ಕ್ರೈಂ

ಅರಣ್ಯ ಇಲಾಖೆಯ _E-Prahari ಸರ್ವೆಗೆ ಮತ್ತೊಬ್ಬ ಸಿಬ್ಬಂದಿ ಬಲಿ| ಭಾಗಮಂಡಲ ವಲಯದ ಅರಣ್ಯ ವೀಕ್ಷಕ ಕಾಡೊಳಗೆ ಆಯತಪ್ಪಿ ಬಿದ್ದು ಸಾವು!

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಭಾಗಮಂಡಲ ವಲಯ ಅರಣ್ಯ ವಿಭಾಗಕ್ಕೆ ಸೇರಿದ ಪಾರೆಸ್ಟ್ ವಾಚರ್(ಅರಣ್ಯ ವೀಕ್ಷಕ) ಆಕಸ್ಮಿಕವಾಗಿ ಹೊಳೆಗೆ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಗಡಿಭಾಗದ ಮಾವಿನಕಟ್ಟೆ ನರುವೋಳು ಮೊಟ್ಟೆ ಬಳಿ ನಡೆದಿದೆ. ಮೃತಪಟ್ಟ ಫಾರೆಸ್ಟ್ ವಾಚರ್ ಚಿನ್ನಪ್ಪ (58 ವರ್ಷ ) ಎಂದು ಗುರುತಿಸಲಾಗಿದೆ. ಇವರು ಅರಣ್ಯ ಇಲಾಖೆ ಇ-ಪ್ರಹಾರಿ ತಂತ್ರಾಂಶದಲ್ಲಿ ದಾಖಲಿಸಲು ಕೊಡಗು ಅರಣ್ಯ ಇಲಾಖೆಯಿಂದ ಭೂಮಿಯ ಸರ್ವೆಗೆ ಹೋದ ಸಂದರ್ಭ ತೊಡಿಕಾನ ಸಮೀಪದ […]

ಅರಣ್ಯ ಇಲಾಖೆಯ _E-Prahari ಸರ್ವೆಗೆ ಮತ್ತೊಬ್ಬ ಸಿಬ್ಬಂದಿ ಬಲಿ| ಭಾಗಮಂಡಲ ವಲಯದ ಅರಣ್ಯ ವೀಕ್ಷಕ ಕಾಡೊಳಗೆ ಆಯತಪ್ಪಿ ಬಿದ್ದು ಸಾವು! Read More »

ಮಂಗಳೂರು: ಮಳಲಿ ಮಸೀದಿ ವಿವಾದ| ಆಡಳಿತ ಮಂಡಳಿಯ ಅರ್ಜಿ ವಜಾಗೊಳಿಸಿದ ಕೋರ್ಟ್

ಸಮಗ್ರ ನ್ಯೂಸ್: ಮಂಗಳೂರಿನ ಮಳಲಿಪೇಟೆ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಇಂದು ವಜಾ ಗೊಳಿಸಿದೆ. ಮಳಲಿ ಮಸೀದಿ ಪ್ರಕರಣದಲ್ಲಿ ಮಸೀದಿಯು ವಕ್ಫ್ ಆಸ್ತಿಯಾಗಿರುವ ಕಾರಣ‌ ಈ ಪ್ರಕರಣದ ವಿಚಾರಣೆಗೆ ವಕ್ಫ್ ಸಂಬಂಧಿತ ಕೋರ್ಟ್ ಗಳು ಇರುವುದರಿಂದ ಈ ಪ್ರಕರಣವನ್ನು ವಿಚಾರಣೆ‌ ನಡೆಸಲು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಮಸೀದಿ ವಿರುದ್ಧ ದಾಖಲಾಗಿರುವ ಅರ್ಜಿಯನ್ನು ವಜಾ ಗೊಳಿಸುವಂತೆ ಮಳಲಿಪೇಟೆ ಮಸೀದಿಯ ಆಡಳಿತ ಮಂಡಳಿ ಸಲ್ಲಿಸಿದ್ದ

ಮಂಗಳೂರು: ಮಳಲಿ ಮಸೀದಿ ವಿವಾದ| ಆಡಳಿತ ಮಂಡಳಿಯ ಅರ್ಜಿ ವಜಾಗೊಳಿಸಿದ ಕೋರ್ಟ್ Read More »

ಶಿಷ್ಯೆಯಲ್ಲಿ ವರಿಸಲು ಲಿಂಗ ಬದಲಿಸಿಕೊಂಡ ಶಿಕ್ಷಕಿ

ಸಮಗ್ರ ನ್ಯೂಸ್: ಶಿಷ್ಯೆಯನ್ನು ಪ್ರೀತಿಸಿದ್ದ ಶಿಕ್ಷಕಿ ಆಕೆಯನ್ನು ಮದುವೆಯಾಗಲು ಲಿಂಗ ಬದಲಾವಣೆ ಮಾಡಿಸಿಕೊಂಡಿದ್ದಾರೆ. ರಾಜಸ್ಥಾನ ಭರತ್‌ಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಶಿಕ್ಷಕಿಯೊಬ್ಬರಿಗೆ ತನ್ನ ವಿದ್ಯಾರ್ಥಿನಿ ಮೇಲೆ ಪ್ರೀತಿ ಉಂಟಾಗಿದ್ದು, ಆಕೆಯನ್ನು ಮದುವೆಯಾಗುವ ಸಲುವಾಗಿ ಎರಡುಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗಂಡಾಗಿ ಪರಿವರ್ತನೆಯಾಗಿದ್ದಾರೆ. ಆರವ್‌ ಕುಂತಲ್‌ ಎಂಬುವವರೇ ಲಿಂಗ ಬದಲಾವಣೆ ಮಾಡಿಕೊಂಡ ಶಿಕ್ಷಕಿ. 2019ರಲ್ಲಿ ಮೊದಲ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಇವರು, ಇತ್ತೀಚೆಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸಂಪೂರ್ಣ ಗಂಡಾಗಿ ಬದಲಾಗಿದ್ದಾರೆ. ಅನಂತರ ತನ್ನ ಶಿಷ್ಯಯನ್ನೇ ಲವ್‌ ಮಾಡಿ

ಶಿಷ್ಯೆಯಲ್ಲಿ ವರಿಸಲು ಲಿಂಗ ಬದಲಿಸಿಕೊಂಡ ಶಿಕ್ಷಕಿ Read More »

ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಅಪಾರ್ಟ್ ಮೆಂಟ್ 10 ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ನಾಗವಾರ ಸಮೀಪದ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಮೋಹಿನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಮೋಹಿನ್ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ Read More »

ಪತಿ ಹಾಗೂ ಇಬ್ಬರು ಮಕ್ಕಳಿದ್ದರೂ ಪರಸಂಗ ಮಾಡಿದವಳು ಬೀದಿ ಹೆಣವಾದಳು!!

ಸಮಗ್ರ ನ್ಯೂಸ್: ಮಹಿಳೆಗೆ ಮದುವೆಯಾಗಿ ಪತಿ ಮತ್ತು ಇಬ್ಬರು ಮಕ್ಕಳಿದ್ದರೂ ಪರಸಂಗದ ಸಹವಾಸ ಮಾಡಿ ಇದೀಗ ದುರಂತ ಅಂತ್ಯ ಕಂಡಿದ್ದಾಳೆ. ಇದರಿಂದ ಇಬ್ಬರು ಮಕ್ಕಳು ತಾಯಿ ಇಲ್ಲದ ತಬ್ಬಲಿಯಾಗಿವೆ. ಆಶಾ ಎನ್ನುವ ಮಹಿಳೆ ಕಳೆದ 12 ವರ್ಷದ ಹಿಂದೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಗ್ರಾಮದ ನಿವಾಸಿಯನ್ನು ಮದುವೆಯಾಗಿದ್ದಳು. ಇವರಿಗೆ ಎರಡು ಮುದ್ದಾದ ಗಂಡು ಮಕ್ಕಳು ಕೂಡ ಇದ್ದರೂ ಸಹ ಪರಸಂಗ ಸಹವಾಸ ಮಾಡಿ ಈಗ ಹೆಣವಾಗಿದ್ದಾಳೆ. ಆಶಾ ಮದುವೆಗೂ ಮುನ್ನವೇ ಕುರುಬರಹಳ್ಳಿ ಗ್ರಾಮದ ವೆಂಕಟೇಶ್

ಪತಿ ಹಾಗೂ ಇಬ್ಬರು ಮಕ್ಕಳಿದ್ದರೂ ಪರಸಂಗ ಮಾಡಿದವಳು ಬೀದಿ ಹೆಣವಾದಳು!! Read More »

ಉಪ್ಪಿನಂಗಡಿ: ಬ್ಯಾನರ್ ಅಳವಡಿಸುವ ವೇಳೆ ವಿದ್ಯುತ್ ಪ್ರವಹಿಸಿ‌ ಓರ್ವ ಸಾವು; ಮತ್ತಿಬ್ಬರು ಗಂಭೀರ

ಸಮಗ್ರ ನ್ಯೂಸ್ : ಬ್ಯಾನರ್ ಅಳವಡಿಸುವ ವೇಳೆ ವಿದ್ಯುತ್ ತಂತಿ ತಾಗಿ ಒಬ್ಬ ಸಾವಿಗೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ನಡೆದಿದೆ. ಮೂವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಬೆನ್ನಲ್ಲೇ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಿಸದೆ ಓರ್ವ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗಿದೆ. ಇನ್ನಿಬ್ಬರು ಕೂಡ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಉಪ್ಪಿನಂಗಡಿ: ಬ್ಯಾನರ್ ಅಳವಡಿಸುವ ವೇಳೆ ವಿದ್ಯುತ್ ಪ್ರವಹಿಸಿ‌ ಓರ್ವ ಸಾವು; ಮತ್ತಿಬ್ಬರು ಗಂಭೀರ Read More »

ಕನ್ನಡದ ಹಿರಿಯ ನಟ ಲೋಹಿತಾಶ್ವ ವಿಧಿವಶ

ಸಮಗ್ರ ನ್ಯೂಸ್: ಕನ್ನಡದ ಹಿರಿಯ ನಟ ಲೋಹಿತಾಶ್ವ ಅವರು ವಿಧಿವಶರಾಗಿದ್ದಾರೆ, ಇಂದು ಮಧ್ಯಾಹ್ನ ಅವರು ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅಕ್ಟೋಬರ್​ 4ರಂದು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ. ಮೂಲತಃ ತುಮಕೂರಿನ ತೊಂಡಗೆರೆ ಗ್ರಾಮದವರಾದ ಲೋಹಿತಾಶ್ವ ಅವರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಂಗ್ಲ ಪ್ರಾಧ್ಯಾಪಕಾರಾಗಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದರು. ಇವರ ಪುತ್ರ ಶರತ್ ಲೋಹಿತಾಶ್ವ ಅವರೂ

ಕನ್ನಡದ ಹಿರಿಯ ನಟ ಲೋಹಿತಾಶ್ವ ವಿಧಿವಶ Read More »

ಕಡಬ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ‌ ಫಾರ್ಚ್ಯೂನರ್| ಬೆಂಗಳೂರು ಮೂಲದ ಐವರು ಗಂಭೀರ

ಸಮಗ್ರ ನ್ಯೂಸ್: ಫಾರ್ಚ್ಯೂನರ್ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಐವರು ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ನ.8ರಂದು ನಡೆದಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಟೊಯೋಟಾ ಫಾರ್ಚ್ಯೂನರ್ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಬೆಂಗಳೂರು ಮೂಲದ ಐವರಿಗೆ ಗಾಯಗಳಾಗಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿದೆ.

ಕಡಬ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ‌ ಫಾರ್ಚ್ಯೂನರ್| ಬೆಂಗಳೂರು ಮೂಲದ ಐವರು ಗಂಭೀರ Read More »

ಮುರುಘಾ ಶ್ರೀಯಿಂದ 10 ಕ್ಕೂ ಹೆಚ್ಚು ಬಾಲಕಿಯರ ಅತ್ಯಾಚಾರ; ಒಂದು ಕೊಲೆ!! ಅಬ್ಬಬ್ಬಾ… ಚಾರ್ಜ್ ಶೀಟ್ ನಲ್ಲಿನ ಆರೋಪಗಳೇನು?

ಸಮಗ್ರ ನ್ಯೂಸ್: ಮುರುಘಾ ಶ್ರೀ ವಿರುದ್ಧ ಪೊಲೀಸರು 694 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದು ಅದರಲ್ಲಿ ಸಾಕಷ್ಟು ಶಾಕಿಂಗ್‌ ಆರೋಪಗಳನ್ನು ಮಾಡಲಾಗಿದೆ. ಉನ್ನತ ಮೂಲಗಳ ಪ್ರಕಾರ ಮುರುಘಾ ಶ್ರೀ ಪ್ರತಿ ಭಾನುವಾರ ಮಕ್ಕಳನ್ನು ಕೋಣೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಲಾಗಿದೆ. ಜತೆಗೆ ಪ್ರಕರಣದ ಎರಡನೇ ಆರೋಪಿ ವಾರ್ಡನ್‌ ರಶ್ಮಿ ಮಕ್ಕಳನ್ನು ಕೋಣೆಗೆ ಕರೆದುಕೊಂಡು ಬರುತ್ತಿದ್ದಳು, ಒಪ್ಪದವರಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂದೂ ಆರೋಪಿಸಲಾಗಿದೆ. ರಶ್ಮಿ ಕೈಗೆ ಮಕ್ಕಳ ಹೆಸರನ್ನು ಬರೆದು ಮುರುಘಾ ಶ್ರೀ ಕೊಡುತ್ತಿದ್ದರು, ನಂತರ

ಮುರುಘಾ ಶ್ರೀಯಿಂದ 10 ಕ್ಕೂ ಹೆಚ್ಚು ಬಾಲಕಿಯರ ಅತ್ಯಾಚಾರ; ಒಂದು ಕೊಲೆ!! ಅಬ್ಬಬ್ಬಾ… ಚಾರ್ಜ್ ಶೀಟ್ ನಲ್ಲಿನ ಆರೋಪಗಳೇನು? Read More »

ಚಂದ್ರಶೇಖರ್ ನಾಲೆಗೆ ಬಿದ್ದೇ ಸತ್ತರಾ? ಡಯಾಟಮ್ ವರದಿಯಲ್ಲೇನಿದೆ…?

ಸಮಗ್ರ ನ್ಯೂಸ್: ಹೊನ್ನಾಳಿಯ ಬಿಜೆಪಿ ಶಾಸಕ ಸೋದರನ ಪುತ್ರನ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಯಾಟಮ್‌ ವರದಿ ಪೊಲೀಸರ ಕೈ ಸೇರಿದೆ. ಶ್ವಾಸಕೋಶದಲ್ಲಿ ನೀರು ಇರುವುದನ್ನು ಈ ವರದಿ ಖಚಿತಪಡಿಸಿದೆ. ಈ ಹಿನ್ನೆಲೆ ಚಂದ್ರಶೇಖರ್‌ ಬದುಕಿದ್ದಾಗಲೇ ನಾಲೆಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಡಯಾಟಮ್‌ ಪರೀಕ್ಷಾ ವರದಿ ಸಹಜ ಸಾವು ಎಂದು ಹೇಳುತ್ತಿದೆ. ಎಫ್‌ಎಸ್‌ಎಲ್‌, ಮರಣೋತ್ತರ ಪರೀಕ್ಷಾ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ಇನ್ನು, ಚಂದ್ರು ಸಾವಿನ ಬಗ್ಗೆ ಎಡಿಜಿಪಿ ಅಲೋಕ್‌ ಕುಮಾರ್‌ ಮಾಹಿತಿ ಪಡೆದಿದ್ದಾರೆ ಎಂದೂ

ಚಂದ್ರಶೇಖರ್ ನಾಲೆಗೆ ಬಿದ್ದೇ ಸತ್ತರಾ? ಡಯಾಟಮ್ ವರದಿಯಲ್ಲೇನಿದೆ…? Read More »