ಸೌಜನ್ಯ ಪ್ರಕರಣ ಮರುತನಿಖೆ ನಡೆಸಿ, ಆರೋಪಿ ನಾನೇ ಆದರೂ ಸರಿ ಗಲ್ಲಿಗೇರಿಸಿ| ಸುಳ್ಯದಲ್ಲಿ ಘರ್ಜಿಸಿದ ಮಹೇಶ್ ಶೆಟ್ಟಿ ತಿಮರೋಡಿ
ಸಮಗ್ರ ನ್ಯೂಸ್: ‘ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಮಾಡುವವರನ್ನು ಅನುಮಾನಿಸುವ, ಹೀಯಾಳಿಸುವ ಬದಲು ಪ್ರಕರಣವನ್ನು ಮರುತನಿಖೆ ನಡೆಸಿ ಅತ್ಯಾಚಾರ ಮಾಡಿದವರನ್ನು ಶಿಕ್ಷೆಗೆ ಒಳಪಡಿಸಿ. ನಾನೇ ಆರೋಪಿಯಾಗಿದ್ದರೂ ಸರಿ ಗಲ್ಲಿಗೇರಿಸಿ’ ಎಂದು ರಾ.ಹಿಂ.ಜಾ.ವೇದಿಕೆಯ ಸಂಚಾಲಕ, ಹಾಗೂ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹಿಸಿದ್ದಾರೆ. ಸುಳ್ಯದ ನಿಂತಿಕಲ್ಲಿನಿಂದ ಜಾಥಾದೊಂದಿಗೆ ಆಗಮಿಸಿ ಸುಳ್ಯ ಬಸ್ ನಿಲ್ದಾಣ ಬಳಿ ನಡೆದ ಪ್ರತಿಭಟನಾ ಸಭೆ ಉದ್ದೇಶಿಸಿಅವರು ಮಾತನಾಡಿದರು. ‘ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೊಡ್ಡವರ ಹೆಸರೆತ್ತಿದರೆ ನಾಚಿಕೆಯಾಗುತ್ತದೆ. ಹಾಗಾದ್ರೆ ಕಳೆದ ಹನ್ನೊಂದು ವರ್ಷಗಳಿಂದ ಸೌಜನ್ಯ










