ಕರಾವಳಿ

ಪುತ್ತೂರು: ಡಾಂಬರ್ ನಲ್ಲಿ ಸಿಲುಕಿದ್ದ ನಾಗರಹಾವನ್ನು ರಕ್ಷಿಸಿದ ಸ್ನೇಕ್ ತೇಜಸ್

ಸಮಗ್ರ ನ್ಯೂಸ್: ಡಾಂಬರ್ ನಲ್ಲಿ ಸಿಲುಕಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ನಾಗರಹಾವೊಂದನ್ನು ಪುತ್ತೂರಿನ ಉರಗಪ್ರೇಮಿ ತೇಜಸ್ ಬನ್ನೂರು ರಕ್ಷಿಸಿ ಹಾವಿಗೆ ಜೀವದಾನ ಮಾಡಿದ್ದಾರೆ. ಪುತ್ತೂರಿನ ನೆಹರೂನಗರದಲ್ಲಿ ಮನೆಯೊಂದರಲ್ಲಿ ಡಾಂಬರ್ ಡಬ್ಬಿಗಳನ್ನು ಶೇಖರಿಸಿಟ್ಟ ಪ್ರದೇಶದಲ್ಲಿ ನಾಗರಹಾವು ಪತ್ತೆಯಾಗಿತ್ತು. ಸ್ಥಳೀಯರು ನಾಗರಹಾವು ಡಾಂಬರ್ ನಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿ ಉರಗಪ್ರೇಮಿ ತೇಜಸ್ ಬನ್ನೂರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ತೇಜಸ್ ನಾಗರಹಾವಿನ ಚರ್ಮದಿಂದ ಡಾಂಬರ್ ತೆಗೆಯಲು ಎರಡು ದಿನಗಳ ಕಾಲ ಶ್ರಮಪಟ್ಟಿದ್ದಾರೆ. ನಾಗರಹಾವನ್ನು ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಒಂದು ದಿನ ಇಟ್ಟು

ಪುತ್ತೂರು: ಡಾಂಬರ್ ನಲ್ಲಿ ಸಿಲುಕಿದ್ದ ನಾಗರಹಾವನ್ನು ರಕ್ಷಿಸಿದ ಸ್ನೇಕ್ ತೇಜಸ್ Read More »

ಕುಕ್ಕೆ ಸುಬ್ರಹ್ಮಣ್ಯ: ಮಡೆಸ್ನಾನ ಬದಲು ಎಡೆಸ್ನಾನ, ಪ್ರಸಾದ ರೂಪವಾಗಿ ಬೆತ್ತ ವಿತರಣೆ, ತೇರನ್ನೆಳೆಯಲು ಪಾಸ್ ವಿತರಣೆ| ಶಿಸ್ತು, ಗೊಂದಲಗಳ ನಿವಾರಿಸಿ ಮಾದರಿ ಕ್ರಮಕ್ಕೆ ಮುನ್ನುಡಿ ಬರೆದವರಾರು ಗೊತ್ತೇ?

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಂಪಾ ಷಷ್ಠಿ ಸಂಭ್ರಮದಂದು ಹರಕೆ ರೂಪದಲ್ಲಿ ಭಕ್ತರಿಗೆ ಎಡೆ ಸ್ನಾನ ಸೇವೆ ಜರಗಿದೆ.‌ 2011 ರವರೆಗೆ ಶ್ರೀ ಕ್ಷೇತ್ರದಲ್ಲಿ ಎಂಜಲು ಎಲೆ ಮೇಲೆ ಉರುಳು ಸೇವೆ ಕ್ರಮವಿತ್ತು. ಚರ್ಮ ರೋಗ, ವೈಯುಕ್ತಿಕ ಸಮಸ್ಯೆ ನಿವಾರಣೆಗೆ ಭಕ್ತಿಯಿಂದ ಉರುಳು ಸೇವೆ ನಡೆಸುತ್ತಿದ್ದರು. ಸಮಾಜದಲ್ಲಿ ಬದಲಾವಣೆ ಈಗಿನ ಕಾಲ ಘಟ್ಟದಲ್ಲಿ ಎಂಜಲು ಎಲೆ ಮೇಲೆ ಉರುಳುವ ದು ಸರಿಯಲ್ಲವೆಂದು ಮನಗಂಡು ಉಡುಪಿ ಪೇಜಾವರ ಶ್ರೀ ಗಳ ಸಮ್ಮುಖದಲ್ಲಿ, ಸಂಘದ ಹಿರಿಯರಾದ ಕಲ್ಲಡ್ಕ ಪ್ರಭಾಕರ

ಕುಕ್ಕೆ ಸುಬ್ರಹ್ಮಣ್ಯ: ಮಡೆಸ್ನಾನ ಬದಲು ಎಡೆಸ್ನಾನ, ಪ್ರಸಾದ ರೂಪವಾಗಿ ಬೆತ್ತ ವಿತರಣೆ, ತೇರನ್ನೆಳೆಯಲು ಪಾಸ್ ವಿತರಣೆ| ಶಿಸ್ತು, ಗೊಂದಲಗಳ ನಿವಾರಿಸಿ ಮಾದರಿ ಕ್ರಮಕ್ಕೆ ಮುನ್ನುಡಿ ಬರೆದವರಾರು ಗೊತ್ತೇ? Read More »

ರಿಯಲ್ ಆಗಿ ಹೀರೋ ಆದ ರಿಷಭ್/ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡ ಶೆಟ್ರು

ಸಮಗ್ರ ನ್ಯೂಸ್: ಕಾಂತಾರದ ಮೂಲಕ ಮನೆಮಾತಾಗಿರುವ ನಟ ರಿಷಬ್ ಶೆಟ್ಟಿ, ಇದೀಗ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ತಾವು ಓದಿದ್ದ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಳ್ಳುವ ತನ್ನ ನಿರ್ಧಾರವನ್ನು ಶಾಲಾ ಎಸ್‍ಡಿಎಂಸಿ ಸಭೆಯಲ್ಲಿ ರಿಷಬ್ ಪ್ರಕಟಿಸಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಈ ಶಾಲೆಯಲ್ಲಿ 400ರಷ್ಟು ಮಕ್ಕಳಿದ್ದು, ಈಗ 71ಕ್ಕೆ ಇಳಿಕೆಯಾಗಿದೆ. ಒಬ್ಬರು ಖಾಯಂ ಶಿಕ್ಷಕರು, ಉಳಿದವರು ಗೌರವ ಶಿಕ್ಷಕರು. ಖುದ್ದಾಗಿ ಈ ಶಾಲೆಯ

ರಿಯಲ್ ಆಗಿ ಹೀರೋ ಆದ ರಿಷಭ್/ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡ ಶೆಟ್ರು Read More »

ವಸತಿ ನಿಲಯಗಳು ನಿಲಯಾರ್ಥಿಗಳಿಗೆ ಮನೆ ಇದ್ದಂತೆ- ಡಾ. ಅನುರಾಧಾ ಕುರುಂಜಿ

ಸಮಗ್ರ ನ್ಯೂಸ್: ವಿದ್ಯಾರ್ಜನೆಗಾಗಿ ವಸತಿ ನಿಲಯಗಳಿಗೆ ಬರುವ ನಿಲಯಾರ್ಥಿಗಳಿಗೆ ವಸತಿ ನಿಲಯಗಳು ತಮ್ಮ ಮನೆ ಇದ್ದ ಹಾಗೆ.  ಅಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ತಂದೆ ತಾಯಿಯರಂತೆ 24*7  ತಮ್ಮ ಸೇವೆಯಲ್ಲಿ ನಿರತರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ನಿಲಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ತಾವು ನೆಲೆಸಿದ ವಸತಿ ನಿಲಯಗಳಿಗೆ ಒಳ್ಳೆಯ ಹೆಸರು ಹಾಗೂ ಕೀರ್ತಿಯನ್ನು ತಂದು ಕೊಡುವ ಕೆಲಸವನ್ನು ಮಾಡಬೇಕು ಎಂದು ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಅಭಿಪ್ರಾಯಪಟ್ಟರು. ಅವರು ಸುಳ್ಯದ ಮೆಟ್ರಿಕ್

ವಸತಿ ನಿಲಯಗಳು ನಿಲಯಾರ್ಥಿಗಳಿಗೆ ಮನೆ ಇದ್ದಂತೆ- ಡಾ. ಅನುರಾಧಾ ಕುರುಂಜಿ Read More »

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಛದ್ಮವೇಷ ಸ್ಪರ್ಧೆ

ಸಮಗ್ರ ನ್ಯೂಸ್: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಡಿ .16 ರಂದು ಪುಟಾಣಿಗಳಿಗೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಈ ಕಾರ್ಯಕ್ರಮದಲ್ಲಿ  ತೀರ್ಪುಗಾರರಾಗಿ ಶ್ರೀಮತಿ .ಶ್ರೀಪ್ರಿಯಾ . ಎ .ಆರ್ ಹಾಗೂ ದಿಶಾ ಶೆಟ್ಟಿ ಉಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಪುಟಾಣಿ ಮಕ್ಕಳು ರೈತ, ಯೋಧ, ಅಜ್ಜಿ , ಗಾಂಧೀಜಿ, ಸೇವ್ ವಾಟರ್, ಸೇವ್ ನೇಚರ್ , ತೆಂಗಿನಕಾಯಿ, ರಾಮ, ಅನಾನಸ್, ಸ್ಟ್ರಬೆರ್ರಿ, ಟ್ರಾಫಿಕ್ ರೂಲ್ಸ್, ಟೀಚರ್, ಡಾಕ್ಟರ್, ಮಿಸ್ಸ್ ಯೂನಿವರ್ಸಲ್, ಮಂಡ್ಯ ಗೌಡ್ರು, ಡೊನೇಟ್ ಬ್ಲಡ್ ಮುಂತಾದ

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಛದ್ಮವೇಷ ಸ್ಪರ್ಧೆ Read More »

ಕುಕ್ಕೆ ಸುಬ್ರಹ್ಮಣ್ಯ: ಸಂಭ್ರಮದಿಂದ ಜರಗಿದ ಚಂಪಾಷಷ್ಟಿ ಮಹಾರಥೋತ್ಸವ

ಸಮಗ್ರ ನ್ಯೂಸ್: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಸೋಮವಾರ ಧನುರ್ ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾಗಿ, ಮಹಾರಥೋತ್ಸವ ಜರುಗಿತು. ಅಲ್ಲದೆ ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಿ, ಚಿಕ್ಕ ರಥೋತ್ಸವ ಜರುಗಿತು. ಸುವರ್ಣ ವೃಷ್ಠಿಯಾಗಿ, ಚಿಕ್ಕ ರಥೋತ್ಸವ ನೆರವೇರಿದ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ಜರುಗಿತು. ಬಳಿಕ ಷಷ್ಠಿ ಕಟ್ಟೆಯಲ್ಲಿ ಮತ್ತು ಒಳಾಂಗಣದ ಕಟ್ಟೆಯಲ್ಲಿ ಅವಳಿ ದೇವರಿಗೆ ಪೂಜೆ ನಡೆಯಿತು. ಸಹಸ್ರಾರು ಭಕ್ತರು

ಕುಕ್ಕೆ ಸುಬ್ರಹ್ಮಣ್ಯ: ಸಂಭ್ರಮದಿಂದ ಜರಗಿದ ಚಂಪಾಷಷ್ಟಿ ಮಹಾರಥೋತ್ಸವ Read More »

ತಾನು ಓದಿದ್ದ ಸರ್ಕಾರಿ ಶಾಲೆಯನ್ನೆ ದತ್ತು ಪಡೆದ ರಿಷಬ್ ಶೆಟ್ಟಿ..

ಸಮಗ್ರ ನ್ಯೂಸ್: ಕಾಂತರ-1 ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರುವ ರಿಷಬ್ ಶೆಟ್ಟಿ ಈಗ ಹೊಸ ವಿಷಯದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಹೌದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿಮೂಡಿಸಿ ಹಲವಾರು ಕನ್ನಡ ಶಾಲೆಗಳ ಉಳಿವಿಗೆ ಕಾರಣನಾಗಿದ್ದರು ನಟ, ನಿರ್ದೇಶಕ ರಿಷಬ್ ಶೆಟ್ಟಿ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೇ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ಅಳಿವಿನಂಚಿನಲ್ಲಿದ್ದ ತಾನು ಓದಿದ ಕೆರಾಡಿಯ ಸರ್ಕಾರಿ ಕನ್ನಡ ಶಾಲೆಯನ್ನು

ತಾನು ಓದಿದ್ದ ಸರ್ಕಾರಿ ಶಾಲೆಯನ್ನೆ ದತ್ತು ಪಡೆದ ರಿಷಬ್ ಶೆಟ್ಟಿ.. Read More »

ಸುಳ್ಯ: ಸೈಂಟ್ ಜೋಸೆಫ್ ಶಾಲಾ ವತಿಯಿಂದ ಡಿ.18,19 ರಂದು ವಾರ್ಷಿಕ ಕ್ರೀಡಾ ದಿನ

ಸಮಗ್ರ ನ್ಯೂಸ್: ಸೈಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಪೂರ್ವ-ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕ ಕ್ರೀಡಾ ದಿನವು ಸೈಂಟ್ ಜೋಸೆಫ್ ಶಾಲಾ ಮೈದಾನದಲ್ಲಿ ಡಿ.18 ರಂದು ನಡೆಯಲಿದೆ. ವಾರ್ಷಿಕ ವಿದ್ಯಾರ್ಥಿಗಳ ಕ್ರೀಡಾ ದಿನದ ಅಧ್ಯಕ್ಷರಾಗಿ ರೆ.ಫಾ. ವಿಕ್ಟರ್ ಡಿಸೋಜಾ ವರದಿಗಾರರು, ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಸುಳ್ಯ, ಉದ್ಘಾಟಕರಾಗಿ ಈರಯ್ಯ ದೂಂತೂರು ಪೊಲೀಸ್ ಉಪನಿರೀಕ್ಷಕರು ಸುಳ್ಯ, ಹಾಗೆಯೇ ಗೌರವ ಅತಿಥಿಯಾಗಿ ಗುರುಸ್ವಾಮಿ ಬಿ.ಜಿ ಅಧ್ಯಕ್ಷರು, ಪಿ.ಟಿ.ಎ. ಪ್ರೌಢಶಾಲೆ, ಜೆ.ಕೆ.ರೈ ಅಧ್ಯಕ್ಷರು, ಪಿ.ಟಿ.ಎ. ಪ್ರಾಥಮಿಕ ಶಾಲೆ, ಭವ್ಯಾ ಅಧ್ಯಕ್ಷರು,

ಸುಳ್ಯ: ಸೈಂಟ್ ಜೋಸೆಫ್ ಶಾಲಾ ವತಿಯಿಂದ ಡಿ.18,19 ರಂದು ವಾರ್ಷಿಕ ಕ್ರೀಡಾ ದಿನ Read More »

ಸುಳ್ಯ: ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ವರ್ಷಾವಧಿ ಜಾತ್ರೋತ್ಸವ

ಸಮಗ್ರ ನ್ಯೂಸ್: ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ವರ್ಷಾವಧಿ ಜಾತ್ರೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಡಿ.15 ಹಾಗೂ 16 ರಂದು ನಡೆಯಿತು. ಡಿ. 15 ನೇ ಶುಕ್ರವಾರದಂದು ಚಂಡಿಕಾಯಾಗದ ಪೂರ್ಣಾಹುತಿ, ಸುವಾಸಿನಿ ಪೂಜೆ, ಶ್ರೀ ದೇವರಿಗೆ ಕಲತಾಭಿಷೇಕ, ಹಸಿರು ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ, ಪ್ರಸಾರ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ರಾತ್ರಿ ಗಂಟೆ 7 ಕ್ಕೆ ಶ್ರೀ ದೇವಿಗೆ ದೊಡ್ಡ ರಂಗಪೂಜೆ ಹಾಗೂ ಮಹಾಪೂಜೆ. ರಾತ್ರಿ ಗಂಟೆ 8-00ರಿಂದ; ಶ್ರೀ ದೇವರ

ಸುಳ್ಯ: ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ವರ್ಷಾವಧಿ ಜಾತ್ರೋತ್ಸವ Read More »

ಮಂಗಳೂರು: ಹವ್ಯಕ ಸಭಾದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವೈದಿಕ ಸಮ್ಮಾನ ಕಾರ್ಯಕ್ರಮ

ಸಮಗ್ರ ನ್ಯೂಸ್: ಮಂಗಳೂರು ನಂತೂರು ಶ್ರೀ ಭಾರತೀ ಕಾಲೇಜು ಆವರಣದಲ್ಲಿರುವ ಶಂಕರಶ್ರೀ ಸಭಾಭವನದಲ್ಲಿ ಪ್ರತಿ ವರ್ಷ ನಡೆದು ಬರುವಂತೆ ಈ ವರ್ಷವೂ ಮಂಗಳೂರು ಹವ್ಯಕ ಸಭಾದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವೈದಿಕ ಸಮ್ಮಾನ ಕಾರ್ಯಕ್ರಮ ಡಿ.14 ರಂದು ಜರುಗಿತು. ಹವ್ಯಕ ಸಭಾ ಅಧ್ಯಕ್ಷರಾದ ಗೀತಾದೇವಿ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ವೈದಿಕ ಕೃಷ್ಣ ಭಟ್ ದಂಪತಿಯನ್ನು ಸಮ್ಮಾನಿಸಲಾಯಿತು. ವೈದಿಕರಾದ ಶಿವಪ್ರಸಾದ್ ಅಮೈ ಮಾತನಾಡಿ ಎಪ್ರಿಲ್ ತಿಂಗಳಲ್ಲಿ ವಸಂತ ವೇದಪಾಠ ಶಿಬಿರದ ಬಗ್ಗೆ

ಮಂಗಳೂರು: ಹವ್ಯಕ ಸಭಾದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವೈದಿಕ ಸಮ್ಮಾನ ಕಾರ್ಯಕ್ರಮ Read More »