ದೇಶ-ವಿದೇಶ

ಹಿಮಾಚಲ ಪ್ರದೇಶ| ಭಾರೀ ಭೂಕುಸಿತಕ್ಕೆ ಹಲವರ ಬಲಿ ಶಂಕೆ| ಹತ್ತಾರು ವಾಹನಗಳು ಜಖಂ

ಹಿಮಾಚಲ ಪ್ರದೇಶದ ಕಿನ್ನೌರ್​ನಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ನೂರಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಭೂಕುಸಿತದ ಪರಿಣಾಮವಾಗಿ ಸಾಕಷ್ಟು ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು ಅನೇಕರು ಸಾವನ್ನಪ್ಪಿರುವ ಸಾಧ್ಯತೆಯಿದೆ. ಭಾರೀ ಭೂಕುಸಿತದ ಬಳಿಕ ವಾಹನಗಳು ಅವಶೇಷಗಳಡಿ ಸಿಲುಕಿದ್ದು ಅಪಾರ ಪ್ರಮಾಣದಲ್ಲಿ ಸಾವು ನೋವು ಉಂಟಾಗಿರುವುದಾಗಿ ಪ್ರಾಥಮಿಕ ‌ಮಾಹಿತಿಯಿಂದ ತಿಳಿದು ಬಂದಿದೆ. ಭೂಕುಸಿತ ಉಂಟಾಗಿರುವ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಆರಂಭವಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿರುವುದಾಗಿ ಮಾಹಿತಿ ಲಭಿಸಿದೆ.

ಹಿಮಾಚಲ ಪ್ರದೇಶ| ಭಾರೀ ಭೂಕುಸಿತಕ್ಕೆ ಹಲವರ ಬಲಿ ಶಂಕೆ| ಹತ್ತಾರು ವಾಹನಗಳು ಜಖಂ Read More »

ಕಾಳ್ಗಿಚ್ಚಿಗೆ ನಲುಗಿದ ಅಲ್ಜೀರಿಯಾ| 25 ಕ್ಕೂ ಹೆಚ್ಚು ಸೈನಿಕರ ಮಾರಣಹೋಮ|

ಅಲ್ಜೀರಿಯಾ : ರಾಜಧಾನಿಯ ಪೂರ್ವಕ್ಕಿರುವ ಪರ್ವತ ಕಾಡುಗಳು ಮತ್ತು ಹಳ್ಳಿಗಳನ್ನು ಧ್ವಂಸಗೊಳಿಸುತ್ತಿರುವ ಕಾಡ್ಗಿಚ್ಚಿನಿಂದ ನಿವಾಸಿಗಳನ್ನು ರಕ್ಷಿಸುತ್ತಿರುವ ಕನಿಷ್ಠ 25 ಅಲ್ಜೀರಿಯನ್ ಸೈನಿಕರು ಬೆಂಕಿಯಿಂದ ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷರು ಮಂಗಳವಾರ ರಾತ್ರಿ ಘೋಷಿಸಿದರು, ಬೆಂಕಿಯಿಂದ ನಾಗರಿಕರ ಸಾವಿನ ಸಂಖ್ಯೆ ಕನಿಷ್ಠ 17 ಕ್ಕೆ ಏರಿದೆ. ಉತ್ತರ ಆಫ್ರಿಕಾ ರಾಷ್ಟ್ರದ ಬರ್ಬರ್ ನಲ್ಲಿ ನೆಲೆಯಾಗಿರುವ ಕಬೈಲ್ ನ ಎರಡು ಪ್ರದೇಶಗಳಲ್ಲಿ ಸೈನಿಕರು 100 ಜನರನ್ನು ಬೆಂಕಿಯಿಂದ ರಕ್ಷಿಸಿದ್ದಾರೆ ಎಂದು ಅಧ್ಯಕ್ಷ ಅಬ್ದೆಲ್ಮದ್ಜಿದ್ ಟೆಬ್ಬೌನ್ ಟ್ವೀಟ್ ಮಾಡಿದ್ದಾರೆ.ಬೆಂಕಿಯ ವಿರುದ್ಧ ಹೋರಾಡುತ್ತಿದ್ದ ಇತರ

ಕಾಳ್ಗಿಚ್ಚಿಗೆ ನಲುಗಿದ ಅಲ್ಜೀರಿಯಾ| 25 ಕ್ಕೂ ಹೆಚ್ಚು ಸೈನಿಕರ ಮಾರಣಹೋಮ| Read More »

‘ಪದಕ ಗೆದ್ದ ದಿನ ನನ್ನನ್ನು ಸಿಂಗ್ ಅಭಿನಂದಿಸಿದ್ದರು, ಆದರೆ ಮೋದಿಯಂತೆ ನಟಿಸಿರಲಿಲ್ಲ’- ಬಾಕ್ಸರ್ ವಿಜೇಂದರ್ ಸಿಂಗ್ ಟೀಕೆ

ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ಭಾರತೀಯ ಬಾಕ್ಸರ್ ವಿಜೇಂದರ್ ಸಿಂಗ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವಿಜೇಂದರ್ ಸಿಂಗ್ ‘ಒಲಿಂಪಿಕ್ಸ್ ನಲ್ಲಿ‌ ನಾನು ಪದಕ ಪಡೆದಾಗ ಡಾ.ಮನಮೋಹನ್ ಸಿಂಗ್ ಕೂಡ ಅಭಿನಂದಿಸಿದ್ದರು ಆದರೆ ಅವರು ಪಿಎಂ ಮೋದಿಯಂತೆ ನಾಟಕಿಯವಾಗಿ ವರ್ತಿಸಲಿಲ್ಲ’ಎಂದು ಹೇಳಿದ್ದಾರೆ. ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಾಕ್ಸರ್ ವಿಜೇಂದರ್ ಸಿಂಗ್ ‘ಒಲಂಪಿಕ್ಸ್‌ ನಲ್ಲಿ ನಾನು ಗೆದ್ದಾಗ ಮನಮೋಹನ್ ಸಿಂಗ್ ಕೂಡ ನನ್ನೊಂದಿಗೆ ಫೋನಿನಲ್ಲಿ ಮಾತನಾಡಿದ್ದರು. ಆದರೆ ಆತ ಯಾವತ್ತೂ ಫೋಟೊ

‘ಪದಕ ಗೆದ್ದ ದಿನ ನನ್ನನ್ನು ಸಿಂಗ್ ಅಭಿನಂದಿಸಿದ್ದರು, ಆದರೆ ಮೋದಿಯಂತೆ ನಟಿಸಿರಲಿಲ್ಲ’- ಬಾಕ್ಸರ್ ವಿಜೇಂದರ್ ಸಿಂಗ್ ಟೀಕೆ Read More »

ವಿಕ್ರಾಂತ್‌ ಯುದ್ದನೌಕೆ ಪರೀಕ್ಷಾರ್ಥ ಪ್ರಯೋಗ ಯಶಸ್ವಿ| ಸೇನಾವಲಯದಲ್ಲಿ ಐತಿಹಾಸಿಕ ‌ಮೈಲಿಗಲ್ಲು ಸಾಧಿಸಿದ ಭಾರತ|

ನವದೆಹಲಿ: ಭಾರತದ ಮೊದಲ ದೇಶೀಯ ವಿಮಾನ ವಾಹಕ ಯುದ್ಧನೌಕೆ (IAC) ವಿಕ್ರಾಂತ್ ಐದು ದಿನಗಳ ಪರೀಕ್ಷಾರ್ಥ ಸಂಚಾರ ಮುಗಿಸಿ ಹಿಂದಿರುಗಿದೆ. 40,000 ಟನ್​ ಯುದ್ಧನೌಕೆಯ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು, ಐದು ದಿನಗಳ ಸಮುದ್ರ ಪ್ರಯೋಗ ಕಳೆದ ಬುಧವಾರದಿಂದ ಪ್ರಾರಂಭವಾಗಿತ್ತು. ಅಂದಾಜು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಕ್ರಾಂತ್​ ಯುದ್ಧನೌಕೆ ಯನ್ನು ತಯಾರಿಸಲಾಗಿದೆ. ಈ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಮುಂದಿನ ವರ್ಷ ಆಗಸ್ಟ್​​ನಿಂದ ಭಾರತೀಯ ನೌಕಾಪಡೆಯನ್ನು ಸೇರಲಿದೆ. ಈ ಯುದ್ಧ ನೌಕೆಯೀಗ ಯಶಸ್ವಿಯಾಗಿ

ವಿಕ್ರಾಂತ್‌ ಯುದ್ದನೌಕೆ ಪರೀಕ್ಷಾರ್ಥ ಪ್ರಯೋಗ ಯಶಸ್ವಿ| ಸೇನಾವಲಯದಲ್ಲಿ ಐತಿಹಾಸಿಕ ‌ಮೈಲಿಗಲ್ಲು ಸಾಧಿಸಿದ ಭಾರತ| Read More »

ರೈತರಿಗೆ ಗುಡ್ ನ್ಯೂಸ್|ನಾಳೆ ಪಿಎಂ ಕಿಸಾನ್ ಸಮ್ಮಾನ್ ನ ಮತ್ತೊಂದು ಕಂತು ಬಿಡುಗಡೆ|

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮತ್ತೊಂದು ಕಂತು ದೇಶದ ರೈತರ ಖಾತೆಗೆ ನಾಳೆ ವರ್ಗಾವಣೆಯಾಗಲಿದೆ. ಪಿಎಂ-ಕಿಸಾನ್ ನ ಕಂತನ್ನು ಕೇಂದ್ರ ಸರ್ಕಾರವು ಆಗಸ್ಟ್ 9 ರಂದು ವಿತರಿಸಲಿದ್ದು, ಸರಿ ಸುಮಾರು 90 ಮಿಲಿಯನ್ ರೈತರಿಗೆ ಒಟ್ಟು 19,000 ಕೋಟಿ ರೂ ಪಿಎಂ-ಕಿಸಾನ್ ಅಡಿಯಲ್ಲಿ ರೈತರ ಖಾತೆಗೆ ಜಮೆಯಾಗಲಿದೆ. ಕೇಂದ್ರ ಸರ್ಕಾರವು ಪ್ರತಿ ಭೂಮಿ ಹೊಂದಿರುವ ರೈತರಿಗೆ ಮಾಸಿಕ ದಾಖಲಾತಿಯೊಂದಿಗೆ ವಾರ್ಷಿಕ ರೂ. 6,000 ಆದಾಯದ ಬೆಂಬಲವನ್ನು ನೀಡುತ್ತಿದೆ. ಪಿಎಂ ಕಿಸಾನ್ ಹಣವನ್ನು ವರ್ಷದಲ್ಲಿ ಮೂರು

ರೈತರಿಗೆ ಗುಡ್ ನ್ಯೂಸ್|ನಾಳೆ ಪಿಎಂ ಕಿಸಾನ್ ಸಮ್ಮಾನ್ ನ ಮತ್ತೊಂದು ಕಂತು ಬಿಡುಗಡೆ| Read More »

ಪತ್ನಿಯ ಇಚ್ಚೆಗೆ ವಿರುದ್ಧದ ಲೈಂಗಿಕತೆಯೂ ಅತ್ಯಾಚಾರವೇ….| ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಕೊಚ್ಚಿ: ವೈವಾಹಿಕ ಜೀವನದಲ್ಲಿ ಲೈಂಗಿಕ ಸಂಬಂಧವನ್ನು ವ್ಯಾಖ್ಯಾನಿಸುವ ಪ್ರಮುಖ ಅವಲೋಕನದಲ್ಲಿ, ಕೇರಳ ಹೈಕೋರ್ಟ್ ಶುಕ್ರವಾರ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆಗಳನ್ನು ಮಾಡುವುದು ‘ವೈವಾಹಿಕ ಅತ್ಯಾಚಾರ’ ಮತ್ತು ವಿಚ್ಛೇದನ ಪಡೆಯಲು ಅದು ಉತ್ತಮ ಆಧಾರವಾಗಿದೆ ಎಂದು ಹೇಳಿದೆ.ನ್ಯಾಯಮೂರ್ತಿ ಎ.ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರನ್ನು ಒಳಗೊಂಡ ಪೀಠವು ಈ ರೀತಿ ಹೇಳಿದ್ದು, ಇದೇ ವೇಳೆ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನಕ್ಕಾಗಿ ಹೆಂಡತಿಯ ಮನವಿಯನ್ನು ಆಲಿಸುವ ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿಯ ಮನವಿಯನ್ನು ತಳ್ಳಿಹಾಕಿದೆ.

ಪತ್ನಿಯ ಇಚ್ಚೆಗೆ ವಿರುದ್ಧದ ಲೈಂಗಿಕತೆಯೂ ಅತ್ಯಾಚಾರವೇ….| ಕೇರಳ ಹೈಕೋರ್ಟ್ ಮಹತ್ವದ ತೀರ್ಪು Read More »

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ‌ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆ| ಮೊದಲ ಬಾರಿಗೆ ಉನ್ನತ ಹುದ್ದೆ ಅಲಂಕರಿಸಿದ ಭಾರತ|

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಅಧ್ಯಕ್ಷ ಸ್ಥಾನವನ್ನು ಭಾರತ ಭಾನುವಾರ ವಹಿಸಿಕೊಂಡಿದೆ. ಮುಂದಿನ ಒಂದು ತಿಂಗಳ ಕಾಲ ಭಾರತ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲಿದೆ. ಈ ಅವಧಿಯಲ್ಲಿ ಹಲವು ಮಹತ್ವದ ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳಲು ಭಾರತ ನಿರ್ಧರಿಸಿದೆ. ಇನ್ನೊಂದು ವಿಶೇಷವೆಂದರೆ ಆ.9ರಂದು ಭದ್ರತಾ ಮಂಡಳಿಯ ಸಭೆ ಆಯೋಜನೆಯಾಗಿದ್ದು, ಸಭೆಯ ಅಧ್ಯಕ್ಷರಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾರ್ಯನಿರ್ವಹಿಸಲಿದ್ದಾರೆ. ಈ ಮೂಲಕ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡ ದೇಶದ ಮೊದಲ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. 1992ರಲ್ಲಿ

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ‌ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆ| ಮೊದಲ ಬಾರಿಗೆ ಉನ್ನತ ಹುದ್ದೆ ಅಲಂಕರಿಸಿದ ಭಾರತ| Read More »

ಕಾಡ್ಗಿಚ್ಚಿನಿಂದಾಗಿ ಹೊತ್ತಿ ಉರಿಯುತ್ತಿರುವ ಟರ್ಕಿ:ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಟರ್ಕಿ: ದಕ್ಷಿಣ ಕರಾವಳಿಯಲ್ಲಿ ಭುಗಿಲೆದ್ದಿರುವ ಕಾಡ್ಗಿಚ್ಚು ಸತತ ಐದನೇ ದಿನವು ಮುಂದುವರೆದಿದ್ದು, ಇದರಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿದ್ದು, 10 ಜನರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ಭಾನುವಾರ ವರದಿ ಮಾಡಿದೆ. “ಮಾನವ್‌ಗತ್, ಮರ್ಮರಿಸ್ ಮತ್ತು ಮಿಲಸ್‌ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಇದರಿಂದಾಗಿ ಸುತ್ತಮುತ್ತಲಿನ ಹೋಟೆಲ್‌ಗಳು ಮತ್ತು ವಸತಿ ಪ್ರದೇಶಗಳನ್ನು ಸ್ಥಳಾಂತರಿಸಲಾಗಿದೆ” ಎಂದು ಟರ್ಕಿ ಕೃಷಿ ಮತ್ತು ಅರಣ್ಯ ಸಚಿವ ಬೇಕಿರ್ ಪಕ್ಡೆಮಿರ್ಲಿ ಹೇಳಿದ್ದಾರೆ. ಬುಧವಾರದಿಂದ ನಿರಂತರ ಕಾಡ್ಗಿಚ್ಚು ಆರಂಭವಾದಾಗಿದ್ದು ಈ ಹಿನ್ನಲೆ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಭಾನುವಾರ

ಕಾಡ್ಗಿಚ್ಚಿನಿಂದಾಗಿ ಹೊತ್ತಿ ಉರಿಯುತ್ತಿರುವ ಟರ್ಕಿ:ಸಾವಿನ ಸಂಖ್ಯೆ 8ಕ್ಕೆ ಏರಿಕೆ Read More »

ಇ-ರುಪಿಗೆ ಚಾಲನೆ ನೀಡಿದ ಪ್ರಧಾನಿ| ಇಂಟರ್ನೆಟ್ ಇಲ್ಲದೇ ಹಣ ಪಾವತಿ ಸೌಲಭ್ಯ ಏನಿದರ ವಿಶೇಷತೆ ಅಂತೀರಾ? ಈ ಸ್ಟೋರಿ ಓದಿ.

ನವದೆಹಲಿ: ಭಾರತವನ್ನು ಡಿಜಿಟಲೀಕರಣ ಮಾಡಲು ಪಣ ತೊಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಮೂಲಕ ಹಣ ಪಾವತಿ ಮಾಡುವ ಇ-ರುಪಿ (E-RUPI) ಸೇವೆಗೆ ಇಂದು ಚಾಲನೆ ನೀಡಿದ್ದಾರೆ. ಈಗಾಗಲೇ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ವಾಟ್ಸಾಪ್ ಪೇ ಮುಂತಾದ ಡಿಜಿಟಲ್ ಪೇಮೆಂಟ್​ ಆಯ್ಕೆಗಳಿವೆಯಲ್ಲ ಎಂದು ನೀವು ಹುಬ್ಬೇರಿಸಬಹುದು. ಆದರೆ, ಈ ಇ-ರುಪಿ ಬಹಳ ವಿಶೇಷವಾಗಿದ್ದು, ಇದರ ಮೂಲಕ ಇಂಟರ್ನೆಟ್, ಸ್ಮಾರ್ಟ್​ಫೋನ್​ಗಳು ಇಲ್ಲದೆಯೂ ವೋಚರ್ ಮೂಲಕ ಹಣ ಪಾವತಿ ಮಾಡಲು ಸಾಧ್ಯವಿದೆ. ಇಂದು ಈ ಇ-ರುಪಿ ಸೇವೆಗೆ

ಇ-ರುಪಿಗೆ ಚಾಲನೆ ನೀಡಿದ ಪ್ರಧಾನಿ| ಇಂಟರ್ನೆಟ್ ಇಲ್ಲದೇ ಹಣ ಪಾವತಿ ಸೌಲಭ್ಯ ಏನಿದರ ವಿಶೇಷತೆ ಅಂತೀರಾ? ಈ ಸ್ಟೋರಿ ಓದಿ. Read More »

ಒಂದೇ ವರ್ಷದಲ್ಲಿ 20 ಮಕ್ಕಳನ್ನು ಪಡೆದ ಮಹಾತಾಯಿ|

ಅಟ್ಲಾಂಟಾ: ಅವಳಿ ಮಕ್ಕಳು, ತ್ರಿವಳಿ ಮಕ್ಕಳು, ನಾಲ್ಕು-ಐದು ಮಕ್ಕಳು ಒಟ್ಟಿಗೆ ಹುಟ್ಟುವುದನ್ನು ಕೇಳಿರುತ್ತೀರಿ. ಆದರೆ ಈ ದಂಪತಿ ಕಥೆಯೇ ಬೇರೆ. ಜಾರ್ಜಿಯಾದ ದಂಪತಿ ಒಂದೇ ವರ್ಷದಲ್ಲಿ ಬರೋಬ್ಬರಿ 20 ಮಕ್ಕಳಿಗೆ ತಂದೆ ತಾಯಿಯಾಗಿದ್ದಾರೆ. ಅದು ಹೇಗೆ ಗೊತ್ತಾ?… ಜಾರ್ಜಿಯಾದಲ್ಲಿ ನೆಲೆಸಿರುವ ಕ್ರಿಸ್ಟಿನಾ ಒಜ್ತುರ್ಕ್ ಮತ್ತು ಗಾಲಿಪ್​ಗೆ 20 ಪ್ಲಸ್​ ಒಂದು ಒಟ್ಟು 21 ಮಕ್ಕಳು. ಗಾಲಿಪ್​ ವಯಸ್ಸು 53 ವರ್ಷವಾದರೆ ಕ್ರಿಸ್ಟಿನಾ ಇನ್ನೂ 23 ವರ್ಷದವಳು. ಈ ದಂಪತಿಗೆ ಆರು ವರ್ಷದ ವಿಕ್ಟೋರಿಯಾ ಹೆಸರಿನ ಮಗಳಿದ್ದಾಳೆ. ಆದರೆ

ಒಂದೇ ವರ್ಷದಲ್ಲಿ 20 ಮಕ್ಕಳನ್ನು ಪಡೆದ ಮಹಾತಾಯಿ| Read More »