ಸಿನಿಮಾ

ಮತ್ತೆ ಕಿರುತೆರೆಗೆ ಅಪ್ಪಳಿಸಲಿದೆ ‘ಬಿಗ್ ಬಾಸ್-10’| ವಾರಪೂರ್ತಿ ಮನರಂಜನೆಗೆ ರೆಡಿಯಾಗಿ…

ಸಮಗ್ರ ನ್ಯೂಸ್: ಕಿರುತೆರೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್-10 ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ಅಕ್ಟೋಬರ್ 8, 2023 ರಿಂದ ಪ್ರಸಾರವಾಗಲಿದೆ. ಮುಂಬರುವ ಸೀಸನ್ ತನ್ನ 10 ನೇ ವಾರ್ಷಿಕೋತ್ಸವವನ್ನು ಆಚರಿಸಲು ‘ಹ್ಯಾಪಿ ಬಿಗ್ ಬಾಸ್’ ಎಂಬ ಥೀಮ್ ಅನ್ನು ಹೊಂದಿರುತ್ತದೆ. ಭಾರಿ ಡ್ರಾಮಾ ಮತ್ತು ವಿವಾದಗಳಿಗೆ ಹೆಸರುವಾಸಿಯಾದ ಈ ಕಾರ್ಯಕ್ರಮವು ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಟಿವಿ ಸರಣಿಗಳಲ್ಲಿ ಒಂದಾಗಿದೆ. ಅಕ್ಟೋಬರ್ 8 […]

ಮತ್ತೆ ಕಿರುತೆರೆಗೆ ಅಪ್ಪಳಿಸಲಿದೆ ‘ಬಿಗ್ ಬಾಸ್-10’| ವಾರಪೂರ್ತಿ ಮನರಂಜನೆಗೆ ರೆಡಿಯಾಗಿ… Read More »

ಸೆ.24ರಿಂದ ಚಂದನ ವಾಹಿನಿಯಲ್ಲಿ ‘ಅಂಬರ ಮರ್ಲೆರ್’ ತುಳು ಧಾರಾವಾಹಿ ಆರಂಭ

ಸಮಗ್ರ ನ್ಯೂಸ್: ಅರ್ನ ಕ್ರಿಯೇಷನ್ಸ್ ಸಂಸ್ಥೆಯ ‘ಅಂಬರ ಮರ್ಲೆರ್’ ಎಂಬ ತುಳು ಸಾಮಾಜಿಕ ಹಾಸ್ಯ ಧಾರಾವಾಹಿಯು ಚಂದನ ವಾಹಿನಿಯಲ್ಲಿ ಸೆ.24ರಿಂದ ಪ್ರತಿ ಭಾನುವಾರ ಪ್ರಸಾರವಾಗಲಿದೆ ಎಂದು ನಿರ್ಮಾಪಕ ಹಾಗೂ ಪ್ರಧಾನ ನಿರ್ದೇಶಕ ಸುಂದರ್ ರೈ ಮಂದಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಪ್ರತಿ ಭಾನುವಾರ ಮಧ್ಯಾಹ್ನ 1.30ರಿಂದ 2 ಗಂಟೆಯವರೆಗೆ ಧಾರಾವಾಹಿ ಪ್ರಸಾರವಾಗಲಿದೆ. ನಟರಾದ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ಸುಂದರ್ ರೈ ಮಂದಾರ, ಉಮೇಶ್ ಮಿಜಾರ್,

ಸೆ.24ರಿಂದ ಚಂದನ ವಾಹಿನಿಯಲ್ಲಿ ‘ಅಂಬರ ಮರ್ಲೆರ್’ ತುಳು ಧಾರಾವಾಹಿ ಆರಂಭ Read More »

ನಟ, ಸಂಗೀತ ನಿರ್ದೇಶಕ ವಿಜಯ್ ಆ್ಯಂಟನಿ ಪುತ್ರಿ ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಖ್ಯಾತ ತಮಿಳು ನಟ, ಸಂಗೀತ ನಿರ್ದೇಶಕ ವಿಜಯ್‌ ಆಯಂಟೊನಿ ಅವರ 16ರ ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿರ್ಮಾಪಕರಾಗಿ ಹೆಸರು ಮಾಡಿರುವ ವಿಜಯ್‌ ಅವರ ಮಗಳು ಮೀರಾ ಚೆನ್ನೈನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಮಂಗಳವಾರ ಮುಂಜಾನೆ ಎದ್ದು ನೋಡುವಾಗ ಚೆನ್ನೈಯ ನಿವಾಸದಲ್ಲಿ ಆಕೆ ನೇಣು ಬಿಗಿದುಕೊಂಡಿದ್ದು ಕಂಡುಬಂತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಯಲಿಲ್ಲ. ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು ಎನ್ನಲಾಗಿದೆ. ಮೀರಾ ಒತ್ತಡ ಮತ್ತು

ನಟ, ಸಂಗೀತ ನಿರ್ದೇಶಕ ವಿಜಯ್ ಆ್ಯಂಟನಿ ಪುತ್ರಿ ನೇಣು ಬಿಗಿದು ಆತ್ಮಹತ್ಯೆ Read More »

ಯುಐ ಟೀಸರ್ ಬಿಡುಗಡೆ| ಏನನ್ನೂ ತೋರಿಸದೇ ಪ್ರೇಕ್ಷಕರ ತಲೆಗೆ ಹುಳ ಬಿಟ್ಟ ಉಪ್ಪಿ

ಸಮಗ್ರ ನ್ಯೂಸ್:‌ ಉಪೇಂದ್ರ ಅವರ ಜನ್ಮದಿನವಾದ ಸೆ.18ರಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಯುಐ (UI) ಟೀಸರ್ ಊರ್ವಶಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಮುಂದೆ ಅನಾವರಣವಾಗಿದೆ. ಈ ವೇಳೆ ಏನನ್ನೂ ತೋರಿಸದೇ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ. ಯುಐ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಶಿವರಾಜ್ ಕುಮಾರ್ ದಂಪತಿ, ದುನಿಯಾ ವಿಜಯ್ ಕೂಡ ಭಾಗಿಯಾಗಿದ್ದು, ದೊಡ್ಡ ಪರದೆ ಮೇಲೆ ‘ಯುಐ’ ಟೀಸರ್​ ರಿಲೀಸ್ ಮಾಡಲಾಗಿದೆ. ಆದರೆ ಅದರಲ್ಲಿ ಏನೂ ಕಾಣಿಸಿಲ್ಲ. ಬರೀ ಶಬ್ದ ಕೇಳಿಸಿದೆ ಅಷ್ಟೇ.ಉಪೇಂದ್ರ ಏನೇ ಮಾಡಿದರೂ ಅದು ತುಂಬ

ಯುಐ ಟೀಸರ್ ಬಿಡುಗಡೆ| ಏನನ್ನೂ ತೋರಿಸದೇ ಪ್ರೇಕ್ಷಕರ ತಲೆಗೆ ಹುಳ ಬಿಟ್ಟ ಉಪ್ಪಿ Read More »

ಯಾರು ಗೊತ್ತಾ ಈ ಮಲೆಯಾಳಿ ಕುಟ್ಟಿ| ನೀವಂತೂ ಫಿದಾ ಆಗೋದು ಗ್ಯಾರಂಟಿ

ಸಮಗ್ರ ನ್ಯೂಸ್: ಈ ಫೋಟೋ ನೋಡಿದ್ರೆ ಯಾರಾದ್ರೂ ಇದು ಯಾರಪ್ಪಾ ಈ ಬೆಡಗಿ ಅಂತ ಕಣ್ಣು ಮಿಟುಕಿಸುವುದು ಗ್ಯಾರಂಟಿ. ಅಂದಹಾಗೆ ಸದಾ ‘ಹಾಟ್‌’ ಅವತಾರಗಳನ್ನೇ ನೋಡಿದ ಅಭಿಮಾನಿಗಳಿಗೆ ಕಳೆದ ಭಾನುವಾರ ಅಚ್ಚರಿ ಕಾದಿತ್ತು. ಹಾಟ್‌ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸನ್ನಿ ಲಿಯೋನ್‌ರನ್ನು ಸಾಂಪ್ರದಾಯಿಕ ಕೇರಳ ಸೀರೆಯಲ್ಲಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಜಿ ಪಾರ್ನ್‌ಸ್ಟಾರ್‌ ಸನ್ನಿ ಲಿಯೋನ್‌ ತಮ್ಮ ಹಳೆಯ ವೃತ್ತಿ ಜೀವನವನ್ನು ಬಿಟ್ಟು ಬಾಲಿವುಡ್‌ನಲ್ಲಿ ಅವಕಾಶ ಪಡೆದುಕೊಳ್ಳಲು ಆರಂಭಿಸಿ ಹಲವು ವರ್ಷಗಳು ಕಳೆದಿವೆ. ಅಮೆರಿಕದ ಅಡಲ್ಟ್‌ ಫಿಲ್ಮ್‌ ಇಂಡಸ್ಟ್ರಿಯಲ್ಲಿ

ಯಾರು ಗೊತ್ತಾ ಈ ಮಲೆಯಾಳಿ ಕುಟ್ಟಿ| ನೀವಂತೂ ಫಿದಾ ಆಗೋದು ಗ್ಯಾರಂಟಿ Read More »

ಸಮಾಜದ ದೃಷ್ಟಿಕೋನ ಬದಲಾಗಬೇಕು: ತೇಜಕುಮಾರ್ ಬಡ್ಡಡ್ಕ

ಸಮಗ್ರ ನ್ಯೂಸ್: ಕಲಾವಿದರು ಮುಂದೆ ಬಂದು ಅವಕಾಶವನ್ನು ಬೆಳೆಸಿಕೊಳ್ಳಬೇಕು. ಅವಕಾಶ ಎನ್ನುವುದು ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇರುತ್ತದೆ. ತಮ್ಮ ಪ್ರತಿಭೆಯ ತೋರಿಸಿಕೊಂಡಾಗ ಒಂದಷ್ಟು ಜನರಿಗೆ ಪರಿಚಯವಾಗಲು ಸಾಧ್ಯ ಹಾಗೆಯೇ ಸಮಾಜದ ದೃಷ್ಟಿಕೋನ ಬದಲಾಗಬೇಕು ಎಂದರೆ ಹದಿಯರೆಯ ವಿದ್ಯಾರ್ಥಿಗಳು ಪ್ರೇಮ ವೈಕಾಲ್ಯಕ್ಕೆ ಹಿಡಿತದಲ್ಲಿರಬೇಕು ಎಂದು ತೇಜಕುಮಾರ್ ಬಡ್ಡಡ್ಕ ಹೇಳಿದರು. ಇವರು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಲವ್ ಮೈನಸ್ 18 ಕಿರು ಚಿತ್ರದ ಪ್ರೀಮಿಯರ್ ಶೋ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು. ಸುಳ್ಯದಲ್ಲಿ ಕಲಾವಿದರು ಹೆಚ್ಚಿನ ಟಿವಿ

ಸಮಾಜದ ದೃಷ್ಟಿಕೋನ ಬದಲಾಗಬೇಕು: ತೇಜಕುಮಾರ್ ಬಡ್ಡಡ್ಕ Read More »

ಲವ್ ಮೈನಸ್ 18 ಟೆಲಿಫಿಲಂ ಆ. 26ಕ್ಕೆ ನಿಮ್ಮ ಮುಂದೆ

ಸಮಗ್ರ ನ್ಯೂಸ್: ಸುಳ್ಯದ ಶ್ರೀ ಟೆಕ್ನಾಲಜಿ ನಿರ್ಮಾಣದಲ್ಲಿ ಮೂಡಿಬಂದಿರುವ ಲವ್ ಮೈನಸ್ 18 ಟೆಲಿಫಿಲಂ ಪ್ರೀಮಿಯರ್ ಶೋ ಆ. 26ರಂದು ಏಪಿಎಂಸಿ ಸಭಾ ಭವನದಲ್ಲಿ ನಡೆಯಲಿದೆ. ಶ್ರೀ ಟೆಕ್ನಾಲಜಿ ಸುಳ್ಯ ನಿರ್ಮಾಣದ ಚಿದಾನಂದ್ ಪರಪ್ಪರವರ ಕಥೆ ನಿರ್ದೇಶನದ ಯಶ್ ಫೋಟೋಗ್ರಫಿ ಅವರ ಸಿನಿಮಾಟೋಗ್ರಫಿಯಲ್ಲಿ ಜೀವನ್ ಕೆರೆಮೂಲೆ, ಪ್ರಸಾದ್ ಕಾಟೂರು, ಭವ್ಯ ಬೆಳ್ಳಾರೆ, ಸುಶ್ಮಿತಾ ಮೋಹನ್, ಪುಷ್ಪರಾಜ್ ಏನೆಕಲ್ ಮತ್ತು ಡಿಂಪಲ್ ಡಿಸೋಜ ಇವರ ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ಟೆಲಿಫಿಲಂ ಲವ್ ಮೈನಸ್ 18, ಪ್ರೀಮಿಯರ್ ಶೋ ಮತ್ತು

ಲವ್ ಮೈನಸ್ 18 ಟೆಲಿಫಿಲಂ ಆ. 26ಕ್ಕೆ ನಿಮ್ಮ ಮುಂದೆ Read More »

ನಟ ದರ್ಶನ್ ರಿಂದ ಕ್ಷಮಾಪಣೆ| ದೃಶ್ಯ ಮಾಧ್ಯಮಗಳಿಂದ ಬಹಿಷ್ಕಾರ ತೆರವು

ಸಮಗ್ರ ನ್ಯೂಸ್: ಸ್ಯಾಂಡಲ್​ವುಡ್ ಸ್ಟಾರ್ ಡಿ ಬಾಸ್ ದರ್ಶನ್ ಹಾಗೂ ಮೀಡಿಯಾ ಮಧ್ಯೆ ಇರುವ ಮುನಿಸು ಸ್ವಲ್ಪ ದೀರ್ಘವೇ ಆಗಿತ್ತು. ಮೀಡಿಯಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಇದ್ದಂತಹ ಕಹಿ ಮುನಿಸು ಕೊನೆಗೂ ಎಂಡ್ ಆಗಿದೆ. ಅಂತೂ ಚಾಲೆಂಜಿಂಗ್ ಸ್ಟಾರ್ ಈ ಬಗ್ಗೆ ಕ್ಷಮೆ ಕೇಳಿದ್ದು ಮಾಧ್ಯಮ ಮಂದಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ದರ್ಶನ್ ಇನ್​ಸ್ಟಾಗ್ರಾಮ್​ನಲ್ಲಿ ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದು ಅದಕ್ಕೆ ಸಮಸ್ತ ಕರ್ನಾಟಕ ಜನತೆಗೆ ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ,

ನಟ ದರ್ಶನ್ ರಿಂದ ಕ್ಷಮಾಪಣೆ| ದೃಶ್ಯ ಮಾಧ್ಯಮಗಳಿಂದ ಬಹಿಷ್ಕಾರ ತೆರವು Read More »

ವಿಚ್ಛೇದನ ಪಡೆದುಕೊಂಡ ಬಿಗ್ ಬಾಸ್ ಸ್ಪರ್ಧಿ ‘ಕಿರಿಕ್ ಕೀರ್ತಿ’| ಮುರಿದು ಬಿತ್ತು ದಾಂಪತ್ಯ

ಸಮಗ್ರ ನ್ಯೂಸ್: ‘ಬಿಗ್ ಬಾಸ್’ ಸೀಸನ್ 4, ‘ಜೋಡಿ ನಂಬರ್ 1’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದ ನಟ ಹಾಗೂ ನಿರೂಪಕ ಕಿರಿಕ್ ಕೀರ್ತಿ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಕೀರ್ತಿ, ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ, ಅಧಿಕೃತವಾಗಿ ಇನ್ನು

ವಿಚ್ಛೇದನ ಪಡೆದುಕೊಂಡ ಬಿಗ್ ಬಾಸ್ ಸ್ಪರ್ಧಿ ‘ಕಿರಿಕ್ ಕೀರ್ತಿ’| ಮುರಿದು ಬಿತ್ತು ದಾಂಪತ್ಯ Read More »

ಚಿತ್ರರಂಗಕ್ಕೆ ಮತ್ತೊಂದು ಶಾಕ್| ಕಿರುತೆರೆ ನಟ ಪವನ್ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ಇತ್ತೀಚೆಗೆ ಹೃದಯಾಘಾತ ಪ್ರಕರಣ ಹೆಚ್ಚುತ್ತಿದ್ದು, ಯುವವರ್ಗ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಇತ್ತೀಚೆಗೆ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಕೂಡ ಹಾರ್ಟ್​ ಅಟ್ಯಾಕ್​ನಿಂದ ಮೃತಪಟ್ಟಿದ್ದಾರೆ. ಈ ನೋವು ಕಡಿಮೆ ಆಗುವ ಮೊದಲೇ ಕಿರುತೆರೆ ನಟ ಮಂಡ್ಯ ಮೂಲದ ಪವನ್ ಅವರು ಮೃತಪಟ್ಟಿದ್ದಾರೆ. ಹಿಂದಿ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದ ಮಂಡ್ಯ ಮೂಲದ ಪವನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 25 ವರ್ಷ ವಯಸ್ಸಾಗಿತ್ತು. ಇಂದು (ಆಗಸ್ಟ್ 18) ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಹರಿಹರಪುರ

ಚಿತ್ರರಂಗಕ್ಕೆ ಮತ್ತೊಂದು ಶಾಕ್| ಕಿರುತೆರೆ ನಟ ಪವನ್ ಹೃದಯಾಘಾತದಿಂದ ಸಾವು Read More »