳು ನಮ್ಮ ಮನೆಯಲ್ಲಿ ಮಾಡುವ ಪದಾರ್ಥಗಳೇ ಆಗಿದ್ದರೂ ಮೆನ್ಯೂನಲ್ಲಿ ಚಿತ್ರವಿಚಿತ್ರ ಹೆಸರಟ್ಟು ಅದನ್ನ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿಯೇ ಅರ್ಧ ಸಮಯ ಕಳೆದು ಹೋಗಿರುತ್ತದೆ. ಕೊನೆಯಲ್ಲಿ ನಮಗೆ ತಿಳಿದ ತಿನಿಸಿನ ಹೆಸರು ಹುಡುಕಿ ಆಯ್ಕೆ

‘ಅಬ್ಬಾ..! ಇದು ಹೊಟೇಲ್ ಮೆನ್ಯೂ ಅಂದ್ಕೊಂಡ್ರಾ| ಮದುವೆ ಊಟದ ಮೆನ್ಯೂ!! Read More »

ಸಿಎಂ ಸಲಹೆಗಾರರಾಗಿ ಸುನಿಲ್ ಕಾನುಗೋಲು ನೇಮಕ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರರಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಾರ ಸುನಿಲ್ ಕಾನುಗೋಲು ಅವರನ್ನು ಸಂಪುಟದರ್ಜೆ ಸಚಿವರ ಸ್ಥಾನಮಾನ ನೀಡಿ ನೇಮಿಸಲಾಗಿದೆ. ಶೀಘ್ರವೇ ನೇಮಕಾತಿ ಆದೇಶ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. ಕಳೆದ ಮೇ 10ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾನುಗೋಲುಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ಹಿಂದಿನ ಬಿಜೆಪಿ ಸರ್ಕಾರವನ್ನು ಸಮರ್ಥವಾಗಿ ಎದುರಿಸಲು ಅವರು ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ತಂತ್ರಗಾರಿಕೆಯಲ್ಲಿ ಸಹಾಯ ಮಾಡಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಅವರ

ಸಿಎಂ ಸಲಹೆಗಾರರಾಗಿ ಸುನಿಲ್ ಕಾನುಗೋಲು ನೇಮಕ Read More »