ಕರಾವಳಿ

ಸುಳ್ಯ:ಗಾಂಧಿನಗರ ಮದರಸದಲ್ಲಿ ಸ್ವಾತoತ್ರ್ಯ ಸಂಭ್ರಮ| ಸಹೋದರತೆ, ಸಮಾನತೆಯ ಸಂವಿಧಾನದ ಆಶಯದಡಿಯಲ್ಲಿ ದೇಶ ಇಂದಿಗೂ ಸುಭದ್ರ:ಕೆ.ಎಂ.ಮುಸ್ತಫ

ಸಮಗ್ರ ನ್ಯೂಸ್:ಗಾಂಧಿನಗರ ಜುಮ್ಮಾ ಮಸ್ಜಿದ್, ಮುನವ್ವಿರುಲ್ ಇಸ್ಲಾಂ ಮದರಸ ಆಶ್ರಯದಲ್ಲಿ 77ನೇ ಸ್ವಾತಂತ್ರ ದಿನಾಚರಣೆ ಮದರಸ ವಠಾರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ ಧ್ವಜಾರೋಹಣ ಮಾಡಿ ಮಾತನಾಡಿದರು. ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಮಾತನಾಡಿ ಇಸ್ಲಾಂ ಧರ್ಮಗಳ ತಿರುಳನ್ನು ಪರಸ್ಪರ ಅರಿತರೆ ಸೌಹಾರ್ದತೆಗೆ ಭದ್ರ ಬುನಾದಿ ಎಂದರು. ಈ ಸಂಧರ್ಭದಲ್ಲಿ ಮದರಸದ ಸದರ್ ಉಸ್ತಾದ್ ಇಬ್ರಾಹಿಂ ಸಖಾಫಿ ಪುಂಡೂರ್, ಜಮಾಅತ್ ಆಡಳಿತ ಸಮಿತಿ ಉಪಾಧ್ಯಕ್ಷ ಹಾಜಿ […]

ಸುಳ್ಯ:ಗಾಂಧಿನಗರ ಮದರಸದಲ್ಲಿ ಸ್ವಾತoತ್ರ್ಯ ಸಂಭ್ರಮ| ಸಹೋದರತೆ, ಸಮಾನತೆಯ ಸಂವಿಧಾನದ ಆಶಯದಡಿಯಲ್ಲಿ ದೇಶ ಇಂದಿಗೂ ಸುಭದ್ರ:ಕೆ.ಎಂ.ಮುಸ್ತಫ Read More »

ರಾಷ್ಟ್ರಧ್ವಜ ಸಾರ್ವಭೌಮತ್ವದ ಸಂಕೇತ:ಡಾ|| ಚೂಂತಾರು

ಸಮಗ್ರ ನ್ಯೂಸ್: 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದಿನಾಂಕ 14-08-2023ನೇ ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಸಾಂಕೇತಿಕವಾಗಿ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 76 ವರ್ಷದ ಅಂಗವಾಗಿ ಗೃಹರಕ್ಷಕ ದಳದ ಕಛೇರಿಯಲ್ಲಿ ‘ಹರ್ ಘರ್ ತಿರಂಗ’ ಎಂಬ ಅಭಿಯಾನವನ್ನು ಗೃಹರಕ್ಷಕದಳ ಮತ್ತು

ರಾಷ್ಟ್ರಧ್ವಜ ಸಾರ್ವಭೌಮತ್ವದ ಸಂಕೇತ:ಡಾ|| ಚೂಂತಾರು Read More »

ಸೌಜನ್ಯಳ ನ್ಯಾಯಕ್ಕಾಗಿ ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ಪ್ರತಿಭಟನೆ| ಸಾವಲ್ಲಿ ಬೇಳೆ ಬೇಯಿಸಲು ನೋಡದೇ ಮರುತನಿಖೆ ನಡೆಸಿ – ಅರುಣ್ ಕುಮಾರ್ ಪುತ್ತಿಲ ಆಗ್ರಹ

ಸಮಗ್ರ ನ್ಯೂಸ್: 11ವರ್ಷಗಳ ಹಿಂದೆ ಧರ್ಮಸ್ಥಳದ ಮಣ್ಣಸಂಕದಲ್ಲಿ ಅಮಾನುಷವಾಗಿ ಹತ್ಯೆಗೊಳಗಾದ ಸೌಜನ್ಯಳ ಸಾವಿನ ನ್ಯಾಯಕ್ಕಾಗಿ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರದಿಂದ ಬೃಹತ್ ಪ್ರತಿಭಟನಾ ಜಾಥಾ ಹಾಗೂ ಸಭೆ ನಡೆಯಿತು. ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅರುಣ್ ಪುತ್ತಿಲ, ”ಸರಕಾರ ಉದಾಸೀನ ಮಾಡದೇ ಸೌಜನ್ಯಳಿಗೆ ನ್ಯಾಯ ಒದಗಿಸಿ ಕೊಡಬೇಕು. ಪ್ರಕರಣವನ್ನು‌ ಬಳಸಿಕೊಂಡು ಸರಕಾರ ತನ್ನ ಬೇಳೆ ಬೇಯಿಸಲು ನೋಡಿದರೇ ಸೌಜನ್ಯಳ ಹೆಸರಿನಲ್ಲಿ ಸರಕಾರ ಪತನವಾಗುತ್ತದೆ” ಎಂದು ಹೇಳಿದರು. ಪುತ್ತಿಲ ಪರಿವಾರ ಬೃಹತ್ ಪ್ರತಿಭಟನಾ ಜಾಥ

ಸೌಜನ್ಯಳ ನ್ಯಾಯಕ್ಕಾಗಿ ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ಪ್ರತಿಭಟನೆ| ಸಾವಲ್ಲಿ ಬೇಳೆ ಬೇಯಿಸಲು ನೋಡದೇ ಮರುತನಿಖೆ ನಡೆಸಿ – ಅರುಣ್ ಕುಮಾರ್ ಪುತ್ತಿಲ ಆಗ್ರಹ Read More »

ಸುಳ್ಯ: ಗುತ್ತಿಗಾರಿನ ವಳಲಂಬೆಯಲ್ಲಿ ಕೊಳವೆ ಬಾವಿ ಮುಚ್ಚಿ ಹಾಕಿರುವ ಪ್ರಕರಣ| ಸಾರ್ವಜನಿಕರಿಂದ ಪಂಚಾಯತ್ ಗೆ ದೂರು; ಕೈಪಂಪ್ ಮರುಸ್ಥಾಪಿಸಲು ಆಗ್ರಹ

ಸಮಗ್ರನ್ಯೂಸ್: ಪಂಚಾಯತ್ ನಿಂದ ನಿರ್ಮಿಸಲಾಗಿದ್ದ ಕೊಳವೆ ಬಾವಿ ಮುಚ್ಚಿ ಹಾಕಿರುವ ಪ್ರಕರಣಕ್ಕೆ ತಿರುವು ಪಡೆದುಕೊಂಡಿದ್ದು ಇದೀಗ ಸಾರ್ವಜನಿಕರು ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ದೂರು ನೀಡಿರುವ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಿಂದ ವರದಿಯಾಗಿದೆ. ಪ್ರಕರಣದ ವಿವರ: ಜಾಲ್ಸೂರು – ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಸಿಗುವ ವಳಲಂಬೆ ಎಂಬ ಪ್ರದೇಶದಲ್ಲಿ ಕೆಲದಿನಗಳ ಹಿಂದೆ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ ವಳಲಂಬೆ ಎಂಬವರು ತನ್ನ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದ್ದರು. ಇದೇ ಸಮಯಕ್ಕೆ ಆ ಜಾಗದ ಪಕ್ಕದಲ್ಲಿದ್ದ

ಸುಳ್ಯ: ಗುತ್ತಿಗಾರಿನ ವಳಲಂಬೆಯಲ್ಲಿ ಕೊಳವೆ ಬಾವಿ ಮುಚ್ಚಿ ಹಾಕಿರುವ ಪ್ರಕರಣ| ಸಾರ್ವಜನಿಕರಿಂದ ಪಂಚಾಯತ್ ಗೆ ದೂರು; ಕೈಪಂಪ್ ಮರುಸ್ಥಾಪಿಸಲು ಆಗ್ರಹ Read More »

ಸಂಪಾಜೆ: ಆಧಾರ್ ಜೋಡಣೆಗೆ ಹೋದಾತ ಶವವಾಗಿ ಪತ್ತೆ| ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಸಮಗ್ರ ನ್ಯೂಸ್:ಆಧಾರ್ ಕಾರ್ಡ್ ತಿದ್ದುಪಡಿ ಮಾಡಲೆಂದು ಸುಳ್ಯದ ಅರಂತೋಡಿಗೆ ತೆರಳಿ ಕಾಣೆಯಾಗಿದ್ದ ಮಡಿಕೇರಿ ತಾಲೂಕಿನ ಸಂಪಾಜೆ ಸಮೀಪದ ಚೆಂಬು ಗ್ರಾಮದ ಬಾಲಕೃಷ್ಣ ಎಂಬವರು ಶವವಾಗಿ ಪತ್ತೆಯಾಗಿದ್ದಾರೆ. ಬಾಲಕೃಷ್ಣರವರು ನಾಪತ್ತೆಯಾಗಿರುವ ಬಗ್ಗೆ ಅವರ ಮನೆಯವರು ಆ. 8ರಂದು ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಚೆಂಬು ಗ್ರಾಮದ ಮಿನುಂಗೂರು ಮನೆ ಬಾಲಕೃಷ್ಣ (65) ಅವರು ಅರಂತೋಡಿಗೆ ತೆರಳಿದ್ದರು. ಅಲ್ಲಿಂದ ಸುಳ್ಯ ಕಡೆಗೆ ಬರುವ ವ್ಯಾನ್ ನಲ್ಲಿ ತೆರಳಿದ್ದು ಮತ್ತೆ ಮರಳಿ ಹಿಂತಿರುಗದೆ ಇರುವುದಾಗಿ ತಿಳಿಸಿದ್ದರು. ಇದೀಗ ಬಾಲಕೃಷ್ಣರವರ ಶವ

ಸಂಪಾಜೆ: ಆಧಾರ್ ಜೋಡಣೆಗೆ ಹೋದಾತ ಶವವಾಗಿ ಪತ್ತೆ| ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ Read More »

ಬೆಳ್ತಂಗಡಿ: ಲೋ ಬಿಪಿಯಿಂದ ಹೃದಯಾಘಾತ; ಯುವತಿ ಸಾವು

ಸಮಗ್ರ ನ್ಯೂಸ್: ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಆ 13 ರಂದು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ನಡೆದಿದೆ. ಇಲ್ಲಿನ ಜಾತಿಮಾರು ನಿವಾಸಿ ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ (19) ಮೃತ ಯುವತಿ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಸುಮಾ ಮನೆಗೆ ಬಂದಿದ್ದಳು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ

ಬೆಳ್ತಂಗಡಿ: ಲೋ ಬಿಪಿಯಿಂದ ಹೃದಯಾಘಾತ; ಯುವತಿ ಸಾವು Read More »

ಸುಳ್ಯ: ದರ್ಖಾಸ್ತು ಶ್ರೀ ಮುತ್ತು ಮರಿಯಮ್ಮ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಬೆಳ್ಳಾರೆಯ ದರ್ಖಾಸ್ತು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರ ಒಕ್ಕೂಟದಿಂದ ಸ್ವಚ್ಚತಾ ಕಾರ್ಯಕ್ರಮ ಆ. 13ರಂದು ನಡೆಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಹರೀಶ್ ಪಧಧಿಕಾರಿಗಳು, ಸೇವಾಪ್ರತಿನಿಧಿ ಯಶೋಧ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸುಳ್ಯ: ದರ್ಖಾಸ್ತು ಶ್ರೀ ಮುತ್ತು ಮರಿಯಮ್ಮ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ Read More »

ಅರಂತೋಡು:ಆಧಾರ್ ಕಾರ್ಡ್ ಬದಲಾವಣೆಗೆ ತಂಭ್ ಕೊಡಲು ಹೋದ ವ್ಯಕ್ತಿ ನಾಪತ್ತೆ

ಸಮಗ್ರ ನ್ಯೂಸ್:ಆಧಾರ್ ಕಾರ್ಡ್ ತಿದ್ದುಪಡಿ ಮಾಡಲೆಂದು ಅರಂತೊಡಿಗೆ ಹೋದ ಚೆಂಬು ಗ್ರಾಮದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಆ. 8ರಂದು ವರದಿಯಾಗಿದೆ. ಚೆಂಬುಗ್ರಾಮದ ಮಿನುಂಗೂರು ಮನೆ ಬಾಲಕೃಷ್ಣ (65) ಅವರು ಅರಂತೋಡಿಗೆ ತೆರಳಿದ್ದರು. ಅಲ್ಲಿಂದ ಸುಳ್ಯ ಕಡೆಗೆ ಬರುವ ವ್ಯಾನ್ ನಲ್ಲಿ ತೆರಳಿದ್ದು ಮತ್ತೆ ಮರಳಿ ಹಿಂತಿರುಗದೆ ಇರುವುದರಿಂದ ಮನೆಯವರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾವಚಿತ್ರದಲ್ಲಿರುವ ವ್ಯಕ್ತಿಯು ಕಂಡುಬಂದಲ್ಲಿ ಸುಳ್ಯ ಠಾಣೆಗೆ ತಿಳಿಸುವಂತೆ ಅಥವಾ 9731435253, 7760505928 ಸಂಖ್ಯೆಗೆ ತಿಳಿಸುವಂತೆ ಕೋರಲಾಗಿದೆ.

ಅರಂತೋಡು:ಆಧಾರ್ ಕಾರ್ಡ್ ಬದಲಾವಣೆಗೆ ತಂಭ್ ಕೊಡಲು ಹೋದ ವ್ಯಕ್ತಿ ನಾಪತ್ತೆ Read More »

ಸುಬ್ರಹ್ಮಣ್ಯ:ಇಂಜಾಡಿ ಹೊಟೇಲೊಂದರಲ್ಲಿ ಮದ್ಯ ಮಾರಾಟ| ಅಧಿಕಾರಿಗಳ ಮೌನ| ಸಾರ್ವಜನಿಕರಿಂದ ಆಕ್ರೋಶ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯದ ಇಂಜಾಡಿ ಎಂಬಲ್ಲಿ ರಸ್ತೆ ಬದಿಯ ಹೋಟೆಲೊಂದರಲ್ಲಿ ರಾಜಾ ರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂಜಾಡಿಯ ಗ್ರೀನ್‌ ಫಾಮ್ಸ್‌ ನ ಹೋಟೆಲೊಂದರಲ್ಲಿ ಮದ್ಯ ವ್ಯಾಪಾರ ಮಾಡುತ್ತಿರುವ ಆರೊಪ ಕೇಳಿ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಸ್ಥಳಿಯ ಗ್ರಾಮ ಪಂಚಾಯತ್ ಗೆ ಮತ್ತು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರು ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯರು ಮುಂದಿನ ದಿನಗಳಲ್ಲಿ ಈ

ಸುಬ್ರಹ್ಮಣ್ಯ:ಇಂಜಾಡಿ ಹೊಟೇಲೊಂದರಲ್ಲಿ ಮದ್ಯ ಮಾರಾಟ| ಅಧಿಕಾರಿಗಳ ಮೌನ| ಸಾರ್ವಜನಿಕರಿಂದ ಆಕ್ರೋಶ Read More »

ಆದಿಚುಂಚನಗಿರಿ ಶ್ರೀಗಳ ಭೇಟಿ ಮಾಡಿದ ಸೌಜನ್ಯ ಕುಟುಂಬ

ಸಮಗ್ರ ನ್ಯೂಸ್: ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಶ್ರೀಗಳನ್ನು ಸೌಜನ್ಯ ಕುಟುಂಬಸ್ಥರು ಭೇಟಿ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಗಳು ಸೌಜನ್ಯ ತಾಯಿ ಕುಸುಮಾವತಿ, ತಂಗೆ ಚಂದಪ್ಪ ಗೌಡ, ಹೋರಾಟಗಾರ ಮಹೇಶ್ ತಿಮರೋಡಿ ಜೊತೆಗೆ ಪ್ರಕರಣದ ಕುರಿತು ಚರ್ಚಿಸಿ ಸಾಂತ್ವನ ನೀಡಿದರು. ಅಲ್ಲದೇ ಸೌಜನ್ಯಳ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಸಹಕಾರ ನೀಡುವುದಾಗಿ ಶ್ರೀಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಆದಿಚುಂಚನಗಿರಿ ಶ್ರೀಗಳ ಭೇಟಿ ಮಾಡಿದ ಸೌಜನ್ಯ ಕುಟುಂಬ Read More »