ಕರಾವಳಿ

ಐವರ್ನಾಡು: ಹೇರ್ ಟ್ರೆಂಡ್ ಬಾರ್ಬರ್ ಶಾಪ್ ಶುಭಾರಂಭ

ಸಮಗ್ರ ನ್ಯೂಸ್: ಐವರ್ನಾಡು ಗ್ರಾಮದ ಜನನಿ ಕಾಂಪ್ಲೆಕ್ಸ್ ನಲ್ಲಿ ಜು.30 ರಂದು ಹೇರ್ ಟ್ರೆಂಡ್ ಬಾರ್ಬರ್ ಶಾಪ್ ಶುಭಾರಂಭಗೊಂಡಿದೆ. ಈ ಸಂದರ್ಭದಲ್ಲಿ ರಿಬ್ಬನ್ ಕಟ್ ಮಾಡಿದ ಸತೀಶ್ ಕುಮಾರ್, ಜೀವನ್ ಜಬಳೆ, ರಾಜೇಂದ್ರ, ಮೋಹನ್ ಸುಂದರ್, ಜೋಸೆಫ್ , ಯಕ್ಷಿತ್, ಚರಣ್ ಜಬಳೆ, ವಾಸುದೇವ ಬೊಳುಬೈಲು, ಅಬ್ದುಲ್ಲಾ ಪರ್ಲಿಕಜೆ, ರಂಜಾನ್ ಪರ್ಲಿಕಜೆ, ಮುಝಮಿಲ್ ಮೊದಲಾದವರು ಉಪಸ್ಥಿತರಿದ್ದರು.

ಐವರ್ನಾಡು: ಹೇರ್ ಟ್ರೆಂಡ್ ಬಾರ್ಬರ್ ಶಾಪ್ ಶುಭಾರಂಭ Read More »

ಚೆನ್ನಮಣೆಯೆಂಬ ಚದುರಂಗದಾಟ ಮರೆಯಾಯಿತೇ…!!!

ಸಮಗ್ರ ವಿಶೇಷ: ತುಳುನಾಡಿನ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯ ಕಟ್ಟು ಕಟ್ಟಲೆಗಳು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಅದು ನಮ್ಮ ಹೆಮ್ಮೆ ಕೂಡ ಹೌದು. ಪ್ರತಿದಿನ ಪ್ರತಿಕ್ಷಣ ಸಂಭ್ರಮದ ವಾತಾವರಣ. ಹಚ್ಚ ಹಸಿರಿನ ನಡುವಿನ ಪರಿಸರದಲ್ಲಿ ಜೀವಿಸುವುದು ಮತ್ತಷ್ಟು ಹುಮ್ಮಸು ಮತ್ತು ಆನಂದ. ಇನ್ನು ಗ್ರಾಮೀಣ ಸೊಗಡಿನ ಆಟಗಳು ಮನಸ್ಸಿನ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಅದರಲ್ಲೂ ಚೆನ್ನೆಮನೆ ಆಟದ ಸೊಗಡಿನ ವಿಶೇಷತೆ ಬಹಳಷ್ಟಿದೆ. ಚೆನ್ನೆಮನೆ ಅಥವಾ ಚೆನ್ನೆದ ಮನೆ ತುಳುನಾಡು ಪ್ರದೇಶದಲ್ಲಿ ಆಟಿ ಮಾಸದಲ್ಲಿ ಆಡುವ ಜನಪ್ರಿಯ ಒಳಾಂಗಣ ಆಟವಾಗಿದೆ.

ಚೆನ್ನಮಣೆಯೆಂಬ ಚದುರಂಗದಾಟ ಮರೆಯಾಯಿತೇ…!!! Read More »

ಪುತ್ತೂರು: ಸವಣೂರು ಸೀತಾರಾಮ ರೈ ಸಾರಥ್ಯದಲ್ಲಿ ಆಟಿಡೊಂಜಿ ದಿನ| “ತುಳುವೆರ ಆಟಿ” ಲೇಖನ ಬಿಡುಗಡೆ

ಸಮಗ್ರ ನ್ಯೂಸ್: ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತರಾಮಯ್ಯ ರೈ ಅವರ ಅಧ್ಯಕ್ಷತೆಯಲ್ಲಿ ಆಟಿಡೊಂಜಿ ದಿನ ಜು. 29ರಂದು ಪುತ್ತೂರಿನ ಪ್ರಶಾಂತ್ ಮಹಲ್ ನ ಸನ್ನಿಧಿ ಸಭಾ ಭವನದಲ್ಲಿ ನಡೆಯಿತು. ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ, ಆಟಿಯ ಆಟಗಳು ಮತ್ತು ಸಭಾ ಕಾರ್ಯಕ್ರಮದ ಅಧ್ಯಕ್ಷರಾದ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತರಾಮಯ್ಯ ರೈ ಪ್ರಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕನ್ನಡ ಪ್ರಾಧ್ಯಾಪಕ ಹಾಗೂ ಅಂಕಣಕಾರ ನರೇಂದ್ರ ರೈ ದೇರ್ಲ ಅವರು

ಪುತ್ತೂರು: ಸವಣೂರು ಸೀತಾರಾಮ ರೈ ಸಾರಥ್ಯದಲ್ಲಿ ಆಟಿಡೊಂಜಿ ದಿನ| “ತುಳುವೆರ ಆಟಿ” ಲೇಖನ ಬಿಡುಗಡೆ Read More »

ಸುಳ್ಯ: ಸೌಜನ್ಯ ಹತ್ಯೆಯ ಘಟನೆಯ ಹಿಂದೆ ಯಾರೇ ಪ್ರಭಾವಿಗಳಿದ್ದರೂ ಕಾನೂನಾತ್ಮಕ ಶಿಕ್ಷೆಯಾಗಲಿ – ಭಜನಾ ಪರಿಷತ್ ಆಗ್ರಹ

ಸಮಗ್ರ ನ್ಯೂಸ್: ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣದ ಹಿಂದೆ ಎಷ್ಟೇ ದೊಡ್ಡ ಪ್ರಭಾವಿಗಳಿದ್ದರೂ ಕಾನೂನಾತ್ಮಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿರುವ ಸುಳ್ಯ ತಾಲೂಕು ಭಜನಾ ಪರಿಷತ್. ಈ ವಿಚಾರದಲ್ಲಿ ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಹಾಗೂ ಖಾವಂದರ ಹೆಸರನ್ನು ಎಳೆದು ಅಪಪ್ರಚಾರ ಮಾಡುವುದನ್ನು ನಾವು ಸಹಿಸುವುದಿಲ್ಲ. ಇದು ಹೀಗೆ ಮುಂದುವರಿದರೆ ನಾವು ಬೃಹತ್ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದ್ದಾರೆ. ಜು.29 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಭಜನಾ ಪರಿಷತ್ ಅಧ್ಯಕ್ಷ

ಸುಳ್ಯ: ಸೌಜನ್ಯ ಹತ್ಯೆಯ ಘಟನೆಯ ಹಿಂದೆ ಯಾರೇ ಪ್ರಭಾವಿಗಳಿದ್ದರೂ ಕಾನೂನಾತ್ಮಕ ಶಿಕ್ಷೆಯಾಗಲಿ – ಭಜನಾ ಪರಿಷತ್ ಆಗ್ರಹ Read More »

ಕುಕ್ಕೆ ದೇವಳಕ್ಕೆ ನಿಯಮ ಬಾಹಿರ ದಿನಸಿ ಖರೀದಿಯ ಆರೋಪ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕಳೆದ ಮೂರು ವರ್ಷಗಳಿಂದ ದೇವಳಕ್ಕೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ಯಾವುದೇ ಟೆಂಡರ್ ನಡೆಸದೇ ನಿಯಮ ಬಾಹಿರವಾಗಿ ಮಂಗಳೂರಿನಿ ಜನತಾ ಬಜಾರ್‌ನಿಂದ ಖರೀದಿಸಲಾಗಿದ್ದು, ಇದರಿಂದ ಪ್ರತೀ ವರ್ಷ ಸುಮಾರು ೫ ಕೋಟಿ ಹೆಚ್ಚುವರಿ ಪಾವತಿಯಾಗಿ ನಷ್ಟ ಉಂಟಾಗುತ್ತಿದೆ ಎಂದು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್‌ಇಂಜಾಡಿ ಆರೋಪಿಸಿದರು. ಅವರು ಸುಬ್ರಹ್ಮಣ್ಯದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಟೆಂಡರ್ ನಡೆಸದೇ ಸಾಮಾಗ್ರಿ ಖರೀದಿ ಬಗ್ಗೆ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಅಧಿವೇಶನದಲ್ಲಿ

ಕುಕ್ಕೆ ದೇವಳಕ್ಕೆ ನಿಯಮ ಬಾಹಿರ ದಿನಸಿ ಖರೀದಿಯ ಆರೋಪ Read More »

ಕಡಬ:ರಸ್ತೆ ಸಂಪರ್ಕ ಇಲ್ಲದೆ ಸಮಸ್ಯೆ; ಅನಾರೋಗ್ಯ ಪೀಡಿತ ಮಹಿಳೆಯನ್ನು ಹೊತ್ತುಯ್ಯಬೇಕಾದ ಅನಿವಾರ್ಯತೆ !

ಸಮಗ್ರ ನ್ಯೂಸ್: ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯೋರ್ವರ ಮನೆಗೆ ಹೋಗಲು ಸಮರ್ಪಕ ರಸ್ತೆ ಇಲ್ಲದೇ ಇರುವುದರಿಂದ ಮಹಿಳೆಯನ್ನು ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಪ್ರಕರಣವೊಂದು ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ. ಇಚ್ಲಂಪಾಡಿ ಗ್ರಾಮದ ಕೆರ್ನಡ್ಕ ನಿವಾಸಿ ಕೆ.ಗೋಪಾಲನ್ ಎಂಬವರ ಪತ್ನಿ ಸಾವಿತ್ರಿ(69) ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ಹೊತ್ತುಕೊಂಡೇ ಮನೆಯವರು ಆಸ್ಪತ್ರೆಗೆ ಸಾಗಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೊರಮೇರು ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿಯಾಗಿರುವ ಸಾವಿತ್ರಿ ಅವರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಪುತ್ತೂರಿನ ಸಿಟಿ ಆಸ್ಪತ್ರೆಗೆ ದಿನ ಬಿಟ್ಟು ದಿನ

ಕಡಬ:ರಸ್ತೆ ಸಂಪರ್ಕ ಇಲ್ಲದೆ ಸಮಸ್ಯೆ; ಅನಾರೋಗ್ಯ ಪೀಡಿತ ಮಹಿಳೆಯನ್ನು ಹೊತ್ತುಯ್ಯಬೇಕಾದ ಅನಿವಾರ್ಯತೆ ! Read More »

ಬಂಟ್ವಾಳ: ಪೊಲೀಸರ ಮೇಲೆಯೇ ನೈತಿಕ ಪೊಲೀಸ್ ಗಿರಿ; ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಅವಾಚ್ಯ ಪದಗಳಿಂದ ಬೈದು, ಅವರ ಪತ್ನಿ ಜತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ತುಂಬೆ ನಿವಾಸಿಗಳಾದ ಮನೀಶ್ ಮತ್ತು ಮಂಜುನಾಥ್ ಆರೋಪಿಗಳು. ‘ಪೊಲೀಸ್‌ ಹಾಗೂ ಅವರ ಜೊತೆಗಿದ್ದ ಮಹಿಳೆಯರು ಬೇರೆಬೇರೆ ಧರ್ಮಕ್ಕೆ ಸೇರಿದವರಾಗಿರಬಹುದು ಎಂದು ಭಾವಿಸಿ, ಆರೋಪಿಗಳು ವಿಚಾರಿಸಿರುವ ಸಾಧ್ಯತೆ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗುರುವಾರ ರಾತ್ರಿ ಪೊಲೀಸ್ ಸಿಬ್ಬಂದಿ ಕುಮಾರ್ ಅವರು, ಪತ್ನಿ ಮತ್ತು ನಾದಿನಿ

ಬಂಟ್ವಾಳ: ಪೊಲೀಸರ ಮೇಲೆಯೇ ನೈತಿಕ ಪೊಲೀಸ್ ಗಿರಿ; ಆರೋಪಿಗಳ ಬಂಧನ Read More »

ಸೈನ್ಯ ಸಮಾಜದಲ್ಲಿ ನನ್ನನ್ನು ಗೌರವಿಸಲ್ಪಡುತ್ತಿದೆ: ನಿವೃತ್ತ ಯೋಧ ಉಮೇಶ್ ಕೈರಂಗಳ

ಸಮಗ್ರ ನ್ಯೂಸ್: ಸೇನೆಗೆ ಸೇರಬೇಕು ಎಂಬ ಆಕಾಂಕ್ಷೆ ಮೊಳಕೆಯೊಡೆದದ್ದು ನನ್ನ ಪ್ರೌಢಶಾಲಾ ದಿನಗಳಲ್ಲಿ. ಅಂದು ತರಗತಿಯಲ್ಲಿ ಅಧ್ಯಾಪಕರು ಸೇನೆಗೆ ಸೇರುವುದರಿಂದ ಆಗುವ ಪ್ರಯೋಜನಗಳು ಮತ್ತು ಗೌರವಗಳ ಬಗ್ಗೆ ವಿವರಿಸಿದ್ದು ಮತ್ತು ಸೇನೆಗೆ ಸೇರಿ ಗೌರವ ಪಡೆಯುತ್ತಿದ್ದ ನನ್ನ ಸಂಬಂಧಿಗಳನ್ನು ನೋಡಿ ನಾನು ಸೈನ್ಯವನ್ನು ಸೇರಿದೆ. ಇದರಿಂದಾಗಿ ನಾನು ಇವತ್ತು ಸಮಾಜದಿಂದ ಗೌರವಿಸಲ್ಪಡುತ್ತಿದ್ದೇನೆ ಎಂದು ನಿವೃತ್ತ ಯೋಧ ಉಮೇಶ್ ಕೈರಂಗಳ ಅವರು ಹೇಳಿದರು. ಅವರು ಜೇಸಿಐ ಜೋಡುಮಾರ್ಗ ನೇತ್ರಾವತಿಯ ಜ್ಯೂನಿಯರ್ ಜೇಸಿ ವಿಭಾಗ, ಅಳುಪ ಸಮಾಜ ವಿಜ್ಞಾನ ಸಂಘ

ಸೈನ್ಯ ಸಮಾಜದಲ್ಲಿ ನನ್ನನ್ನು ಗೌರವಿಸಲ್ಪಡುತ್ತಿದೆ: ನಿವೃತ್ತ ಯೋಧ ಉಮೇಶ್ ಕೈರಂಗಳ Read More »

ಉಪವಲಯ ಅರಣ್ಯಾಧಿಕಾರಿ ಸುಭಾಷ್ ಬಿ. ನಿಧನ

ಸಮಗ್ರ ನ್ಯೂಸ್: ಕಡಬ ತಾಲೂಕಿನ ನೆಟ್ಟಣದ ಕೇಂದ್ರೀಯ ಮರಗಳ ಸಂಗ್ರಹಾಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ಮೂಲತಃ ಕಾಸರಗೋಡು ಸಮೀಪದ ಹೊಸದುರ್ಗ ನಿವಾಸಿ ರಾಮನಾಥ ಅರಳೀಕಟ್ಟೆ ಅವರ ಪುತ್ರ ಸುಭಾಷ್ ಬಿ. (55) ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿಯನ್ನು ಅಗಲಿದ್ದಾರೆ. ಸುಭಾಷ್ ಅವರು 1990ರಲ್ಲಿ ಬೆಳ್ತಂಗಡಿಯಲ್ಲಿ ಅರಣ್ಯ ವೀಕ್ಷಕರಾಗಿ ಇಲಾಖಾ ಸೇವೆಗೆ ಸೇರಿದ್ದರು. ಬೆಳ್ತಂಗಡಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ಬಳಿಕ 2021ರಲ್ಲಿ ಉಪ

ಉಪವಲಯ ಅರಣ್ಯಾಧಿಕಾರಿ ಸುಭಾಷ್ ಬಿ. ನಿಧನ Read More »

ಐವರ್ನಾಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ

ಸಮಗ್ರ ನ್ಯೂಸ್:ದರ್ಖಾಸ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನದೀಪ ಶಿಕ್ಷಕರ ನೇಮಕಾತಿ ಮಂಜೂರಾಗಿದ್ದು, ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣ ಅವರು ಶಿಕ್ಷಕರ ಮಂಜೂರಾತಿ ಪತ್ರವನ್ನು ಜ್ಞಾನದೀಪ ಶಿಕ್ಷಕಿಯಾದ ಶಮೀಮಾರವರಿಗೆ ವಿತರಿಸಿದರು. ಈ ಸಂಧರ್ಭ ಶಾಲೆಯ ಮುಖ್ಯ ಗುರುಗಳಾದ ಪಲ್ಲವಿ, ಹಾಗೂ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಯಶೋಧರವರು ಉಪಸ್ಥಿತರಿದ್ದರು.

ಐವರ್ನಾಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ Read More »