ಸಮಗ್ರ ಸಮಾಚಾರ

ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೇರವಣಿಗೆ ಬದಲು; ಅವರ ಸಾಹಿತ್ಯ ವೈಭವಿಕರಣವಾಗಲಿ

ಸಮಗ್ರ ವಿಶೇಷ: ಕನ್ನಡ ನಾಡು ನುಡಿ ಪರಂಪರೆಗೆ ತನ್ನದೇ ಆದ ಭವ್ಯ ಇತಿಹಾಸ ಇರುವದು ಜನಜನಿತ. ಸಾಕಷ್ಟು ಮಹನೀಯರ ಸೇವೆ ಶ್ರಮದ ಫಲವಾಗಿ, ಶ್ರೇಷ್ಠ ಸಾಹಿತ್ಯ ಕನ್ನಡಕ್ಕೆ ಲಭಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯದಲ್ಲಿ ಸಾಹಿತ್ಯ ವೈಭವದ ನಾಡ ಹಬ್ಬವಾಗಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದುಕೊಂಡು ಬರುತ್ತಿವೆ. ಇದಕ್ಕೆ ಕರ್ನಾಟಕ ಸರ್ಕಾರ ಮುತುವರ್ಜಿ ವಹಿಸುವದು. ಪ್ರತಿವರ್ಷವೂ ಒಂದೊಂದು ಜಿಲ್ಲೆಯಲ್ಲಿ ವಿಜೃಂಭಣೆ ವೈಭವದಿಂದ ಎರಡು ಮೂರು ದಿನಗಳ ಕಾಲ ಸಮ್ಮೇಳ ಜರಗುತ್ತದೆ. ನುಡಿ ಹಬ್ಬದಲ್ಲಿ ಲಕ್ಷಾಂತರ […]

ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೇರವಣಿಗೆ ಬದಲು; ಅವರ ಸಾಹಿತ್ಯ ವೈಭವಿಕರಣವಾಗಲಿ Read More »

ಉಡುಪಿ: ಕೋಡಿ‌ಹಬ್ಬದಲ್ಲೂ ಅನ್ಯಮತೀಯ ವ್ಯಾಪಾರಿಗಳಿಗೆ‌ ನಿಷೇಧ

ಸಮಗ್ರ ನ್ಯೂಸ್: ಕುಂದಾಪುರ ಕೋಡಿ ಹಬ್ಬದಲ್ಲಿ ನಾಲ್ಕು ಲಕ್ಷ ಜನರು ಭಾಗಿಯಾಗಲಿದ್ದು, ದೇಗುಲದ ಹೊರವಲಯದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಮಾಡಲು ವಿಹೆಚ್’ಪಿ ಮನವಿ ಮಾಡಿತ್ತು. ಕಳೆದ ಬಾರಿ ಉಡುಪಿಯಲ್ಲಿ ಆರಂಭವಾಗಿದ್ದ ಧರ್ಮದಂಗಲ್ ರಾಜ್ಯಾದ್ಯಂತ ಹಬ್ಬಿತ್ತು. ಇದಕ್ಕೆ ಬೇಕಾದಂತ ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನ ನೆರವನ್ನು ಇಟ್ಟುಕೊಂಡು ಒಂದು ಪತ್ರವನ್ನು ಕೂಡಾ ಆಡಳಿತ ಮಂಡಳಿಗೆ ಬರೆಯಲಾಗಿತ್ತು. ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಅನ್ಯ ಧರ್ಮಿಯ ವ್ಯಾಪಾರಿಗಳಿಗೆ ಅವಕಾಶ ಇಲ್ಲ. ರಥ ಬೀದಿಯಲ್ಲಿ ಎಲ್ಲೂ ಮುಸ್ಲಿಮರಿಗೆ ವ್ಯಾಪಾರ ಮಾಡಲು

ಉಡುಪಿ: ಕೋಡಿ‌ಹಬ್ಬದಲ್ಲೂ ಅನ್ಯಮತೀಯ ವ್ಯಾಪಾರಿಗಳಿಗೆ‌ ನಿಷೇಧ Read More »

ಮೈಸೂರು: ಕಸ್ಟಮ್ಸ್ ಅಧಿಕಾರ ಎಂದು ನಂಬಿಸಿ ಸಾರ್ವಜನಿಕರಿಗೆ ಲಕ್ಷಾಂತರ ಪಂಗನಾಮ

ಸಮಗ್ರ‌ ನ್ಯೂಸ್: ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ ಹಲವಾರು ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಲಕ್ಷಾಂತರ ರೂ ಪಂಗನಾಮ ಹಾಕಿದ ಖದೀಮ ಮೈಸೂರು ಪೊಲೀಸರ ಅತಿಥಿಯಾಗಿದ್ದಾನೆ. ಗೂಗಲ್ ನಲ್ಲಿ ಸರ್ಚ್ ಮಾಡಿ ಶಾಲೆಗಳನ್ನ ಸಂಪರ್ಕಿಸಿ ಶಿಕ್ಷಕರ ಮೊಬೈಲ್ ನಂಬರ್ ಗಳನ್ನ ಸಂಗ್ರಹಿಸಿ ತಾನು ಹಳೆ ವಿಧ್ಯಾರ್ಥಿ ಎಂದು ನಂಬಿಸಿದ್ದಾನೆ. ನಂತರ ತಾನು ಕಸ್ಟಮ್ಸ್ ಅಧಿಕಾರಿ ಎಂದು ಸುಳ್ಳು ಹೇಳಿ ಕಡಿಮೆ ಬೆಲೆಯಲ್ಲಿ ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನ ಕೊಡಿಸುವುದಾಗಿ ನಂಬಿಸಿ 7,48,000/- ರೂ ವಂಚಿಸಿದ್ದಾನೆ. ಬೆಂಗಳೂರಿನ ವಿವಿದ ಪೊಲೀಸ್

ಮೈಸೂರು: ಕಸ್ಟಮ್ಸ್ ಅಧಿಕಾರ ಎಂದು ನಂಬಿಸಿ ಸಾರ್ವಜನಿಕರಿಗೆ ಲಕ್ಷಾಂತರ ಪಂಗನಾಮ Read More »

ಬೇಕರಿ ಹುಡುಗರ ಮೇಲೆ ಹಲ್ಲೆ; ಮೂವರು ಪರೋಡಿಗಳು ಅರೆಸ್ಟ್

ಸಮಗ್ರ ನ್ಯೂಸ್: ಬೆಂಗಳೂರಿನ‌ ಹೆಚ್ ಎ ಎಲ್ ಠಾಣಾ ವ್ಯಾಪ್ತಿಯ ಬೇಕರಿ ಬಳಿ ಗಲಾಟೆ ಪ್ರಕರಣ ಸಂಬಂಧ ಮೂವರು ಅರೆಸ್ಟ್ ಆಗಿದ್ದಾರೆ. ಕಾರ್ತಿಕ್, ಕಾರ್ತಿಕ್, ಸಲ್ಮಾನ್ ಈ ಮೂವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಗರೇಟ್ ಕೇಳಿ ಬೇಕರಿ ಹುಡುಗರ ಜೊತೆ ತಗಾದೆ ತೆಗೆದು ಪುಂಡಾಟಿಕೆ ಮಾಡಿದ್ದಾರೆ. ಈ ಘಟನೆ ಗುರುವಾರ ತಡರಾತ್ರಿ ಬೆಂಗಳೂರಿನ ಎಚ್ ಎ ಎಲ್ ಕುಂದನಹಳ್ಳಿ ಬಳಿ ನಡೆದಿದೆ. ಪುಂಡರು ಮಾತಿಗೆ ಮಾತು ಬೆಳೆಸಿ ಬೇಕರಿಯನ್ನು ಧ್ವಂಸಗೊಳಿಸಿದರು. ಸಿಗರೇಟ್ ಕೇಳೋ ನೆಪದಲ್ಲಿ ಬಂದು

ಬೇಕರಿ ಹುಡುಗರ ಮೇಲೆ ಹಲ್ಲೆ; ಮೂವರು ಪರೋಡಿಗಳು ಅರೆಸ್ಟ್ Read More »

ಪಬ್ಲಿಕ್ ಪ್ರಾಬ್ಲಂ, ಪಬ್ಲಿಕ್ ವಾಯ್ಸ್: ಕೆಎಸ್ಆರ್ಟಿಸಿ ಚಾಲಕ- ನಿರ್ವಾಹಕರು ಯಾಕೆ ಹೀಗೆ?

ಸಮಗ್ರ ನ್ಯೂಸ್: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಬೆನ್ನಲ್ಲೇ ಸಂಸ್ಥೆಯ ಮೇಲೆ ಕೆಲವು ಅಪವಾದಗಳೂ ಇವೆ. ಇದಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರೋರ್ವರು ನೀಡಿದ ದೂರಿನ ಸಾರಾಂಶವನ್ನು ‘ಸಮಗ್ರ ಸಮಾಚಾರ’ ಪ್ರಕಟಿಸುತ್ತಿದೆ. ಇತ್ತೀಚೆಗೆ ಸಂಸ್ಥೆಯ ಬಸ್ ಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳೂ ಪೂರಕವಾಗಿವೆ. ನಾನು ದಿನನಿತ್ಯ ಕೆಎಸ್ಆರ್ಟಿಸಿ ಬಸ್ ನಲ್ಲಿ ಓಡಾಡುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಸ್ ಗಳಲ್ಲಿ ಓಡಾಡುವ ವೇಳೆ ಗಮನಿಸಿದ ಹಾಗೂ ಅನುಭವಿಸಿದ ಘಟನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಸಾಮಾನ್ಯವಾಗಿ

ಪಬ್ಲಿಕ್ ಪ್ರಾಬ್ಲಂ, ಪಬ್ಲಿಕ್ ವಾಯ್ಸ್: ಕೆಎಸ್ಆರ್ಟಿಸಿ ಚಾಲಕ- ನಿರ್ವಾಹಕರು ಯಾಕೆ ಹೀಗೆ? Read More »

ಮೂಡಿಗೆರೆ: ಎಂ.ಪಿ.ಕುಮಾರಸ್ವಾಮಿ ಅವರಿಂದ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

ಸಮಗ್ರ ನ್ಯೂಸ್: ತಾಲೂಕಿನ ಕಡಿದಾಳು ಗ್ರಾಮದ ನೂತನ ಶಾಲಾ ಕಟ್ಟಡ ನಿರ್ಮಾಣ ಹಾಗೂ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಶಾಸಕ ಎಂ ಪಿ ಕುಮಾರಸ್ವಾಮಿ ನೆರವೇರಿಸಿದರು. ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶಾಲೆ ದೇವಾಲಯ ಇದ್ದಂತೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣ ಪ್ರತಿಯೊಬ್ಬ ಮಗುವಿಗೂ ಸಿಕ್ಕಾಗ ಮಾತ್ರ ಗ್ರಾಮಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಮಲೆನಾಡಿನಲ್ಲಿ ಇತ್ತೀಚೆಗೆ ನಿರ್ಮಾಣವಾದ ಆರ್ ಸಿ ಸಿ ಮೇಲ್ಚಾವಣಿ ಇರುವ ಕಟ್ಟಡಗಳು ಶೀತಲಗೊಂಡಿದ್ದು, ಮಲೆನಾಡಿನಲ್ಲಿ ಹಂಚಿನ ಮೇಲ್ಚಾವಣಿ ನಿರ್ಮಾಣ

ಮೂಡಿಗೆರೆ: ಎಂ.ಪಿ.ಕುಮಾರಸ್ವಾಮಿ ಅವರಿಂದ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ Read More »

ಹೊಸವರ್ಷದಿಂದ ಯುವಜನತೆಗೆ ಉಚಿತವಾಗಿ ಸಿಗಲಿದೆ ಕಾಂಡೋಮ್

ಸಮಗ್ರ ನ್ಯೂಸ್: ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್ ಬಳಸಲು ಪ್ರೋತ್ಸಾಹಿಸಲಾಗುತ್ತೆ. ಇದರ ಮಧ್ಯೆ ಫ್ರಾನ್ಸ್ ನ ಯುವ ಜನತೆಗೆ ಹೊಸ ವರ್ಷದಿಂದ ಉಚಿತವಾಗಿ ಕಾಂಡೋಮ್ ವಿತರಿಸಲು ತೀರ್ಮಾನಿಸಲಾಗಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಈ ವಿಷಯ ತಿಳಿಸಿದ್ದು, 18 ರಿಂದ 25 ವಯೋಮಾನದ ಯುವ ಜನತೆಗೆ 2023 ರ ಜನವರಿ 1ರಿಂದ ಉಚಿತವಾಗಿ ಕಾಂಡೋಮ್ ಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಫ್ರಾನ್ಸ್ ನಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಲೈಂಗಿಕವಾಗಿ ಹರಡುವ ರೋಗಗಳು ಶೇಕಡ 30ರಷ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ

ಹೊಸವರ್ಷದಿಂದ ಯುವಜನತೆಗೆ ಉಚಿತವಾಗಿ ಸಿಗಲಿದೆ ಕಾಂಡೋಮ್ Read More »

ಜ.12ರಂದು ಸಿಎಂ ಯೋಗಿ ಆದಿತ್ಯನಾಥ್ ಉಡುಪಿಗೆ

ಸಮಗ್ರ ನ್ಯೂಸ್: ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಜಾಗೃತಿಯ ಪ್ರತೀಕ, ಯುವ ಜನತೆಯ ಪ್ರೇರಣಾ ಶಕ್ತಿ ಸ್ವಾಮಿ ವಿವೇಕಾನಂದ ರವರ ಜನ್ಮ ದಿನ. ಅ ದಿನದಂದು ಆಚರಿಸಲ್ಪಡುವ ‘ರಾಷ್ಟ್ರೀಯ ಯುವ ದಿನಾಚರಣೆ’ಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಯುವ ಸಂಗಮ’ದಲ್ಲಿ ಭಾಗಿಯಾಗಲು ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಜೀ ಯವರು ಉಡುಪಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್

ಜ.12ರಂದು ಸಿಎಂ ಯೋಗಿ ಆದಿತ್ಯನಾಥ್ ಉಡುಪಿಗೆ Read More »

ಡಿ.12ರಿಂದ ಯಶವಂತಪುರ- ಮುರುಡೇಶ್ವರ ವಿಶೇಷ ರೈಲು ಸಂಚಾರ

ಸಮಗ್ರ ನ್ಯೂಸ್: ಪ್ರಯಾಣಿಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಯಶವಂತಪುರ – ಮುರುಡೇಶ್ವರ ನಡುವೆ ಸಾಪ್ತಾಹಿಕ ವಿಶೇಷ ರೈಲು ಆರಂಭಿಸಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಡಿಸೆಂಬರ್ 10 ರಿಂದ ಜನವರಿ 28 ರ ವರೆಗೆ ಯಶವಂತಪುರ ನಿಲ್ದಾಣದಿಂದ ಪ್ರತಿ ಶನಿವಾರ ರಾತ್ರಿ 11.55 ಕ್ಕೆ ಈ ರೈಲು ಹೊರಡಲಿದ್ದು ಮರುದಿನ ಮಧ್ಯಾಹ್ನ 12.55 ಕ್ಕೆ ಮುರುಡೇಶ್ವರ ತಲುಪಲಿದೆ. ಅದೇ ರೀತಿ ಡಿಸೆಂಬರ್ 11 ರಿಂದ ಜನವರಿ 29 ರವರೆಗೆ ಮುರುಡೇಶ್ವರ ನಿಲ್ದಾಣದಿಂದ ಪ್ರತಿ ಭಾನುವಾರ ಮಧ್ಯಾನ 1.30

ಡಿ.12ರಿಂದ ಯಶವಂತಪುರ- ಮುರುಡೇಶ್ವರ ವಿಶೇಷ ರೈಲು ಸಂಚಾರ Read More »

“ಮುಸ್ಲಿಂ ಪುರುಷರು 3-4 ಮಹಿಳೆಯರನ್ನು ಮದುವೆಯಾಗುವುದನ್ನು ಬದಲಾಯಿಸುವ ಅಗತ್ಯವಿದೆ”

ದಿಸ್ಪುರ್: ಮುಸ್ಲಿಂ ಪುರುಷರು 3-4 ಮಹಿಳೆಯರನ್ನು ಮದುವೆಯಾಗುವ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಂತ ಬಿಸ್ವಾ ಶರ್ಮಾ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿರುದ್ಧ ವಾಗ್ದಾಳಿ ನಡೆಸಿದರು. ಸ್ವತಂತ್ರ ಭಾರತದಲ್ಲಿ ವಾಸಿಸುವ ಪುರುಷನಿಗೆ ಹಿಂದಿನ ಪತ್ನಿಗೆ ವಿಚ್ಛೇದನ ನೀಡದೇ 3-4 ಮಹಿಳೆಯರನ್ನು ಮದುವೆಯಾಗುವ ಯಾವುದೇ ಹಕ್ಕಿಲ್ಲ. ನಾವು ಅಂತಹ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ನಾವು ನ್ಯಾಯವನ್ನು ನೀಡಲು ಪ್ರಯತ್ನಿಸಬೇಕು. ಮುಸ್ಲಿಂ ಹೆಂಗಸರು, ಮುಸ್ಲಿಂ ಹುಡುಗಿಯರು ಹಿಜಬ್ ಧರಿಸಲು ಕೇಳುತ್ತಾರೆ. ಹುಡುಗರು

“ಮುಸ್ಲಿಂ ಪುರುಷರು 3-4 ಮಹಿಳೆಯರನ್ನು ಮದುವೆಯಾಗುವುದನ್ನು ಬದಲಾಯಿಸುವ ಅಗತ್ಯವಿದೆ” Read More »