ದೇಶ-ವಿದೇಶ

ಬೆಳ್ತಂಗಡಿ: ಮೂರು ದಿನಗಳ ಹಿಂದೆ ದುಬೈನಲ್ಲಿ ಉದ್ಯೋಗಕ್ಕೆ ಸೇರಿದ್ದ ಯುವಕ ಅಪಘಾತದಲ್ಲಿ ಸಾವು

ಸಮಗ್ರ ನ್ಯೂಸ್: ಹೊರ ದೇಶವಾದ ದುಬೈನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಬೆಳ್ತಂಗಡಿಯ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ದುರ್ದೈವಿ ಕುವೆಟ್ಟು ನಿವಾಸಿ ಪ್ಲೇವಿನ್ ಅವಿನ್ ರೊಡ್ರಿಗಸ್ ಎಂದು ತಿಳಿದುಬಂದಿದೆ. ಕುವೆಟ್ಟು ಸರ್ಕಾರಿ ಶಾಲೆಯ ಬಳಿಯ ಸಿರಿಲ್ ರೊಡ್ರಿಗಸ್ ಮತ್ತು ಮೇರಿ ಮೊಂತೆರೋ ದಂಪತಿಯ ಪುತ್ರನಾಗಿರುವ ನಿವಾಸಿ ಕೇವನ್ ಅವಿನ್ ರೊಡ್ರಿಗಸ್ ಮಡಂತ್ಯಾರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ನಂತರ ನಿಟ್ಟೆ ಕಾಲೇಜಿನಲ್ಲಿ ಎಂ.ಬಿ.ಎ ಪದವಿ ಮುಗಿಸಿ ದುಬೈಗೆ ಹೋಗಿದ್ದರು. 3 ದಿನಗಳ ಹಿಂದೆಯಷ್ಟೆ ಇವರಿಗೆ […]

ಬೆಳ್ತಂಗಡಿ: ಮೂರು ದಿನಗಳ ಹಿಂದೆ ದುಬೈನಲ್ಲಿ ಉದ್ಯೋಗಕ್ಕೆ ಸೇರಿದ್ದ ಯುವಕ ಅಪಘಾತದಲ್ಲಿ ಸಾವು Read More »

ಬೆಂಗಳೂರಿನಲ್ಲಿ ಬಂದಿಳಿದ ವಿಶ್ವದ ಅತಿ‌ದೊಡ್ಡ ವಿಮಾನ| ಇದರ ವಿಶೇಷತೆಗಳೇನು ಗೊತ್ತಾ?

ಸಮಗ್ರ ನ್ಯೂಸ್: ವಿಶ್ವದ ಅತಿದೊಡ್ಡ ವಿಮಾನವನ್ನು ನೀವು ಯಾವತ್ತೂ ನೋಡಿರಲು ಸಾಧ್ಯವಿಲ್ಲ ಆದರೆ ನಮ್ಮ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದಕ್ಕೆ ನಿನ್ನೆ (ಅ.14) ಸಾಕ್ಷಿಯಾಗಿದೆ. ಏರ್‌ಬಸ್ A380, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ನಿಗದಿತ ಸಮಯಕ್ಕಿಂತ ಎರಡು ವಾರಗಳ ಮುಂಚಿತವಾಗಿ ಬಂದಿಳಿದಿದೆ. ಎಮಿರೇಟ್ಸ್ ಏರ್‌ಲೈನ್ಸ್​ನ ಡಬಲ್ ಡೆಕ್ಕರ್ ವಿಮಾನ ದುಬೈನಿಂದ ಕರ್ನಾಟಕದ ರಾಜಧಾನಿಗೆ ಬಂದಿದೆ. ಎಮಿರೇಟ್ಸ್ ‌ವಿಮಾನಯಾನ ಕಂಪನಿಯ ದೊಡ್ಡ ವಿಮಾನ ಇದಾಗಿದ್ದು, 500ಕ್ಕೂ ಹೆಚ್ಚು ಸೀಟ್​ಗಳು ಸೇರಿ, ಹಲವು‌ ವಿಶೇಷತೆಗಳನ್ನು ಹೊಂದಿದೆ.

ಬೆಂಗಳೂರಿನಲ್ಲಿ ಬಂದಿಳಿದ ವಿಶ್ವದ ಅತಿ‌ದೊಡ್ಡ ವಿಮಾನ| ಇದರ ವಿಶೇಷತೆಗಳೇನು ಗೊತ್ತಾ? Read More »

ಮುಸ್ಲಿಂ ಹೆಣ್ಮಕ್ಕಳು ಹಿಜಾಬ್ ಧರಿಸದೆ ಬಿಕಿನಿ ಧರಿಸಬೇಕೇ? – ಓವೈಸಿ

ಸಮಗ್ರ ನ್ಯೂಸ್: ಶಾಲೆಗಳಲ್ಲಿ ತಮಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಬಳಿಕ ಈಗ ತೀರ್ಪು ಹೊರ ಬಿದ್ದಿದೆ. ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ತೀರ್ಪು ನೀಡಿರುವ ಕಾರಣ ಪ್ರಕರಣ ಈಗ ಮುಖ್ಯ ನ್ಯಾಯಮೂರ್ತಿಗಳ ಅಂಗಳಕ್ಕೆ ಹೋಗಿದೆ. ಮಧ್ಯೆ ಹೈದರಾಬಾದಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಶಿಕ್ಷಣ ಸಂಸ್ಥೆಗಳಲ್ಲಿ ಸಿಖ್ ರು ಪಗಡಿ, ಹಿಂದೂಗಳು ವಿಭೂತಿ ಧಾರಣೆ ಮಾಡುತ್ತಾರೆ. ಆದರೆ ಮುಸ್ಲಿಂ

ಮುಸ್ಲಿಂ ಹೆಣ್ಮಕ್ಕಳು ಹಿಜಾಬ್ ಧರಿಸದೆ ಬಿಕಿನಿ ಧರಿಸಬೇಕೇ? – ಓವೈಸಿ Read More »

ಉತ್ತರ ಟರ್ಕಿಯಲ್ಲಿ‌ ಭೀಕರ ಸ್ಪೋಟ; 25 ಮಂದಿ ಸಾವು

ಸಮಗ್ರ ನ್ಯೂಸ್: ಉತ್ತರ ಟರ್ಕಿಯ ಕಲ್ಲಿದ್ದಲು ಗಣಿಯೊಂದರಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, 25 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆಯಲ್ಲಿ ಕೆಲವರು ಅವಶೇಷಗಳಡಿ ಸಿಲುಕಿದ್ದು, 11 ಮಂದಿಯನ್ನು ರಕ್ಷಿಸಲಾಗಿದೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ಸಮಯದಲ್ಲಿ, ಸುಮಾರು 110 ಜನರು ಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಅರ್ಧದಷ್ಟು ಜನರು 300 ಮೀಟರ್ ಆಳದಲ್ಲಿದ್ದರು ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಅವರು ಮಾಹಿತಿ ನೀಡಿದ್ದಾರೆ. ಮೀಥೇನ್ ಸ್ಫೋಟದಿಂದಾಗಿ ಈ ಘಟನೆ ಸಂಭವಿಸಿರಬಹುದು

ಉತ್ತರ ಟರ್ಕಿಯಲ್ಲಿ‌ ಭೀಕರ ಸ್ಪೋಟ; 25 ಮಂದಿ ಸಾವು Read More »

ಮತ್ತೆ ರಿಷಿ ಸುನಕ್ ಎದುರು ಪ್ರಧಾನಿ ಪಟ್ಟ| ಬಂಡಾಯಕ್ಕೆ ಲೀಜ್ ಟ್ರಸ್ ತಲೆದಂಡ?

ಸಮಗ್ರ ನ್ಯೂಸ್: ಬ್ರಿಟನ್‌ ಪ್ರಧಾನಿ ಸ್ಥಾನ ಮತ್ತು ಪಕ್ಷದ ನಾಯಕತ್ವ ಸ್ಥಾನದಿಂದ ಲಿಜ್‌ ಟ್ರಸ್‌ ಅವರನ್ನು ಕೆಳಗಿಳಿಸಿ, ಅವರ ಸ್ಥಾನಕ್ಕೆ ಪರಾಜಿತ ಅಭ್ಯರ್ಥಿ ರಿಷಿ ಸುನಕ್‌ರನ್ನು ಕೂರಿಸಲು ಕನ್ಸರ್ವೇಟಿವ್‌ ಪಕ್ಷದ ಅನೇಕ ಬಂಡಾಯ ಸದಸ್ಯರು ಯೋಜಿಸಿದ್ದಾರೆ ಎನ್ನಲಾಗಿದೆ. “ದಿ ಟೈಮ್ಸ್‌’ ನಡೆಸಿದ ಸಮೀಕ್ಷೆಯ ಪ್ರಕಾರ, ಟ್ರಸ್‌ ಮತ್ತು ಸುನಕ್‌ ನಡುವಿನ ಪಕ್ಷದ ನಾಯಕತ್ವದ ಆಯ್ಕೆ ರೇಸ್‌ನಲ್ಲಿ ಪಕ್ಷದ ಸದಸ್ಯರು ತಪ್ಪು ಆಯ್ಕೆ ಮಾಡಿದ್ದಾರೆ ಎಂದು ಕನ್ಸರ್ವೇ ಟಿವ್‌ ಪಕ್ಷದ ಶೇ.62ರಷ್ಟು ಬೆಂಬಲಿಗರು ಅಭಿ ಪ್ರಾಯಪಟ್ಟಿದ್ದಾರೆ. ಶೇ.15ರಷ್ಟು ಮಂದಿ

ಮತ್ತೆ ರಿಷಿ ಸುನಕ್ ಎದುರು ಪ್ರಧಾನಿ ಪಟ್ಟ| ಬಂಡಾಯಕ್ಕೆ ಲೀಜ್ ಟ್ರಸ್ ತಲೆದಂಡ? Read More »

ಮಧ್ಯರಾತ್ರಿಯೂ ನೀವು ಬಿಸಿಬಿಸಿ ಇಡ್ಲಿ ತಿನ್ಬಹುದು| ಹೊಸದಾಗಿ ಶುರುವಾಗಿದೆ 24×7 ಇಡ್ಲಿ ವೆಂಡಿಂಗ್ ಮೆಷಿನ್!!

ಸಮಗ್ರ ನ್ಯೂಸ್: ನಿಮಗೇನಾದರೂ ಮಧ್ಯರಾತ್ರಿ ಇಡ್ಲಿ ತಿನ್ನುವ ಆಸೆಯೇ ಇದೆಯೇ? ಇದೆ ಎಂದಾದರೆ ಸ್ಟಾರ್ಟಪ್‌ವೊಂದು ಬೆಂಗಳೂರಿನಲ್ಲಿ ಇಡ್ಲಿಯನ್ನು ಎಟಿಎಂನಂತೆ ತ್ವರಿತವಾಗಿ ಹಾಗೂ ತಾಜಾವಾಗಿ ತಯಾರಿಸಿ ಪ್ಯಾಕೇಜ್ ಮಾಡಿ ವಿತರಿಸಲು ಆರಂಭಿಸಲಾಗಿದೆ. ಬೆಂಗಳೂರು ಮೂಲದ ಉದ್ಯಮಿಗಳಾದ ಶರಣ್ ಹಿರೇಮಠ್ ಮತ್ತು ಸುರೇಶ್ ಚಂದ್ರಶೇಖರನ್ ಅವರು ಸ್ಥಾಪಿಸಿದ ಸ್ಟಾರ್ಟ್‌ಅಪ್ ಫ್ರೆಶಾಟ್ ರೊಬೊಟಿಕ್ಸ್‌ನ ಉತ್ಪನ್ನವಾಗಿದೆ ಎಂದು ವರದಿಯೊಂದು ಹೇಳಿದೆ. ಟ್ವಿಟ್ಟರ್‌ನಲ್ಲಿ ಈ ವೀಡಿಯೊ ವೈರಲ್‌ ಆಗಿದ್ದು, ಸಂಪೂರ್ಣ ಸ್ವಯಂಚಾಲಿತ ಮತ್ತು ಮಾನವ ಸಂಪರ್ಕರಹಿತ ಪ್ರಕ್ರಿಯೆಯ ಮೂಲಕ ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ ಮತ್ತು

ಮಧ್ಯರಾತ್ರಿಯೂ ನೀವು ಬಿಸಿಬಿಸಿ ಇಡ್ಲಿ ತಿನ್ಬಹುದು| ಹೊಸದಾಗಿ ಶುರುವಾಗಿದೆ 24×7 ಇಡ್ಲಿ ವೆಂಡಿಂಗ್ ಮೆಷಿನ್!! Read More »

ಸಿಜೆಐ ಪೀಠಕ್ಕೆ ವಿವಾದಿತ ಹಿಜಾಬ್ ಪ್ರಕರಣ ವರ್ಗಾವಣೆ

ಸಮಗ್ರ ನ್ಯೂಸ್: ರಾಷ್ಟ್ರಾಧ್ಯಂತ ಭಾರೀ ಸುದ್ದಿ ಮಾಡಿದ್ದ ಹಿಜಾಬ್ ವಿವಾದವನ್ನು ವಿಸ್ತ್ರತ ಸಿಜೆಐ ಪೀಠಕ್ಕೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 10 ದಿನಗಳ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠವು ಸೆಪ್ಟೆಂಬರ್ 22ರಂದು ತೀರ್ಪನ್ನು ಕಾಯ್ದಿರಿಸಿತ್ತು. ಫೆಬ್ರವರಿಯಲ್ಲಿ ಹಿಜಾಬ್​​ ನಿರ್ಬಂಧಿಸಿ ಆದೇಶ ಹೊರಡಿಸಿದ್ದ ಸರ್ಕಾರದ ನಿಷೇಧ ಎತ್ತಿ ಹಿಡಿದಿದ್ದ ಹೈಕೋರ್ಟ್, ಹಿಜಾಬ್ ಅತ್ಯಗತ್ಯ ಧಾರ್ಮಿಕ ಅಭ್ಯಾಸ ಅಲ್ಲ ಎನ್ನುವುದು ಸರಿಯಲ್ಲ, ಹೈಕೋರ್ಟ್ ತಪ್ಪಾಗಿ ತೀರ್ಪು ನೀಡಿದೆ ಎನ್ನುವುದು

ಸಿಜೆಐ ಪೀಠಕ್ಕೆ ವಿವಾದಿತ ಹಿಜಾಬ್ ಪ್ರಕರಣ ವರ್ಗಾವಣೆ Read More »

ನಾಳೆ(ಅ13) ಹಿಜಾಬ್ ವಿವಾದ ಕುರಿತ ತೀರ್ಪು ಪ್ರಕಟ

ಸಮಗ್ರ ನ್ಯೂಸ್: ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಕುರಿತ ತೀರ್ಪು ನಾಳೆ(ಅ.13) ಪ್ರಕಟವಾಗಲಿದೆ. ಬೆಳಗ್ಗೆ 10.30ರ ಸುಮಾರಿಗೆ ಸುಪ್ರೀಂ ಕೋರ್ಟ್​ನಿಂದ ತೀರ್ಪು ಹೊರಬೀಳಲಿದೆ. ಸರ್ಕಾರ ಶಾಲಾ-ಕಾಲೇಜಿನಲ್ಲಿ ಹಿಜಾಬ್ ಧರಿಸುವುದನ್ನು ಬ್ಯಾನ್ ಮಾಡಿದ್ದು, ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಲಿದೆ.

ನಾಳೆ(ಅ13) ಹಿಜಾಬ್ ವಿವಾದ ಕುರಿತ ತೀರ್ಪು ಪ್ರಕಟ Read More »

ಕೇವಲ ₹80ಕ್ಕೆ‌ ಮಾರಾಟವಾಯ್ತು ‘ನಿಸಾನ್’ ಕಾರು ಕಂಪನಿ!!

ಸಮಗ್ರ ನ್ಯೂಸ್: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ ಮೂಲದ ನಿಸಾನ್‌ ಕಾರು ಕಂಪನಿ, ರಷ್ಯಾದ ತನ್ನ ಎಲ್ಲ ವಹಿವಾಟನ್ನು ಕೇವಲ 80 ರೂ.(1 ಯೂರೋ)ಗಳಿಗೆ ಮಾರಾಟ ಮಾಡಿದೆ. ಈ ಮೂಲಕ 56,485 ಕೋಟಿ ರೂ.(687 ದಶಲಕ್ಷ ಡಾಲರ್‌) ನಷ್ಟ ಮಾಡಿಕೊಂಡಿದೆ. ರಷ್ಯಾ ಸರ್ಕಾರದ ನಿಯಂತ್ರಣದಲ್ಲಿರುವ ಎನ್‌ಎಎಂಐ ಎಂಬ ಸಂಸ್ಥೆಗೆ ಇದನ್ನು ಮಾರಿದೆ ಎಂದು ರಷ್ಯಾದ ಉದ್ಯಮ ಮತ್ತು ವ್ಯಾಪಾರ ಸಚಿವಾಲಯ ಹೇಳಿದೆ. ಆದರೆ, ಮುಂದಿನ ಆರು ವರ್ಷಗಳಲ್ಲಿ ಯಾವಾಗ ಬೇಕಾದರೂ, ನಿಸಾನ್‌ ಮೋಟಾರ್ಸ್‌

ಕೇವಲ ₹80ಕ್ಕೆ‌ ಮಾರಾಟವಾಯ್ತು ‘ನಿಸಾನ್’ ಕಾರು ಕಂಪನಿ!! Read More »

ಪಣಜಿ ಸಮುದ್ರದಲ್ಲಿ ಪತನಗೊಂಡ MiG29K ಯುದ್ದ ವಿಮಾನ|

ಸಮಗ್ರ ನ್ಯೂಸ್: MiG 29K ಯುದ್ಧ ವಿಮಾನವು ಗೋವಾ ಕರಾವಳಿಯ ಪಣಜಿ ಸಮುದ್ರದ ಮೇಲೆ ಪತನಗೊಂಡಿದೆ ಎಂದು ವರದಿಯಾಗಿದೆ. MiG 29K ವಿಮಾನವು ಅತ್ಯಾಧುನಿಕ, ವಾಯು ಪ್ರಾಬಲ್ಯದ ಫೈಟರ್ ಜೆಟ್ ಆಗಿದ್ದು, ಸುಮಾರು 2000 kmph ಗರಿಷ್ಠ ವೇಗವನ್ನು ಹೊಂದಿದೆ. ಇದು 65,000 ಅಡಿಗಿಂತಲೂ ಎತ್ತರಕ್ಕೆ ಏರುವ ಸಾಮರ್ಥ್ಯ ಹೊಂದಿದೆ. ಇಂದು ಬೆಳಗ್ಗೆ ವಾಡಿಕೆ ವಿಹಾರ ನಡೆಸುತ್ತಿದ್ದಾಗ ಯುದ್ಧ ವಿಮಾನ ಬೇಸ್‌ಗೆ ಹಿಂತಿರುಗುವಾಗ ತಾಂತ್ರಿಕ ದೋಷ ಕಂಡುಬಂದು ಪತನಗೊಂಡಿದೆ. ಅದೃಷ್ಟವಶಾತ್ ಪೈಲಟ್ ಸುರಕ್ಷಿತವಾಗಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ.

ಪಣಜಿ ಸಮುದ್ರದಲ್ಲಿ ಪತನಗೊಂಡ MiG29K ಯುದ್ದ ವಿಮಾನ| Read More »