ದೇಶ-ವಿದೇಶ

ನೋಡನೋಡುತ್ತಿದ್ದಂತೆ ಕುಸಿದ ರಸ್ತೆ| ತೆಲಂಗಾಣದಲ್ಲೊಂದು ಆಘಾತಕಾರಿ ಘಟನೆ

ಸಮಗ್ರ ನ್ಯೂಸ್: ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಜನನಿಬಿಡ ಪ್ರದೇಶದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಘಟನೆ ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಶುಕ್ರವಾರ ಇದ್ದಕ್ಕಿದ್ದಂತೆ ಜನನಿಬಿಡ ರಸ್ತೆಯೊಂದು ಪಾತಾಳಕ್ಕೆ ಕುಸಿದಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು ಮತ್ತು ಬಂಡಿಗಳು ಅದರೊಳಗೆ ಹೂತುಹೋಗಿವೆ. ಘಟನೆ ಮುನ್ನೆಲೆಗೆ ಬಂದ ಕೂಡಲೇ ಅಲ್ಲಿ ಭಾರಿ ಗೊಂದಲದ ವಾತಾವರಣ ಉಂಟಾಗಿ ಜನರು ಓಡತೊಡಗಿದ್ದಾರೆ. ಹೈದರಾಬಾದಿನ ಗೋಶಾಮಹಲ್‌ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದು, ಅಲ್ಲಿನ ಚಂದನವಾಡಿ ಪ್ರದೇಶದಲ್ಲಿ ಚರಂಡಿಯ ಪಕ್ಕದ ರಸ್ತೆಯೊಂದು ಏಕಾಏಕಿ ಮುರಿದು ಪಾತಾಳಕ್ಕೆ ಕುಸಿದಿದೆ. ರಸ್ತೆ […]

ನೋಡನೋಡುತ್ತಿದ್ದಂತೆ ಕುಸಿದ ರಸ್ತೆ| ತೆಲಂಗಾಣದಲ್ಲೊಂದು ಆಘಾತಕಾರಿ ಘಟನೆ Read More »

ಮುಗಿದ ಐಪಿಎಲ್ ಹರಾಜು ಪ್ರಕ್ರಿಯೆ| ಆರ್ ಸಿಬಿ ಬಳಿಯಲ್ಲಿ ಇರುವ ಆಟಗಾರರು ಯಾರೆಲ್ಲಾ ಗೊತ್ತಾ?

ಸಮಗ್ರ ನ್ಯೂಸ್: ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಹರಾಜು ಮುಕ್ತಾಯಗೊಂಡಿದೆ. 8.75 ಕೋಟಿ ರೂಪಾಯಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಲ್ಲಿ ಬೇಡಿಕೆ ಆಟಗಾರರ ಖರೀದಿಗೆ ಮನಸ್ಸು ಮಾಡಲಿಲ್ಲ. ಇದಕ್ಕೆ ಹಣದ ಅಭಾವ ಪ್ರಮುಖ ಕಾರಣವಾಗಿತ್ತು.ಹೀಗಾಗಿ ಅಂತಿಮ ಹಂತದಲ್ಲಿ ಮೂಲ ಬೆಲೆಯ ಅಸುಪಾಸಿನಲ್ಲಿ ಆಟಗಾರರ ಖರೀದಿಸಿದ ಕೋಟಾ ಭರ್ತಿ ಮಾಡಿಕೊಂಡಿದೆ. ಸಮರ್ಥ ಬ್ಯಾಟ್ಸ್‌ಮನ್ ಹುಡುಕಾಟದಲ್ಲಿದ್ದ ಆರ್‌ಸಿಬಿ 3.2 ಕೋಟಿ ರೂಪಾಯಿ ನೀಡಿ ವಿಲ್ಸ್ ಜಾಕ್ಸ್‌ನ ತಂಡಕ್ಕೆ ಸೇರಿಸಿಕೊಂಡಿದೆ. ಒಟ್ಟು 7 ಆಟಗಾರರನ್ನು ಆರ್‌ಸಿಬಿ ಖರೀದಿ

ಮುಗಿದ ಐಪಿಎಲ್ ಹರಾಜು ಪ್ರಕ್ರಿಯೆ| ಆರ್ ಸಿಬಿ ಬಳಿಯಲ್ಲಿ ಇರುವ ಆಟಗಾರರು ಯಾರೆಲ್ಲಾ ಗೊತ್ತಾ? Read More »

ಚೀನಾ ಗಡಿಯಲ್ಲಿ ಭಾರೀ ದುರಂತ| 16 ವೀರ ಯೋಧರು ಹುತಾತ್ಮ

ಸಮಗ್ರ ನ್ಯೂಸ್: ಭಾರತ-ಚೀನಾ ಗಡಿಯ ಸಮೀಪ ಉತ್ತರ ಸಿಕ್ಕಿಂನಲ್ಲಿ ಭಾರಿ ದುರಂತ ನಡೆದಿದ್ದು, ಸೇನಾ ವಾಹನವೊಂದು ಕಮರಿಗೆ ಬಿದ್ದು 16 ಜನ ಯೋಧರು ಸಾವನ್ನಪ್ಪಿದ್ದಾರೆ. ಅಲ್ಲದೇ, ಇತರ ನಾಲ್ವರು ಗಾಯಗೊಂಡಿದ್ದಾರೆ. ಸೇನಾ ವಾಹನವು 20 ಜನ ಯೋಧರೊಂದಿಗೆ ಗಡಿ ಭಾಗದ ಪೋಸ್ಟ್‌ಗಳತ್ತ ಸಾಗುತ್ತಿತ್ತು. ಈ ವೇಳೆ ಸ್ಕಿಡ್​ ಆಗಿ ನೂರಾರು ಅಡಿ ಆಳದ ಕಮರಿಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಉತ್ತರ ಬಂಗಾಳದ ಸೇನಾಸ್ಪತ್ರೆಗೆ ವಿಮಾನದ ಮೂಲಕ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತದ ಸ್ಥಳದಿಂದ ಎಲ್ಲ

ಚೀನಾ ಗಡಿಯಲ್ಲಿ ಭಾರೀ ದುರಂತ| 16 ವೀರ ಯೋಧರು ಹುತಾತ್ಮ Read More »

ಕೊರೊನಾ ವೈರಸ್ ಕಂಟ್ರೋಲ್ ಗೆ ನಾಸಲ್ ವ್ಯಾಕ್ಸಿನ್| ಭಾರತ ಸರ್ಕಾರದಿಂದ ಅನುಮತಿ

ಸಮಗ್ರ ನ್ಯೂಸ್: ಕೊರೊನಾ ಕಂಟ್ರೋಲ್ ಮಾಡಲು ಮೂಗಿನ ಮೂಲಕ ಹಾಕುವ ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಶುಕ್ರವಾರ (ಡಿ. 22) ಕೋವಿಡ್ -19 ನ ನಾಸಲ್ ಲಸಿಕೆ ಬಳಕೆಯನ್ನು ಅನುಮೋದಿಸಿದೆ. ಈ ವ್ಯಾಕ್ಸಿನ್ ಭಿನ್ನರೂಪದ ಬೂಸ್ಟರ್ ಆಗಿ ಬಳಸಲ್ಪಡುತ್ತದೆ. ವರದಿಗಳ ಪ್ರಕಾರ, ಕೊರೊನಾವೈರಸ್‌ಗಾಗಿ ಮೂಗಿನ ಲಸಿಕೆಯನ್ನು ಇಂದಿನಿಂದ Covd-19 ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಲಾಗುವುದು ಮತ್ತು ಅದು ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುತ್ತದೆ. ಭಾರತ್ ಬಯೋಟೆಕ್ ಮೂಗಿನ ಲಸಿಕೆಯನ್ನು ಅನುಮೋದಿಸಲಾಗಿದೆ ಮತ್ತು ಕೋವಿನ್ ಅಪ್ಲಿಕೇಶನ್‌ನಲ್ಲಿ

ಕೊರೊನಾ ವೈರಸ್ ಕಂಟ್ರೋಲ್ ಗೆ ನಾಸಲ್ ವ್ಯಾಕ್ಸಿನ್| ಭಾರತ ಸರ್ಕಾರದಿಂದ ಅನುಮತಿ Read More »

ಕೋವಿಡ್ ವಿರುದ್ಧ ಹೋರಾಡಲು ಸಜ್ಜಾಗಿರಿ – ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಕೋವಿಡ್‌ ವಿರುದ್ಧ ಹೋರಾಡಲು ಎಲ್ಲಾ ಹಂತಗಳಲ್ಲೂ ಆಡಳಿತ ಯಂತ್ರ ಸಜ್ಜಾಗಿರಿಸುವ ಜೊತೆಗೆ ಕೋವಿಡ್‌ ಪರೀಕ್ಷೆ ಹಾಗೂ ವೈರಾಣು ಸಂರಚನಾ ವಿಶ್ಲೇಷಣೆಯನ್ನು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚೀನಾ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಆಮ್ಲಜನಕ ಸಿಲಿಂಡರ್‌, ವೆಂಟಿಲೇಟರ್‌, ಪಿಎಸ್‌ಎ ಘಟಕಗಳು ಹಾಗೂ ಮಾನವ ಸಂಪನ್ಮೂಲ ಸೇರಿದಂತೆ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿಯೇ ಆಸ್ಪತ್ರೆಗಳಲ್ಲಿ

ಕೋವಿಡ್ ವಿರುದ್ಧ ಹೋರಾಡಲು ಸಜ್ಜಾಗಿರಿ – ಪ್ರಧಾನಿ ಮೋದಿ Read More »

ಮತ್ತೆ ವಕ್ಕರಿಸಿದ ಮಹಾಮಾರಿ ಕೊರೊನಾ| ಭಾರತ‌ ಮತ್ತೆ ಲಾಕ್ ಆಗುತ್ತಾ?

ಸಮಗ್ರ ನ್ಯೂಸ್: ಚೀನಾದಲ್ಲಿ ವೇಗವಾಗಿ ಹರಡುವ ಮೂಲಕ ಮತ್ತೆ ಮರಣ ಮೃದಂಗ ಬಾರಿಸುತ್ತಿರುವ ಒಮಿಕ್ರಾನ್​ ಬಿಎಫ್​-7 ರೂಪಾಂತರಿ, ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಇದು ಅಪಾಯಕಾರಿ ತಳಿ ಎಂದೂ ಹೇಳಲಾಗಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಮಾಸ್ಕ್​ ಕಡ್ಡಾಯ ಸೇರಿದಂತೆ ಕೋವಿಡ್​ ಮಾರ್ಗಸೂಚಿಯನ್ನು ಹೊರಡಿಸಿದೆ. ಮಾಸ್ಕ್​ ಮತ್ತು ಸ್ಯಾನಿಟೈಸರ್​ ಸೇರಿದಂತೆ ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಡಂವೀಯ ಹೇಳಿದ್ದಾರೆ. ಅಲ್ಲದೇ ಈವರೆಗೆ ಯಾರು ಲಸಿಕೆ ತೆಗೆದುಕೊಂಡಿಲ್ಲವೋ ಅವರು ತಕ್ಷಣ ಲಸಿಕೆಯನ್ನು ಪಡೆದುಕೊಳ್ಳಲು

ಮತ್ತೆ ವಕ್ಕರಿಸಿದ ಮಹಾಮಾರಿ ಕೊರೊನಾ| ಭಾರತ‌ ಮತ್ತೆ ಲಾಕ್ ಆಗುತ್ತಾ? Read More »

ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣ| ಮಾಜಿ ಸಂಸದೆ ಜಯಪ್ರದಾಗೆ ಬಂಧನ ಭೀತಿ

ಸಮಗ್ರ ನ್ಯೂಸ್: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಎರಡು ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನಟಿ ಹಾಗೂ ರಾಂಪುರದ ಮಾಜಿ ಸಂಸದೆ ಜಯಪ್ರದಾ ವಿರುದ್ಧ ರಾಂಪುರದ ವಿಶೇಷ ಸಂಸದ-ಶಾಸಕ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ರಾಂಪುರದ ಸರ್ಕಾರಿ ವಕೀಲ ಅಮರನಾಥ್ ತಿವಾರಿ ಅವರು ವಿಚಾರಣೆ ವೇಳೆ ಮಾಜಿ ಸಂಸದೆ ಮತ್ತು ನಟಿ ಜಯಪ್ರದಾ ಅವರು ನಿರಂತರವಾಗಿ ಗೈರು ಹಾಜರಾಗಿದ್ದರಿಂದ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ. ಮಂಗಳವಾರ ನಡೆದ ವಿಚಾರಣೆ

ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣ| ಮಾಜಿ ಸಂಸದೆ ಜಯಪ್ರದಾಗೆ ಬಂಧನ ಭೀತಿ Read More »

ಆಸ್ಕರ್ ಪ್ರಶಸ್ತಿಯ ಹತ್ತಿರ ತಲುಪಿದ ಭಾರತ| ಅಂತಿಮ ಸುತ್ತಿಗೆ ಆಯ್ಕೆಯಾದ ನಾಲ್ಕು ಸಿನಿಮಾ

ಸಮಗ್ರ ನ್ಯೂಸ್: ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಭಾರತೀಯ ಚಿತ್ರಗಳಲ್ಲಿ ನಾಲ್ಕು ಚಿತ್ರಗಳನ್ನು ಪ್ರಶಸ್ತಿ ಸುತ್ತಿಗೆ ಅಂತಿಮಗೊಳಿಸಲಾಗಿದೆ. ಗುಜರಾತಿ ಚಿತ್ರ ‘ಛೆಲ್ಲೋ ಶೋ’, ಆರ್‌ಆರ್‌ಆರ್‌ ಚಿತ್ರದ ‘ನಾಟು ನಾಟು’ ಗೀತೆ ಸೇರಿ ನಾಲ್ಕು ಭಾರತೀಯ ಚಿತ್ರಗಳು ಪ್ರಶಸ್ತಿ ಸುತ್ತಿನಲ್ಲಿ ಸ್ಥಾನ ಪಡೆದಿವೆ. ಅತ್ಯುತ್ತಮ ಅಂತರರಾಷ್ಟ್ರೀಯ ಚಿತ್ರ ವಿಭಾಗದಲ್ಲಿ ‘ಛೆಲ್ಲೋ ಶೋ’ ಆಯ್ಕೆ ಆಗಿದೆ. ‘ನಾಟು ನಾಟು’ ಗೀತೆಯು ಅತ್ಯುತ್ತಮ ಗೀತೆ (ಮೂಲ ಗೀತೆ) ವಿಭಾಗದಲ್ಲಿ ಸ್ಥಾನ ಪಡೆದಿದೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ಆಲ್‌ ದಟ್‌ ಬ್ರೀಥ್ಸ್‌’

ಆಸ್ಕರ್ ಪ್ರಶಸ್ತಿಯ ಹತ್ತಿರ ತಲುಪಿದ ಭಾರತ| ಅಂತಿಮ ಸುತ್ತಿಗೆ ಆಯ್ಕೆಯಾದ ನಾಲ್ಕು ಸಿನಿಮಾ Read More »

ಕೋವಿಡ್ ಹೊಸ ತಳಿ ಪತ್ತೆ ಹಿನ್ನೆಲೆ| ಆತಂಕ ಬೇಡ, ಕಾದು ನೋಡೋಣ ಎಂದ ತಜ್ಞರು|

ಸಮಗ್ರ ನ್ಯೂಸ್: ಭಾರತದಲ್ಲಿ ಕಾಣಿಸಿಕೊಂಡಿರುವ ಬಿಎಫ್. 7 ಮಾದರಿ ಸೋಂಕಿಗೂ ಚೀನಾದ ಕೋವಿಡ್ ಪರಿಸ್ಥಿತಿಗೂ ಯಾವುದೇ ಸಂಬಂಧವಿಲ್ಲ. ಅಲ್ಲಿನ ಪರಿಸ್ಥಿತಿಗೂ ಇಲ್ಲಿನ ಪರಿಸ್ಥಿತಿಗೂ ಭಿನ್ನವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚೀನಾ, ಜಪಾನ್, ಕೊರಿಯಾ, ಅಮೆರಿಕ, ಬ್ರೆಜಿಲ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲೂ ಕೊರೊನಾ ಆತಂಕ ಹೆಚ್ಚಾಗಿದೆ. ಓಮಿಕ್ರಾನ್ ಹೊಸ ರೂಪಾಂತರಿ ಮತ್ತೆ ಅಬ್ಬರಿಸಲು ಶುರುಮಾಡಿದೆ ಎಂಬ ಆತಂಕ ಹೆಚ್ಚಾಗಿದ್ದು ಎರಡು ವಾರಗಳ ಕಾದು ನೋಡುವ ತಂತ್ರಕ್ಕೆ ತಜ್ಞರು ಮುಂದಾಗಿದ್ದಾರೆ. ದೇಶದಲ್ಲಿ ಎರಡು

ಕೋವಿಡ್ ಹೊಸ ತಳಿ ಪತ್ತೆ ಹಿನ್ನೆಲೆ| ಆತಂಕ ಬೇಡ, ಕಾದು ನೋಡೋಣ ಎಂದ ತಜ್ಞರು| Read More »

ಕೋವಿಡ್ ಹೊಸ ರೂಪಾಂತರ| ರೋಗ ಲಕ್ಷಣ ಮತ್ತು ಆರೋಗ್ಯ ಕಾಳಜಿ ಹೇಗಿರಬೇಕು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ…

ಸಮಗ್ರ ನ್ಯೂಸ್: ಚೀನಾದಲ್ಲಿ ಮತ್ತೆ ಕೋವಿಡ್ ಕಾರಣವಾದ ಓಮಿಕ್ರಾನ್ ರೂಪಾಂತರಗಳಾದ BA.5.2 ಮತ್ತು BF.7 ಪ್ರರಕಣಗಳು ಹೇರಳವಾಗಿ ಕಾಡುತ್ತಿವೆ. ಬೀಜಿಂಗ್ BF.7 ರ ಪ್ರಭಾವದಿಂದ ತತ್ತರಿಸುತ್ತಿದೆ. ಇದು ವೇಗವಾಗಿ ಹರಡುವ ಕೋವಿಡ್ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಓಮಿಕ್ರಾನ್ ರೂಪಾಂತರ BF.7 ಎಂದರೇನು?BF.7 ಎಂಬುದು ಓಮಿಕ್ರಾನ್‌ ಉಪ ರೂಪಾಂತರವಾಗಿದ್ದು, ಅದು ಜಗತ್ತಿನ ಕೆಲವು ಭಾಗಗಳನ್ನು ಹೊಡೆದಿದೆ. ಚೀನಾದ ನಗರಗಳು ಕೋವಿಡ್ ರೂಪಾಂತರದಿಂದ ತೀವ್ರವಾಗಿ ಹಾನಿಗೊಳಗಾಗಿವೆ. ಇದು ಭಾರತದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿವೆ.

ಕೋವಿಡ್ ಹೊಸ ರೂಪಾಂತರ| ರೋಗ ಲಕ್ಷಣ ಮತ್ತು ಆರೋಗ್ಯ ಕಾಳಜಿ ಹೇಗಿರಬೇಕು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ… Read More »