ಕರಾವಳಿ

ಗ್ರಾಹಕರ ಗಮನಕ್ಕೆ… ಸುಳ್ಯದ ಈ ಭಾಗದಲ್ಲಿ ಇಂದು ಕರೆಂಟಿಲ್ಲ

ಸಮಗ್ರ ನ್ಯೂಸ್: ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11ಕೆ.ವಿ ಫೀಡರುಗಳಲ್ಲಿ ನ.2 ರಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೊ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 6:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಗ್ರಾಹಕರ ಗಮನಕ್ಕೆ… ಸುಳ್ಯದ ಈ ಭಾಗದಲ್ಲಿ ಇಂದು ಕರೆಂಟಿಲ್ಲ Read More »

ಸುಳ್ಯ: ವನವಾಸಿ ವಿದ್ಯಾರ್ಥಿ ನಿಲಯಕ್ಕೆ‌ ಬ್ಲಾಂಕೆಟ್ ಕೊಡುಗೆ

ಸಮಗ್ರ ನ್ಯೂಸ್: ಸುಳ್ಯದ ಅಡ್ಕಾರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವನವಾಸಿ ಕಲ್ಯಾಣ(ರಿ) ಕರ್ನಾಟಕ, ವನವಾಸಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ದುಬೈನಲ್ಲಿ ಉದ್ಯೋಗಿಯಾಗಿರುವ ಕೃಪಾಲ ಕುರುಂಜಿಯವರಿಂದ ನೀಡಲ್ಪಟ್ಟ ಬ್ಲಾಂಕೆಟ್ ಗಳನ್ನು ಅವರು ಮನೆಯವರು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಜಯಪ್ರಭಾ ಕೃಪಾಲ, ಪೂರ್ವಿಕ್ ಕುರುಂಜಿ,‌ ಕಾರ್ಯಪ್ಪ ಗೌಡ ಪೆರುಮುಂಡ, ಭಾನುಪ್ರಕಾಶ್ ಪೆರುಮುಂಡ, ಜಯದೀಪ್ ಪೆರುಮುಂಡ, ವನವಾಸಿ ವಿದ್ಯಾರ್ಥಿ ನಿಲಯದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಅಜಿತ್ ಪೇರಾಲು‌ ಕಾರ್ಯಕ್ರಮ ನಡೆಸಿಕೊಟ್ಟರು.

ಸುಳ್ಯ: ವನವಾಸಿ ವಿದ್ಯಾರ್ಥಿ ನಿಲಯಕ್ಕೆ‌ ಬ್ಲಾಂಕೆಟ್ ಕೊಡುಗೆ Read More »

ಸುಬ್ರಹ್ಮಣ್ಯ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ| ಆಟೋ ಡ್ರೈವರ್ ಮೇಲೆ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ವಂಚಿಸಿದ ಆರೋಪದಲ್ಲಿ ಆಟೋ ಚಾಲಕನ ವಿರುದ್ಧ ಕಡಬ ತಾಲೂಕಿನ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಬೆಳ್ಳಾರೆಯ ಆಟೋ ಚಾಲಕ ಮಹೇಶ್ ಎಂಬಾತ ಪಂಜದ ಪಿಯುಸಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಲಾಡ್ಜ್ ನಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬುದು ವಿದ್ಯಾರ್ಥಿನಿಯ ಪೋಷಕರ ಆರೋಪ. ಪ್ರೀತಿಸುವ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಂಡ ಆಟೋ ಚಾಲಕ ಬಳಿಕ ವಂಚನೆ ನಡೆಸಿದ್ದಾಗಿ ದೂರಲಾಗಿದೆ. ಆತ ನಿರಾಕರಿಸುವ ಕಾರಣಕ್ಕಾಗಿ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದೂ ಹೇಳಲಾಗಿದ್ದು, ಸಂತ್ರಸ್ತೆ

ಸುಬ್ರಹ್ಮಣ್ಯ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ| ಆಟೋ ಡ್ರೈವರ್ ಮೇಲೆ ಪ್ರಕರಣ ದಾಖಲು Read More »

ಮಂಗಳೂರು: ಶ್ರೀನಿವಾಸ್ ಮೆಡಿಕಲ್ ಕಾಲೇಜು, ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು ಇವರ ಸಹಯೋಗದಲ್ಲಿ ಬ್ರಹತ್ ರಕ್ತದಾನ ಶಿಬಿರ

ಸಮಗ್ರ ನ್ಯೂಸ್: ಪ್ರಾಥಮಿಕ ಅರೋಗ್ಯ ಕೇಂದ್ರ ಬೋಂದೆಲ್, ಹಳೆ ವಿದ್ಯಾರ್ಥಿ ಸಂಘ ಕರಂಬಾರು, ಶ್ರೀನಿವಾಸ್ ಮೆಡಿಕಲ್ ಕಾಲೇಜು, ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು ಇವರ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರವು ಆ.31 ರಂದು ಕರಂಬಾರು ಸರಕಾರಿ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ ವಹಿಸಿದ್ದರು. ಕಾರ್ಯಕ್ರಮವನ್ನು ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು ಅಧ್ಯಕ್ಷ ಗಣೇಶ್ ಪ್ರಭು ಉದ್ಘಾಟಿಸಿದರು. ಪ್ರಾಥಮಿಕ ಅರೋಗ್ಯ ಕೇಂದ್ರ ಬೋಂದೆಲ್ ನ ಆರೋಗ್ಯಧಿಕಾರಿ

ಮಂಗಳೂರು: ಶ್ರೀನಿವಾಸ್ ಮೆಡಿಕಲ್ ಕಾಲೇಜು, ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು ಇವರ ಸಹಯೋಗದಲ್ಲಿ ಬ್ರಹತ್ ರಕ್ತದಾನ ಶಿಬಿರ Read More »

ಸುಳ್ಯ: ಜೀವ ಬೆದರಿಕೆ ಒಡ್ಡಿ ಅಡಕೆ ದೋಚಿಕೊಂಡ ಪ್ರಕರಣ, ಆರೋಪಿಗಳು ಖುಲಾಸೆ

ಸಮಗ್ರ ನ್ಯೂಸ್:‌ ಕೊಳ್ತಿಗೆ ಗ್ರಾಮದ ಆಲಡ್ಕ ಎಂಬಲ್ಲಿ ಜೀವ ಬೆದರಿಕೆ ಒಡ್ಡಿ ಅಡಕೆ ದೋಚಿಕೊಂಡ ಪ್ರಕರಣದಲ್ಲಿ ಮಾನ್ಯ ಸುಳ್ಯ ಪ್ರಥಮದರ್ಜೆ ನ್ಯಾಯಾಲಯ ಹಾಗೂ ಕಿರಿಯ ಸಿವಿಲ್ ವಿಭಾಗದ ನ್ಯಾಯಾಧೀಶರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ದಿನಾಂಕ, 28/10/19 ರಂದು ಸಾಯಂಕಾಲ ಸುಮಾರು 3 ಗಂಟೆ ಸಮಯಕ್ಕೆ ಕೊಳ್ತಿಗೆ ಗ್ರಾಮದ ಆಲಡ್ಕ ಎಂಬಲ್ಲಿ ಆರೋಪಿಗಳಾದ ದಯಾನಂದ ನಾಯಕ್, ಉಮೇಶ ನಾಯಕ್, ಶಂಖರ್ ನಾರಾಯಣ ಎಂಬ ಮೂರು ಜನರು ದೂರುದಾರರಾದ ಜಯಲಕ್ಷ್ಮೀ ಕೋಮು ಗಂಡ ಸುರೇಶ್ ನಾಯಕ್ ಅವರ ಮನೆಗೆ ಅಕ್ರಮ ಪ್ರವೇಶ

ಸುಳ್ಯ: ಜೀವ ಬೆದರಿಕೆ ಒಡ್ಡಿ ಅಡಕೆ ದೋಚಿಕೊಂಡ ಪ್ರಕರಣ, ಆರೋಪಿಗಳು ಖುಲಾಸೆ Read More »

ಸುಳ್ಯ:ನಗರ ಪಂಚಾಯತ್ ನ ಹಿರಿಯ ವಾಲ್ ಮೆನ್ ಶ್ರೀಜೇಶ್ ಜಯನಗರ ಅವರಿಗೆ ಬೀಳ್ಕೊಡುಗೆ ಸಮಾರಂಭ

ಸಮಗ್ರ ನ್ಯೂಸ್: ಸುಳ್ಯ ನಗರ ಪಂಚಾಯತ್ ನ ಹಿರಿಯ ವಾಲ್ ಮೆನ್ ಶ್ರೀಜೇಶ್ ಜಯನಗರ ಅ.31 ರಂದು ಸೇವಾ ನಿವೃತ್ತರಾಗಿದ್ದು, ಅವರಿಗೆ ಬೀಳ್ಕೊಡುಗೆ ಸಮಾರಂಭ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. 1995 ರಲ್ಲಿ ನಗರ ಪಂಚಾಯತ್ ನ ನೀರು ಸರಬರಾಜು ಕೇಂದ್ರದಲ್ಲಿ ದಿನಗೂಲಿ ನೌಕರರಾಗಿ ಸೇವೆಗೆ ಸೇರಿದ ಅವರು 2005ರಲ್ಲಿ ಖಾಯಂ ನೌಕರರಾದರು. ಬಳಿಕ 2007 ರಲ್ಲಿ ಸುಳ್ಯದಿಂದ ಉಳ್ಳಾಲಕ್ಕೆ ವರ್ಗಾವಣೆಗೊಂಡು, 2014 ರಲ್ಲಿ ಅವರು ಮತ್ತೆ ಸುಳ್ಯಕ್ಕೆ ವರ್ಗಾವಣೆಗೊಂಡರು. ಅವರಿಗೆ ಸುಳ್ಯನಗರ ಪಂಚಾಯತ್ ಸಭಾಂಗಣದಲ್ಲಿ ಬೀಳ್ಕೊಡುಗೆ

ಸುಳ್ಯ:ನಗರ ಪಂಚಾಯತ್ ನ ಹಿರಿಯ ವಾಲ್ ಮೆನ್ ಶ್ರೀಜೇಶ್ ಜಯನಗರ ಅವರಿಗೆ ಬೀಳ್ಕೊಡುಗೆ ಸಮಾರಂಭ Read More »

ಸುಳ್ಯ: ಯುವಕರನ್ನೇ ನಾಚಿಸುವಂತೆ ಪದಕ ಗೆದ್ದ ಧರ್ಮಗುರು| ಕಂಚು‌ ಗೆದ್ದ ಸಂತಸದಲ್ಲಿ ಫಾದರ್ ರೆ.ಫಾ ವಿಕ್ಟರ್

ಸಮಗ್ರ ನ್ಯೂಸ್: ಸಾಧನೆಗೆ ಯಾರ ಹಂಗಿಲ್ಲ. ವಯಸ್ಸಿನ ಮಿತಿಯೂ ಇರುವುದಿಲ್ಲ ಅನ್ನುವುದಕ್ಕೆ ಸುಳ್ಯದ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಸಂಚಾಲಕ ಹಾಗೂ ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಧರ್ಮ ಗುರುಗಳಾದ ರೆ.ಫಾ.ವಿಕ್ಟರ್ ಡಿಸೋಜಾ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ. ಹೌದು, ಮಂಗಳೂರು ಮಾಸ್ಟರ್ ಅಥ್ಲೆಟಿಕ್ ಸಂಸ್ಥೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಕೂಟದಲ್ಲಿ ರೆ.ಫಾ ವಿಕ್ಟರ್ ಡಿಸೋಜಾ 100 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಮಾತ್ರವಲ್ಲ 200 ಮೀ. ಓಟದಲ್ಲಿ ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ

ಸುಳ್ಯ: ಯುವಕರನ್ನೇ ನಾಚಿಸುವಂತೆ ಪದಕ ಗೆದ್ದ ಧರ್ಮಗುರು| ಕಂಚು‌ ಗೆದ್ದ ಸಂತಸದಲ್ಲಿ ಫಾದರ್ ರೆ.ಫಾ ವಿಕ್ಟರ್ Read More »

ಸುಳ್ಯ:ಕಲ್ಕಿ ಮೊಬೈಲ್ ನಲ್ಲಿ ಲಕ್ಕಿ ಕೂಪನ್ ಡ್ರಾ

ಸಮಗ್ರ ನ್ಯೂಸ್:ಸುಳ್ಯದ ಪ್ರಭು ಬುಕ್ ಸ್ಟಾಲ್ ಎದುರಿನ ಕಾಮತ್ ಕಾಂಪ್ಲೆಕ್ಸ್ ನಲ್ಲಿರುವ ಕಲ್ಕಿ ಮೊಬೈಲ್ ನಲ್ಲಿ ದಸರಾ ಮತ್ತು ದೀಪಾವಳಿ ಪ್ರಯುಕ್ತ ಏರ್ಪಡಿಸಿದ ಲಕ್ಕಿ ಕೂಪನ್ ನ ಈ ವಾರದ ಡ್ರಾವು ಅ.30 ರಂದು ನಡೆಯಿತು. ಈ ಸಂಧರ್ಭದಲ್ಲಿ ಪುಳಿಮಾರಡ್ಕ ಧನ್ ರಾಜ್ ಡ್ರಾ ನೆರವೇರಿಸಿದರು. ಸಂಸ್ಥೆಯ ಮಾಲಕ ಕೃಷ್ಣಪ್ರಸಾದ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಗಿಫ್ಟ್ ಸ್ವೀಕರಿಸಿದವರು ಸುಬ್ಬಯ್ಯ.

ಸುಳ್ಯ:ಕಲ್ಕಿ ಮೊಬೈಲ್ ನಲ್ಲಿ ಲಕ್ಕಿ ಕೂಪನ್ ಡ್ರಾ Read More »

ನೇತ್ರಾವತಿ ನದಿಗೆ ಹಾರಿ ಚಿಕ್ಕಮಗಳೂರು ಮೂಲದ ವ್ಯಕ್ತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಮಂಗಳೂರಿನ ಸಮೀಪದಲ್ಲಿ ನೇತ್ರಾವತಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿ ಚಿಕ್ಕಮಗಳೂರು ಮೂಲದ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ನಗರದ ಕರ್ತಿಕೆರೆ ಸಮೀಪದ ಬೈರಾಪುರ ಗ್ರಾಮದ ಪ್ರಸನ್ನ ಕುಮಾರ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ಬೈರಾಪುರ ಗ್ರಾಮದ ಶಂಕರೇಗೌಡ ಎಂಬುವವರ ಪುತ್ರ ಪ್ರಸನ್ನ ಕುಮಾರ್ (40 ವರ್ಷ) ನದಿಗೆ ಹಾರಿರುವ ವ್ಯಕ್ತಿ. ಪ್ರಸನ್ನಕುಮಾರ್ ತರಕಾರಿ, ಕೊತ್ತಂಬರಿ ಸೊಪ್ಪು ವ್ಯಾಪಾರ ಮಾಡಿಕೊಂಡಿದ್ದರು. ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಭಾಗಕ್ಕೆ ಕೊತ್ತಂಬರಿ ಸೊಪ್ಪು ಸರಬರಾಜು ಮಾಡುತ್ತಿದ್ದರು. ಇವತ್ತು

ನೇತ್ರಾವತಿ ನದಿಗೆ ಹಾರಿ ಚಿಕ್ಕಮಗಳೂರು ಮೂಲದ ವ್ಯಕ್ತಿ ಆತ್ಮಹತ್ಯೆ Read More »

ಸುಳ್ಯ ದಸರಾ|ಪ್ರಗತಿ ಸೌಂಡ್ಸ್ ಶಾಫಿ ಪೈಚಾರ್ ರವರಿಗೆ ಗೌರವಾರ್ಪಣೆ

ಸಮಗ್ರ ನ್ಯೂಸ್:ಒಂಬತ್ತು ದಿನಗಳ ವೈಭದ ಸುಳ್ಯ ದಸರಾ ಕಾರ್ಯಕ್ರಮಕ್ಕೆ ವೈಶಿಷ್ಟಪೂರ್ಣ ಸೌಂಡ್ಸ್ ಮತ್ತು ಲೈಟಿಂಗ್ಸ್ ವ್ಯವಸ್ಥೆಯನ್ನು ಮಾಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಪ್ರಗತಿ ಸೌಂಡ್ಸ್ ಮಾಲಕ ಶಾಫಿ ಪೈಚಾರ್ ರವರಿಗೆ ದಸರಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಿತಿಯ ಪದಾಧಿಕಾರಿಗಳು ಗೌರವಿಸಿದರು. ಅ. 27ರಂದು ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ವಿಶೇಷವಾದ ಆಕರ್ಷನೀಯ ಧ್ವನಿ, ಬೆಳಕಿನ ವ್ಯವಸ್ಥೆ ಸಾವಿರಾರು ಮಂದಿಯ ಜನಮೆಚ್ಚುಗೆ ಪಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆ.ಗೋಕುಲ್ ದಾಸ್, ನಾರಾಯಣ ಕೇಕಡ್ಕ, ಚಿದಾನಂದ ವಿದ್ಯಾನಗರ, ನವೀನ್

ಸುಳ್ಯ ದಸರಾ|ಪ್ರಗತಿ ಸೌಂಡ್ಸ್ ಶಾಫಿ ಪೈಚಾರ್ ರವರಿಗೆ ಗೌರವಾರ್ಪಣೆ Read More »