ಸಮಗ್ರ ಸಮಾಚಾರ

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂಬರುವ ವಾರ ವಿಶೇಷವಾಗಿದ್ದು 12 ರಾಶಿಗಳ ಆರ್ಥಿಕ ಹಾಗೂ ವೃತ್ತಿ ಜೀವನದಲ್ಲಿ ಹಲವಾರು ಬದಲಾವಣೆ ತರಲಿದೆ. ಹಾಗಾದರೆ ಅಕ್ಟೋಬರ್ 19ರಿಂದ 25ರವರೆಗಿನ ಈ ವಾರದಲ್ಲಿ ದ್ವಾದಶ ರಾಶಿಗಳ ಗೋಚಾರಫಲ ಹೇಗಿದೆ ಎಂದು ತಿಳಿಯಿರಿ. ಮೇಷ ರಾಶಿ:ಈ ವಾರ ಮೇಷ ರಾಶಿಯ ಜನರಲ್ಲಿ ಮಿಶ್ರ ಫಲಿತಾಂಶಗಳ ನೋಡಬಹುದು. ವಾರದ ಆರಂಭದಲ್ಲಿ ಜನರೊಂದಿಗೆ ವಾದಗಳನ್ನು ತಪ್ಪಿಸಿ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಸಂಬಂಧಗಳ ಬಗ್ಗೆ ವಿಶೇಷ ಗಮನ ಕೊಡಿ. ವಾರದ ಆರಂಭದಲ್ಲಿ […]

ದ್ವಾದಶ ರಾಶಿಗಳ ವಾರಭವಿಷ್ಯ Read More »

ಜಪಾನ್ ನ‌ಲ್ಲಿ ಭಾರತೀಯ ರಾಯಭಾರಿಯಾಗಿ ಕಾಸರಗೋಡಿನ ನಗ್ಮಾ

ಸಮಗ್ರ ನ್ಯೂಸ್: ಜಪಾನ್‌ನಲ್ಲಿ ಭಾರತೀಯ ರಾಯಭಾರಿಯನ್ನಾಗಿ ಕಾಸರಗೋಡು ಮೂಲದ ನಗ್ಮಾ ಮಹಮ್ಮದ್ ಮಾಲಿಕ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.‌ ನಗರದ ಕೋಟೆರಸ್ತೆಯ ಮೂಲನಿವಾಸಿಗಳಾದ, ಈಗ ನವದೆಹಲಿಯಲ್ಲಿ ನೆಲೆಸಿರುವ ಮಹಮ್ಮದ್ ಹಬೀಬುಲ್ಲ- ಸುಲುಬಾನು ದಂಪತಿ ಪುತ್ರಿ ನಗ್ಮಾ. ಅವರು ನವದೆಹಲಿಯಲ್ಲಿ ಜನಿಸಿ ಅಲ್ಲಿನ ಸೇಂಟ್ ಸ್ಟಿಫನ್ ಕಾಲೇಜು ಮತ್ತು ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಇಂಗ್ಲಿಷ್ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಹಿಂದೆ ಪೋಲೇಂಡ್‌ನಲ್ಲಿ ಭಾರತೀಯ ರಾಯಭಾರಿಯಾಗಿದ್ದರು. ಇವರು ಸಾಹಿತಿ ಸಾರಾ ಅಬೂಬಕ್ಕರ್ ಅವರ

ಜಪಾನ್ ನ‌ಲ್ಲಿ ಭಾರತೀಯ ರಾಯಭಾರಿಯಾಗಿ ಕಾಸರಗೋಡಿನ ನಗ್ಮಾ Read More »

ಪುತ್ತೂರು: ಆಟೋ ಚಾಲಕನ ಮೇಲೆ ಟ್ರಾಪಿಕ್ ಪೊಲೀಸರ ದರ್ಪ

ಸಮಗ್ರ ನ್ಯೂಸ್: ಪುತ್ತೂರು ನಗರದ ದರ್ಬೆ ಸಮೀಪ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಸಂಚಾರಿ ಪೊಲೀಸರು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಶುಕ್ರವಾರ ಸಂಜೆ ದರ್ಬೆಯಿಂದ ಮಾಣಿ ಮೈಸೂರು ಹೆದ್ದಾರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ನಡೆದಿದೆ. ಸಂಚಾರಿ ಪೊಲೀಸರ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸಂಚಾರಿ ಠಾಣೆಯ ಪೊಲೀಸರು ಆಟೋ ರಿಕ್ಷಾಕ್ಕೆ ಅಡ್ಡಲಾಗಿ ಬಂದು ಚಾಲಕನ ಮೇಲೆ

ಪುತ್ತೂರು: ಆಟೋ ಚಾಲಕನ ಮೇಲೆ ಟ್ರಾಪಿಕ್ ಪೊಲೀಸರ ದರ್ಪ Read More »

ಪುತ್ತೂರು ಮೂಲದ ಯುವಕ ಬೆಂಗಳೂರಿನ ಲಾಡ್ಜ್ ನಲ್ಲಿ ನಿಗೂಢ ಸಾವು!!

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಪುತ್ತೂರು ಮೂಲದ ಯುವಕ ನಿಗೂಢವಾಗಿ ಸಾವನಪ್ಪಿದ್ದಾನೆ. ಗ್ರಾಂಡ್ ಚಾಯ್ಸ್ ಲಾಡ್ಜ್ ನಲ್ಲಿ ತಕ್ಷಿತ್ (20) ಶವವಾಗಿ ಪತ್ತೆಯಾಗಿದ್ದಾನೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. 8 ದಿನದ ಹಿಂದೆ ಪ್ರೇಯಸಿಯ ಜೊತೆಗೆ ತಕ್ಷಿತ್ ಬೆಂಗಳೂರಿಗೆ ಬಂದಿದ್ದಾರೆ. 8 ದಿನಗಳ ಕಾಲ ಪ್ರೇಮಿಗಳು ಲಾಡ್ಜ್ ನಲ್ಲೆ ವಾಸವಿದ್ದರು. 8 ದಿನಗಳ ಕಾಲ ಊಟ ತಿಂಡಿಯನ್ನು ಪಾರ್ಸೆಲ್ ತರಿಸಿಕೊಂಡಿದ್ದರು. ಊಟ ಸೇವಿಸಿದ ಬಳಿಕ ಇಬ್ಬರಿಗೂ ಫುಡ್ ಪಾಯಿಸನ್ ಆಗಿತ್ತು ಈ ವೇಳೆ

ಪುತ್ತೂರು ಮೂಲದ ಯುವಕ ಬೆಂಗಳೂರಿನ ಲಾಡ್ಜ್ ನಲ್ಲಿ ನಿಗೂಢ ಸಾವು!! Read More »

ಬಿಜೆಪಿ ನಾಯಕರ ಕಿವಿ ಹಿಂಡಿದ RSS| ಬ್ಯಾನ್ ಚರ್ಚೆಯಿಂದ ಹಿಂದೆ ಸರಿಯಲು ಸಂಘ ಸೂಚನೆ

ಸಮಗ್ರ ನ್ಯೂಸ್: ಆರೆಸೆಸ್ಸ್ ಬ್ಯಾನ್ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಡುವೆ ಗುದ್ದಾಟ ನಡೆಯುತ್ತಿದ್ದರೆ, ಅತ್ತ ಆರೆಸೆಸ್ಸ್ ಬಿಜೆಪಿಗೇ ಗುದ್ದು ನೀಡಿದೆ. ನೀವೆಲ್ಲ ಸಂಘದ ವಕ್ತಾರರಾಗಬೇಡಿ.‌ಸಂಘದ ವಿಚಾರದಲ್ಲಿ ನೀವೇನು ಮಾತಾಡೋದು. ಅದನ್ನ ಸಂಘ ನೋಡಿಕೊಳ್ಳುತ್ತೆ. ನಿಮ್ಮ ಕೆಲಸ ನೀವು ನೋಡಿ ಎಂದು ಗರಂ ಆಗಿದೆ ಎನ್ನಲಾಗಿದೆ. ರಾಜ್ಯ ರಾಜಕೀಯದಲ್ಲಿ ಇದೀಗ ಸದ್ದು ಮಾಡುತ್ತಿರುವ ಆರ್.ಎಸ್.ಎಸ್. ಚಟುವಟಿಕೆಗಳ ನಿಷೇಧ ಕುರಿತ ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರ ವಿವಾದವು ಒಂದು ಹೊಸ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರಕ್ಕೆ

ಬಿಜೆಪಿ ನಾಯಕರ ಕಿವಿ ಹಿಂಡಿದ RSS| ಬ್ಯಾನ್ ಚರ್ಚೆಯಿಂದ ಹಿಂದೆ ಸರಿಯಲು ಸಂಘ ಸೂಚನೆ Read More »

‘ಮಂತ್ರ ಮಾಂಗಲ್ಯ’ದ ಮೂಲಕ ದಾಂಪತ್ಯದ ಸರಿಗಮ ಹಾಡಿದ ಸುಹಾನಾ ಸೈಯದ್| ನಿತಿನ್ ಶಿವಾಂಶ್ ಜೊತೆ ಸಂಸಾರಕ್ಕೆ ಕಾಲಿಟ್ಟ ಗಾಯಕಿ

ಸಮಗ್ರ ನ್ಯೂಸ್: ಸರಿಗಮಪ ಖ್ಯಾತಿಯ ಪ್ರತಿಭಾವಂತ ಗಾಯಕಿ ಸುಹಾನಾ ಸೈಯದ್ ಅವರು ಶುಕ್ರವಾರ ತಮ್ಮ ಬಹುಕಾಲದ ಸ್ನೇಹಿತ ನಿತಿನ್ ಶಿವಾಂಶ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನಕಪುರದ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಈ ಸುಂದರ ವಿವಾಹ ಸಮಾರಂಭವು ಆಪ್ತ ಬಂಧು–ಬಳಗದ ಸಮ್ಮುಖದಲ್ಲಿ ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ಆಶಯದಂತೆ ಸರಳವಾಗಿ ನೆರವೇರಿತು. ಹಾರ ಬದಲಾಯಿಸಿದ ಕ್ಷಣದಲ್ಲಿ ಸುಹಾನಾ ಭಾವುಕರಾದರು. ಸಾಗರ ಮೂಲದ ಸುಹಾನಾ, ಸರಿಗಮಪ ವೇದಿಕೆಯ ಮೂಲಕ ಖ್ಯಾತಿ ಗಳಿಸುವುದರ ಜೊತೆಗೆ ಭಕ್ತಿ ಗೀತೆಗಳ ಗಾಯನದಲ್ಲಿಯೂ ಜನಮನ

‘ಮಂತ್ರ ಮಾಂಗಲ್ಯ’ದ ಮೂಲಕ ದಾಂಪತ್ಯದ ಸರಿಗಮ ಹಾಡಿದ ಸುಹಾನಾ ಸೈಯದ್| ನಿತಿನ್ ಶಿವಾಂಶ್ ಜೊತೆ ಸಂಸಾರಕ್ಕೆ ಕಾಲಿಟ್ಟ ಗಾಯಕಿ Read More »

ರೈಲಿನಲ್ಲಿ ‌ಹೆರಿಗೆ ಮಾಡಿಸಿದ ಯುವಕ| ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ

ಸಮಗ್ರ ನ್ಯೂಸ್: ರೈಲಿನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಂತಹ ಘಟನೆ ಮುಂಬೈನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯ ನಂತರ ಅಲ್ಲಿ ಸೇರಿದವರೆಲ್ಲರೂ ಸೇರಿ ಯುವಕನನ್ನು ಶ್ಲಾಘಿಸುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಅನೇಕರು ಯುವಕನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ಹೇಳಿದ್ದಾರೆ. ಯುವಕನೋರ್ವನ ಸಮಯಪ್ರಜ್ಞೆ ಎರಡು ಅಮೂಲ್ಯ ಜೀವಗಳನ್ನು ಉಳಿಸಿದೆ. ಮುಂಬೈನ ರಾಮ ಮಂದಿರ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ನಡೆಯುವ

ರೈಲಿನಲ್ಲಿ ‌ಹೆರಿಗೆ ಮಾಡಿಸಿದ ಯುವಕ| ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ Read More »

ಪುತ್ತೂರು:ಶಸ್ತ್ರಚಿಕಿತ್ಸೆ ಇಲ್ಲದೆ ಮಗುವಿನ ಗಂಟಲಲ್ಲಿ ಸಿಲುಕಿದ ಕಾಡಿಗೆ ಡಬ್ಬ ತೆಗೆದ ಡಾ. ರಾಮಮೋಹನ್

ಸಮಗ್ರ ನ್ಯೂಸ್: ಮಗುವಿನ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಣ್ಣ ಕಾಡಿಗೆ ಡಬ್ಬವನ್ನು ಯಾವುದೇ ರೀತಿಯ ಅಪರೇಶನ್ ಇಲ್ಲದೆ ತೆಗೆಯುವಲ್ಲಿ ಇಎನ್‌ಟಿ ತಜ್ಞ ಡಾ| ರಾಮಮೋಹನ್ ಅವರು ಯಶಸ್ವಿಯಾಗಿದ್ದಾರೆ. ಪುತ್ತೂರಿನ ನಿವಾಸಿ ಸದ್ಯ ಬೆಂಗಳೂರಿನಲ್ಲಿರುವ ಮಂಜು ಹಾಗೂ ವಿಶಾಲಾಕ್ಷಿ ದಂಪತಿಯಒಂದೂವರೆ ವರ್ಷದ ಗಂಡು ಮಗು ಆರ್ಯನ್ ವರ್ಷದ ಹಿಂದೆ ಜುಲೈಯಲ್ಲಿ ಸಣ್ಣದಾದ ಕಾಡಿಗೆ ಡಬ್ಬವನ್ನು ನುಂಗಿತ್ತು. ಆದರೆ ಈ ವಿಚಾರ ಮನೆಯವರಿಗೆ ತಿಳಿದಿರಲಿಲ್ಲ. ಕಾಡಿಗೆ ಡಬ್ಬ ಗಂಟಲಲ್ಲೇ ಇದ್ದ ಕಾರಣ ಮಗು ಊಟ ಮಾಡಲಾಗದೇ, ಮಾತನಾಡಲೂ ಆಗದ ಪರಿಸ್ಥಿತಿಯಲ್ಲಿತ್ತು. ಬೆಂಗಳೂರು

ಪುತ್ತೂರು:ಶಸ್ತ್ರಚಿಕಿತ್ಸೆ ಇಲ್ಲದೆ ಮಗುವಿನ ಗಂಟಲಲ್ಲಿ ಸಿಲುಕಿದ ಕಾಡಿಗೆ ಡಬ್ಬ ತೆಗೆದ ಡಾ. ರಾಮಮೋಹನ್ Read More »

ಶೀಘ್ರದಲ್ಲೇ ಕುಸಿಯಲಿದೆ ಚಿನ್ನದ ದರ| ಮಾರುಕಟ್ಟೆ ತಜ್ಞರು ಹೇಳಿದ ಶಾಕಿಂಗ್ ಸುದ್ದಿ ಇದು…

ಸಮಗ್ರ ನ್ಯೂಸ್: ಚಿನ್ನದ ಬೆಲೆ ಶೀಘ್ರದಲ್ಲೇ ಕುಸಿಯುವ ಸಾಧ್ಯತೆಯಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಪೇಸ್ 360 ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಜಾಗತಿಕ ತಂತ್ರಜ್ಞಾನಿ ಅಮಿತ್ ಗೋಯಲ್ ಅವರು ಈ ಬೆಲೆಗಳ ಹೆಚ್ಚಳವು ದೀರ್ಘಕಾಲ ಉಳಿಯುವುದಿಲ್ಲ ಎಂಬ ಶಾಕಿಂಗ್‌ ಹೇಳಿಕೆ ಕೊಟ್ಟಿದ್ದಾರೆ.. ಬೆಲೆ ನಿಗದಿಪಡಿಸುವ ವ್ಯವಸ್ಥೆಯಲ್ಲಿ ಬದಲಾವಣೆಯಾಗಿ ಪ್ರಮುಖ ಕುಸಿತ ಕಾಣಲಿದೆ ಎಂದು ಅವರು ಅಂದಾಜಿಸಿದ್ದಾರೆ. ಅಮಿತ್ ಗೋಯಲ್ ಅವರ ಪ್ರಕಾರ, ಚಿನ್ನದ ಬೆಲೆ ಶೇಕಡಾ 30 ರಿಂದ 35 ರಷ್ಟು ಇಳಿಕೆಯಾಗುತ್ತದೆ ಎಂದು ಹೇಳಿದ್ದರೆ.

ಶೀಘ್ರದಲ್ಲೇ ಕುಸಿಯಲಿದೆ ಚಿನ್ನದ ದರ| ಮಾರುಕಟ್ಟೆ ತಜ್ಞರು ಹೇಳಿದ ಶಾಕಿಂಗ್ ಸುದ್ದಿ ಇದು… Read More »

ಸಾಮೂಹಿಕ ಅತ್ಯಾಚಾರಕ್ಕೆ ಸಂಚು ಹೂಡುತ್ತಿದ್ದ ನಾಲ್ಕು ಮಂದಿಯ ಬಂಧನ| ಇಬ್ಬರು ಬಾಲಕಿಯರ ರಕ್ಷಣೆ

ಸಮಗ್ರ ನ್ಯೂಸ್: ನಿಡ್ಡೋಡಿ ಗ್ರಾಮದ ಕಲ್ಲಕುಮೇರಿನ ಮನೆಯೊಂದಕ್ಕೆ ಮೂಡುಬಿದಿರೆ ಪೊಲೀಸ್ ಇನ್‍ಸ್ಪೆಕ್ಟರ್ ಸಂದೇಶ್ ಕುಮಾರ್ ನೇತೃತ್ವದ ಪೊಲೀಸರ ತಂಡ ಸೋಮವಾರ ರಾತ್ರಿ ದಾಳಿ ನಡೆಸಿ ನಾಲ್ವರು ಯುವಕರನ್ನು ಬಂಧಿಸಿದ್ದು, ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ. ನಿಡ್ಡೋಡಿ ಕಲ್ಲಕುಮೇರಿನ ಮಹೇಶ, ಕಟೀಲಿನ ಯಜ್ಞೇಶ್, ಮೂಲ್ಕಿ ನಡುಗೊಡೆಯ ದಿಲೀಪ್, ಬಜಪೆ ಕೊಂಡೆಮೂಲೆಯ ಶ್ರೀಕಾಂತ್ ಬಂಧಿತರು. ಅವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸಾಮೂಹಿಕ ಅತ್ಯಾಚಾರಕ್ಕೆ ಸಿದ್ಧತೆ ನಡೆಸುತ್ತಿದ್ದರು ಎಂಬುದು ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿದೆ. ಸಂತ್ರಸ್ತ ಬಾಲಕಿಯರು ಮತ್ತು ಆರೋಪಿಗಳನ್ನು

ಸಾಮೂಹಿಕ ಅತ್ಯಾಚಾರಕ್ಕೆ ಸಂಚು ಹೂಡುತ್ತಿದ್ದ ನಾಲ್ಕು ಮಂದಿಯ ಬಂಧನ| ಇಬ್ಬರು ಬಾಲಕಿಯರ ರಕ್ಷಣೆ Read More »