ಕರಾವಳಿ

ಅತಿಥಿಯಾಗಿ ವ್ಯಕ್ತಿಯ ಮನೆಗೆ ಬಂದಾತ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ಯಜಮಾನನಿಗೆ ಟ್ಯಾಪಿಂಗ್ ಕತ್ತಿಯಿಂದ ಇರಿದು ಪರಾರಿ

ಸಮಗ್ರ ನ್ಯೂಸ್ : ಅತಿಥಿಯಾಗಿ ವ್ಯಕ್ತಿಯ ಮನೆಗೆ ಬಂದಿದ್ದಾತ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಮನೆಯ ಯಜಮಾನನಿಗೆ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯೊಂದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು‌ ಎಂಬಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ತೋಟದ ಮಜಲು ನಿವಾಸಿ ಲೂಕೋಸ್ ಎಂದು ಗುರುತಿಸಲಾಗಿದೆ. ಕೇರಳ ಮೂಲದ ಲೂಕೋಸ್ ಎಂಬವರು ಎಂಟು ವರ್ಷಗಳ ಹಿಂದೆ ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು ಎಂಬಲ್ಲಿ ಜಾಗ ಖರೀದಿಸಿ ದಂಪತಿಗಳು ವಾಸವಾಗಿದ್ದರು. ಆದರೆ ಕಳೆದ ಎರಡು […]

ಅತಿಥಿಯಾಗಿ ವ್ಯಕ್ತಿಯ ಮನೆಗೆ ಬಂದಾತ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ಯಜಮಾನನಿಗೆ ಟ್ಯಾಪಿಂಗ್ ಕತ್ತಿಯಿಂದ ಇರಿದು ಪರಾರಿ Read More »

ಪುತ್ತೂರು: ಪೆರ್ಲಂಪಾಡಿಯಲ್ಲಿ ಕಾಲುಸಂಕ ನಿರ್ಮಿಸಿ ಬಡಕುಟುಂಬದ ಕೃಷಿಗೆ ಹಾನಿ| ಮನವಿಕೊಟ್ಟರೂ ಕೈಕಟ್ಟಿ ಕುಳಿತ ಪಿಡಿಒ| ಕಾಮಗಾರಿ ಸ್ಥಳ ಬದಲಾಯಿಸಿದ ಪಂಚಾಯತ್ ಸದಸ್ಯ..?

ಪುತ್ತೂರು: ಕಾಲುಸಂಕ ನಿರ್ಮಿಸಿ ಸ್ಥಳೀಯ ಬಡ ಕುಟುಂಬದವರ ಕೃಷಿಗೆ ಹಾನಿ ಮಾಡಿದ್ದಲ್ಲದೆ ಪರಿಹಾರ ಕೊಡುವುದಾಗಿ ಹೇಳಿಕೊಂಡು ವಂಚಿಸುತ್ತಿರುವ ಘಟನೆ ಪುತ್ತೂರು ತಾಲೂಕಿನ ಪೆರ್ಲಂಪಾಡಿ ಗ್ರಾಮದ ಪಾಂಬಾರು ಎಂಬಲ್ಲಿ ನಡೆದಿದೆ. ಪಾಂಬಾರು ನಿವಾಸಿಯಾಗಿರುವ ಬಾಬು ಗೌಡರ ಕುಟುಂಬ ಈ ಸಮಸ್ಯೆಗೆ ಒಳಗಾದವರು. ಇವರು ಸರಿಸುಮಾರು 50 ವರ್ಷಗಳಿಂದ ಆ ಜಾಗದಲ್ಲಿ ವಾಸಮಾಡುತ್ತಿದ್ದು, ಸದ್ಯ ಬಾಬು ಗೌಡ ಮತ್ತು ಅವರ ಪತ್ನಿ ಹಾಗು ಒರ್ವ ಮಗ ವಸಂತ ಕುಮಾರ್ ವಾಸಿಸುತ್ತಿದ್ದಾರೆ. ಇವರಿಗೆ ವಯಸ್ಸಾಗಿದ್ದು ಮಗ ವಸಂತ್ ಕುಮಾರ್ ಮನೆಯ ಎಲ್ಲಾ

ಪುತ್ತೂರು: ಪೆರ್ಲಂಪಾಡಿಯಲ್ಲಿ ಕಾಲುಸಂಕ ನಿರ್ಮಿಸಿ ಬಡಕುಟುಂಬದ ಕೃಷಿಗೆ ಹಾನಿ| ಮನವಿಕೊಟ್ಟರೂ ಕೈಕಟ್ಟಿ ಕುಳಿತ ಪಿಡಿಒ| ಕಾಮಗಾರಿ ಸ್ಥಳ ಬದಲಾಯಿಸಿದ ಪಂಚಾಯತ್ ಸದಸ್ಯ..? Read More »

ಸುಳ್ಯ: ಮರ್ಕಂಜದ ಅಳವುಪಾರೆ ಗಣಿಗಾರಿಕೆ ತಾತ್ಕಾಲಿಕ ಸ್ಥಗಿತ| ಗ್ರಾಮಸ್ಥರ ಹೋರಾಟಕ್ಕೆ ಸಿಗಬಹುದೇ ಶಾಶ್ವತ ಗೆಲುವು?

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ‌ ತಾಲೂಕಿನ ಮರ್ಕಂಜದ ಅಳವುಪಾರೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ತಾತ್ಕಾಲಿಕ ಬಂದ್ ಮಾಡಿರುವುದಾಗಿ ವರದಿಯಾಗಿದೆ. ಕೆಲ ದಿನಗಳಿಂದ ಉಂಟಾಗುತ್ತಿರುವ ಭೂಕಂಪನದಿಂದ ಭಯಗೊಂಡಿರುವ ಮರ್ಕಂಜ ಗ್ರಾಮಸ್ಥರು ಇದಕ್ಕೆ ಗಣಿಗಾರಿಕೆಯ ಪ್ರಭಾವ ಕೂಡ ಇದೆಯೆಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ವೇಳೆ ಗಣಿ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ. ಹಾಗಾಗಿ ಅದರ ವರದಿ ಬರುವ ತನಕ ಗಣಿಯನ್ನು ಬಂದ್ ಮಾಡಿಸುವಂತೆ ಗ್ರಾಮಸ್ಥರು ಪ್ರತಿಭಟನೆಯ ನಡೆಸಿದ್ದರು. ಈ ಪ್ರತಿಭಟನೆಗೆ ಅಂಬೇಡ್ಕರ್ ರಕ್ಷಣೆ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಂದರ ಪಾಟಜೆ,

ಸುಳ್ಯ: ಮರ್ಕಂಜದ ಅಳವುಪಾರೆ ಗಣಿಗಾರಿಕೆ ತಾತ್ಕಾಲಿಕ ಸ್ಥಗಿತ| ಗ್ರಾಮಸ್ಥರ ಹೋರಾಟಕ್ಕೆ ಸಿಗಬಹುದೇ ಶಾಶ್ವತ ಗೆಲುವು? Read More »

ದಿನದಲ್ಲಿ ಎರಡನೇ ಕಂಪಿಸಿದ ಭೂಮಿ| ಚೆಂಬು, ಸಂಪಾಜೆಯಲ್ಲಿ‌ ಭಾರೀ ನಡುಕ

ಸಮಗ್ರ ನ್ಯೂಸ್: ಕೊಡಗಿನ‌ ಚೆಂಬು, ಸಂಪಾಜೆ ಸೇರಿದಂತೆ ದಕ್ಷಿಣಕನ್ನಡದ ಕೆಲವು ಕಡೆಗೆ ಇದೀಗ 8.15 ಕ್ಕೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ಜನರು ಮತ್ತೆ ಮತ್ತೆ ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ದಿನ ಸದ್ದು ಮತ್ತು‌ ಭೂಮಿ ಕಂಪಿಸುತ್ತಿರುವುದರ ಹಿಂದಿನ ವಾಸ್ತವ ವಿಚಾರಗಳ ಬಗ್ಗೆ ತಕ್ಷಣ ಸೂಕ್ತ ಅಧ್ಯಯನ ನಡೆಯಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ದಿನದಲ್ಲಿ ಎರಡನೇ ಕಂಪಿಸಿದ ಭೂಮಿ| ಚೆಂಬು, ಸಂಪಾಜೆಯಲ್ಲಿ‌ ಭಾರೀ ನಡುಕ Read More »

ಐವರ್ನಾಡು; ಪ್ರಿಡ್ಜ್ ನಿಂದ ಶಾಕ್ ಹೊಡೆದು 4 ವರ್ಷದ ಬಾಲಕ ಮೃತ್ಯು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಪ್ರಿಡ್ಜ್ ನಿಂದ ಶಾಕ್ ಹೊಡೆದು 4 ವರ್ಷದ ಬಾಲಕ ಮೃತಪಟ್ಟ ಘಟನೆಯೊಂದು ಜು.2 ರಂದು ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ ಮೃತ ಬಾಲಕ. ಈತ ಪ್ರಿಡ್ಜನ್ನು ಮುಟ್ಟಿದಾಗ ಶಾಕ್ ಹೊಡೆದಿದೆ ಎನ್ನಲಾಗಿದೆ

ಐವರ್ನಾಡು; ಪ್ರಿಡ್ಜ್ ನಿಂದ ಶಾಕ್ ಹೊಡೆದು 4 ವರ್ಷದ ಬಾಲಕ ಮೃತ್ಯು Read More »

ಬಂಟ್ವಾಳ; ಕಾರುಗಳ ನಡುವೆ ಅಪಘಾತ; ಚಾಲಕನಿಗೆ  ಗಂಭೀರ ಗಾಯ

ಸಮಗ್ರ ನ್ಯೂಸ್ : ಎರಡು ಕಾರುಗಳ ನಡುವೆ ಅಪಘಾತ ನಡೆದ ಕಾರಣ ಕಾರು ಚಾಲಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆಯೊಂದು ಬಿ.ಸಿ‌.ರೋಡ್ ಪುಂಜಾಲಕಟ್ಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ನಯನಾಡು ನಿವಾಸಿ ಬ್ಯಾಪ್ಟಿಸ್ ಲೋಬೋ ಅವರ ಪುತ್ರ ಕಾರು ಚಾಲಕ ರಾಕ್ಲಿನ್ ಲೋಬೋ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವೂರು ಸಮೀಪ ಬಡಗುಂಡಿ ಸಮೀಪ ರಿಟ್ಜ್ ಹಾಗೂ ಎರಿಟಿಗಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಎರಿಟಿಗ ಕಾರಿನಲ್ಲಿ ಇತರ ಪ್ರಯಾಣಿಕರಿಗೂ ಗಾಯಗಳಾಗಿದೆ

ಬಂಟ್ವಾಳ; ಕಾರುಗಳ ನಡುವೆ ಅಪಘಾತ; ಚಾಲಕನಿಗೆ  ಗಂಭೀರ ಗಾಯ Read More »

ಕರಾವಳಿಯಲ್ಲಿ ಪ್ರವಾಹದ ಭೀತಿ ಇದ್ದರೂ ಶಾಸಕರ ಲೆಹ್ ಲಡಾಖ್ ಪ್ರವಾಸ…!!

ಸಮಗ್ರ ನ್ಯೂಸ್: ಮಳೆಯಿಂದಾಗಿ ಕರಾವಳಿ ಸೇರಿದಂತೆ ಕರ್ನಾಟಕದ ಹಲವು ಭಾಗಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಈ ಸಂದರ್ಭ , ವಿಧಾನಸಭೆಯ ಭರವಸೆ ಸಮಿತಿಗೆ ಸೇರಿದ ಶಾಸಕರ ಗುಂಪು ಚುನಾಯಿತರೂ ಇಲ್ಲದ ಲೇಹ್ ಮತ್ತು ಲಡಾಖ್‌ಗೆ ‘ಅಧ್ಯಯನ ಪ್ರವಾಸ’ ಕೈಗೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ. ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದ ನಿಯೋಗ ಗುರುವಾರ 6 ದಿನಗಳ ಲೇಹ್ ಮತ್ತು ಲಡಾಖ್ ಪ್ರವಾಸಕ್ಕೆ ತೆರಳಿದೆ. ಇಲ್ಲಿ ಪ್ರಶ್ನಾರ್ಹವಾದದ್ದು ಅವರ ಭೇಟಿಯ ಸ್ಥಳ. ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿದ್ದು, ಇದು ಕೇಂದ್ರ ನೇಮಿತ

ಕರಾವಳಿಯಲ್ಲಿ ಪ್ರವಾಹದ ಭೀತಿ ಇದ್ದರೂ ಶಾಸಕರ ಲೆಹ್ ಲಡಾಖ್ ಪ್ರವಾಸ…!! Read More »

ಮತ್ತೆ ಭೂಕಂಪ; ನಡುಗಿದ ಕಲ್ಲುಗುಂಡಿ, ಗೂನಡ್ಕ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಗಡಿಭಾಗದಲ್ಲಿ ಭೂಕಂಪನ ಮತ್ತೆ ಮುಂದುವರಿದಿದ್ದು, ಇಂದು ಮಧ್ಯಾಹ್ನ ‌1.21 ರ ಸುಮಾರಿಗೆ ಭೂಮಿ ನಡುಗಿದೆ ಭಾರೀ ಶಬ್ದದೊಂದಿಗೆ 6ನೇ ಬಾರಿ ಭೂಮಿ ಕಂಪಿಸಿದ್ದು, ಕಲ್ಲುಗುಂಡಿ , ಸಂಪಾಜೆ, ಗೂನಡ್ಕ ಭಾಗಗಳಲ್ಲಿ ಭೂಮಿ ನಡುಗಿದೆ. ಇದರಿಂದ ಜನ ಭೀತಿಗೊಂಡಿದ್ದಾರೆ. ಒಮ್ಮೆ ಕಂಪನವಾದಲ್ಲಿ ಅದರ ಪರಿಣಾಮ ಕೆಲವು ದಿನಗಳವರೆಗೆ ಇರುತ್ತದೆ. ಭೂಮಿಯ ಕೆಳಭಾಗದಲ್ಲಿ ನಡೆಯುತ್ತಿರುವ ನೈಸರ್ಗಿಕ ವಿದ್ಯಮಾನಗಳ ಪರಿಣಾಮ ಸಣ್ಣನೆಯ ಕಂಪನಗಳು ಸಂಭವಿಸಬಹುದು. 🛑 ಭೂಸ್ತರಭಂಗದಿಂದ ಕೆಲವು ದಿನ ಈ ನಡುಕ, ಕಂಪನಗಳು ನಡೆಯುವ

ಮತ್ತೆ ಭೂಕಂಪ; ನಡುಗಿದ ಕಲ್ಲುಗುಂಡಿ, ಗೂನಡ್ಕ Read More »

ಜುಲೈ 10 ಆದಿತ್ಯವಾರ ಈದುಲ್ ಅದ್’ಹಾ

ಸಮಗ್ರ ನ್ಯೂಸ್: ಗುರುವಾರ ರಾತ್ರಿ  ದ್ಸುಲ್ ಹಿಜ್ಜಃ  ತಿಂಗಳ  ಚಂದ್ರ  ದರ್ಶನವಾದ ಖಚಿತ ಮಾಹಿತಿಯ  ಹಿನ್ನೆಲೆಯಲ್ಲಿ  ಜುಲೈ 01  ಶುಕ್ರವಾರ  ದ್ಸುಲ್ ಹಿಜ್ಜ  ತಿಂಗಳ ಚಾಂದ್ ಒಂದು ಆಗಿದೆ,  ಅದರಂತೆ  ಜುಲೈ 09  ಶನಿವಾರ   ಅರಫಾ  ದಿನ  ಮತ್ತು ಜುಲೈ 10,  ಆದಿತ್ಯವಾರ  ಈದುಲ್ ಅದ್’ಹಾ  ( ಬೆಲಿಯೆ ಪೆರ್ನಾಲ್ )  ಆಚರಿಸಲಾಗುತ್ತದೆ  ಎಂದು ದ.ಕ  ಜಿಲ್ಲೆಯ ಉಳ್ಳಾಲ ಹಾಗು ನೂರಾರು ಮೊಹಲ್ಲಾಗಳ ಸಂಯುಕ್ತ  ಜಮಾಅತ್  ಖಾಝಿ  ಖುರ್ರತುಸ್ಸಾದಾತ್  ಅಸ್ಸಯ್ಯಿದ್  ಫಝಲ್  ಕೋಯಮ್ಮ  ಮದನಿ  ಅಲ್ 

ಜುಲೈ 10 ಆದಿತ್ಯವಾರ ಈದುಲ್ ಅದ್’ಹಾ Read More »

ಸುಳ್ಯ; ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ

ಸುಳ್ಯ : ತಾಲೂಕಿನ 17 ವರ್ಷದ ಬಾಲಕಿಯ ಮೇಲೆ ಆಕೆಯ ಸಂಬಂಧಿಯೇ ಅತ್ಯಾಚಾರ ಎಸಗಿ ಗರ್ಭಿಣಿಯಾದ ಘಟನೆಯೊಂದು ನಡೆದಿದೆ. ಆರೋಪಿಯನ್ನು ಪುತ್ತೂರು ತಾಲೂಕಿನ ಅರಿಯಡ್ಕ ನಿವಾಸಿ ಸಂದೀಪ್ (22) ಎಂದು ಗುರುತಿಸಲಾಗಿದೆ. ಆದರೆ, ಅಕ್ಕ ಸಂತ್ರಸ್ತೆಯ ಚಟುವಟಿಕೆಗಳ ಬಗ್ಗೆ ಅನುಮಾನಗೊಂಡು ಜೂನ್ 22 ರಂದು ಹತ್ತಿರದ ಆಸ್ಪತ್ರೆಗೆ ಸ್ಕ್ಯಾನ್ ಮಾಡಲು ಕರೆದೊಯ್ದರು. ಅಪ್ರಾಪ್ತ ಬಾಲಕಿ ಗರ್ಭಿಣಿ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಳ್ಯ; ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ Read More »