ಸಮಗ್ರ ಸಮಾಚಾರ

ನವವಿವಾಹಿತ ಅರಣ್ಯವೀಕ್ಷಕ ಆತ್ಮಹತ್ಯೆ: ಕಾರಣ ನಿಗೂಢ

ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆ ಪಲ್ಲಿದಳಿಕೆ ನಿವಾಸಿ, ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದಲ್ಲಿ ನೆಡುತೋಪು ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಲಕೃಷ್ಣ ಗೌಡ (40) ಅವರು ಗುರುವಾರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕೃಷ್ಣ ಗೌಡ ಅವರು ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದಲ್ಲಿ 15 ವರ್ಷಗಳಿಂದ ನೆಡುತೋಪು ವೀಕ್ಷಕರಾಗಿ ಕರ್ತವ್ಯನಿರ್ವಹಿಸುತ್ತಿದ್ದರು. ಕಳೆದ 6 ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದರು. ಗುರುವಾರ ಬೆಳಗ್ಗೆ ಮನೆ ಸಮೀಪವೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ, ಪೊಲೀಸ್ […]

ನವವಿವಾಹಿತ ಅರಣ್ಯವೀಕ್ಷಕ ಆತ್ಮಹತ್ಯೆ: ಕಾರಣ ನಿಗೂಢ Read More »

ಲಸಿಕೆ ಖರೀದಿಗೆ ಮೀಸಲಿಟ್ಟ ಹಣ ಏನಾಯ್ತ? ಕೇಂದ್ರದ ಕಿವಿ ಹಿಂಡಿದ ಸುಪ್ರೀಂ

ನವದೆಹಲಿ: ಡಿಸೆಂಬರ್ ಹೊತ್ತಿಗೆ ದೇಶದ ಎಲ್ಲರಿಗೂ ವ್ಯಾಕ್ಸಿನ್ ಸಿಗಲಿದೆ ಅಂತ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಲೇ ಇದೆ. ಈ ಮಧ್ಯೆ ಲಸಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಿವಿ ಹಿಂಡಿದೆ. ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ ಅನುದಾನ ಏನಾಯಿತು ಅಂತ ಲೆಕ್ಕ ಪರಿಶೋಧನೆಗೆ ಸೂಚಿಸಿದೆ. ಬಜೆಟ್‍ನಲ್ಲಿ ಮೀಸಲಿಟ್ಟಿದ್ದ 35 ಸಾವಿರ ಕೋಟಿ ರೂ. ಏನಾಯಿತು? ಇದುವರೆಗೂ ಎಷ್ಟು ಮೊತ್ತದ ವ್ಯಾಕ್ಸಿನ್ ಖರೀದಿಗೆ ಆದೇಶ ನೀಡಲಾಗಿದೆ. 3 ಲಸಿಕೆಗಳ ಖರೀದಿಗೆ ಯಾವಾಗ ಆದೇಶ ಕೊಡಲಾಯಿತು ಮತ್ತು ಎಷ್ಟು ಬೆಲೆ? ಕೋವಿಶೀಲ್ಡ್, ಕೋವ್ಯಾಕ್ಸಿನ್,

ಲಸಿಕೆ ಖರೀದಿಗೆ ಮೀಸಲಿಟ್ಟ ಹಣ ಏನಾಯ್ತ? ಕೇಂದ್ರದ ಕಿವಿ ಹಿಂಡಿದ ಸುಪ್ರೀಂ Read More »

“ಕೆ”ಎಸ್ಆರ್ಟಿಸಿ ಕೇರಳ ಪಾಲು | ಹೆಸರು ಬದಲಾಯಿಸಿಕೊಳ್ಳಬೇಕೇ ಕರ್ನಾಟಕ ಸಾರಿಗೆ ಸಂಸ್ಥೆ..?

ಬೆಂಗಳೂರು: ಕೇರಳ ರಾಜ್ಯ ಸಾರಿಗೆ ಸಂಸ್ಥೆ ಮಾತ್ರ ಕೆ ಎಸ್ ಆರ್ ಟಿ ಸಿ ಲೋಗೋ ಮತ್ತು ಹೆಸರು ಬಳಸಬಹುದೆಂದು ಭಾರತ ಸರಕಾರದ ಟ್ರೇಡ್ಮಾರ್ಕ್ ರಿಜಿಸ್ಟ್ರಿ ಆದೇಶ ಹೊರಡಿಸಿದೆ. ಇದರಿಂದ ಕರ್ನಾಟಕ ಸಾರಿಗೆ ಸಂಸ್ಥೆ ಗೆ ಕೆಎಸ್ಆರ್ಟಿಸಿ ಹೆಸರು ಮತ್ತು ಲೋಗೋ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕೇರಳ ಕೆಎಸ್ಆರ್ಟಿಸಿ ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಇನ್ನು ಕರ್ನಾಟಕ ಕೆಎಸ್ಆರ್ಟಿಸಿ ಅಧಿಕಾರಿಗಳು ನಮಗಿನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ ಈ ಆದೇಶ ಅಧಿಕೃತವೇ

“ಕೆ”ಎಸ್ಆರ್ಟಿಸಿ ಕೇರಳ ಪಾಲು | ಹೆಸರು ಬದಲಾಯಿಸಿಕೊಳ್ಳಬೇಕೇ ಕರ್ನಾಟಕ ಸಾರಿಗೆ ಸಂಸ್ಥೆ..? Read More »

ಆರೋಗ್ಯ ರಕ್ಷಣೆಗೆ ಸೈಕಲ್ ತುಳಿಯೋಣ : ವಿಶ್ವ ಸೈಕಲ್ ದಿನ ವಿಶೇಷ

ಕಳೆದೆರಡು ವರ್ಷದಿಂದ ಕೊರೋನಾ ಮಹಾಮಾರಿ ಹಾವಳಿಯಲ್ಲಿ ಬೈಸಿಕಲ್‌ನ ಟ್ರಿಣ್‌ ಟ್ರಿಣ್‌ ಬೆಲ್‌ ಸದ್ದು ಜಗತ್ತಿನಾದ್ಯಂತ ಬಲು ಜೋರಾಗಿ ಕೇಳಿಸುತ್ತಿದೆ! ಸದೃಢ ಶ್ವಾಸಕೋಶ ಕೊರೋನಾ ವೈರಸ್‌ ಅನ್ನು ಹಿಮ್ಮೆಟ್ಟಿಸುತ್ತದೆ ಎನ್ನುವ ಸತ್ಯ ಗೊತ್ತಾಗುತ್ತಿದ್ದಂತೆ ಬಡವರು, ಶ್ರೀಮಂತರು ಎನ್ನುವ ಭೇದ ಬದಿಗಿಟ್ಟು ಜನತೆ ಬೈಸಿಕಲ್‌ ತುಳಿಯುತ್ತಿದ್ದಾರೆ. ಸೈಕಲ್‌ ರೈಡ್ ವೈರಸ್‌ ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಹಿಂದೆ ಮನೆಗಳಲ್ಲಿ ಎಲ್ಲಾ ವಯೋಮಾನದರು ಬಳಸುವ ಏಕೈಕ ಸಾಧನವಾಗಿದ್ದ ಸೈಕಲ್‌ ಸ್ಥಾನವನ್ನು

ಆರೋಗ್ಯ ರಕ್ಷಣೆಗೆ ಸೈಕಲ್ ತುಳಿಯೋಣ : ವಿಶ್ವ ಸೈಕಲ್ ದಿನ ವಿಶೇಷ Read More »

ಸಮಾಜ ಸೇವಕಿಯ ಸಮಾಯೋಜಿತ ಸಲಹೆ | ಕಾರ್ಕಳದಲ್ಲಿ ಅಸಹಾಯಕ ಮಕ್ಕಳಿಗೆ ಸಿಕ್ತು ರಕ್ಷಣೆ

ಕಾರ್ಕಳ: ಹೆತ್ತವರಿಂದ ನಿರ್ಲಕ್ಷಕ್ಕೆ ಒಳಗಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ನಾಲ್ಕು ಸಣ್ಣ ಪ್ರಾಯದ ಎಳೆ ಮಕ್ಕಳನ್ನು ಸಮಾಜ ಸೇವಕಿಯೊಬ್ಬರ ಸಮಯೋಚಿತ ಮಾರ್ಗದರ್ಶನದಿಂದ ಉಡುಪಿ ಮಕ್ಕಳ ಪುನರ್ವಸತಿ ಕೇಂದ್ರದವರು ರಕ್ಷಣೆ ಮಾಡಿದ ಘಟನೆ ಜೂ.2ರಂದು ನಡೆದಿದೆ.ಇಲ್ಲಿನ ನಿಟ್ಟೆ ಗ್ರಾಮ ಪಂಚಾಯತು ಮದನಾಡು ಎಂಬಲ್ಲಿ ಕೌಟುಂಬಿಕ ಕಲಹದಿಂದ ಪದ್ಮನಾಭ ಎಂಬವರ ಪತ್ನಿ ಗಂಡ, ಮನೆ, ಮಕ್ಕಳನ್ನು ತೊರೆದು ಹೋಗಿದ್ದಾರೆ. ದಂಪತಿಗೆ ನಾಲ್ಕು ಮಂದಿ ಮಕ್ಕಳಿದ್ದು, ತಾಯಿ ಇಲ್ಲದೆ ತಂದೆಯೊಂದಿಗೆ 1 ಹೆಣ್ಣು ಸೇರಿ ನಾಲ್ಕು ಮಂದಿ ಮಕ್ಕಳು ಅಸಹಾಯಕ ಸ್ಥಿತಿಯಲ್ಲಿದ್ದರು. ಸುರಕ್ಷಿತವಲ್ಲದೆ,

ಸಮಾಜ ಸೇವಕಿಯ ಸಮಾಯೋಜಿತ ಸಲಹೆ | ಕಾರ್ಕಳದಲ್ಲಿ ಅಸಹಾಯಕ ಮಕ್ಕಳಿಗೆ ಸಿಕ್ತು ರಕ್ಷಣೆ Read More »

ಶಾಕಿಂಗ್ ಸಮಾಚಾರ : ತಂದೆಯೊಂದಿಗೆ ಚಿತೆಗೇರಿದ ಪುತ್ರ | ಬಂಟ್ವಾಳದಲ್ಲೊಂದು ಹೃದಯ ವಿದ್ರಾವಕ ಘಟನೆ

ಪುತ್ತೂರು : ಜೂ 2 : ಕೊವೀಡ್ ನಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರ ನಡೆಸುತ್ತಿರುವಾಗ ಅರೋಗ್ಯ ವ್ಯತ್ಯಾಸವಾಗಿ ಮಗನೂ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ಜೂ 2 ರಂದು ನಡೆದಿದೆ. ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳ ನಿವಾಸಿ ಪ್ರೊಪೆಸರ್ ಭುಜಂಗ ಶೆಟ್ಟಿ ಹಾಗೂ ಅವರ ಪುತ್ರ ಶೈಲೇಶ್ ಒಂದೇ ದಿನ ಅನಾರೋಗ್ಯ ತುತ್ತಾಗಿ ಮೃತ ಪಟ್ಟವರು. ಭುಜಂಗ ಶೆಟ್ಟಿಯವರಿಗೆ ಇತ್ತೀಚಿಗೆ ಕೊರೊನಾ ಸೋಂಕು ತಗುಲಿತ್ತು, ಆದರೇ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ

ಶಾಕಿಂಗ್ ಸಮಾಚಾರ : ತಂದೆಯೊಂದಿಗೆ ಚಿತೆಗೇರಿದ ಪುತ್ರ | ಬಂಟ್ವಾಳದಲ್ಲೊಂದು ಹೃದಯ ವಿದ್ರಾವಕ ಘಟನೆ Read More »

ಪ್ರೀತಿ ಕೊಂದ ಕೊಲೆಗಾರ: ಮುದ್ದಿನ ಹೆಂಡತಿಗೆ ಹಳ್ಳ ತೋಡಿದ ಕಿರಾತಕ

ಪ್ರೀತಿಸಿ‌ ಮದುವೆಯಾದ ಮುದ್ದಿನ ಹೆಂಡತಿಯನ್ನು ತಾನೇ ಕೈಯಾರೆ ಕೊಂದ ಕಿರಾತಕನೋರ್ವ ಕಂಬಿ ಎಣಿಸುತ್ತಿರುವ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ. ಇಲ್ಲಿನ ನಾರಾಯಣಗಟ್ಟ ಹಳ್ಳಿ ಎಂಬಲ್ಲಿ ಕೃತ್ಯ ನಡೆದಿದ್ದು, ಸರೋಜಾ(22) ಎಂಬಾಕೆ ಕೊಲೆಗೀಡಾದ ದುರ್ದೈವಿ. ಪುಟ್ಟಸ್ವಾಮಿ ಅಲಿಯಾಸ್ ಶರತ (25) ಮತ್ತು ಸರೋಜಾ ಕಳೆದ ಒಂದು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದರು. ಅಂತರ್ಜಾತಿಯಾದರೂ ಸಂತೋಷವಾಗಿದ್ದ ಈ ಪುಟ್ಟ ಕುಟುಂಬಕ್ಕೆ ಅದ್ಯಾರ ಕಣ್ಣು ಬಿದ್ದಿತ್ತೋ ಏನೋ. ಕಳೆದ ದಿನ ಗಂಡ ಹೆಂಡತಿ ಮಧ್ಯೆ ಗಲಾಟೆ ಪ್ರಾರಂಭವಾಗಿದೆ. ಗಲಾಟೆ ತಾರಕಕ್ಕೇರಿದ್ದು ಗಂಡ

ಪ್ರೀತಿ ಕೊಂದ ಕೊಲೆಗಾರ: ಮುದ್ದಿನ ಹೆಂಡತಿಗೆ ಹಳ್ಳ ತೋಡಿದ ಕಿರಾತಕ Read More »

ಲಾಕ್ ಡೌನ್ ಭವಿಷ್ಯ ಶನಿವಾರಕ್ಕೆ ಮುಂದೂಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ಜೂನ್​ 7ರ ನಂತರ ಬಿಗಿ ಕ್ರಮದೊಂದಿಗೆ ಲಾಕ್​ಡೌನ್ ಮುಂದುವರಿಕೆ ಖಚಿತವಾಗಿದ್ದು, ಎಷ್ಟು ದಿನ ವಿಸ್ತರಣೆ ಎಂಬ ನಿರ್ಧಾರವನ್ನು ಶನಿವಾರ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಪ್ರಕಟಿಸಲಾಗುವುದು ಎಂದು ಸಿ.ಎಂ ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ತಜ್ಞರ ಸಮಿತಿ ಮುಖ್ಯಸ್ಥರು, ಸಚಿವರು, ಹಾಗೂ ಪ್ರಮುಖ ಅಧಿಕಾರಿ ವರ್ಗದವರ ಜೊತೆ ಸಭೆ ನಡೆಸಿದ ಬಳಿಕ ಈ ವಿಚಾರ ತಿಳಿಸಿದ್ದಾರೆ. ನಾಳೆಯಿಂದ ರಫ್ತು ಆಧಾರಿತ ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದೆ. ಅಲ್ಲದೇ ಇನ್ನೆರಡು ದಿನಗಳಲ್ಲಿ ಎರಡನೇ ಪ್ಯಾಕೇಜ್ ಘೋಷಣೆ ಎಂದು ತಿಳಿಸಿದ್ದಾರೆ.ಅಗತ್ಯ

ಲಾಕ್ ಡೌನ್ ಭವಿಷ್ಯ ಶನಿವಾರಕ್ಕೆ ಮುಂದೂಡಿದ ಸಿಎಂ Read More »

ಎಕ್ಸ್ ಕ್ಲೂಸಿವ್ ಸಮಾಚಾರ : ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಸಾಧ್ಯತೆ | ಸೈಲೆಂಟ್ ಸಚಿವರಿಗೆ ಗೇಟ್ ಪಾಸ್.!

ಬೆಂಗಳೂರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಾದ ಚರ್ಚೆ ನಡೆದಿರುವ ಹೊತ್ತಲ್ಲೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಢೀರ್ ದೆಹಲಿಗೆ ತೆರಳಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ರಹಸ್ಯ ಚರ್ಚೆ ನಡೆಸಿದ್ದು, ಹಲವು ಸಚಿವರು ಮನೆಗೆ ತೆರಳುವ ಸಾಧ್ಯತೆ ಇದೆ. ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಅವರು ಸಮಾಲೋಚನೆ ನಡೆಸಿದ್ದು, ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟ ಪುನಾರಚನೆ, ರಾಜ್ಯ ಬಿಜೆಪಿ ಪದಾಧಿಕಾರಿಗಳ ಬದಲಾವಣೆ ಕುರಿತಾಗಿ ಚರ್ಚೆ ನಡೆದಿದೆ ಎಂದು

ಎಕ್ಸ್ ಕ್ಲೂಸಿವ್ ಸಮಾಚಾರ : ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಸಾಧ್ಯತೆ | ಸೈಲೆಂಟ್ ಸಚಿವರಿಗೆ ಗೇಟ್ ಪಾಸ್.! Read More »

ಬ್ರೇಕಿಂಗ್ ಸಮಾಚಾರ | ಜಾರಕಿಹೋಳಿ ಕಾಮಕಾಂಡ: ದಿನಕ್ಕೊಂದು ತಿರುವು ಪಡೆಯುತ್ತಿರುವ ಪ್ರಕರಣ | ಆರೋಪಿಗಳ ಜಾಮೀನು ಅರ್ಜಿ ಏನಾಯ್ತು ಗೊತ್ತಾ?

ಬೆಂಗಳೂರು : ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಮಪುರಾಣ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮದು ಒಪ್ಪಿತ ಸಂಬಂಧವಾಗಿತ್ತು ಎಂಬುದಾಗಿ ತಿಳಿಸಿದ್ದರು. ಈ ಮೂಲಕ ಸ್ಪೋಟಕ ಟ್ವಿಸ್ಟ್ ನೀಡಿದ್ದರು. ಇದಾದ ಬಳಿಕ ಈಗ ಮತ್ತೆ ಸಿಡಿ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಪಡೆದಿದೆ. ಎಸ್‌ಐಟಿ ಅಧಿಕಾರಿಗಳು, ಆರೋಪಿಗಳಿಗೆ ಜಾಮೀನು ನೀಡದಂತೆ ಕೋರ್ಟ್ ಗೆ ಸಲ್ಲಿಸಿರುವಂತ ಮನವಿ, ಅಚ್ಚರಿ ಮೂಡಿಸಿದೆ.ಹೌದು.. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ದಿನಕ್ಕೊಂದು ತಿರುವು ಪಡೆಯುತ್ತಿದೆಪ್ರಕರಣದ ಪ್ರಮುಖ ಆರೋಪಿಗಳಾದ ನರೇಶ್ ಗೌಡ,

ಬ್ರೇಕಿಂಗ್ ಸಮಾಚಾರ | ಜಾರಕಿಹೋಳಿ ಕಾಮಕಾಂಡ: ದಿನಕ್ಕೊಂದು ತಿರುವು ಪಡೆಯುತ್ತಿರುವ ಪ್ರಕರಣ | ಆರೋಪಿಗಳ ಜಾಮೀನು ಅರ್ಜಿ ಏನಾಯ್ತು ಗೊತ್ತಾ? Read More »