ಸಮಗ್ರ ಸಮಾಚಾರ

ಸುಳ್ಯ : ಲಾರಿ ಢಿಕ್ಕಿ ಪಾದಚಾರಿ ಮೃತ್ಯು

ಸುಳ್ಯ: ತಾಲೂಕಿನ ಕಲ್ಲುಗುಂಡಿ ಎಂಬಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಓರ್ವರಿಗೆ ಲಾರಿ ಢಿಕ್ಕಿಯಾಗಿ ಅವರು ಮೃತಪಟ್ಟ ಘಟನೆ ಇಂದು ಕಲ್ಲುಗುಂಡಿಯಲ್ಲಿ ನಡೆದಿದೆ.ಮೃತಪಟ್ಟವರನ್ನು ಕಲ್ಲುಗುಂಡಿ ನಿವಾಸಿ 50 ವರ್ಷ ಪ್ರಾಯದ ಚಂದ್ರಶೇಖರ ಎಂದು ಗುರುತಿಸಲಾಗಿದೆ. ಕೆಲಸಕ್ಕೆ ತೆರಳಿದ್ದ ಚಂದ್ರಶೇಖರ್ ಅವರು ಮನೆಗೆ ಹಿಂದಿರುಗುತ್ತಿರುವಾಗ ಈ ದುರ್ಘಟನೆ ನಡೆದಿದೆ. ಸ್ಥಳೀಯರು ತಕ್ಷಣ ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಪರೀಕ್ಷಿಸಿದ ವೈದ್ಯರು, ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಲಾರಿ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಲ್ಲುಗುಂಡಿ  […]

ಸುಳ್ಯ : ಲಾರಿ ಢಿಕ್ಕಿ ಪಾದಚಾರಿ ಮೃತ್ಯು Read More »

ಜನಸಾಮಾನ್ಯರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹೇರಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ

ಮಂಗಳೂರು: ಕೊರೋನಾ ಎರಡನೆಯ ಅಲೆ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್ಡೌನ್ ಹೇರಲಾಗಿದ್ದು, ಈ ನಡುವೆ ಸರ್ಕಾರದ ಆದೇಶ ಮೀರಿ ಸಾಲ ಮರುಪಾವತಿ ಮಾಡುವಂತೆ ಸಾಲಗಾರರಿಗೆ ಒತ್ತಡ ಹೇರಿದರೆ, ಅಂತಹ ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಅಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಲಾಕ್ಡೌನ್ ಇರುವ ಕಾರಣ ಜನಸಾಮಾನ್ಯರಿಗೆ ಕೆಲಸ ಇಲ್ಲದೆ ಸಂಪಾದನೆ ಇಲ್ಲದಂತಾಗಿದೆ. ದುಡಿಮೆಯನ್ನೇ ನಂಬಿಕೊಂಡಿದ್ದ ಜನತೆ ಸಾಲ ಮರುಪಾವತಿಗೆ ಹಣವಿಲ್ಲದಾಗಿದೆ, ಆ ಕಾರಣಕ್ಕಾಗಿ ಸಾರ್ವಜನಿಕರ ಹಿತ ಕಾಯ್ದುಕೊಂಡಿರುವ ರಾಜ್ಯ ಸರ್ಕಾರ

ಜನಸಾಮಾನ್ಯರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹೇರಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ Read More »

ಅಂತೂ ಇಂತೂ ಕರಾವಳಿ ಜನತೆಗೆ ಕೆಂಪು ಕುಚ್ಚಲಕ್ಕಿ ಭಾಗ್ಯ | ಸ್ಪಷ್ಟನೆ ನೀಡಿದ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ

ಬೆಂಗಳೂರು: ಕರಾವಳಿಯ ಜನತೆಗೆ ಮುಂದಿನ ನವೆಂಬರ್ ತಿಂಗಳಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಕೆಂಪು ಕುಚ್ಚಲಕ್ಕಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಕರಾವಳಿ ಜನರ ಬೇಡಿಕೆಯಾಗಿದ್ದ ನ್ಯಾಯಬೆಲೆ ಅಂಗಡಿಗಳಲ್ಲಿ ಕುಚ್ಚಲಕ್ಕಿ ವಿತರಣೆ ಬಗ್ಗೆ ಸರ್ಕಾರದ ಬೆನ್ನುಹತ್ತಿದ್ದ ಸಚಿವರು, ಈ ಬಗ್ಗೆ ಆಹಾರ ಸಚಿವರಲ್ಲಿ ಚರ್ಚಿಸಿ ಮುಂದಿನ ನವಂಬರ್ ತಿಂಗಳಿನಿಂದ, ಕರಾವಳಿಯ ಜನತೆ ನಿತ್ಯ ಸೇವಿಸುವ ಕೆಂಪು ಕುಚ್ಚುಲಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ದಕ್ಷ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ

ಅಂತೂ ಇಂತೂ ಕರಾವಳಿ ಜನತೆಗೆ ಕೆಂಪು ಕುಚ್ಚಲಕ್ಕಿ ಭಾಗ್ಯ | ಸ್ಪಷ್ಟನೆ ನೀಡಿದ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ Read More »

ವೈದ್ಯನ ನರಳಾಟ ನೋಡಿಯೂ‌ ಕಾಲ್ಕಿತ್ತ‌ ಬಿಜೆಪಿ ಶಾಸಕ | ಇವರೇನಾ ಜನಪ್ರತಿನಿಧಿಗಳು?

ಚಿಕ್ಕಮಗಳೂರು.: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ವೈದ್ಯರನ್ನು ನೋಡಿಯೂ ನೋಡದಂತೆ ತೆರಳಿದ್ದ ಬಿಜೆಪಿ ಶಾಸಕರೋರ್ವರ ನಡೆಯಿಂದಾಗಿ ವೈದ್ಯ ಕೊನೆಯುಸಿರೆಳೆದ ಘಟನೆ ಇಲ್ಲಿನ ಲಕ್ಕವಳ್ಳಿ ಎಂಬಲ್ಲಿ ನಡೆದಿದೆ.ಮಧ್ಯಾಹ್ನ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರಮೇಶ್ ಎಂಬವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದಾರಿ ಮದ್ಯೆ ಅವರ ವಾಹನ ಅಪಘಾತಕ್ಕೆ ಈಡಾಗಿದೆ. ಅಪಘಾತದ ರಭಸಕ್ಕೆ ವೈದ್ಯ ರಮೇಶ್ ರಸ್ತೆಗುರುಳಿದ್ದು, ಅದೇ ವೇಳೆಗೆ ಸ್ಥಳೀಯ ಶಾಸಕ ಡಿ.ಎಸ್. ಸುರೇಶ್ ಕಾರಲ್ಲಿ ಆಗಮಿಸಿದ್ದು, ವೈದ್ಯರ ಸ್ಥಿತಿ ನೋಡಿಯೂ ನೋಡದಂತೆ ತೆರಳಿದ್ದರು.

ವೈದ್ಯನ ನರಳಾಟ ನೋಡಿಯೂ‌ ಕಾಲ್ಕಿತ್ತ‌ ಬಿಜೆಪಿ ಶಾಸಕ | ಇವರೇನಾ ಜನಪ್ರತಿನಿಧಿಗಳು? Read More »

ಕೈಯಲ್ಲಿ ಕಾಸಿಲ್ದೇ ಇದ್ರೂ ಈ ಚೆಕ್ ಪೋಸ್ಟ್ ನಲ್ಲಿ ಮಾಮೂಲಿ ಕೊಡ್ಲೇ ಬೇಕು | ಸಂಪಾಜೆ ಅರಣ್ಯಾಧಿಕಾರಿಯ ಹಗಲು ದರೋಡೆ ಇಲ್ಲಿದೆ ಲಂಚ ತೆಗೆದುಕೊಳ್ಳುತ್ತಿರುವ ವಿಡಿಯೋ

ಮಂಗಳೂರು. ಮೇ.27: ಕೊರೊನಾ ಲಾಕ್ ಡೌನ್ ನಿಂದಾಗಿ ಕೈಯಲ್ಲಿ ಕಾಸಿಲ್ದೇ ಜನ ಪರದಾಡ್ತಿದಾರೆ. ಅದರಲ್ಲೂ ದೂರದೂರಿಗೆ ಸರಕು ಸರಂಜಾಮು ಸಾಗಿಸುವ ಲಾರಿ ಚಾಲಕರಂತೂ ಒಂದೊಂದು ಪೈಸೆಗೂ ಕಷ್ಟ ಪಡ್ತಾ ಇದ್ದು, ಹೊಟೇಲುಗಳು, ಡಾಬಾಗಳು‌ ಮುಚ್ಚಿರುವಾಗ ಹೆಚ್ಚು ಹಣ ಕೊಟ್ಟು, ಹೊಟೇಲುಗಳಿಂದ‌ ಪಾರ್ಸೆಲ್ ತಗೊಂಡು ಉಣ್ಣಬೇಕು. ಆದ್ರೆ ನಮ್ಮ ಕೆಲವು ಅಧಿಕಾರಿವರ್ಗದವ್ರಿಗೆ ಜನಸಾಮಾನ್ಯರ ಕಷ್ಟಕೋಟಲೆ ಗೊತ್ತಾಗ್ತಾನೆ ಇಲ್ಲ. ಇದಕ್ಕೊಂದು ತಾಜಾ ಉದಾಹರಣೆ ದ.ಕ ಮತ್ತು ಕೊಡಗು ಜಿಲ್ಲೆಯನ್ನು ಸಂಪರ್ಕಿಸುವ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಪಾಜೆ‌ ಚೆಕ್ ಫೋಸ್ಟ್

ಕೈಯಲ್ಲಿ ಕಾಸಿಲ್ದೇ ಇದ್ರೂ ಈ ಚೆಕ್ ಪೋಸ್ಟ್ ನಲ್ಲಿ ಮಾಮೂಲಿ ಕೊಡ್ಲೇ ಬೇಕು | ಸಂಪಾಜೆ ಅರಣ್ಯಾಧಿಕಾರಿಯ ಹಗಲು ದರೋಡೆ ಇಲ್ಲಿದೆ ಲಂಚ ತೆಗೆದುಕೊಳ್ಳುತ್ತಿರುವ ವಿಡಿಯೋ Read More »

ವಿದ್ಯುತ್ ಶಾಕ್: ನಿವೃತ್ತ ಶಿಕ್ಷಕ ಮೃತ್ಯು

ಕಾಸರಗೋಡು: ಮೋಟಾರ್ ಪಂಪ್ ಚಾಲೂ ಮಾಡುವಾಗ ವಿದ್ಯುತ್ ಶಾಕ್ ತಗಲಿ ನಿವೃತ್ತ ಶಿಕ್ಷಕ ಮೃತಪಟ್ಟ ಘಟನೆ ಜಿಲ್ಲೆಯ ಮಧೂರು ರಸ್ತೆಯ ಕೂಡ್ಲು ಎಂಬಲ್ಲಿ ನಡೆದಿದೆ. ಕೂಡ್ಲು ನಿವಾಸಿ ಮುರಳೀಧರ (೫೭) ಮೃತ ಶಿಕ್ಷಕ. ಇವರು ಪಟ್ಲ ಸರಕಾರಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದ ಒಂದು ವರ್ಷದ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಇಂದು ಮಧ್ಯಾಹ್ನ ಮೋಟಾರ್ ಪಂಪ್ ಚಾಲೂ ಮಾಡುತ್ತಿದ್ದಾಗ ಶಾಕ್ ತಗಲಿ ಈ ದುರ್ಘಘಟನೆ ಸಂಭವಿಸಿದೆ.ಶಾಕ್ ತಗಲಿ ಗಂಭೀರ ಸ್ಥಿತಿಯಲ್ಲಿದ್ದ ಮುರಲೀಧರ ಅವರನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕರೆತಂದಿದ್ದು ಆಗಲೇ

ವಿದ್ಯುತ್ ಶಾಕ್: ನಿವೃತ್ತ ಶಿಕ್ಷಕ ಮೃತ್ಯು Read More »

ಬೋಟ್‌ನ ಎಂಜಿನ್ ವೈಫಲ್ಯ: ಮೀನುಗಾರರ ರಕ್ಷಣೆ

ಮಂಗಳೂರು: ಅರಬ್ಬಿ ಸಮುದ್ರದ ಮಧ್ಯ ಬೋಟ್ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು, ಸಮುದ್ರದಲ್ಲಿ ಸಿಲುಕಿದ್ದ ತಮಿಳುನಾಡಿನ ೧೦ ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ ಘಟನೆ ಇಂದು ನಡೆದಿದೆ. ತಮಿಳುನಾಡು ಮೂಲದ ಲಾರ್ಡ್ ಆಫ್ ಓಶಿಯನ್ ಹೆಸರಿನ ಬೋಟ್ ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಇತ್ತೀಚೆಗೆ ತೌಕ್ತೆ ಚಂಡಮಾರುತ ಎದುರಾಗಿತ್ತು. ಚಂಡಮಾರುತದಿAದ ತಪ್ಪಿಸಿಕೊಳ್ಳಲು ಬೋಟ್ ಮೇ ೧೪ರಂದು ಗುಜರಾತ್ ಕರಾವಳಿಯ ಪೋರ್ ಬಂದರಿಗೆ ತೆರಳಿತ್ತು. ಮೇ ೧೯ರ ವರೆಗೂ ಪೋರ್ ಬಂದರಿನಲ್ಲಿದ್ದ ಬೋಟ್ ಬಳಿಕ ಸಮುದ್ರ ಮೂಲಕ

ಬೋಟ್‌ನ ಎಂಜಿನ್ ವೈಫಲ್ಯ: ಮೀನುಗಾರರ ರಕ್ಷಣೆ Read More »

ಬೆಲೂನ್ ಗೆ ನಾಯಿಯನ್ನು ಕಟ್ಟಿ ಹಾರಿಸಿದ ಯೂಟ್ಯೂಬರ್ ಅರೆಸ್ಟ್

ನವದೆಹಲಿ: ಯೂಟ್ಯೂಬ್ ನಲ್ಲಿ ಲೈಕ್ಸ್ ಪಡೆದುಕೊಳ್ಳಲು ಜನ ಏನೆಲ್ಲ ಕಸರತ್ತು ಮಾಡುವುದು ಇತ್ತೀಚಿನ ದಿನಗಳಲ್ಲಿ ಅತಿಯಾಗುತ್ತಿದೆ. ಕೆಲವರು ತಮ್ಮ ತಮ್ಮ ಪ್ರತಿಭೆಯ ಮೂಲಕ ಯೂಟ್ಯೂಬ್ ನಲ್ಲಿ ಖ್ಯಾತಿ ಪಡೆಯುತ್ತಿದ್ದರೆ ಇನ್ನು ಕೆಲವರು, ಇತರರ ಹಾಗು ಕೆಲ ಜೀವಿಗಳ ಜೀವದ ಜೊತೆ ಚೆಲ್ಲಾಟವಾಡಿ ಪ್ರಸಿದ್ಧಿ ಪಡೆಯಲು ಪ್ರಯತ್ನಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬ ಯುವಕ  ತನ್ನ ಸಾಕು ನಾಯಿಗೆ ಹಲವಾರು ಹೈಡ್ರೋಜನ್ ಗ್ಯಾಸ್ ಬಲೂನ್ ಗಳನ್ನು ಕಟ್ಟಿ ಅದನ್ನು ಹಾರುವಂತೆ ಮಾಡಿದ್ದು, ಆ ವಿಡಿಯೋವನ್ನು ಯೂಟ್ಯೂಬ್ ನಲ್ಲಿ

ಬೆಲೂನ್ ಗೆ ನಾಯಿಯನ್ನು ಕಟ್ಟಿ ಹಾರಿಸಿದ ಯೂಟ್ಯೂಬರ್ ಅರೆಸ್ಟ್ Read More »

ಪಂಪ್ವೆಲ್ ಫ್ಲೈಓವರ್ ಮೇಲೆ ಕಾರುಡಿಕ್ಕಿ: ಬೈಕ್ ಸವಾರ ಗಂಭೀರ

ಮಂಗಳೂರು: ಕಾರೊಂದು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಗರದ ಪಂಪ್ ವೆಲ್ ನಲ್ಲಿ ನಡೆದಿದೆ. 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ನಗರದ ಗೋರಿಗುಡ್ಡ ಕಡೆಯಿಂದ ನಂತೂರು ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದ ವೇಳೆ, ವೇಗವಾಗಿ ಬಂದ ಕಾರು ಹಿಂದುಗಡೆಯಿಂದ ಬಂದು ಢಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ವಾಹನ ಸವಾರ ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ

ಪಂಪ್ವೆಲ್ ಫ್ಲೈಓವರ್ ಮೇಲೆ ಕಾರುಡಿಕ್ಕಿ: ಬೈಕ್ ಸವಾರ ಗಂಭೀರ Read More »

ಕೊರೋನಾಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 80 ಲಕ್ಷ…..!? | ಸಾವಿನಲ್ಲೂ ತಪ್ಪು ಅಂಕಿ-ಅಂಶ ನೀಡುತ್ತಿವೆ ರಾಷ್ಟ್ರಗಳು : WHO

ಸಾವಿನ ಲೆಕ್ಕಾಚಾರದಲ್ಲೂ ರಾಷ್ಟ್ರಗಳು ತಪ್ಪು ಲೆಕ್ಕಾಚಾರ ಕೊಡುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥ ಶಂಕೆ ವ್ಯಕ್ತಪಡಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿರುವ ಜನರ ಅಂಕಿ-ಸಂಖ್ಯೆಯ ಕುರಿತು ನೀಡಲಾಗುತ್ತಿರುವ ಅಧಿಕೃತ ಸಾವಿನ ಪ್ರಮಾಣವನ್ನು ವಾಸ್ತವಕ್ಕಿಂತ ಗಮನಾರ್ಹವಾಗಿ ತಗ್ಗಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಂದಾಜು 80 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇದ್ದು, ನೀಡಲಾದ ಮಾಹಿತಿ ಅದರ ಶೇಖಡಾ 50 ಕ್ಕಿಂತಲೂ ಕಡಿಮೆ ಇದೆ ಎಂದಿದೆ. ಕಳೆದೊಂದು ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್-19

ಕೊರೋನಾಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 80 ಲಕ್ಷ…..!? | ಸಾವಿನಲ್ಲೂ ತಪ್ಪು ಅಂಕಿ-ಅಂಶ ನೀಡುತ್ತಿವೆ ರಾಷ್ಟ್ರಗಳು : WHO Read More »