ಕರಾವಳಿ

ಕಾಪು; ಅಕ್ರಮ ಗೋ ಮಾಂಸ ಮಾರಾಟ ,ಇಬ್ಬರು ಪೋಲಿಸ್ ವಶ

ಕಾಪು : ಅಕ್ರಮವಾಗಿ ಗೋ ವಧೆ ಮಾಡಿ ಗೋ ಮಾಂಸವನ್ನು ಮಾರಾಟ ಮಾಡಲು ಮುಂದಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹುಸೇನಬ್ಬ ಹಾಗೂ ಶಂಶುದ್ಧೀನ್ ಪೊಲೀಸರು ಮಲ್ಲಾರು ಗ್ರಾಮದ ಪಕೀರ್ಣ ಕಟ್ಟೆಯಿಂದ ಮೂಳೂರು ಕಡೆಗೆ ಅಕ್ರಮ ದನದ ಮಾಂಸ ಮಾರಾಟ ಮಾಡಲು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಾಪು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀಶೈಲ ಡಿ. ಎಮ್ ಅವರು ಉಪನಿರೀಕ್ಷಕ ಶ್ರೀಶೈಲ ಡಿ. ಎಮ್ ಅವರು ಇತರ ಸಿಬ್ಬಂದಿಗಳೊಂದಿಗೆ ಮಲ್ಲಾರು ಗ್ರಾಮದ ಕೋಟೆ ರಸ್ತೆಯ ರೈಲ್ವೆ

ಕಾಪು; ಅಕ್ರಮ ಗೋ ಮಾಂಸ ಮಾರಾಟ ,ಇಬ್ಬರು ಪೋಲಿಸ್ ವಶ Read More »

ಕಾಣಿಯೂರು: ಗೌರಿಹೊಳೆಗೆ ಬಿದ್ದ ಮಾರುತಿ 800| ಕಾರು ಪತ್ತೆಯಾದ್ರೂ ಅದರಲ್ಲಿದ್ದವರು ಎಲ್ಲಿ ಹೋದರು?

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿದ ಮಾರುತಿ 800 ಕಾರೊಂದು ಉಕ್ಕಿ ಹರಿಯುತ್ತಿರುವ ಹೊಳೆಗೆ ಬಿದ್ದ ಘಟನೆ ಶನಿವಾರ ತಡರಾತ್ರಿ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ವಿಟ್ಲದ ಕುಂಡಡ್ಕ ನಿವಾಸಿ ಧನುಷ್ (26) ಹಾಗೂ ಮಂಜೇಶ್ವರ ನಿವಾಸಿ ಧನುಷ್(21) ಎಂಬವರು ಗುತ್ತಿಗಾರಿನಲ್ಲಿ ಮರದ ಕೆಲಸ ಮಾಡುತ್ತಿದ್ದು, ಶನಿವಾರ ತಡರಾತ್ರಿ ವಿಟ್ಲದಿಂದ ಗುತ್ತಿಗಾರಿಗೆ ತೆರಳುತ್ತಿದ್ದ ವೇಳೆ ಮಂಜೇಶ್ವರ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ

ಕಾಣಿಯೂರು: ಗೌರಿಹೊಳೆಗೆ ಬಿದ್ದ ಮಾರುತಿ 800| ಕಾರು ಪತ್ತೆಯಾದ್ರೂ ಅದರಲ್ಲಿದ್ದವರು ಎಲ್ಲಿ ಹೋದರು? Read More »

ಮಳೆಯಬ್ಬರ: ಕೊಡಗಿನಲ್ಲಿ ಶಾಲೆಗಳಿಗೆ ಜು.11ರಂದು ರಜೆ

ಸಮಗ್ರ ನ್ಯೂಸ್: ಭಾರೀ ಮಳೆಯ ಪರಿಣಾಮ ಕೊಡಗು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಜು.11ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸತೀಶ್‌ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನದಿಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಮಳೆಯಬ್ಬರ: ಕೊಡಗಿನಲ್ಲಿ ಶಾಲೆಗಳಿಗೆ ಜು.11ರಂದು ರಜೆ Read More »

ಮಳೆಯಬ್ಬರ: ಉಡುಪಿಯಲ್ಲಿ ಶಾಲೆಗಳಿಗೆ ಜು.11ರಂದು ರಜೆ

ಸಮಗ್ರ ನ್ಯೂಸ್: ಭಾರೀ ಮಳೆಯ ಪರಿಣಾಮ ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಜು.11ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನದಿಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಮಳೆಯಬ್ಬರ: ಉಡುಪಿಯಲ್ಲಿ ಶಾಲೆಗಳಿಗೆ ಜು.11ರಂದು ರಜೆ Read More »

ಕಾರವಾರ: ಶಾಲಾ ಕಾಲೇಜುಗಳಿಗೆ ರಜೆ ತಹಶಿಲ್ದಾರರ ವಿವೇಚನೆಗೆ

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ‌ ಮುಂದುವರೆಯುತ್ತಿದ್ದರೂ ಶಾಲಾ ಕಾಲೇಜುಗಳು ನಾಳೆಯಿಂದ ಪುನರಾರಂಭಗೊಳ್ಳುತ್ತವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಆದರೆ ವಿದ್ಯಾರ್ಥಿಗಳ‌‌ ಹಿತದೃಷ್ಟಿಯಿಂದ ಮಳೆಯ ಪರಿಣಾಮ ನೋಡಿಕೊಂಡು ರಜೆ ನೀಡುವ ಅಧಿಕಾರವನ್ನು ಆಯಾ ತಾಲೂಕುಗಳ ತಹಶಿಲ್ದಾರರ ವಿವೇಚನಗೆ ಬಿಡಲಾಗಿದೆ.

ಕಾರವಾರ: ಶಾಲಾ ಕಾಲೇಜುಗಳಿಗೆ ರಜೆ ತಹಶಿಲ್ದಾರರ ವಿವೇಚನೆಗೆ Read More »

ದ.ಕ ದಲ್ಲಿ ಮುಂದುವರಿದ ವರುಣಾರ್ಭಟ| ಅಂಗನವಾಡಿ, ಪ್ರಾಥಮಿಕ ಪ್ರೌಢ ಶಾಲೆಗಳಿಗೆ ಜು.11ರಂದು ರಜೆ ಘೋಷಣೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 11 ರಂದು‌ ಸೋಮವಾರ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನೇತ್ರಾವತಿ, ಕುಮಾರಧಾರಾ, ಗುರುಪುರ, ಗುಂಡ್ಯ‌ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ದ.ಕ ದಲ್ಲಿ ಮುಂದುವರಿದ ವರುಣಾರ್ಭಟ| ಅಂಗನವಾಡಿ, ಪ್ರಾಥಮಿಕ ಪ್ರೌಢ ಶಾಲೆಗಳಿಗೆ ಜು.11ರಂದು ರಜೆ ಘೋಷಣೆ Read More »

ಮೇಘಸ್ಫೋಟ ದಲ್ಲಿ ಸುಳ್ಯ ತಾಲೂಕಿನ 11 ಮಂದಿ ಯಾತ್ರಾರ್ಥಿಗಳು ಸೇಫ್

ಹಿಂದೂಗಳ ಪ್ರಸಿದ್ದ  ತೀರ್ಥ ಕ್ಷೇತ್ರ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಪವಿತ್ರ ಗುಹೆಯ ಬಳಿ ಮೇಘಸ್ಫೋಟ ಸಂಭವಿಸಿದ ಪರಿಣಾಮ ಅನೇಕರು ಸಾವು ನೋವಿನ ನಡುವೆ ಹೋರಾಡಿದ್ದಾರೆ. ಶುಕ್ರವಾರ( ಜು .8)ರ ಸಂಜೆ  5.30 ಸುಮಾರಿಗೆ ಈ ವೇಳೆಗೆ ಇಲ್ಲಿಗೆ ಯಾತ್ರೆ ಕೈಗೊಂಡಿದ್ದ ಸುಳ್ಯ ತಾಲೂಕಿನ 11  ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ದಕ್ಷಿಣ ಕಾಶ್ಮೀರದ ಅಮರನಾಥದ ಪವಿತ್ರ ಗುಹೆ ದೇಗುಲದ ಬಳಿ ಉಂಟಾದ ಹಠಾತ್‌  ಪ್ರವಾಹದಿಂದ ಈ ವರೆಗೆ ಒಟ್ಟು 16 ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಆದರೇ

ಮೇಘಸ್ಫೋಟ ದಲ್ಲಿ ಸುಳ್ಯ ತಾಲೂಕಿನ 11 ಮಂದಿ ಯಾತ್ರಾರ್ಥಿಗಳು ಸೇಫ್ Read More »

ಸುಳ್ಯ: ಕೊಚ್ಚಿಹೋದ ಏಕೈಕ ಮರದ ಪಾಲ; ದ್ವೀಪ ಸದೃಶವಾದ ಉಪ್ಪುಕಳ| ಅತಂತ್ರ ಸ್ಥಿತಿಯಲ್ಲಿ ಉಪ್ಪುಕಳ‌ ನಿವಾಸಿಗಳು

ಸಮಗ್ರ ನ್ಯೂಸ್: ನಿನ್ನೆ ತಡರಾತ್ರಿ(ಜು.9) ಸುರಿದ ಭಾರೀ ಮಳೆಯಿಂದಾಗಿ ಉಪ್ಪುಕಳ ಸಂಪರ್ಕಕ್ಕಾಗಿ ಇದ್ದ ಏಕೈಕ ಮರದ ಪಾಲ ನೀರುಪಾಲಾಗಿದ್ದು ಇಲ್ಲಿನ ನಿವಾಸಿಗಳು ದ್ವೀಪವಾಸಿಗಳಾಗಿದ್ದಾರೆ. ದ.ಕ ಜಿಲ್ಲೆಯ ‌ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸುಮಾರು 11 ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರವನ್ನು ಸಂಪರ್ಕಿಸಲು ಮರದ ಪಾಲವೇ ಗತಿಯಾಗಿತ್ತು. 49ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದು ಒಬ್ಬ ಅಂಗವಿಕಲರೂ ಇದ್ದಾರೆ. ಈ ಗ್ರಾಮವನ್ನು ಸಂಪರ್ಕಿಸುವ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರೇ ಮರದ ಪಾಲ ನಿರ್ಮಿಸಿಕೊಂಡು ಹೊಳೆ ದಾಟುತ್ತಾರೆ. ತುಂಬಿ

ಸುಳ್ಯ: ಕೊಚ್ಚಿಹೋದ ಏಕೈಕ ಮರದ ಪಾಲ; ದ್ವೀಪ ಸದೃಶವಾದ ಉಪ್ಪುಕಳ| ಅತಂತ್ರ ಸ್ಥಿತಿಯಲ್ಲಿ ಉಪ್ಪುಕಳ‌ ನಿವಾಸಿಗಳು Read More »

ಸುಳ್ಯ: ಮತ್ತೆ ಕಂಪಿಸಿದ ಭೂಮಿ| ಬೆಚ್ಚಿಬಿದ್ದ ನಾಗರೀಕರು

ಸಮಗ್ರ ನ್ಯೂಸ್: ಸುಳ್ಯ ಹಾಗೂ ಕೊಡಗು ಗಡಿ ಪ್ರದೇಶದ ಹಲವೆಡೆ ಇಂದು ಬೆಳಿಗ್ಗೆ 6.23ರ ಸುಮಾರಿಗೆ ಭೂಮಿ ಕಂಪಿಸಿದೆ. ಹಲವೆಡೆ ಹಲವು ರೀತಿಯಲ್ಲಿ ಇದರ ಪ್ರತಿಫಲನ ವ್ಯಕ್ತವಾಗಿದೆ. ಭೂಮಿಯೊಳಗಿನಿಂದ ಗುಡುಗಿನ ಶಬ್ದದಂತೆ ಕೇಳಿ ಬಂದು ಬಳಿಕ ಭೂಮಿ ಅಲುಗಾಡಿದ ಅನುಭವ ಆಯಿತು ಎಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ. ಸುಳ್ಯ, ಅರಂತೋಡು, ಸಂಪಾಜೆ, ಪೆರಾಜೆ, ಎಲಿಮಲೆ, ಮರ್ಕಂಜ, ಕೊಡಗು ಸಂಪಾಜೆ ಸೇರಿದಂತೆ ಹಲವು ಭಾಗಗಳಲ್ಲಿ ಈ ಅನುಭವ ಉಂಟಾಗಿದ್ದು ಎಂಟನೇ ಬಾರಿ ಭೂ ಕಂಪನ ದಾಖಲಾಗುತ್ತಿದೆ.

ಸುಳ್ಯ: ಮತ್ತೆ ಕಂಪಿಸಿದ ಭೂಮಿ| ಬೆಚ್ಚಿಬಿದ್ದ ನಾಗರೀಕರು Read More »

ಚಾಲಕನ ನಿಯಂತ್ರಣ ತಪ್ಪಿ ಆನೆಗುಂಡಿ ಚರಂಡಿಗೆ ವಾಲಿದ ಕೆಎಸ್ ಆರ್ ಟಿಸಿ ಬಸ್

ಸುಳ್ಯ ; ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿಸಿ ಬಸ್ ಚರಂಡಿಗೆ ವಾಲಿದ ಘಟನೆಯೊಂದು ಕನಕಮಜಲು ಗ್ರಾಮದ ಆನೆಗುಂಡಿ ಬಳಿ ನಡೆದಿದೆ ಪುತ್ತೂರು ನಿಂದ ಸುಳ್ಯದ ಕಡೆಗೆ ಚಲಿಸುತ್ತಿದ್ದ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಆನೆಗುಂಡಿ ರಸ್ತೆ ಬದಿಯ ಚರಂಡಿಗೆ ಇಳಿದಿದ್ದು, ಸದ್ಯ ಯಾವುದೇ ಅಪಾಯ ಸಂಭವಿಸಲಿಲ್ಲ

ಚಾಲಕನ ನಿಯಂತ್ರಣ ತಪ್ಪಿ ಆನೆಗುಂಡಿ ಚರಂಡಿಗೆ ವಾಲಿದ ಕೆಎಸ್ ಆರ್ ಟಿಸಿ ಬಸ್ Read More »