ದೇಶ-ವಿದೇಶ

ಇನ್ಮುಂದೆ ನಮ್ಮ ಮೆಟ್ರೋದಲ್ಲೂ ಚಿತ್ರೀಕರಣ

ಸಮಗ್ರ ನ್ಯೂಸ್: ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ನಮ್ಮ ಮೆಟ್ರೋದಲ್ಲಿ ಬಿಎಂಆರ್‌ಸಿಎಲ್ ಗ್ರೀನ್ ಸಿಗ್ನಲ್ ನೀಡಿದ್ದು, ಬಣ್ಣದ ಲೋಕದ ಮಂದಿ ನಮ್ಮ ಮೆಟ್ರೋಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೆಹಲಿ, ಚೆನ್ನೈ ಮೆಟ್ರೋ ಬಳಿಕ ಇದೀಗ ಬೆಂಗಳೂರು ಮೆಟ್ರೋ ರೈಲಿನಲ್ಲಿಯೂ ಬಿಎಂಆರ್‌ಸಿಎಲ್ ಕೆಲವು ಷರತ್ತುಗಳೊಂದಿಗೆ ಶೂಟಿಂಗ್ ಗೆ ಅವಕಾಶ ನೀಡಿದೆ. ಈ ವಿಚಾರವನ್ನು ಚಿತ್ರರಂಗ ಸ್ವಾಗತಿಸುತ್ತದೆ ಮತ್ತು ಕನ್ನಡ ಚಿತ್ರರಂಗ ಬೆಳೆಯುತ್ತದೆ ಎಂದು ಕರ್ನಾಟಕ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮಿಳಾ ಜೋಶಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ನಮ್ಮ ಮೆಟ್ರೋದಲ್ಲೂ ಚಿತ್ರೀಕರಣ Read More »

ಅಯೋಧ್ಯೆಯ ರಾಮನ ಅಕ್ಷತೆ/ ನವೆಂಬರ್ 25ಕ್ಕೆ ಸಿದ್ಧಗಂಗಾ ಕ್ಷೇತ್ರಕ್ಕೆ

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ದೇವರಿಗೆ ಅರ್ಪಿಸಲಾದ ಪವಿತ್ರವಾದ ಅಕ್ಷತೆ ತುಮಕೂರು ಸಿದ್ಧಗಂಗಾ ಕ್ಷೇತ್ರಕ್ಕೆ ನವೆಂಬರ್ 25ರಂದು ಆಗಮಿಸಲಿದೆ ಎಂದು ವಿಶ್ವ ಹಿಂದೂಸ್ತಾನ್ ಜಿಲ್ಲಾಧ್ಯಕ್ಷ ರಾದ ಜಿ.ಕೆ.ಶ್ರೀನಿವಾಸ್ ತಿಳಿಸಿದ್ದಾರೆ. ಶ್ರೀರಾಮನಿಗೆ ಪವಿತ್ರವಾದ ಅಕ್ಷತೆಯನ್ನು ನವೆಂಬರ್5 ರಂದು ಅರ್ಪಿಸಲಾಗಿದ್ದು, ಈ ಅಕ್ಷತೆಯು ನವೆಂಬರ್ 25ರ ಸಂಜೆ 4ಗಂಟೆಗೆ ತುಮಕೂರಿನ ಸಿದ್ಧಗಂಗ ಕ್ಷೇತ್ರಕ್ಕೆ ಬರಲಿದೆ. ತುಮಕೂರು ಜಿಲ್ಲೆಯ ಪರವಾಗಿ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಸ್ವೀಕರಿಸಿ, ನಂತರ ಅಕ್ಷತೆಯ ಭಂಡಾರವನ್ನು ರಜತರಥದಲ್ಲಿಟ್ಟು ಪೂಜಿಸುವರು. ಅಲ್ಲಿಂದ ರೇವು ಬಿ.ಹೆಚ್.ರಸ್ತೆಯ

ಅಯೋಧ್ಯೆಯ ರಾಮನ ಅಕ್ಷತೆ/ ನವೆಂಬರ್ 25ಕ್ಕೆ ಸಿದ್ಧಗಂಗಾ ಕ್ಷೇತ್ರಕ್ಕೆ Read More »

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್/ ರಾಷ್ಟ್ರೀಯ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಆಯ್ಕೆ

ಸಮಗ್ರ ನ್ಯೂಸ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜ್‍ಶರಣ್ ಶಾಹಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಯಾಜ್ಞವ ಶುಕ್ಲಾ ಅವರು ಪುನರಾಯ್ಕೆಯಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಚುನಾವಣಾ ಅಧಿಕಾರಿ ಸಿ.ಎನ್.ಪಟೇಲ್, ದಿಲ್ಲಿಯಲ್ಲಿ ಡಿ.7 ರಿಂದ10 ರವರೆಗೆ ನಡೆಯಲಿರುವ ಎಬಿವಿಪಿಯ 69 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬುದಾಗಿ ಎಬಿವಿಪಿಯ ಮುಂಬೈ ಕೇಂದ್ರ ಕಚೇರಿಯಿಂದ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಾಹಿ ಅವರು ಉತ್ತರಪ್ರದೇಶದ ಗೋರಖ್‍ಪುರ ಜಿಲ್ಲೆಯವರಾಗಿದ್ದು, ಅವರು ಲಕ್ಷ್ಮೀದ ಬಾಬಾ ಸಾಹೇಬ್

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್/ ರಾಷ್ಟ್ರೀಯ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಆಯ್ಕೆ Read More »

ಅಮೇರಿಕಾದಲ್ಲಿ ಗುಂಡಿಕ್ಕಿ ಭಾರತೀಯ ವೈದ್ಯ ವಿದ್ಯಾರ್ಥಿಯ ಕೊಲೆ

ಸಮಗ್ರ ನ್ಯೂಸ್: 26 ವರ್ಷದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಯೊಬ್ಬರಿಗೆ ಕಾರಿನೊಳಗೆ ಗುಂಡು ಹಾರಿಸಿ ಕೊಂದಿರುವ ಘಟನೆ ಅಮೆರಿಕದ ಓಹಿಯೋದಲ್ಲಿ ನಡೆದಿದೆ. ಆದಿತ್ಯ ಅದ್ಲಾಖಾ ಅವರು ಸಿನ್ಸಿನಾಟಿ ವೈದ್ಯಕೀಯ ಶಾಲೆಯ ವಿಶ್ವವಿದ್ಯಾನಿಲಯದಲ್ಲಿ ಆಣ್ವಿಕ ಮತ್ತು ಅಭಿವೃದ್ಧಿ ಜೀವಶಾಸ್ತ್ರ ಕಾರ್ಯಕ್ರಮದಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದರು ಎಂದು ವೈದ್ಯಕೀಯ ಶಾಲೆಯ ಹೇಳಿಕೆ ತಿಳಿಸಿದೆ. ಹ್ಯಾಮಿಲ್ಟನ್ ಕೌಂಟಿ ಕರೋನರ್ ಕಚೇರಿಯ ಪ್ರಕಾರ, ಆದಿತ್ಯ ಅದ್ಲಾಖಾ ಈ ತಿಂಗಳ ಆರಂಭದಲ್ಲಿ ಯುಸಿ ಮೆಡಿಕಲ್ ಸೆಂಟರ್‌ನಲ್ಲಿ ನಿಧನರಾದರು. ನವೆಂಬರ್ 9 ರಂದು, ಸಿನ್ಸಿನಾಟಿ ಪೊಲೀಸ್ ಲೆಫ್ಟಿನೆಂಟ್

ಅಮೇರಿಕಾದಲ್ಲಿ ಗುಂಡಿಕ್ಕಿ ಭಾರತೀಯ ವೈದ್ಯ ವಿದ್ಯಾರ್ಥಿಯ ಕೊಲೆ Read More »

KSRTC ಮುಡಿಗೆ ಮೂರು‌ ಪ್ರಶಸ್ತಿಗಳ ಗರಿ

ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸುತ್ತಿರುವ ಕೆ.ಎಸ್.ಆರ್.ಟಿ.ಸಿ ಗೆ National Media Conclaveನ ಎರಡು ಪ್ರಶಸ್ತಿ ಹಾಗೂ World Marketing Congressನ Global Marketing Excellence ಒಂದು ಪ್ರಶಸ್ತಿ ಸೇರಿ ಮೂರು ಪ್ರಶಸ್ತಿಗಳು ಲಭಿಸಿವೆ. ಈ ಕುರಿತಂತೆ ಮಾಹಿತಿ ನೀಡಿರುವ ನಿಗಮವು, ನ.23ರಂದು ಕೆ.ಐ.ಐ.ಟಿ ವಿಶ್ವವಿದ್ಯಾನಿಲಯ ಸಭಾಂಗಣ, ಭುವನೇಶ್ವರ್ National Media Conclave ರವರು, ಆಯೋಜಿಸಿದ 07 ನೇ National Media Conclave Award, ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರದೀಪ್ ಕುಮಾರ್ ಅಮತ್,

KSRTC ಮುಡಿಗೆ ಮೂರು‌ ಪ್ರಶಸ್ತಿಗಳ ಗರಿ Read More »

ರಾಹುಲ್ ಗಾಂಧಿ ವಾಟ್ಸಾಪ್ ಚಾನೆಲ್ ಆರಂಭ/ ಆರಂಭವಾದ ದಿನವೇ 42 ಲಕ್ಷ ಸದಸ್ಯರ ಸೇರ್ಪಡೆ

ವಾಟ್ಸಾಪ್‍ನ ಹೊಸ ವಿಶೇಷತೆ ವಾಟ್ಸಾಪ್ ಚಾನೆಲ್ ಭಾರೀ ಜನಪ್ರಿಯತೆ ಗಳಿಸುತ್ತಿದ್ದು, ರಾಜಕೀಯ ನಾಯಕರುಗಳಿಗೆ ಹೊಸದೊಂದು ವೇದಿಕೆಯನ್ನು ನಿರ್ಮಿಸುತ್ತಿದೆ. ಇದೀಗ ರಾಹುಲ್ ಗಾಂಧಿ ಅವರ ವಾಟ್ಸಾಪ್ ಚಾನೆಲ್ ಆರಂಭಗೊಂಡಿದ್ದು, ಮೊದಲನೇ ದಿನವೇ ದಾಖಲೆಯ ಜನರು ಸೇರ್ಪಡೆಯಾಗಿದ್ದಾರೆ. ದೆಹಲಿ ಕಾಂಗ್ರೆಸ್ ಸಮಿತಿ ರಾಹುಲ್ ಗಾಂಧಿ ಅವರ ವಾಟ್ಸಾಪ್ ಚಾನೆಲ್ ಆರಂಭಿಸಿದ್ದು, ಈ ಚಾನೆಲ್‍ಗೆ ಆರಂಭದ ದಿನವೇ 42 ಲಕ್ಷ ಜನರು ಸೇರಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ನಾಯಕ ಅರವಿಂದರ್ ಸಿಂಗ್ ಲವ್ಲಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಬೆಂಬಲಿಸುವವರು

ರಾಹುಲ್ ಗಾಂಧಿ ವಾಟ್ಸಾಪ್ ಚಾನೆಲ್ ಆರಂಭ/ ಆರಂಭವಾದ ದಿನವೇ 42 ಲಕ್ಷ ಸದಸ್ಯರ ಸೇರ್ಪಡೆ Read More »

WhatsAppನಲ್ಲಿ ಹೊಸ ಫೀಚರ್​! ಇನ್ಮುಂದೆ ಈ ವರ್ಕ್​ಗಳು ಸಖತ್​ ಈಸಿಯಾಗುತ್ತೆ

ಜನಪ್ರಿಯ ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ WhatsApp ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ ಇದು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ್ದು ಅದು ಬಳಕೆದಾರರಿಗೆ ಸಂದೇಶಗಳನ್ನು ದಿನಾಂಕವಾರು ಹುಡುಕಲು ಅನುಮತಿಸುತ್ತದೆ. ಇದನ್ನು “ದಿನಾಂಕದ ಪ್ರಕಾರ ಸಂದೇಶವನ್ನು ಹುಡುಕಿ” (Search message by date) ಎಂದು ಕರೆಯಲಾಗುತ್ತದೆ. ಈಗ ಯಾವುದೇ ಸಂಭಾಷಣೆ ಅಥವಾ ಚಾಟ್‌ನಲ್ಲಿ ನಿರ್ದಿಷ್ಟ ದಿನಾಂಕದಂದು ಕಳುಹಿಸಲಾದ ಅಥವಾ ಸ್ವೀಕರಿಸಿದ ಸಂದೇಶಗಳನ್ನು ಸುಲಭವಾಗಿ ಪ್ರವೇಶಿಸಬಹುದು. WhatsApp ವೆಬ್ ಬೀಟಾ 2.2348.50 ಆವೃತ್ತಿಯನ್ನು ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗುತ್ತದೆ. WhatsApp

WhatsAppನಲ್ಲಿ ಹೊಸ ಫೀಚರ್​! ಇನ್ಮುಂದೆ ಈ ವರ್ಕ್​ಗಳು ಸಖತ್​ ಈಸಿಯಾಗುತ್ತೆ Read More »

Amazon Offer: ಬಿಡುಗಡೆ ಆಯ್ತು ರೆಡ್ಮಿ ನ್ಯೂ ಮೊಬೈಲ್​! ಒಳ್ಳೆ ಫೀಚರ್ಸ್ ಹಾಗೂ ಕಡಿಮೆ ಬೆಲೆ ಕೂಡ!

ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಕಡಿಮೆ ಬೆಲೆಯಲ್ಲಿ ಉತ್ತಮ ಫೋನ್ ಸಿಕ್ಕರೆ ಅದು ಖುಷಿಯಾಗುತ್ತದೆ ಅಲ್ವಾ? ಪ್ರತಿಯೊಬ್ಬರೂ ಬಜೆಟ್ ಶ್ರೇಣಿಯ ಅತ್ಯುತ್ತಮ ಹ್ಯಾಂಡ್‌ಸೆಟ್ ಅನ್ನು ಬಯಸುತ್ತಾರೆ. ಕೈಗೆಟುಕುವ ಮೊಬೈಲ್ ಫೋನ್‌ಗಳ ವಿಷಯಕ್ಕೆ ಬಂದರೆ, ಮೊದಲು ಮನಸ್ಸಿಗೆ ಬರುವುದು Redmi, Redmi, Vivo. ಆದರೆ ಹೆಚ್ಚಾಗಿ ಯಾವ ಫೋನ್ ಕೊಳ್ಳಬೇಕು ಎಂಬುದು ಅರ್ಥವಾಗದೇ ನಮ್ಮ ಕೆಲಸ ಕಷ್ಟವಾಗುತ್ತದೆ. ನೀವೂ ಹೊಸ ಫೋನ್​ ಹುಡುಕುತ್ತಿದ್ದರೆ, ನಾವು ನಿಮಗೆ ಉತ್ತಮ ಕೊಡುಗೆಯನ್ನು ತಂದಿದ್ದೇವೆ. ನೀವು ಅಗ್ಗದ ಶ್ರೇಣಿಯಲ್ಲಿ ಸೂಪರ್​ ಫೋನ್

Amazon Offer: ಬಿಡುಗಡೆ ಆಯ್ತು ರೆಡ್ಮಿ ನ್ಯೂ ಮೊಬೈಲ್​! ಒಳ್ಳೆ ಫೀಚರ್ಸ್ ಹಾಗೂ ಕಡಿಮೆ ಬೆಲೆ ಕೂಡ! Read More »

ಮಥುರಾದಲ್ಲಿ ಸಂತ ಮೀರಾ ಬಾಯಿ ಜನ್ಮೋತ್ಸವ/ ನವೆಂಬರ್ 23ಕ್ಕೆ ಕೃಷ್ಣ ಜನ್ಮಭೂಮಿಗೆ ಮೋದಿ ಭೇಟಿ

ಸಮಗ್ರ ನ್ಯೂಸ್: ಶ್ರೀಕೃಷ್ಣನ ಪರಮ ಭಕ್ತೆ ಮೀರಾಬಾಯಿ ಅವರ 525ನೇ ಜನ್ಮ ದಿನಾಚರಣೆ ಪ್ರಯುಕ್ತ, ಸಂತ ಮೀರಾಬಾಯಿ ಜನ್ಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನವೆಂಬರ್ 23ರಂದು ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಜನ್ಮಭೂಮಿಗೂ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈ ಮೂಲಕ ಶ್ರೀ ಕೃಷ್ಣ ಜನ್ಮಭೂಮಿಗೆ ಭೇಟಿ ನೀಡಿದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಲಿದ್ದಾರೆ. ಪ್ರಧಾನಿ‌ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಕೃಷ್ಣ ಜನ್ಮಭೂಮಿಯನ್ನು ಹೂವು

ಮಥುರಾದಲ್ಲಿ ಸಂತ ಮೀರಾ ಬಾಯಿ ಜನ್ಮೋತ್ಸವ/ ನವೆಂಬರ್ 23ಕ್ಕೆ ಕೃಷ್ಣ ಜನ್ಮಭೂಮಿಗೆ ಮೋದಿ ಭೇಟಿ Read More »

ಉತ್ತರಾಖಂಡ: ಕಾರ್ಮಿಕರು ಸಿಲುಕಿದ ಸುರಂಗ ಪ್ರವೇಶಿಸಿದ NDRF

ಸಮಗ್ರ ನ್ಯೂಸ್: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿಯ 21 ಸದಸ್ಯರ ತಂಡವು ಆಮ್ಲಜನಕ ಸಿಲಿಂಡರ್ ಮತ್ತು ಸ್ಟ್ರೆಚರ್ ಗಳೊಂದಿಗೆ ಕುಸಿದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗವನ್ನು ಪ್ರವೇಶಿದೆ ಎಂದು ರಾಷ್ಟ್ರೀಯ ಮಾಧ್ಯಮ ಇಂಡಿಯಾ ಟುಡೇ ವರದಿ ಮಾಡಿದೆ. ಇಂದು ಮುಂಜಾನೆ ಪೈಪ್ ಲೈನ್ ಕೊರೆಯಲು ಕೆಲವು ಲೋಹದ ಸರಳುಗಳು ಅಡ್ಡಿಯಾದ ಕಾರಣ ವಿಶೇಷ ಬ್ಲೇಡ್ನೊಂದಿಗೆ ಕೋನ ಕಟ್ಟರ್ ಅನ್ನು ರಕ್ಷಣಾ ತಂಡದ ಸದಸ್ಯರು ಒಳಗೆ ಕಳುಹಿಸಿದ್ದಾರೆ. ಕಬ್ಬಿಣದ ರಚನೆಯ ಅಡಚಣೆಯನ್ನು ರಕ್ಷಣಾ ಸಂಸ್ಥೆಗಳು ಯಶಸ್ವಿಯಾಗಿ ತೆರವುಗೊಳಿಸಿದೆ.

ಉತ್ತರಾಖಂಡ: ಕಾರ್ಮಿಕರು ಸಿಲುಕಿದ ಸುರಂಗ ಪ್ರವೇಶಿಸಿದ NDRF Read More »