ಕರಾವಳಿ

ಬೆಳ್ತಂಗಡಿ: ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿದ ಶಾಸಕ ಹರೀಶ್ ಪೂಂಜಾ| ಕಾಂಗ್ರೆಸ್ ವಿರುದ್ಧ ಹರಿಹಾಯ್ದು ವಿವಾದಕ್ಕೀಡಾದ ಶ್ರಮಿಕ!!

ಸಮಗ್ರ ನ್ಯೂಸ್: ದೇಶದಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ಇಡೀ ದೇಶದಲ್ಲಿ ಸಂಭ್ರಮದಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ನಡುವೆ ಬೆಳ್ತಂಗಡಿಯಲ್ಲಿ ನಡೆದ ತಾಲೂಕು ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಕಾಂಗ್ರೇಸ್ ವಿರುದ್ದ ವಾಗ್ದಾಳಿ ನಡೆಸುವ ಮೂಲಕ ರಾಜಕೀಯ ಭಾಷಣ ಮಾಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಬೆಳ್ತಂಗಡಿ ತಾಲೂಕು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಮಾತನಾಡಿದರು, ಬಳಿಕ ಕಾಂಗ್ರೆಸ್ ವಿರುದ್ದ ವಾಗ್ದಾಳಿ ಪ್ರಾರಂಭಿಸಿದ ಅವರು, ಬಿ.ಆರ್.ಅಂಬೇಡ್ಕರ್

ಬೆಳ್ತಂಗಡಿ: ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿದ ಶಾಸಕ ಹರೀಶ್ ಪೂಂಜಾ| ಕಾಂಗ್ರೆಸ್ ವಿರುದ್ಧ ಹರಿಹಾಯ್ದು ವಿವಾದಕ್ಕೀಡಾದ ಶ್ರಮಿಕ!! Read More »

ಚಂದನ ಸಾಹಿತ್ಯ ವೇದಿಕೆಯಿಂದ ಗಣರಾಜ್ಯೋತ್ಸವ ಕವಿಗೋಷ್ಠಿ- ಕೃತಿ ಬಿಡುಗಡೆ

ಸಮಗ್ರನ್ಯೂಸ್: ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸರಕಾರಿ ಬಸ್ ನಿಲ್ದಾಣ ಬಳಿ ಇರುವ ಶಾರದಾ ವಿದ್ಯಾಲಯದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಗಣರಾಜ್ಯೋತ್ಸವ ಕವಿಗೋಷ್ಠಿ – ಕೃತಿ ಬಿಡುಗಡೆ ಕಾರ್ಯಕ್ರಮವು ಜರುಗಿತು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ, ಚಿತ್ರನಿರ್ದೇಶಕ, ಜ್ಯೋತಿಷಿಯಾದ ಎಚ್. ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು. ಶಾರದಾ ಕಾಲೇಜ್ ನ ಶಾರದಾ ಮೇಡಂ ಅವರು ಉದ್ಘಾಟಿಸಿದರು. ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರು ದಿವ್ಯಸಾನಿದ್ಯ ವಹಿಸಿದ್ದರು. ಖ್ಯಾತ

ಚಂದನ ಸಾಹಿತ್ಯ ವೇದಿಕೆಯಿಂದ ಗಣರಾಜ್ಯೋತ್ಸವ ಕವಿಗೋಷ್ಠಿ- ಕೃತಿ ಬಿಡುಗಡೆ Read More »

ಸುಳ್ಯ: ಗಣರಾಜ್ಯೋತ್ಸವ ದಿನಾಚರಣೆ – ಧ್ವಜಾರೋಹಣ

ಸಮಗ್ರನ್ಯೂಸ್: ಜ.26: ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಸುಳ್ಯ ತಾಲೂಕು ಆಶ್ರಯದಲ್ಲಿ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸುಳ್ಯ ತಹಶಿಲ್ದಾರ್ ಜಿ.ಮಂಜುನಾಥ್ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ಎಒಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸುಳ್ಯ ನ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ,

ಸುಳ್ಯ: ಗಣರಾಜ್ಯೋತ್ಸವ ದಿನಾಚರಣೆ – ಧ್ವಜಾರೋಹಣ Read More »

ಸುಳ್ಯ: ಯುದ್ಧ ಸ್ಮಾರಕ ಲೋಕಾರ್ಪಣೆ; ಗೌರವಾರ್ಪಣೆ|’ಯೋಧರ ನಿಸ್ವಾರ್ಥ ಸೇವೆಯಿಂದ ದೇಶದಲ್ಲಿ ಶಾಂತಿ’

ಸಮಗ್ರ ಸಮಾಚಾರ:ಯೋಧರು ತಮ್ಮ ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸುತ್ತಿರುವುದರಿಂದ ದೇಶದಲ್ಲಿ ಶಾಂತಿ ನೆಲೆಸಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಸುಳ್ಯ ಪಟ್ಟಣ ಪಂಚಾಯತ್ ಕಛೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಯುದ್ಧ ಸ್ಮಾರಕದ ಲೋಕಾರ್ಪಣೆ ಮತ್ತು ಯುದ್ಧ ಸ್ಮಾರಕಕ್ಕೆ ಗೌರವಾರ್ಪಣೆ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇಂದು ಸುಳ್ಯದಲ್ಲಿ ಯುದ್ಧ ಸ್ಮಾರಕ ನಿರ್ಮಾಣಗೊಂಡಿದೆ‌ ಇದು ಇಲ್ಲಿನ ಜನರಿಗೆ ಪ್ರೇರಣೆಯಾಗುವ ಮೂಲಕ ಸುಳ್ಯದಿಂದಲೂ ಹಚ್ಚು ಹೆಚ್ಚು ಸೈನಿಕರು ಸೇವೆಗೆ ಸೇರುವಂತಾಗಲಿ ಎಂದ ಅವರ

ಸುಳ್ಯ: ಯುದ್ಧ ಸ್ಮಾರಕ ಲೋಕಾರ್ಪಣೆ; ಗೌರವಾರ್ಪಣೆ|’ಯೋಧರ ನಿಸ್ವಾರ್ಥ ಸೇವೆಯಿಂದ ದೇಶದಲ್ಲಿ ಶಾಂತಿ’ Read More »

ಪುತ್ತೂರು: ಉದ್ಯೋಗದ ಜಾಹೀರಾತು ನಂಬಿ ₹ 2.25ಲಕ್ಷ ಕಳೆದುಕೊಂಡ ಯುವತಿ

ಸಮಗ್ರ ನ್ಯೂಸ್: ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿದ್ದ ಉದ್ಯೋಗದ ಜಾಹೀರಾತನ್ನು ನಂಬಿ, ಉದ್ಯೋಗದ ಆಸೆಯಿಂದ ವಂಚಕರ ಖಾತೆಗೆ ₹ 2.25 ಲಕ್ಷ ಹಣ ಜಮೆ ಮಾಡಿ ಯುವತಿಯೊಬ್ಬರು ಮೋಸ ಹೋಗಿದ್ದಾರೆ. ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ (24) ವಂಚನೆಗೊಳಗಾದ ಯುವತಿ. ಪತ್ರಿಕೆ ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿದ ಯುವತಿ, ಅವರು ಸೂಚಿಸಿದಂತೆ 2023ರಜೂನ್ 28ರಿಂದ 2024ರ ಜನವರಿ12ರ ಅವಧಿಯಲ್ಲಿ ಹಂತ ಹಂತವಾಗಿ ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು ₹2.25 ಲಕ್ಷ ಪಾವತಿ ಮಾಡಿದ್ದರು.

ಪುತ್ತೂರು: ಉದ್ಯೋಗದ ಜಾಹೀರಾತು ನಂಬಿ ₹ 2.25ಲಕ್ಷ ಕಳೆದುಕೊಂಡ ಯುವತಿ Read More »

ಇಂದು ಕುಕ್ಕೆಗೆ ಮಾಜಿ ಪ್ರಧಾನಿ ದೇವೇಗೌಡ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಜ.26ರಂದು ಭೇಟಿ ನೀಡುವರು. ಜ.26ರಂದು ಧರ್ಮಸ್ಥಳದಿಂದ 1 ಗಂಟೆ ಹೊರಟು ರಸ್ತೆ ಮಾರ್ಗದ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವರು. ಸಂಜೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸಿ, ರಾತ್ರಿ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಮಾಡುವರು. ಜ.27ರಂದು ಕುಕ್ಕೆ ಕ್ಷೇತ್ರದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ರಸ್ತೆ ಮಾರ್ಗದ ಮೂಲಕ ಬಿಳೆನೆಲೆ ಹೆಲಿಪ್ಯಾಡ್ ಗೆ ಆಗಮಿಸಿ

ಇಂದು ಕುಕ್ಕೆಗೆ ಮಾಜಿ ಪ್ರಧಾನಿ ದೇವೇಗೌಡ Read More »

ಕಡಬ: ಆಶಕ್ತ ಕುಟುಂಬಕ್ಕೆ ಆಸರೆಯಾದ ಒಕ್ಕಲಿಗ ಗೌಡ ಮಹಾ ಸೇವಾ ಬಳಗ| ಶಾರದೆಗೆ ಒಲಿದ ಸೂರು!!

ಸಮಗ್ರ ನ್ಯೂಸ್: ಆರ್ಥಿಕವಾಗಿ ದುರ್ಬಲ ಹೊಂದಿದ ತಾಯಿ – ಮಗಳ ಕಷ್ಟಕ್ಕೆ ಮಿಡಿದ ಸಮಾನ ಮನಸ್ಕರ ತಂಡ ಆಸರೆಯಾಗಿದ್ದು, ಸೂರು ಕಲ್ಪಿಸಿ ಮಾನವೀಯತೆ ಮೆರೆದಿದೆ. ಒಕ್ಕಲಿಗ ಗೌಡ ಮಹಾ ಸೇವಾ ಬಳಗ ಕಡಬ ಇದರ ವತಿಯಿಂದ ತಾಯಿ ಮತ್ತು ಮಗಳಿಗೆ ಮನೆಯನ್ನು ದುರಸ್ತಿ ಮಾಡಿ ಹಸ್ತಾಂತರಿಸಿದ ಕಾರ್ಯಕ್ರಮವು ಜ.25 ರಂದು ಕಡಬ ತಾಲೂಕಿನ ಐತ್ತೂರು ಗ್ರಾಮದ ಆಜನದಲ್ಲಿ ನಡೆಯಿತು. ಕೆಲ ತಿಂಗಳ ಹಿಂದೆ ಅಷ್ಟೆ ಒಕ್ಕಲಿಗ ಗೌಡ ಮಹಾ ಸೇವಾ ಬಳಗ ಎಂಬ ಯುವಕರ ತಂಡ ಕಡಬದಲ್ಲಿ

ಕಡಬ: ಆಶಕ್ತ ಕುಟುಂಬಕ್ಕೆ ಆಸರೆಯಾದ ಒಕ್ಕಲಿಗ ಗೌಡ ಮಹಾ ಸೇವಾ ಬಳಗ| ಶಾರದೆಗೆ ಒಲಿದ ಸೂರು!! Read More »

ಸುಳ್ಯ: ಕುಂಕುಂ ವಸ್ತ್ರ ಮಳಿಗೆಯಲ್ಲಿ ಬಂಪ‌ರ್ ಬಹುಮಾನವಾದ ಸ್ಕೂಟಿ ಡ್ರಾ

ಸಮಗ್ರ ನ್ಯೂಸ್: ಸುಳ್ಯದ ಹೆಸರಾಂತ ವಸ್ತ್ರಮಳಿಗೆ ಕುಂ..ಕುಂ.. ಪ್ಯಾಷನ್ ನಲ್ಲಿ ದೀಪಾವಳಿ, ಹೊಸ ವರುಷ ಹಾಗೂ ಸುಳ್ಯ ಜಾತ್ರೋತ್ಸವ ಹಬ್ಬಗಳ ಪ್ರಯುಕ್ತ 151 ದಿನಗಳ ಬಿಗ್ ಸೇಲ್ ನಲ್ಲಿ ಹಲವು ಬಹುಮಾನಗಳನ್ನು ಆಯೋಜಿಸಿದ್ದು ಬಂಪ‌ರ್ ಬಹುಮಾನವಾದ ಸ್ಕೂಟಿಯನ್ನು ಶಿವಲಿಂಗ ಮತ್ತು ದೀಪಾ ಅವರಿಗೆ ದೊರಕಿದೆ. ವಿಜೇತರಿಗೆ ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿಗಳು ಬಹುಮಾನ ಹಸ್ತಾಂತರಿಸಿ ಸಂಭ್ರಮಿಸಿದರು.

ಸುಳ್ಯ: ಕುಂಕುಂ ವಸ್ತ್ರ ಮಳಿಗೆಯಲ್ಲಿ ಬಂಪ‌ರ್ ಬಹುಮಾನವಾದ ಸ್ಕೂಟಿ ಡ್ರಾ Read More »

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣಪತಿಷ್ಠೆ| ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ವಿಶೇಷ ಪೂಜೆ, ರಾಮತಾರಕ ಯಜ್ಞ, ಮಕ್ಕಳಿಂದ ಭಜನಾ ಸಂಕೀರ್ತನೆ

ಸಮಗ್ರ ನ್ಯೂಸ್:ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆಯು ಜ.22 ಸೋಮವಾರದಂದು ವಿಜೃಂಭಣೆಯಿಂದ ನಡೆಯಿತು. ಈ ಸುಮಧುರ ಕ್ಷಣವನ್ನು ಭಾರತದ ಹಿಂದೂ ಬಂಧುಗಳು ದೇವಸ್ಥಾನ, ದೈವಸ್ಥಾನ, ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಮಾಡುವುದರ ಮೂಲಕ ವಿಶ್ವದಾದ್ಯಂತ ಸಂಭ್ರಮಿಸಿದರು. ಅದರಂತೆಯೇ ಜಯನಗರದ ಕೊರಂಬಡ್ಕದಲ್ಲಿರುವ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಜಯನಗರ ಘಟಕ ಇವುಗಳ ಆಶ್ರಯದಲ್ಲಿ ಶ್ರೀ ರಾಮತಾರಕ ಯಜ್ಞ ಮತ್ತು ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 7 ಗಂಟೆಗೆ

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣಪತಿಷ್ಠೆ| ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ವಿಶೇಷ ಪೂಜೆ, ರಾಮತಾರಕ ಯಜ್ಞ, ಮಕ್ಕಳಿಂದ ಭಜನಾ ಸಂಕೀರ್ತನೆ Read More »

ಸುಳ್ಯ: ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಮಗ್ರ ನ್ಯೂಸ್: ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ,ಗುಳಿಗ ದೈವ,ಕೊರಗಜ್ಜ ದೈವಸ್ಥಾನ ವ್ಯವಸ್ಥಾಪನ ಆಡಳಿತ ಕಾರ್ಯಸೇವಾ ಸಮಿತಿ ಟ್ರಸ್ಟ್ (ರಿ) ಶ್ರೀ ಕ್ಷೇತ್ರ ಕೊರಂಬಡ್ಕ ಜಯನಗರ ವತಿಯಿಂದ ಎ.6 ಮತ್ತು ಎ.7 ರಂದು ನಡೆಯುವ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಭಕ್ತರ ಸಮ್ಮುಖದಲ್ಲಿ ಜ.22 ರಂದು ಅಯೋಧ್ಯೆ ಶ್ರೀ ರಾಮಲಲ್ಲಾ ಪ್ರಾಣಪತಿಷ್ಠೆಯ ಶುಭಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಕೇಶವ ಹೊಸಗದ್ದೆ, ಕಾರ್ಯದರ್ಶಿ ಸುಂದರ ಕುದ್ಪಾಜೆ, ಸಂಚಾಲಕ ಜಗನ್ನಾಥ ಜಿ

ಸುಳ್ಯ: ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »