ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಸ್ರೋ ಡೈರೆಕ್ಟರ್ ಸಂಧ್ಯಾ ಶರ್ಮ ಭೇಟಿ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೆ. 1ರಂದು ಇಸ್ರೋದ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಆಗಮಿಸಿದರು. ಇಸ್ರೋ ಸಂಸ್ಥೆಯಿಂದ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್1 ಉಪಗೃಹವು ಯಶಸ್ವಿಯಾಗಿ ಉಡಾವಣೆಗೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭ ಶ್ರೀ ದೇವಳದ ಆಡಳಿತ ಮಂಡಳಿಯು ಕುಕ್ಕೆ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಲಾಯಿತು. ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆ. 31ರಂದು ರಾತ್ರಿ ಇಸ್ರೋದ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಆಗಮಿಸಿದರು. ದೇವಳಕ್ಕೆ ಭೇಟಿ ನೀಡಿದ […]

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಸ್ರೋ ಡೈರೆಕ್ಟರ್ ಸಂಧ್ಯಾ ಶರ್ಮ ಭೇಟಿ Read More »

ಕೆ ಎಸ್ ಎಸ್ ಕಾಲೇಜು ಹಿಂದಿ ವಿಭಾಗದ ವತಿಯಿಂದ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ ಕಾರ್ಯಕ್ರಮ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಸರಕಾರಿ ಪ್ರೌಢಶಾಲೆ ಏನೇಕಲ್ಲು ಇಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳನ್ನು ಸೆ.02 ರಂದು ಹಮ್ಮಿಕೊಂಡರು. ಮಹಾವಿದ್ಯಾಲಯದ ಹಿಂದಿ ವಿಭಾಗದ ವಿದ್ಯಾರ್ಥಿಗಳಾದ ಕಲ್ಪನಾ, ಅನ್ವಿತ, ಅಕ್ಷಯ್, ದೀಕ್ಷಾ, ಸಹನಾ, ಮಧುಶ್ರೀ, ವಿಕಾಸ್, ಕೀರ್ತನ್, ಸುದೀಪ್ ಜಿ. ಇವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನಡೆಸಿದರು. ವಿಧ್ಯಾರ್ಥಿಗಳಿಗೆ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ರಮೇಶ್

ಕೆ ಎಸ್ ಎಸ್ ಕಾಲೇಜು ಹಿಂದಿ ವಿಭಾಗದ ವತಿಯಿಂದ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆ ಕಾರ್ಯಕ್ರಮ Read More »

ಸುಳ್ಯದ ಕುಂ ಕುಂ ಫ್ಯಾಷನ್ ನಲ್ಲಿ ‘ಮಹಾ ಉತ್ಸವ’| ಅತ್ಯಧ್ಬುತ‌ ಕಲೆಕ್ಷನ್ ಇದೀಗ ಆಕರ್ಷಕ ದರದಲ್ಲಿ…

ಸಮಗ್ರ ನ್ಯೂಸ್: ಸುಳ್ಯದ ಪ್ರತಿಷ್ಠಿತ ವಸ್ತ್ರ ಮಳಿಗೆ ಕುಂ ಕುಂ ಫ್ಯಾಷನ್ ನಲ್ಲಿ ಸೆ. 1ರಿಂದ ಕುಂ ಕುಂ ಮಹಾ ಉತ್ಸವ ಆರಂಭಗೊಂಡಿದೆ. ಮದುವೆ, ಶುಭ ಸಮಾರಂಭಗಳಿಗೆ ಬೇಕಾದ ಮಕ್ಕಳ, ಮಹಿಳೆಯರ ಹಾಗೂ ಪುರುಷರ ರೆಡಿಮೇಡ್ ಉಡುಪುಗಳ ಆಕರ್ಷಕ ಸಂಗ್ರಹವೇ ಇಲ್ಲಿದೆ. ನವ-ನವೀನ ಶೈಲಿಯ ಮನ ಮೆಚ್ಚುವ ಉಡುಪುಗಳ ಬೃಹತ್ ಸಂಗ್ರಹವೇ ಇಲ್ಲಿದ್ದು, ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಹಾ ಉತ್ಸವದಲ್ಲಿ ವಿವಿಧ ವಿನ್ಯಾಸಗಳ ಚೂಡಿದಾರ್ ಟಾಪ್, ಕಣ್ಮನ ಸೆಳೆಯುವ ಸೀರೆಗಳು ಹಾಗೂ ಪುರುಷರ ಉಡುಪುಗಳ ಮಹಾಪೂರ

ಸುಳ್ಯದ ಕುಂ ಕುಂ ಫ್ಯಾಷನ್ ನಲ್ಲಿ ‘ಮಹಾ ಉತ್ಸವ’| ಅತ್ಯಧ್ಬುತ‌ ಕಲೆಕ್ಷನ್ ಇದೀಗ ಆಕರ್ಷಕ ದರದಲ್ಲಿ… Read More »

ಸೌಜನ್ಯ ಪರ ಹೋರಾಟಕ್ಕೆ ಆದಿಚುಂಚನಗಿರಿ ಮಠದ ಬೆಂಬಲ| ಬೆಳ್ತಂಗಡಿ ಸಭೆಗೆ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧಾರ

ಸಮಗ್ರ ನ್ಯೂಸ್: ಪ್ರಬಲ ಒಕ್ಕಲಿಗ ಮಠ ಆದಿಚುಂಚನಗಿರಿಯ ಬೆಂಬಲ ಸೌಜನ್ಯಳ ನ್ಯಾಯದ ಹೋರಾಟದಲ್ಲಿ ಬೆಂಬಲಕ್ಕೆ ನಿಂತಿದ್ದು, ಭಾನುವಾರ(ಸೆ.3) ಬೆಳ್ತಂಗಡಿಯಲ್ಲಿ ನಡೆಯುವ ಸಭೆಗೆ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧರಿಸಿದ್ದಾರೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿದ್ದರೂ ಒಕ್ಕಲಿಗ ಮಠವು ಅಲಿಪ್ತ ನೀತಿ ವಹಿಸಿತ್ತು. ಇದರಿಂದ ಬೇಸತ್ತ ಹೋರಾಟಗಾರರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿಯಾಗಿ ಬೆಂಬಲ ಸೂಚಿಸಲು ಮನವಿ ಮಾಡಿದ್ದರು. ಇದೀಗ ಬೆಳ್ತಂಗಡಿಯಲ್ಲಿ ಪ್ರಜಾವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯಿಂದ ನಡೆಯುವ

ಸೌಜನ್ಯ ಪರ ಹೋರಾಟಕ್ಕೆ ಆದಿಚುಂಚನಗಿರಿ ಮಠದ ಬೆಂಬಲ| ಬೆಳ್ತಂಗಡಿ ಸಭೆಗೆ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧಾರ Read More »

ಸುಳ್ಯ: ಸೌಜನ್ಯಳ ನ್ಯಾಯಕ್ಕಾಗಿ ಐವರ್ನಾಡು ಗ್ರಾಮಸ್ಥರಿಂದ ಸಮಿತಿ ರಚನೆ

ಸಮಗ್ರ ನ್ಯೂಸ್: ಧರ್ಮಸ್ಥಳದ ಮಣ್ಣಸಂಕ ಬಳಿ ಕೊಲೆ ಮತ್ತು ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಸೌಜನ್ಯ ಪರ ಹೋರಾಟ ಸಮಿತಿಯನ್ನು ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ರಚನೆ ಮಾಡಲಾಯಿತು. ಹೋರಾಟದ ನೇತೃತ್ವ ವಹಿಸಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರೊಂದಿಗೆ ಮಾತನಾಡಿ ಯುವಕರೆಲ್ಲಾ ಸೇರಿ ಹೋರಾಟಕ್ಕೆಂದೇ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಯ್ಕೆ ಮಾಡಲಾಯಿತು. ಯಾವುದೇ ಜಾತಿ ಹಾಗೂ ಪಕ್ಷ ಭೇದವಿಲ್ಲದೆ ಎಲ್ಲೇ ಪ್ರತಿಭಟನೆ ನಡೆದರು ತಿಮರೋಡಿ ಜೊತೆಯಾಗಿ ನಿಲ್ಲುತ್ತೇವೆಂದು ಆಶ್ವಾಸನೆ ನೀಡಿದರು. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ

ಸುಳ್ಯ: ಸೌಜನ್ಯಳ ನ್ಯಾಯಕ್ಕಾಗಿ ಐವರ್ನಾಡು ಗ್ರಾಮಸ್ಥರಿಂದ ಸಮಿತಿ ರಚನೆ Read More »

ಮಾಧ್ಯಮಗಳ ಮೇಲಿನ ಎಫ್.ಐ.ಆರ್.ಗೆ ಹೈಕೋರ್ಟ್ ತಡೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಪೊಲೀಸರು ಮಾಧ್ಯಮಗಳ ಮೇಲೆ ದಾಖಲಿಸಿದ್ದ ಸುಳ್ಳು ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಏನಿದು ಪ್ರಕರಣ?ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕನೋರ್ವ ಕಾರಿನಲ್ಲಿ ಸುತ್ತಾಟ ನಡೆಸಿದ್ದಾನೆ ಎಂದು ಹಿಂದೂ ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿತ್ತು ಎಂಬ ಆರೋಪದ ಮೇಲೆ ಸುಳ್ಯ ಠಾಣಾ ಪೊಲೀಸರು ಆರೋಪಿತ ಯುವಕರನ್ನು ವಶಕ್ಕೆ ಪಡೆದಿದ್ದರು. ವಿಷಯ ಸುದ್ದಿಯಾಗುತ್ತಲೇ ಅರುಣ್ ಕುಮಾರ್ ಪುತ್ತಿಲ ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿ ಯುವಕರನ್ನು ರಿಲೀಸ್ ಮಾಡಿದ್ದಾರೆ ಎಂದು

ಮಾಧ್ಯಮಗಳ ಮೇಲಿನ ಎಫ್.ಐ.ಆರ್.ಗೆ ಹೈಕೋರ್ಟ್ ತಡೆ Read More »

ಪುತ್ತೂರು: ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ರಕ್ಷಾಬಂಧನ” ಕಾರ್ಯಕ್ರಮ

ಸಮಗ್ರ ನ್ಯೂಸ್: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 30 ರಂದು “ರಕ್ಷಾಬಂಧನ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶೇಖರ ನಾರಾವಿ ಇವರು ರಕ್ಷಾಬಂಧನದ ಮೌಲ್ಯಗಳನ್ನು ಮಕ್ಕಳಿಗೆ ಹೇಳಿದರು. ಪುಟಾಣಿ ಮಕ್ಕಳ ಕೈಯಲ್ಲಿ ರಕ್ಷೆಯನ್ನು ಕಟ್ಟಿಸಿ, ಮಕ್ಕಳಿಗೆ ಸಿಹಿ ತಿಂಡಿ ನೀಡಿ ಆಶೀರ್ವಾದಿಸಿದರು. ಈ ಪುಟ್ಟ ಸಂಸ್ಥೆಯು ಒಂದು ಉತ್ತಮ ವಿದ್ಯಾಸಂಸ್ಥೆಯಾಗಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಅಧ್ಯಕ್ಷರಾದ ವೆಂಕಟರಮಣ

ಪುತ್ತೂರು: ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ರಕ್ಷಾಬಂಧನ” ಕಾರ್ಯಕ್ರಮ Read More »

ಬೆಳ್ತಂಗಡಿ: ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಕಬಡ್ಡಿ ಆಟಗಾರ ಆತ್ಮಹತ್ಯೆ!?

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಪುದುವೆಟ್ಟು ನಿವಾಸಿ ಯುವ ಕಬಡ್ಡಿ ಆಟಗಾರ ಸ್ವರಾಜ್(24) ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಲೋನ್ ಆಯಪ್ ಕಿರುಕುಳಕ್ಕೆ ಬೇಸತ್ತು ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಏನಿದು ಘಟನೆ..?ಸ್ವರಾಜ್ ತನ್ನ ವಾಟ್ಸಾಪ್ನಲ್ಲಿ ಅಕ್ಕನ ಮಗಳ ಫೋಟೋ ಹಾಕಿದ್ದನು. ಈ ಫೋಟೋವನ್ನು ಲೋನ್ ಆಯಪ್ನವರು ಎಡಿಟ್ ಮಾಡಿ ಮಾರಾಟಕ್ಕಿದೆ ಎಂದು ಸ್ವರಾಜ್ ಸ್ನೇಹಿತರು, ಹಾಗೂ ಆತನ ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಫಾರ್ವರ್ಡ್ ಮಾಡಲಾಗಿತ್ತು. ಈ ಟಾರ್ಚರ್ ತಾಳಲಾರದೇ ಆಗಸ್ಟ್ 30

ಬೆಳ್ತಂಗಡಿ: ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಕಬಡ್ಡಿ ಆಟಗಾರ ಆತ್ಮಹತ್ಯೆ!? Read More »

ಸಂಪಾದಕೀಯ: ಸೌಜನ್ಯ ಹೋರಾಟ‌ ಬೀದಿ ರಂಪಾಟವಾಗುವ ಬದಲು ಸಂಘಟನಾತ್ಮಕವಾಗಿರಲಿ

ಸಮಗ್ರ ನ್ಯೂಸ್: 11 ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯಳಿಗೆ ನ್ಯಾಯಕ್ಕಾಗಿ ರಾಜ್ಯವ್ಯಾಪಿ ಹೋರಾಟಗಳು ನಡೆಯುತ್ತಿವೆ. ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ಬಂದ ಬಳಿಕ ಈ ಕುಕೃತ್ಯ ನಡೆಸಿದ ನಿಜವಾದ ಪಾತಕಿಗಳು ಯಾರು? ಎಂಬುದು ಬಹುಚರ್ಚಿತ ವಿಷಯ. ಮೊದಮೊದಲು ಏಕಮುಖವಾಗಿದ್ದ ಹೋರಾಟ ಈಗೀಗ ದಿಕ್ಕು ತಪ್ಪುವ ಲಕ್ಷಣಗಳು ಕಾಣುತ್ತಿವೆ. ಕಳೆದ ಸೆ.27 ಮತ್ತು 28ರಂದು ನಡೆದ ಎರಡು ಹಕ್ಕೊತ್ತಾಯ ಸಭೆಗಳು ಹೋರಾಟದ ಹಾದಿಯನ್ನೇ ಬದಲಿಸಿಬಿಟ್ಟಿವೆ. ಸೌಜನ್ಯಳ ನ್ಯಾಯದ ಹೋರಾಟದ

ಸಂಪಾದಕೀಯ: ಸೌಜನ್ಯ ಹೋರಾಟ‌ ಬೀದಿ ರಂಪಾಟವಾಗುವ ಬದಲು ಸಂಘಟನಾತ್ಮಕವಾಗಿರಲಿ Read More »

ಅಪಾಯದ ಅಂಚಿನಲ್ಲಿರುವ ಪಂಜಿಕಲ್ಲು-ಮೈತಡ್ಕ ತೂಗು ಸೇತುವೆ

ಸಮಗ್ರ ನ್ಯೂಸ್: ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಕಲ್ಲು -ಮೈತಡ್ಕ ಎಂಬಲ್ಲಿ ಪಯಸ್ವಿನಿ ನದಿಗೆ ನಿರ್ಮಿಸಲಾದ ತೂಗು ಸೇತುವೆಯು ಇದೀಗ ಅಪಾಯದ ಅಂಚಿನಲ್ಲಿದೆ. ಸಾರ್ವಜನಿಕರು ಅನಾಹುತ ಸಂಭವಿಸುವ ಮೊದಲು ದುರಸ್ತಿ ಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಪಂಜಿಕಲ್ಲು – ಮೈತಡ್ಕ ಭಾಗದ ಸಂಪರ್ಕದ ರಸ್ತೆಯು ಇದಾಗಿದ್ದು, ದಿನ ನಿತ್ಯ ನೂರಾರು ಮಂದಿ ಸಾರ್ವಜನಿಕರು, ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಇದೇ ತೂಗು ಸೇತುವೆಯಲ್ಲಿ ಸಂಚರಿಸುತ್ತಿರುತ್ತಾರೆ. ಇದೀಗ ಈ ಸೇತುವೆಯ ಮೇಲ್ಬಾಗಕ್ಕೆ ನಡೆದುಕೊಂಡು ಹೋಗಲು ಹಾಸಿರುವ ಸಿಮೆಂಟ್ ಸ್ಲ್ಯಾಬ್ ಒಡೆದು ಹೋಗಿ ತಿಂಗಳು

ಅಪಾಯದ ಅಂಚಿನಲ್ಲಿರುವ ಪಂಜಿಕಲ್ಲು-ಮೈತಡ್ಕ ತೂಗು ಸೇತುವೆ Read More »