ಕ್ರೈಂ

ಕಾರ್ಕಳ: ಕಚೇರಿಯಲ್ಲೇ ಮಹಿಳಾ ಸಿಬಂದಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಖಾಸಗಿ ಸಂಸ್ಥೆಯ ಮಹಿಳಾ ಸಿಬ್ಬಂದಿ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು. 14ರಂದು ಕಾರ್ಕಳದಲ್ಲಿ ನಡೆದಿದೆ. ನಗರದ ಮಾರ್ಕೆಟ್‌ ಬಳಿಯ ನಿವಾಸಿ, ವಿವಾಹಿತೆ ಪ್ರಮೀಳಾ ದೇವಾಡಿಗ (32) ಅವರು ಕಾರ್ಕಳ ಪೇಟೆಯ ಮಾರ್ಕೆಟ್‌ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇತರ ಸಿಬ್ಬಂದಿಗಳು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ಪ್ರಮೀಳಾ ನೇಣು ಬಿಗಿದಿರುವುದು ಕಂಡು ಬಂದಿದೆ. ಅವರು ನೇಣು ಬಿಗಿಯಲು ಮನೆಯಿಂದಲೇ ಸೀರೆ ತಂದಿರಬೇಕು ಎಂದು ಶಂಕಿಸಲಾಗಿದ್ದು, […]

ಕಾರ್ಕಳ: ಕಚೇರಿಯಲ್ಲೇ ಮಹಿಳಾ ಸಿಬಂದಿ ಆತ್ಮಹತ್ಯೆ Read More »

ಸಂಪಾಜೆ: ಆಸ್ತಿ ವಿವಾದ ಹಿನ್ನಲೆ| ಸಹೋದರರಿಂದಲೇ ಅಣ್ಣನ ಮರ್ಡರ್

ಸಮಗ್ರ ನ್ಯೂಸ್: ಆಸ್ತಿವಿವಾದ ಹಿನ್ನಲೆಯಲ್ಲಿ ಸ್ವಂತ ತಮ್ಮಂದಿರೇ ಅಣ್ಣನನ್ನು ಕೊಚ್ಚಿ ಕೊಲೆಗೈದ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆ ಸಮೀಪದ ಚೆಂಬು ಗ್ರಾಮದಿಂದ ವರದಿಯಾಗಿದೆ. ಇಲ್ಲಿನ ಕುದ್ರೆಪಾಯ ನಿವಾಸಿ ಉಸ್ಮಾನ್ ಹತ್ಯೆಯಾದ ದುರ್ದೈವಿ. ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವೆದ್ದಿದ್ದು, ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಇಂದು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ. ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ ಇವರಿಗೆ

ಸಂಪಾಜೆ: ಆಸ್ತಿ ವಿವಾದ ಹಿನ್ನಲೆ| ಸಹೋದರರಿಂದಲೇ ಅಣ್ಣನ ಮರ್ಡರ್ Read More »

ಬಾಲನಟಿ ವನ್ಷಿಕಾ ಆನಂದ್ ಹೆಸರಲ್ಲಿ ವಂಚನೆ| ಆರೋಪಿಯನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರ ಪುತ್ರಿಯಾದ ಬಾಲನಟಿ ವಂಶಿಕಾ ಹೆಸರಿನಲ್ಲಿ ವಂಚನೆ ಎಸಗಿರುವ ಪ್ರಕರಣ ಸಂಬಂಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ನಿಶಾ ನರಸಪ್ಪ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ವಂಚನೆ ಬಗ್ಗೆ ವಂಶಿಕಾ ತಾಯಿ ಯಶಸ್ವಿನಿ ದೂರು ನೀಡಿದ್ದಾರೆ. ಯಶಸ್ವಿನಿ ಅವರಿಗೆ ಇನ್ ಸ್ಟಾಗ್ರಾಂ ಮೂಲಕ ಆರೋಪಿ ನಿಶಾ ಎಂಬಾಕೆಯ ಪರಿಚಯವಾಗಿತ್ತು. ಕಾರ್ಯಕ್ರಮವೊಂದಕ್ಕೆ ತಾಯಿ–ಮಗಳನ್ನು ಆರೋಪಿ ಆಹ್ವಾನಿಸಿದ್ದರು. ಇದರಿಂದ ಮತ್ತಷ್ಟು ಹತ್ತಿರವಾಗಿದ್ದರು. ವಂಶಿಕಾ ಹೆಸರು ಹಾಗೂ ಫೋಟೊಗಳನ್ನು ದುರ್ಬಳಕೆ

ಬಾಲನಟಿ ವನ್ಷಿಕಾ ಆನಂದ್ ಹೆಸರಲ್ಲಿ ವಂಚನೆ| ಆರೋಪಿಯನ್ನು ಬಂಧಿಸಿದ ಪೊಲೀಸರು Read More »

ಸುಳ್ಯ: ವ್ಯಕ್ತಿ ಮೇಲೆ ಹಲ್ಲೆ, ಜೀವಬೆದರಿಕೆ – ದೂರು ದಾಖಲು

ಸಮಗ್ರ ನ್ಯೂಸ್: ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಕಸಬಾ ಗ್ರಾಮದ ಗಾಂಧಿನಗರದ ನಾವೂರು ನಿವಾಸಿ ಅಬ್ದುಲ್ ನಾಜೀರ್ (31) ಈ ಬಗ್ಗೆ ದೂರು ನೀಡಿದ್ದಾರೆ. ಅಬ್ದುಲ್ ನಾಜೀರ್ ಆರೋಪಿ ಶಾಬೀತ್ ಎಂಬವರು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಮೊಗರ್ಪಣೆ, ಹಳೆಗೇಟು ಎಂಬಲ್ಲಿ ಆಟೋ ಕ್ಯಾರ್ ಎಂಬ ಸರ್ವಿಸ್ ಸ್ಟೇಷನ್ ಅನ್ನು ಪಾರ್ಟನರ್ ಶೀಫ್ ನಲ್ಲಿ ವ್ಯವಹಾರ ನಡೆಸುತ್ತಿದ್ದು, ತಮ್ಮ ವ್ಯವಹಾರದಲ್ಲಿ ತಮ್ಮೊಳಗೆ ತಕರಾರು

ಸುಳ್ಯ: ವ್ಯಕ್ತಿ ಮೇಲೆ ಹಲ್ಲೆ, ಜೀವಬೆದರಿಕೆ – ದೂರು ದಾಖಲು Read More »

ತೃತೀಯ ಲಿಂಗಿ ವೇಷ ಧರಿಸಿ ವೇಶ್ಯಾವಾಟಿಕೆ| ಅವನು ಅವಳಲ್ಲ ಅವನೇ..!!

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪಕ್ಕದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಘಟನೆ ನಡೆದಿದ್ದು, ತೃತೀಯಲಿಂಗಿ ವೇಷ ಧರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದವನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ದಾಸರಹಳ್ಳಿಯ ಮಂಜುನಾಥ ನಗರ ನಿವಾಸಿ ಚೇತನ್ ತೃತೀಯ ಲಿಂಗಿಯ ವೇಷ ಧರಿಸಿ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪಕ್ಕದಲ್ಲಿ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದ. ಅಲ್ಲಿಗೆ ಮಹಿಳೆಯರು, ಪುರುಷರನ್ನು

ತೃತೀಯ ಲಿಂಗಿ ವೇಷ ಧರಿಸಿ ವೇಶ್ಯಾವಾಟಿಕೆ| ಅವನು ಅವಳಲ್ಲ ಅವನೇ..!! Read More »

ಚಿಕ್ಕಮಗಳೂರು: 3,000 ಮೌಲ್ಯದ 40 ಕೆ.ಜಿ. ಟೊಮೆಟೊ ಕಳ್ಳತನ

ಸಮಗ್ರ ನ್ಯೂಸ್: ತರಕಾರಿ ಅಂಗಡಿಯಲ್ಲಿದ್ದ 3000 ಸಾವಿರ ಮೌಲ್ಯದ 40 ಕೆ.ಜಿ. ಟೊಮೆಟೊ ಇದ್ದ ಎರಡು ಟ್ರೇ ಕಳ್ಳತನವಾದ ಘಟನೆ ಜು.11 ರಂದು ಚಿಕ್ಕಮಗಳೂರು ಜಿಲ್ಲೆ ಯ ಆಲ್ದೂರಿನಲ್ಲಿ ನಡೆದಿದೆ. ಆಲ್ದೂರು ಪಟ್ಟಣದ ನಧೀಂ ಎಂಬವರ ಅಂಗಡಿಯಲ್ಲಿ ಎರಡು ಟ್ರೇ ಟಮೋಟೋ ಕಳ್ಳತನವಾಗಿದ್ದು, ಎಂದಿನಂತೆ ಸೋಮವಾರ ರಾತ್ರಿ ತರಕಾರಿಯನ್ನು ಅಂಗಡಿಯಲ್ಲಿಟ್ಟು ಟಾರ್ಪಲ್ ಎಳೆದು ಹೋಗಿದ್ದರು. ಆದರೆ, ಜು 11ರಂದು ಬೆಳಗ್ಗೆ ಅಂಗಡಿಗೆ ಬಂದು ಅಂಗಡಿಯ ಟಾರ್ಪಲ್ ಸರಿಸಿ ನೋಡಿದಾಗ ಟೊಮೆಟೊ ಇಲ್ಲದಿರುವುದು ಬೆಳಕಿಗೆ ಬಂದಿದೆ. ಆಲ್ದೂರು ಠಾಣೆಯ

ಚಿಕ್ಕಮಗಳೂರು: 3,000 ಮೌಲ್ಯದ 40 ಕೆ.ಜಿ. ಟೊಮೆಟೊ ಕಳ್ಳತನ Read More »

ಬೆಂಗಳೂರು: ರೌಡಿ ಶೀಟರ್ ನ ಕೊಚ್ಚಿ ಕೊಲೆ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದೆ. ನಗರದ ಮಾರತಹಳ್ಳಿಯಲ್ಲಿ ಜೋಡಿ ಕೊಲೆ ನಡೆದ ಬೆನ್ನಲ್ಲೇ ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ, ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮಾರಕಾಸ್ತ್ರಗಳಿಂದ ಭಯಾನಕವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತ ವ್ಯಕ್ತಿಯನ್ನು ರಿಯಲ್ ಎಸ್ಟೇಟ್ ಉದ್ಯಮಿ, ರೌಡಿಶೀಟರ್ ಕಪಿಲ್ ಎಂದು ಗುರುತಿಸಲಾಗಿದೆ. ನಾಲ್ಕೈದು ದುಷ್ಟರ್ಮಿಗಳು ಬೈಕ್‌ನಲ್ಲಿ ಬಂದು ಮಾರಕಾಸ್ತ್ರಗಳಿಂದ ಕಪಿಲ್ ಮೇಲೆ ದಾಳಿ ಮಾಡಿದ್ದಾರೆ.ಡಿಕೆ ಹಳ್ಳಿ ಕೆ ಎಚ್ ಬಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ದಾಳಿ ಬಳಿಕ

ಬೆಂಗಳೂರು: ರೌಡಿ ಶೀಟರ್ ನ ಕೊಚ್ಚಿ ಕೊಲೆ Read More »

‘ಅಮ್ಮನ ಹೆಣ ನೋಡಲಾದರೂ ಬಾ ತಂಗಿ’ | ಸಕಲೇಶಪುರದಲ್ಲಿ ನಡೆಯಿತೊಂದು ಮನಕಲಕುವ ಘಟನೆ

ಸಮಗ್ರ ನ್ಯೂಸ್: ‘ತಾಯಿಯ ಸಾವಿಗೆ ತಂಗಿ ಬರದೆ ಹೇಗೆ ಅಂತಿಮ ಸಂಸ್ಕಾರ ಮಾಡಲಿ’ ಎಂದು ಸಹೋದರ ತಂಗಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಾಯಿ ಸಾವಿನ ಸುದ್ದಿ ಪ್ರಚಾರ ಮಾಡಿದ ಅಪರೂಪದ ಘಟನೆ ಸಕಲೇಶಪುರ ತಾಲ್ಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಹೊನ್ನಮ್ಮ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಇವರ ಪುತ್ರಿ ಹರಿಣಿ ಮಹಿಳಾ ಸಂಘಗಳಲ್ಲಿ ಸುಮಾರು ₹5 ಲಕ್ಷ ಸಾಲ ಮಾಡಿ, ಸಾಲ ಕಟ್ಟಲು ಆಕೆ ಊರು ಬಿಟ್ಟಿದ್ದಾರೆ ಎನ್ನಲಾಗಿದೆ. ಪುತ್ರ ರವಿ ತಾಯಿಯ ಶವದ ಮುಂದೆ ಕುಳಿತು,

‘ಅಮ್ಮನ ಹೆಣ ನೋಡಲಾದರೂ ಬಾ ತಂಗಿ’ | ಸಕಲೇಶಪುರದಲ್ಲಿ ನಡೆಯಿತೊಂದು ಮನಕಲಕುವ ಘಟನೆ Read More »

ಸಂಪಾಜೆ: ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರನ್ನು ಬೇಟೆಯಾಡಿದ ಅರಣ್ಯ ಅಧಿಕಾರಿಗಳು

ಸಮಗ್ರ ನ್ಯೂಸ್: ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರ ಮನೆಗೆ ದಾಳಿ ನಡೆಸಿ ಕಾಡು ಪ್ರಾಣಿ ಮಾಂಸ ಹಾಗೂ ಕೋವಿಯನ್ನು ವಶಪಡಿಸಿಕೊಂಡ ಘಟನೆ ಸಂಪಾಜೆ ವಲಯದ ದಬ್ಬಾಡ್ಕ ಉಪ ವಲಯದ ಪಟ್ಟಿಘಾಟ್ ಸಮೀಪದ ನಡೆದಿದೆ. ಮದನ್ ಕುಮಾರ್ ಹೊಸೂರು, ಪಾನೇಡ್ಕ ಗಣಪತಿ, ಹಾಗೂ ಪ್ರಸನ್ನ ಪಾನೇಡ್ಕ ಇವರ ಮನೆಗೆ ದಾಳಿ ಮಾಡಿದ್ದು, ಈ ವೇಳೆ ಮಾಂಸ ಮತ್ತು ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ.ಈ ವೇಳೆ ಆರೋಪಿಗಳು ತಲೆಮಾರೆಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಧಿಕಾರಿ ಕೆ. ಟಿ ಪೂವಯ್ಯ ಇವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯ

ಸಂಪಾಜೆ: ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರನ್ನು ಬೇಟೆಯಾಡಿದ ಅರಣ್ಯ ಅಧಿಕಾರಿಗಳು Read More »

ನದಿಗೆ ಹಾರಿದ ಸ್ವಾಮೀಜಿಯ ಶಿಷ್ಯ

ಸಮಗ್ರ ನ್ಯೂಸ್:ದೇವನೂರು ಮಠದ ಸ್ವಾಮೀಜಿಯ ಶಿಷ್ಯರೊಬ್ಬರು ಟಿ.ನರಸೀಪುರ ತಾಲೂಕಿನ ಮೂಡುಕೊತೊರೆಯ ಸಮೀಪದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇವನೂರು ಮಠದ ಸ್ವಾಮೀಜಿ ಶಿಷ್ಯರಾಗಿದ್ದ ಶಿವಪ್ಪ ದೇವರು (60) ಆತ್ಮಹತ್ಯೆ ಮಾಡಿಕೊಂಡವರು. ಶಿವಪ್ಪ ದೇವರು ಸ್ವಾಮೀಜಿ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದರು. ಅವರು ಅನಾರೋಗ್ಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ‌. ಮಠದ ಆವರಣದಲ್ಲಿ ಉತ್ತಮ ಹೆಸರು ಪಡೆದ ಸ್ವಾಮೀಜಿ ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಲಿವೂರು ಗ್ರಾಮದವರಾಗಿದ್ದಾರೆ.

ನದಿಗೆ ಹಾರಿದ ಸ್ವಾಮೀಜಿಯ ಶಿಷ್ಯ Read More »