ದೇಶ-ವಿದೇಶ

ನೇಪಾಳದಲ್ಲಿ ಪ್ರಬಲ ಭೂಕಂಪನ| ದೆಹಲಿಯಲ್ಲೂ ನಡುಗಿದ ವಸುಂಧರೆ

ಸಮಗ್ರ ನ್ಯೂಸ್: ಕಣಿವೆ ರಾಷ್ಟ್ರ ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದು, ಅಪಾರ ಹಾನಿ‌ ಸಂಭವಿಸಿರುವ ಸಾಧ್ಯತೆ ಇದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಬುಧವಾರ (ಇಂದು) ಮುಂಜಾನೆ ಭೂಕಂಪನದ ಅನುಭವವಾಗಿದೆ. ನೇಪಾಳದಲ್ಲಿ ಇಂದು ಮುಂಜಾನೆ 1.57ರ ಸುಮಾರಿಗೆ 6.3 ತೀವ್ರತೆಯ ಭೂಕಂಪವಾಗಿದೆ ಎಂದು ತಿಳಿದುಬಂದಿದೆ. ಕಳೆದ 24 ಗಂಟೆಗಳಲ್ಲಿ ನೇಪಾಳದ ದೂರದ ಪಶ್ಚಿಮ ಪ್ರದೇಶದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಒಂದರ ಹಿಂದೊಂದರಂತೆ ಭೂಮಿ ಕಂಪಿಸಿದೆ ಎಂದು ನೇಪಾಳದ

ನೇಪಾಳದಲ್ಲಿ ಪ್ರಬಲ ಭೂಕಂಪನ| ದೆಹಲಿಯಲ್ಲೂ ನಡುಗಿದ ವಸುಂಧರೆ Read More »

ಪೇಪರ್ ಓದುತ್ತಿದ್ದ ವ್ಯಕ್ತಿಗೆ ಹೃದಯಾಘಾತ

ಸಮಗ್ರ ನ್ಯೂಸ್ : ಪೇಪರ್ ಓದುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ರಾಜಸ್ಥಾನದಲ್ಲಿ ಸಂಭವಿಸಿದೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಪಚ್ಚಪದ್ರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಆಸ್ಪತ್ರೆಗೆ ಆಗಮಿಸಿದ್ದ ವ್ಯಕ್ತಿ ಹೊರಗೆ ಕುಳಿತು ಪೇಪರ್ ಓದುತ್ತಿದ್ದರು. ಇದ್ದಕ್ಕಿದ್ದಂತೆ ವ್ಯಕ್ತಿ ಕುಸಿದು ಬಿದ್ದಿದ್ದಾರೆ. ಕೂಡಲೇ ಜನರು ಬಂದು ಕುಸಿದು ಬಿದ್ದ ವ್ಯಕ್ತಿಯ ಉಪಚರಿಸಿದ್ದಾರೆ. ಆದರೆ ಅದಾಗಲೇ ವ್ಯಕ್ತ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಪೇಪರ್ ಓದುತ್ತಿದ್ದ ವ್ಯಕ್ತಿಗೆ ಹೃದಯಾಘಾತ Read More »

ಮತ್ತೊಂದು ಮಹಾಮಾರಿಗೆ ಮುನ್ನುಡಿ? ರಾವಲ್ಪಿಂಡಿ ಬಳಿ ಹೊಸತೊಂದು ‌ವೈರಸ್ ಸೃಷ್ಟಿಸುತ್ತಿದೆ ಚೀನಾ!!

ಸಮಗ್ರ ನ್ಯೂಸ್: ಕೋವಿಡ್ ವೈರಸ್​ಗಿಂತಲೂ ಹೆಚ್ಚು ಮಾರಕವಾದ ವೈರಸ್​ಅನ್ನು ಪಾಕಿಸ್ತಾನದಲ್ಲಿ ಚೀನಾ ಸೃಷ್ಟಿಸುತ್ತಿದೆ ಎಂಬ ಕಳವಳಕಾರಿ ಅಂಶ ಬಹಿರಂಗವಾಗಿದೆ. ಕೋವಿಡ್ ಮತ್ತು ಅದರ ಪ್ರಭೇದಗಳು ಇನ್ನೂ ಜಗತ್ತನ್ನು ಕಾಡುತ್ತಿರುವುದರ ನಡುವೆಯೇ, ಪಾಕಿಸ್ತಾನ ಮತ್ತು ಚೀನಾ ರಾವಲ್ಪಿಂಡಿ ಸಮೀಪದ ರಹಸ್ಯ ಪ್ರಯೋಗಾಲಯವೊಂದರಲ್ಲಿ ಜೈವಿಕಾಸ್ತ್ರದ ಸಂಶೋಧನೆಯನ್ನು ಮುಂದುವರಿಸಿದೆ ಎನ್ನಲಾಗಿದೆ. ಕುಖ್ಯಾತ ವುಹಾನ್ ವೈರಾಣು ಸಂಸ್ಥೆ ಮತ್ತು ಪಾಕ್ ಸೇನೆ ನಡೆಸುವ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಎಸ್​ಟಿಒ) ಮಾರಕ ವೈರಸ್ ಸಂಶೋಧಿಸಲು ಅತ್ಯಂತ ಸುಧಾರಿತ ವೈಜ್ಞಾನಿಕ ಮೂಲಸೌಕರ್ಯವನ್ನು ಪಾಕ್​ನಲ್ಲಿ

ಮತ್ತೊಂದು ಮಹಾಮಾರಿಗೆ ಮುನ್ನುಡಿ? ರಾವಲ್ಪಿಂಡಿ ಬಳಿ ಹೊಸತೊಂದು ‌ವೈರಸ್ ಸೃಷ್ಟಿಸುತ್ತಿದೆ ಚೀನಾ!! Read More »

ನಾಳೆ(ನ.8) ಈ ವರ್ಷದ ಕೊನೆಯ ಚಂದ್ರಗ್ರಹಣ| ಎಲ್ಲೆಲ್ಲಿ ಕಂಡುಬರುತ್ತೆ ಗೊತ್ತಾ‌ ನೆರಳು ಬೆಳಕಿನಾಟ!?

ಸಮಗ್ರ ನ್ಯೂಸ್: ಈ ವರ್ಷದ ಕೊನೆಯ ʻಸಂಪೂರ್ಣ ಚಂದ್ರಗ್ರಹಣʼವು ನಾಳೆ(ನವೆಂಬರ್ 8) ರಂದು ಸಂಭವಿಸಲಿದೆ. ನಾಸಾ ಪ್ರಕಾರ, ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮೂರು ವರ್ಷಗಳವರೆಗೆ ಸಂಭವಿಸುವುದಿಲ್ಲ. ಈ ಬಗ್ಗೆ ನಾಸಾ ಟ್ವೀಟ್ ಮಾಡಿದ್ದು, ‘ನವೆಂಬರ್ 8, 2022 ರಂದು ಚಂದ್ರನು ಭೂಮಿಯ ನೆರಳಿನಲ್ಲಿ ಹಾದುಹೋಗುತ್ತಾನೆ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಇದು ಮತ್ತೆ 3 ವರ್ಷಗಳ ನಂತರ ಸಂಭವಿಸುತ್ತದೆ. ಆದ್ದರಿಂದ ಇದು ನಿಮ್ಮ ಪ್ರದೇಶದಲ್ಲಿ ಗೋಚರಿಸುತ್ತದೆಯೇ ಎಂದು ಪರೀಕ್ಷಿಸಲು ಮರೆಯದಿರಿ’ ಎಂದು ಹೇಳಿದೆ. ನಾಸಾ ಪ್ರಕಾರ ಮುಂದಿನ

ನಾಳೆ(ನ.8) ಈ ವರ್ಷದ ಕೊನೆಯ ಚಂದ್ರಗ್ರಹಣ| ಎಲ್ಲೆಲ್ಲಿ ಕಂಡುಬರುತ್ತೆ ಗೊತ್ತಾ‌ ನೆರಳು ಬೆಳಕಿನಾಟ!? Read More »

ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ| ಸರ್ಕಾರದ ನಡೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್

ಸಮಗ್ರ ನ್ಯೂಸ್: ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ರಷ್ಟು ಮೀಸಲಾತಿ ವಿಚಾರ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಮಾನ ಹೊರ ಬಿದ್ದಿದ್ದು, ಐವರು ನ್ಯಾಯಮೂರ್ತಿಗಳ ಪೈಕಿ ನಾಲ್ವರು ನ್ಯಾಯಮೂರ್ತಿಗಳು ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿದ್ದಾರೆ. ನ್ಯಾಯಮೂರ್ತಿ ರವೀಂದ್ರ ಭಟ್‌ ಅವರು ಮಾತ್ರ ಇದು ಅಸಾಂವಿಧಾನಿಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದರಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ ಆಗುವುದಿಲ್ಲ ಎಂದು ಅಭಿಪ್ರಾಯಪಡಲಾಗಿದ್ದು, ಮೀಸಲಾತಿಗಾಗಿ ಸಂವಿಧಾನದ ತಿದ್ದುಪಡಿ ಸರಿಯಾಗಿದೆ ಎಂದು ಮೀಸಲಾತಿ ಪರ ತೀರ್ಪು ನೀಡಿರುವ

ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ| ಸರ್ಕಾರದ ನಡೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ Read More »

ಕೀನ್ಯಾದಲ್ಲಿ ಭೀಕರ ಬರಗಾಲ|ನೀರು, ಆಹಾರ ಸಿಗದೆ ಹಸಿವಿನಿಂದ ಸಾಯುತ್ತಿರುವ ಪ್ರಾಣಿಗಳು

ನೈರೋಬಿ: ಕೀನ್ಯಾದಲ್ಲಿ ಭೀಕರ ಬರಗಾಲ ಎದುರಾಗಿದೆ. ಇದರ ಪರಿಣಾಮ ನೀರು, ಆಹಾರ ಸಿಗದೆ ಹಸಿವಿನಿಂದ ಜಿರಾಫೆಗಳು, ಆನೆಗಳು, ಝೀಬ್ರಾಗಳು ಒಂದರ ಮೇಲೆ ಒಂದರಂತೆ ಸಾಯುತ್ತಿದೆ. ಶುಕ್ರವಾರ ಬಿಡುಗಡೆಯಾದ ವರದಿಯ ಪ್ರಕಾರ, ಆನೆಗಳು ಮತ್ತು ಅಳಿವಿನಂಚಿನಲ್ಲಿರುವ ಗ್ರೆವಿಯ ಝೀಬ್ರಾಗಳು ಸೇರಿದಂತೆ ನೂರಾರು ಪ್ರಾಣಿಗಳು ಪೂರ್ವ ಆಫ್ರಿಕಾದಲ್ಲಿನ ಕೀನ್ಯಾದ ವನ್ಯಜೀವಿ ಸಂರಕ್ಷಣೆಯ ವಲಯದಲ್ಲಿ ಸಾವನ್ನಪ್ಪಿವೆ. ಕೀನ್ಯಾ ವನ್ಯಜೀವಿ ಸೇವೆ ಮತ್ತು ಇತರ ಸಂಸ್ಥೆಗಳು ನೀಡಿರುವ ವರದಿ ಪ್ರಕಾರ ಕಳೆದ ಒಂಬತ್ತು ತಿಂಗಳಲ್ಲಿ 205 ಆನೆಗಳು, 512 ಕಾಡಾನೆಗಳು, 381 ಸಾಮಾನ್ಯ

ಕೀನ್ಯಾದಲ್ಲಿ ಭೀಕರ ಬರಗಾಲ|ನೀರು, ಆಹಾರ ಸಿಗದೆ ಹಸಿವಿನಿಂದ ಸಾಯುತ್ತಿರುವ ಪ್ರಾಣಿಗಳು Read More »

‘ಜನಗಣಮನ’ ಮತ್ತು ‘ವಂದೇ ಮಾತರಂ’ ಗೆ ಸಮಾನ ಸ್ಥಾನ ನೀಡಬೇಕು- ಕೇಂದ್ರ‌ ಸರ್ಕಾರ

ಸಮಗ್ರ ನ್ಯೂಸ್: ‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಎರಡೂ ಸಮಾನ ಸ್ಥಾನದಲ್ಲಿದ್ದು, ದೇಶದ ಪ್ರತಿಯೊಬ್ಬ ಪ್ರಜೆ ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ಕೇಂದ್ರ ಸರ್ಕಾರ ಶನಿವಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯ ನಡುವಿನ ಸಮಾನತೆಯ ಪರಿಶೀಲನೆಗಾಗಿ ಮತ್ತು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ರಾಷ್ಟ್ರಗೀತೆಯ ಸಮನಾದ ಗೌರವ ಮತ್ತು ಸ್ಥಾನಮಾನವನ್ನು ನೀಡುವ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಮಯದಲ್ಲಿ (ಪಿಐಎಲ್) ಕೇಂದ್ರವು ಹೈಕೋರ್ಟ್​ಗೆ

‘ಜನಗಣಮನ’ ಮತ್ತು ‘ವಂದೇ ಮಾತರಂ’ ಗೆ ಸಮಾನ ಸ್ಥಾನ ನೀಡಬೇಕು- ಕೇಂದ್ರ‌ ಸರ್ಕಾರ Read More »

ಭಾರತೀಯ ವಾಯುಪಡೆಯಿಂದ ಅಗ್ನಿವೀರ್ ವಾಯುಗೆ ಅರ್ಜಿ ಆಹ್ವಾನ

ಸಮಗ್ರ ಉದ್ಯೋಗ: ಅಭ್ಯರ್ಥಿಗಳು ನ.7 ರಿಂದ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆ ದಿನಾಂಕ ನ.23. IAF ಅಗ್ನಿವೀರ್ ನೇಮಕಾತಿ 2023: ಭಾರತೀಯ ವಾಯುಪಡೆಯು (IAF) ಅಗ್ನಿವೀರ್ ವಾಯುಗೆ IAF ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಅಭ್ಯರ್ಥಿಗಳು ನ. 7 ರಿಂದ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆ ದಿನಾಂಕ 23 ನವೆಂಬರ್ 2022 ಇದೆ. ಅಭ್ಯರ್ಥಿಗಳು agnipathvayu.cdac.in ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ: ಅಗ್ನಿವೀರ್ ವಾಯುಅರ್ಜಿ ಸಲ್ಲಿಸಲು ಪ್ರಾರಂಭ ದಿ: 7 ನವೆಂಬರ್ 2022ಮುಕ್ತಾಯ: 23

ಭಾರತೀಯ ವಾಯುಪಡೆಯಿಂದ ಅಗ್ನಿವೀರ್ ವಾಯುಗೆ ಅರ್ಜಿ ಆಹ್ವಾನ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಎನ್ಐಎನಿಂದ ಶಾಫಿ ಬೆಳ್ಳಾರೆ ಸೇರಿ ಮೂವರ ಬಂಧನ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎನ್ ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದು ಮೂವರನ್ನು ಬಂಧಿಸಿದ್ದಾರೆ. ಎನ್ ಐಎ ಅಧಿಕಾರಿಗಳು ರಾಜ್ಯದ ಹಲವಡೆ ಮತ್ತೆ ದಾಳಿ ನಡೆಸಿದ್ದು, ದಕ್ಷಿಣ ಕನ್ನಡ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವಡೆ ನಿಷೇಧಿತ ಪಿಎಫ್ ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಎನ್ ಐ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಎನ್ಐಎನಿಂದ ಶಾಫಿ ಬೆಳ್ಳಾರೆ ಸೇರಿ ಮೂವರ ಬಂಧನ Read More »

ಕಚ್ಚಾತೈಲ ದರದಲ್ಲಿ ಇಳಿಕೆ ಹಿನ್ನಲೆ| ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ₹2 ಇಳಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಜಾಗತಿಕ ಕಚ್ಚಾ ತೈಲ ದರ ಇಳಿಕೆ ಹಿನ್ನೆಲೆಯಲ್ಲಿ ಸದ್ಯದಲ್ಲೇ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಲೀಟರ್‌ಗೆ ತಲಾ 2 ರೂ.ಇಳಿಕೆ ಮಾಡುವ ಸಾಧ್ಯತೆಯಿದೆ. ಮುಂದಿನ 5 ದಿನಗಳ ಕಾಲ ಪ್ರತಿದಿನ ಲೀಟರ್‌ಗೆ ತಲಾ 40 ಪೈಸೆಯಂತೆ ತೈಲ ದರದಲ್ಲಿ ಇಳಿಕೆಯಾಗಬಹುದು. ಆ ಮೂಲಕ ಒಟ್ಟಾರೆ ಲೀ.ಗೆ 2 ರೂ.ಗಳಷ್ಟು ಕಡಿತವಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಿಂದಿ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಜತೆಗೆ, ತೈಲದ ದರ ಮತ್ತು ಡಾಲರ್‌ ಎದುರು ರೂಪಾಯಿ

ಕಚ್ಚಾತೈಲ ದರದಲ್ಲಿ ಇಳಿಕೆ ಹಿನ್ನಲೆ| ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ₹2 ಇಳಿಕೆ ಸಾಧ್ಯತೆ Read More »