ಕ್ರೈಂ

ಚಿತ್ರದುರ್ಗ‌ ಮುರುಘಾ ಶ್ರೀ‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್| ಅತ್ಯಾಚಾರ ‌ನಡೆದೇ‌ ಇಲ್ಲ ಅಂತಿದೆ ವೈದ್ಯಕೀಯ ವರದಿ

ಚಿತ್ರದುರ್ಗ: ಹಾಸ್ಟೆಲ್​ನ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಅವರು ಜೈಲು ಸೇರಿದ್ದಾರೆ. ಆದರೆ ಬಾಲಕಿಯರ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯರು ವರದಿ ನೀಡಿದ್ದು ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 1ನೇ ಪೋಕ್ಸೋ ಪ್ರಕರಣದ ಇಬ್ಬರು ಸಂತ್ರಸ್ತೆ ಬಾಲಕಿಯರ ಮೆಡಿಕಲ್ ರಿಪೋರ್ಟ್​​​ನಲ್ಲಿ ಅತ್ಯಾಚಾರ ಆಗಿಲ್ಲ ಎಂಬ ವರದಿ ಬಂದಿದೆ. ಯಾವುದೇ ಗಾಯಗಳು ಇಲ್ಲ ಎಂದು […]

ಚಿತ್ರದುರ್ಗ‌ ಮುರುಘಾ ಶ್ರೀ‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್| ಅತ್ಯಾಚಾರ ‌ನಡೆದೇ‌ ಇಲ್ಲ ಅಂತಿದೆ ವೈದ್ಯಕೀಯ ವರದಿ Read More »

ಅಪಘಾತದಲ್ಲಿ ಮೃತ ಮುಷರಫ್ ಸೋದರಿಯ ವಿದ್ಯಾಭ್ಯಾಸಕ್ಕೆ ಇನಾಯತ್ ಅಲಿ ನೆರವಿನ ಭರವಸೆ

ಸಮಗ್ರ ನ್ಯೂಸ್: ರವಿವಾರ ವೇಣೂರು ಸಮೀಪದ ಗರ್ಡಾಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಧಾರ್ಮಿಕ ಗುರು ನೌಶಾದ್‌ ಹಾಜಿ ಅವರ ಕಾರ್ ಚಾಲಕ ಮುಷರಫ್‌ ಉಳಾಯಿಬೆಟ್ಟು ಅವರ ನಿವಾಸಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮುಷರಫ್‌ ಅವರ ಅಗಲಿಕೆ ಅವರ ಕುಟುಂಬದವರಿಗೆ ಭರಿಸಲಾಗದ ನಷ್ಟವಾಗಿದೆ. ಅವರ ಕಷ್ಟ ಕಾಲದಲ್ಲಿ ನೆರವಾಗುವುದಾಗಿ ಭರವಸೆ ನೀಡಿದ ಇನಾಯತ್‌ ಅಲಿ ಅವರು, ಮುಷರಫ್‌ ಅವರ ಸಹೋದರಿಯ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸುವುದಾಗಿ

ಅಪಘಾತದಲ್ಲಿ ಮೃತ ಮುಷರಫ್ ಸೋದರಿಯ ವಿದ್ಯಾಭ್ಯಾಸಕ್ಕೆ ಇನಾಯತ್ ಅಲಿ ನೆರವಿನ ಭರವಸೆ Read More »

ಬೆಂಗಳೂರು ಯುವಕನ ಕಿಡ್ನಾಪ್ & ಕೊಲೆ ಪ್ರಕರಣ|ಚಾರ್ಮಾಡಿ ಘಾಟ್ ನಲ್ಲಿ ಶವಕ್ಕಾಗಿ ಹುಡುಕಾಟ

ಸಮಗ್ರ ನ್ಯೂಸ್: ಸುಮಾರು 9 ತಿಂಗಳ ಹಿಂದೆ ಕೊಲೆಯಾದ ಯುವಕನ ಶವವನ್ನು ಚಾರ್ಮಾಡಿ ಘಾಟಿ ಪರಿಸರದಲ್ಲಿ ಎಸೆಯಲಾಗಿದೆ ಎಂದು ಆರೋಪಿಗಳು ತಿಳಿಸಿದ್ದು ಅದರಂತೆ ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರು ಡಿಸಿಪಿ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ,ಪಿಎಸ್ ಐ ಮತ್ತು ಸಿಬ್ಬಂದಿ ಶವ ಪತ್ತೆಹಚ್ಚುವ ಕಾರ್ಯಾಚರಣೆಗೆ ಮಂಗಳವಾರ ಆಗಮಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ – ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಘಾಟಿಯ ಪ್ರದೇಶಗಳ ಕಣಿವೆಗಳಲ್ಲಿ ಸ್ಥಳೀಯ ಪೊಲೀಸರ

ಬೆಂಗಳೂರು ಯುವಕನ ಕಿಡ್ನಾಪ್ & ಕೊಲೆ ಪ್ರಕರಣ|ಚಾರ್ಮಾಡಿ ಘಾಟ್ ನಲ್ಲಿ ಶವಕ್ಕಾಗಿ ಹುಡುಕಾಟ Read More »

ಇಹಲೋಕದ ಯಾತ್ರೆ ಮುಗಿಸಿದ ನಡೆದಾಡುವ ದೇವರು| ಪಂಚಭೂತಗಳಲ್ಲಿ ಲೀನರಾದ ಸಿದ್ದೇಶ್ವರ ‌ಸ್ವಾಮೀಜಿ

ಸಮಗ್ರ ನ್ಯೂಸ್: ನಡೆದಾಡುವ ಸಂತ, ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ವಿಜಯಪುರದ ಜ್ಞಾನಯೋಗ ಆಶ್ರಮದ ಆವರಣದಲ್ಲಿ ನಡೆದಿದೆ. ಶ್ರೀಗಳು ವಿಲ್‌ನಲ್ಲಿ ಬರೆದಿರುವಂತೆ ಮಣ್ಣು ಮಾಡುವ ಬದಲು, ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗಿದೆ. ಈ ಮೂಲಕ ಶ್ರೀಗಳ ಇಹಲೋಕದ ಯಾತ್ರೆ ಮುಗಿದಿದ್ದು, ಪಂಚಭೂತಗಳಲ್ಲಿ ಸ್ವಾಮೀಜಿ ಲೀನರಾಗಿದ್ದಾರೆ. ವಿಜಯಪುರದ ಜ್ಞಾನ ಯೋಗಾಶ್ರಮದ ಆವರಣದಲ್ಲಿಯೇ ಸಿದ್ದೇಶ್ವರ ಸ್ವಾಮೀಜಿ ಅಂತ್ಯಸಂಸ್ಕಾರ ನಡೆಯಿತು. ಇಂದು(ಡಿ.3) ಬೆಳಗ್ಗೆಯಿಂದ ವಿಜಯಪುರ ಸೈನಿಕ ಶಾಲೆ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಸಿಎಂ

ಇಹಲೋಕದ ಯಾತ್ರೆ ಮುಗಿಸಿದ ನಡೆದಾಡುವ ದೇವರು| ಪಂಚಭೂತಗಳಲ್ಲಿ ಲೀನರಾದ ಸಿದ್ದೇಶ್ವರ ‌ಸ್ವಾಮೀಜಿ Read More »

ಬೆಳ್ತಂಗಡಿ: ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು

ಸಮಗ್ರ ನ್ಯೂಸ್: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಲ್ಮಂಜ ಗ್ರಾಮದ ಕಜೆ ಸಮೀಪದ ನಿವಾಸಿ ವಿವಾಹಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುಂದರಿ(25) ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದೆ. ಡಿ. 12ರಂದು ವಿಷ ಸೇವಿಸಿದ್ದ ಮಹಿಳೆಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ ಬಳಿಕ ಡಿ 27ರಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

ಬೆಳ್ತಂಗಡಿ: ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು Read More »

ಸುಳ್ಯ: ರಬ್ಬರ್ ಸ್ಮೋಕ್ ಹೌಸ್ ನಿಂದ ಮನೆಗೆ ಹತ್ತಿಕೊಂಡ ಬೆಂಕಿ; ಅಪಾರ ನಷ್ಟ

ಸಮಗ್ರ ನ್ಯೂಸ್: ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ತಗುಲಿ ಸಮೀಪದಲ್ಲಿದ್ದ ಮನೆಗೂ ಬೆಂಕಿ ಹತ್ತಿಕೊಂಡ ಘಟನೆ ಸುಳ್ಯ ತಾಲೂಕಿನ ಕಲ್ಲುಗುಂಡಿ ಎಂಬಲ್ಲಿ‌ ಸಂಭವಿಸಿದೆ. ಜ.2 ರಂದು ಘಟನೆ ನಡೆದಿದ್ದು ಅಗ್ನಿ ಅವಘಡದಿಂದಾಗಿ ಲಕ್ಷಾಂತರ ರೂ. ಮೌಲ್ಯದ ಹಾನಿ ಸಂಭವಿಸಿದೆ. ರಬ್ಬರ್ ಶೀಟ್ ಒಣಗಿಸುವ ಸ್ಮೋಕ್ ಹೌಸ್ ಗೆ ಬೆಂಕಿ ಹೊತ್ತಿಕೊಂಡಿದ್ದು ಪರಿಣಾಮ ಬೆಂಕಿಯ ಕೆನ್ನಾಲಿಗೆಗಳು ಸುತ್ತಲಿಡೀ ವ್ಯಾಪಿಸಿ ಅಪಾರ ಪ್ರಮಾಣದ ಹಾನಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಕೃಷಿಕ ಸೂರಜ್ ಹೊಸೂರು ಎಂಬವರ ಮನೆಯಲ್ಲಿ ರಬ್ಬರ್ ಶೀಟನ್ನು

ಸುಳ್ಯ: ರಬ್ಬರ್ ಸ್ಮೋಕ್ ಹೌಸ್ ನಿಂದ ಮನೆಗೆ ಹತ್ತಿಕೊಂಡ ಬೆಂಕಿ; ಅಪಾರ ನಷ್ಟ Read More »

ದಾರಿಬಿಡಿ ಎಂದು‌ ಗದರಿದ್ದಕ್ಕೆ ಯುವಕನಿಗೆ ಸಾವಿನ ದಾರಿ‌ ತೋರಿದ ಅಪ್ರಾಪ್ತ ಬಾಲಕರು|

ಸಮಗ್ರ ನ್ಯೂಸ್: ಆರು ಮಂದಿ ಅಪ್ರಾಪ್ತ ಬಾಲಕರು 22 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಮುಖ್ಯ ರಸ್ತೆಯಲ್ಲಿ ಜನಸಂದಣಿಯಲ್ಲಿ ಜಗಳವಾಡಿ ಚಾಕುವಿನಿಂದ ಇರಿದಿದ್ದಾರೆ. ಚಿಕಿತ್ಸೆ ವೇಳೆ ಯುವಕ ಸಾವನ್ನಪ್ಪಿದ್ದು, ಎಲ್ಲಾ ಅಪ್ರಾಪ್ತರು ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಇಬ್ಬರು ಒಂಬತ್ತನೇ ತರಗತಿ ವಿದ್ಯಾರ್ಥಿಗಳೆಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯು ನಗರದ ಭನ್ವಾರ್ಕುವಾನ್ ಪ್ರದೇಶದಲ್ಲಿ ಸಂಭವಿಸಿದೆ. ಆಯುಷ್ ಎಂಬ ಯುವಕ ಬೈಕ್​ನಲ್ಲಿ ಹೋಗುತ್ತಿದ್ದ. ಬಾಲಕರ ಗುಂಪು ರಸ್ತೆಯ ಮೇಲೆ ಇದ್ದುದರಿಂದ ಆಯುಷ್​ ಹಾರ್ನ್ ಮಾಡಿ ಹುಡುಗರನ್ನು ಸರಿಯುವಂತೆ

ದಾರಿಬಿಡಿ ಎಂದು‌ ಗದರಿದ್ದಕ್ಕೆ ಯುವಕನಿಗೆ ಸಾವಿನ ದಾರಿ‌ ತೋರಿದ ಅಪ್ರಾಪ್ತ ಬಾಲಕರು| Read More »

ಮಡಿಕೇರಿ: ಆಟೋ ರಿಕ್ಷಾಕ್ಕೆ ಬೆಂಕಿ‌ಹಚ್ಚಿದ ಪ್ರಕರಣದ ಆರೋಪಿಗೆ ಚಾಕು ಇರಿತ

ಸಮಗ್ರ ನ್ಯೂಸ್: ಮಡಿಕೇರಿಯಲ್ಲಿ ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಮಡಿಕೇರಿ ನಗರದ ತ್ಯಾಗರಾಜ ಕಾಲೋನಿ ನಿವಾಸಿ ಹ್ಯಾರಿಸ್​ ಚಾಕು ಇರಿತಕ್ಕೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ. ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ಅಬ್ದುಲ್ ರೆಹಮಾನ್ ಹಾಗೂ ತ್ಯಾಗರಾಜ ಕಾಲೋನಿ ನಿವಾಸಿ ಹ್ಯಾರಿಸ್ ಎಂಬವರ ನಡುವೆ ಕಳೆದ 10 ವರ್ಷಗಳಿಂದ ವೈಯಕ್ತಿಕ ದ್ವೇಷವಿತ್ತು. ಇವರಿಬ್ಬರಿಗೆ ವಾಟ್ಸಾಪ್ ಮೂಲಕ ದಿನಾ ಜಗಳವಾಗುತ್ತಿತ್ತು ಎನ್ನಲಾಗಿದೆ. ಅದೇ ವಿಚಾರವಾಗಿ ಕೋಪಗೊಂಡಿದ್ದ ಹ್ಯಾರಿಸ್, ಕಳೆದ ಡಿ.29 ರಂದು

ಮಡಿಕೇರಿ: ಆಟೋ ರಿಕ್ಷಾಕ್ಕೆ ಬೆಂಕಿ‌ಹಚ್ಚಿದ ಪ್ರಕರಣದ ಆರೋಪಿಗೆ ಚಾಕು ಇರಿತ Read More »

ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಇನ್ನಿಲ್ಲ| ನಡೆದಾಡುವ ದೇವರು ಲಿಂಗೈಕ್ಯ

ಸಮಗ್ರ ನ್ಯೂಸ್: ಖ್ಯಾತ ಪ್ರವಚನಕಾರರು, ನಡೆದಾಡುವ ದೇವರೆಂದೇ ಇಡೀ ಖ್ಯಾತರಾಗಿದ್ದ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳು, ಸುಮಾರು 1 ತಿಂಗಳಿಂದ ದ್ರವಾಹಾರವನ್ನೇ ಸೇವಿಸುತ್ತಿದ್ದರು. ಹೆಚ್ಚಿನ ಚಿಕಿತ್ಸೆ ಪಡೆಯಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೈ ಮುಗಿದು ಬೇಡಿಕೊಂಡರೂ ಶ್ರೀಗಳು ನಿರಾಕರಿಸಿದ್ದರು. ನಿನ್ನೆ ಬೆಳಗ್ಗೆ ಪ್ರಧಾನಿ ಮೋದಿ ಸಹ ದೂರವಾಣಿ ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದರು. ಇಂದು ಮಧ್ಯಾಹ್ನದವರೆಗೆ ಆರೋಗ್ಯ ವಿಚಾರಿಸಿದ ಗಣ್ಯರೆಲ್ಲರೂ ಶ್ರೀಗಳ ಆರೋಗ್ಯ ಸ್ಥಿರವಾಗಿದೆ

ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಇನ್ನಿಲ್ಲ| ನಡೆದಾಡುವ ದೇವರು ಲಿಂಗೈಕ್ಯ Read More »

ಪಿರಿಯಾಪಟ್ಟಣ ಚರ್ಚ್ ದಾಳಿಗೆ ಬಿಗ್ ಟ್ವಿಸ್ಟ್| ಬಂಧಿತ ಬಾಯ್ಬಿಟ್ಟ ಅಸಲಿ ಸತ್ಯ ಏನು?

ಸಮಗ್ರ ನ್ಯೂಸ್: ಕ್ರಿಸ್ ಮಸ್ ನ ಮರುದಿನ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಬಾಲಯೇಸು ಪ್ರತಿಮೆ ಧ್ವಂಸಗೈದ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ವರದಿಯಾಗಿತ್ತು. ಪ್ರಕರಣ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಸಂಬಳ ನೀಡದಿದ್ದಕ್ಕೆ ಕಳ್ಳತನ ಮಾಡಲಾಗಿದೆ ಎಂದು ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹೇಳಿಕೆ ನೀಡಿದ್ದು, ವಿಶ್ವ ಎಂಬ ಪೌರ ಕಾರ್ಮಿಕನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಎರಡು ತಿಂಗಳಿನಿಂದ ಚರ್ಚ್ನಲ್ಲಿ ಸಂಬಳ

ಪಿರಿಯಾಪಟ್ಟಣ ಚರ್ಚ್ ದಾಳಿಗೆ ಬಿಗ್ ಟ್ವಿಸ್ಟ್| ಬಂಧಿತ ಬಾಯ್ಬಿಟ್ಟ ಅಸಲಿ ಸತ್ಯ ಏನು? Read More »