Editor

ಅಪ್ರಾಪ್ತ ನವಜಾತ ಶಿಶುವಿಗೆ ಜನ್ಮನೀಡಿ, ಹತ್ಯೆ ಕೇಸ್: ತಾಯಿ, ಅಜ್ಜ, ಅಜ್ಜಿ ಅರೆಸ್ಟ್

ಸಮಗ್ರ ನ್ಯೂಸ್:ಅ.17 ರಂದು ಮಡಿಕೇರಿ ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಳು.ಮಗುವನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ನವಜಾತ ಶಿಶುವಿನ ತಾಯಿ, ಅಜ್ಜಿ ಹಾಗೂ ಅಜ್ಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಸೂತಿಯಾಗಿ 4 ದಿನ ಕಳೆದರೂ ನವಜಾತ ಶಿಶು ಕಂಡುಬಂದಿರಲಿಲ್ಲ. ಆಸ್ಪತ್ರೆಯಿಂದ ಆ ಶಿಶು ನಾಪತ್ತೆಯಾಗಿತ್ತು. ಮತ್ತೇ ಶಿಶುವಿನ ಮೃತದೇಹ ಗುಂಡಿಯಲ್ಲಿ ಪತ್ತೆಯಾಗಿತ್ತು.ಮೊದಲಿಗೆ ಹೆತ್ತಾಕೆಯೇ ಮಗುವನ್ನು ನಾಪತ್ತೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ನಂತರ ಅಜ್ಜಿಯೇ ಹೂತಿಟ್ಟಿದ್ದು […]

ಅಪ್ರಾಪ್ತ ನವಜಾತ ಶಿಶುವಿಗೆ ಜನ್ಮನೀಡಿ, ಹತ್ಯೆ ಕೇಸ್: ತಾಯಿ, ಅಜ್ಜ, ಅಜ್ಜಿ ಅರೆಸ್ಟ್ Read More »

ಉತ್ತರಪ್ರದೇಶ: ಸರ್ಕಾರಿ ಆಸ್ಪತ್ರೆಯಲ್ಲಿ ಭಾರೀ ಅಗ್ನಿದುರಂತ| 10 ನವಜಾತ ಶಿಶುಗಳು ಸಾವು

ಸಮಗ್ರ ನ್ಯೂಸ್: ಉತ್ತರಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ವಾಡ್ 9ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 10 ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಆತಂಕ ಇದೆ. ಶುಕ್ರವಾರ ರಾತ್ರಿ 10.30ರ ವೇಳೆಗೆ ನವಜಾತ ಶಿಶುಗಳ ವಾರ್ಡ್‌ನಲ್ಲಿ ಸಿಲಿಂಡ‌ರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಅವಘಡದ ಕುರಿತು ಎಚ್ಚರಿಕೆ ನೀಡಬೇಕಿದ್ದ ಅಲರಾಂ ಹೊಡೆಯದೇ

ಉತ್ತರಪ್ರದೇಶ: ಸರ್ಕಾರಿ ಆಸ್ಪತ್ರೆಯಲ್ಲಿ ಭಾರೀ ಅಗ್ನಿದುರಂತ| 10 ನವಜಾತ ಶಿಶುಗಳು ಸಾವು Read More »

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ‘ಲಕ್ಷ್ಮೀ ನಿವಾಸ’ದ ಜಾಹ್ನವಿ | ಚಿನ್ನು ಮರಿ ಚಂದನಾ ಕೈಹಿಡಿಯುವ ವರನ್ಯಾರು ಗೊತ್ತೇ?

ಸಮಗ್ರ ನ್ಯೂಸ್: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮಿ ನಿವಾಸ’ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ಮಿಂಚುತ್ತಿರುವ ಚಂದನಾ ಅನಂತಕೃಷ್ಣ ಮದುವೆ ಆಗುತ್ತಿದ್ದಾರೆ. ರೀಲ್‌ನಲ್ಲಿ ಮದುವೆ ಆಗಿರುವ ಚಂದನಾ ಇದೀಗ ರಿಯಲ್ ಆಗಿ ಮದುವೆ ಆಗುತ್ತಿದ್ದಾರೆ. ಚಂದನಾ ಅನಂತಕೃಷ್ಣ ಮತ್ತು ಪ್ರತ್ಯಕ್ಷ್ ಇದೇ ನವೆಂಬರ್ 28ರಂದು ಮದುವೆ ಆಗುತ್ತಿದ್ದಾರೆ. ಭಾವಿ ಪತಿ ಪ್ರತ್ಯಕ್ಷ್‌ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಸಖತ್ ಹೆಸರು ಮಾಡಿದ್ದ ದಿವಂಗತ ನಟ ಉದಯ್ ಹುತ್ತಿನಗದ್ದೆ ಮತ್ತು ನಟಿ ಲಲಿತಾಂಜಲಿ

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ‘ಲಕ್ಷ್ಮೀ ನಿವಾಸ’ದ ಜಾಹ್ನವಿ | ಚಿನ್ನು ಮರಿ ಚಂದನಾ ಕೈಹಿಡಿಯುವ ವರನ್ಯಾರು ಗೊತ್ತೇ? Read More »

ಟಿ.20 ಕ್ರಿಕೆಟ್| ಭಾರತದ ವಿರುದ್ದ ಭಾರೀ ಅಂತರದಿಂದ “ಸೋತಾಫ್ರಿಕಾ”

ಸಮಗ್ರ ನ್ಯೂಸ್: ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ T20 ಪಂದ್ಯದಲ್ಲಿ ಭಾರತ ಸುಲಭದ ಗೆಲುವು ದಾಖಲಿಸಿದೆ. 283 ರನ್ ಗಳ ಬೃಹತ್ ಮೊತ್ತ ದಾಖಲಿಸಿದ್ದ ಭಾರತ ತಂಡ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲ ಬೌಲಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡಿದೆ. 284 ರನ್ ಗಳ ಬೆಟ್ಟದಷ್ಟು ದೊಡ್ಡ ಮೊತ್ತದ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 148 ರನ್ ಗಳನ್ನಷ್ಟೇ ಸಾಧಿಸಲು ಶಕ್ತವಾಯ್ತು. ಈ ಹಿನ್ನೆಲೆ 135 ರನ್ ಗಳ

ಟಿ.20 ಕ್ರಿಕೆಟ್| ಭಾರತದ ವಿರುದ್ದ ಭಾರೀ ಅಂತರದಿಂದ “ಸೋತಾಫ್ರಿಕಾ” Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ| ದರ್ಶನ್ ಮಧ್ಯಂತರ ಜಾಮೀನು ತಡೆಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್

ಸಮಗ್ರ ನ್ಯೂಸ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರಿಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ಆದೇಶ ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸರ್ಕಾರ ಸಮ್ಮತಿ ನೀಡಿದೆ. ಚಿಕಿತ್ಸೆಗೆ ಜಾಮೀನು ನೀಡುವಂತೆ ಹೈಕೋರ್ಟ್‌ನಲ್ಲಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್‌ ಷರತ್ತುಬದ್ಧವಾಗಿ ಆರು ವಾರಗಳ ಜಾಮೀನು‌ ಮಂಜೂರು ಮಾಡಿತ್ತು. ‌ಅದಾದ ಮೇಲೆ ದರ್ಶನ್ ಅವರು ಜೈಲಿನಿಂದ ಬಿಡುಗಡೆ ಆಗಿದ್ದರು. ಸದ್ಯ ಬಿಜಿಎಸ್ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ| ದರ್ಶನ್ ಮಧ್ಯಂತರ ಜಾಮೀನು ತಡೆಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ Read More »

ಇದು ತಪ್ಪು ಎಂದಿದ್ದೇ ಜೀವಕ್ಕೆ ತಂದಿತು ಆಪತ್ತು! ಗಂಡ-ಹೆಂಡತಿ ಜಗಳದಲ್ಲಿ ಪಕ್ಕದ ಮನೆ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ತನ್ನ ಪತ್ನಿಯ ಜತೆ ಕೌಟುಂಬಿಕ ಕಲಹದಲ್ಲಿ ತೊಡಗಿದ್ದ ಪತಿಗೆ ಹೀಗೆಲ್ಲಾ ಮಾಡಬೇಡ, ಆಕೆ ಹೆಣ್ಣು ಜೀವ ಎಂದು ಬುದ್ದಿ ಮಾತನ್ನು ಹೇಳಿದ ಪಕ್ಕದ ಮನೆಯ ರಾನ್ ಸಿಂಗ್ ಎಂಬ ವ್ಯಕ್ತಿಯನ್ನು ರಾಡ್‌ನಿಂದ ಹತ್ಯೆಗೈದ ಘಟನೆ ಉತ್ತರ ದೆಹಲಿಯಲ್ಲಿ ವರದಿಯಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಧೀರಜ್ ತನ್ನ ಹೆಂಡತಿಯನ್ನು ನಿಂದಿಸಿ, ಅಮಾನುಷವಾಗಿ ಹಲ್ಲೆ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಆರೋಪಿ ತನ್ನ ಪತ್ನಿಯನ್ನು ದೈಹಿಕವಾಗಿ ಹಲ್ಲೆ ಮಾಡುವುದಲ್ಲದೆ, ವಿಪರೀತ ಅವಾಚ್ಯ ಪದಗಳಿಂದ

ಇದು ತಪ್ಪು ಎಂದಿದ್ದೇ ಜೀವಕ್ಕೆ ತಂದಿತು ಆಪತ್ತು! ಗಂಡ-ಹೆಂಡತಿ ಜಗಳದಲ್ಲಿ ಪಕ್ಕದ ಮನೆ ವ್ಯಕ್ತಿ ಸಾವು Read More »

ಗುಂಡ್ಯ: ಕಸ್ತೂರಿ ರಂಗನ್ ವರದಿ ವಿರೋಧಿಸಿ‌ ಹೋರಾಟದಲ್ಲಿ ಅನುಮತಿ ಇಲ್ಲದೆ‌ ಹೆದ್ದಾರಿ ತಡೆ| ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೈಂದೂರು ಶಾಸಕ ಗಂಟಿಹೊಳೆ‌‌ ಸೇರಿ 15 ಮಂದಿ ವಿರುದ್ದ ಕೇಸು ದಾಖಲು

ಸಮಗ್ರ ನ್ಯೂಸ್: ನ.15ರಂದು ಮಧ್ಯಾಹ್ನ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯದಲ್ಲಿ ಅನುಮತಿ ಇಲ್ಲದೇ ರಸ್ತೆ ತಡೆ ನಡೆಸಿದ ಆರೋಪದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಸಹಿತ 15 ಮಂದಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಪ್ಪಿನಂಗಡಿ ಠಾಣಾ ಎಸ್.ಐ.ಅವಿನಾಶ್ ಅವರ ದೂರಿನಂತೆ ಈ ಕೇಸು ದಾಖಲಾಗಿದೆ. ನ.15ರಂದು ಸಿರಿಬಾಗಿಲು ಗ್ರಾಮದ ಲಕ್ಷ್ಮೀ ವೆಂಕಟೇಶ್ ದೇವಸ್ಥಾನದ ಮಾಡ ಮೈದಾನದಲ್ಲಿ

ಗುಂಡ್ಯ: ಕಸ್ತೂರಿ ರಂಗನ್ ವರದಿ ವಿರೋಧಿಸಿ‌ ಹೋರಾಟದಲ್ಲಿ ಅನುಮತಿ ಇಲ್ಲದೆ‌ ಹೆದ್ದಾರಿ ತಡೆ| ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೈಂದೂರು ಶಾಸಕ ಗಂಟಿಹೊಳೆ‌‌ ಸೇರಿ 15 ಮಂದಿ ವಿರುದ್ದ ಕೇಸು ದಾಖಲು Read More »

ನ.16: ಒಕ್ಕಲಿಗ ಸೇವಾವಾಹಿನಿಯಿಂದ ಮನೆನಿರ್ಮಾಣಕ್ಕೆ ನೆರವಿನ‌ ಹಸ್ತ| ಕಾವೂರು ಮಠಾದೀಶರಿಂದ ಪಾಂಬಾರು ತೀರ್ಥರಾಮ ಗೌಡರಿಗೆ ಕೆಂಪುಕಲ್ಲು ಹಸ್ತಾಂತರ ಸಮಾರಂಭ

ಸಮಗ್ರ ನ್ಯೂಸ್: ಸಮಾನ ಮನಸ್ಕ ಒಕ್ಕಲಿಗ ಯುವಕರು ಸಮಾಜದ ಕಡುಬಡತನ ಕುಟುಂಬಗಳಿಗೆ ಆರ್ಥಿಕ, ಸಾಮಾಜಿಕ ಬಲವರ್ಧನೆಯ ನೆರವಾಗುವ ಉದ್ದೇಶದಿಂದ ನೂತನವಾಗಿ ಪ್ರಾರಂಭಿಸಲಾದ ಒಕ್ಕಲಿಗ ಗೌಡ ಸೇವಾವಾಹಿನಿ ದ.ಕ., ಕರ್ನಾಟಕ. ಟ್ರಸ್ಟ್ ನ ಚೊಚ್ಚಲ ಸಹಾಯಾರ್ಥ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಆದಿಚುಂಚನಗಿರಿಯ ಮಂಗಳೂರಿನ ಕಾವೂರು ಶಾಖಾ ಮಠಾಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನ.16ರಂದು ನೆರವಿನ ಹಸ್ತದ ಯೋಜನೆಗೆ ಚಾಲನೆ ನೀಡಲಿದ್ದಾರೆ. ಒಕ್ಕಲಿಗ ಸಮಾಜದ ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಆಲಂಗಾರು ನಿವಾಸಿ ಪಾಂಬಾರು ತೀರ್ಥರಾಮ ಗೌಡರ

ನ.16: ಒಕ್ಕಲಿಗ ಸೇವಾವಾಹಿನಿಯಿಂದ ಮನೆನಿರ್ಮಾಣಕ್ಕೆ ನೆರವಿನ‌ ಹಸ್ತ| ಕಾವೂರು ಮಠಾದೀಶರಿಂದ ಪಾಂಬಾರು ತೀರ್ಥರಾಮ ಗೌಡರಿಗೆ ಕೆಂಪುಕಲ್ಲು ಹಸ್ತಾಂತರ ಸಮಾರಂಭ Read More »

ವೈದ್ಯೆಗೆ ಮೋಸ ಮಾಡಿದ್ದ ಪೊಲೀಸ್ ಪ್ರಕರಣಕ್ಕೆ ತಿರುವು – ವೈದ್ಯೆ ಅವಳಲ್ಲ ಅವನು!

ಸಮಗ್ರ ನ್ಯೂಸ್: ಬಸವನಗುಡಿ ಪೊಲೀಸ್ ಠಾಣೆಯ ಪಿಎಸ್‌ಐ ರಾಜಕುಮಾ‌ರ್ ಜೋಡಟ್ಟಿ ಅವರು ವೈದ್ಯೆಯೊಬ್ಬರಿಗೆ ಹಣ ವಂಚಿಸಿದ್ದಲ್ಲದೇ ಲೈಂಗಿಕ ಕಿರುಕುಳ ನೀಡಿದ್ದರೆಂದು ಕೇಳಿಬಂದಿದ್ದ ಆರೋಪಕ್ಕೆ ತೀವ್ರ ತಿರುವು ಸಿಕ್ಕಿದೆ. ಯುವಕನೊಬ್ಬ ಮಹಿಳೆಯ ಹೆಸರಿನಲ್ಲಿ ಫೇಸ್ ಬುಕ್ ನಕಲಿ ಖಾತೆ ತೆಗೆದು ಪೊಲೀಸ್ ಪಿಎಸ್‌ಐ ರಾಜ್ ಕುಮಾರ್ ಜೋಡಟ್ಟಿಯವರಿಗೆ ವಂಚಿಸಿರುವ ಸಾಧ್ಯತೆ ಇರುವುದಾಗಿ ಪೊಲೀಸ್ ಆಯುಕ್ತ ದಯಾನಂದ ಅವರು ಮಾಹಿತಿ ನೀಡಿದ್ದಾರೆ. ವೈದ್ಯೆ ಸ್ವಾತಿ ದ್ಯಾಮಕ್ಕನವರ ಹೆಸರಿನಲ್ಲಿ ನಕಲಿ ಖಾತೆ ತೆಗೆದಿದ್ದ ಸಿದ್ದಪ್ಪ ದ್ಯಾಮಕ್ಕನವರ ಎಂಬ ವ್ಯಕ್ತಿ ಪೊಲೀಸ್‌ ಪಿಎಸ್‌ಐ

ವೈದ್ಯೆಗೆ ಮೋಸ ಮಾಡಿದ್ದ ಪೊಲೀಸ್ ಪ್ರಕರಣಕ್ಕೆ ತಿರುವು – ವೈದ್ಯೆ ಅವಳಲ್ಲ ಅವನು! Read More »

ರಾತ್ರಿ ಪಾರ್ಟಿ ಮುಗಿಸಿ ಕಾರಿನಲ್ಲಿ ಹೊರಟ ವಿಧ್ಯಾರ್ಥಿಗಳು ಸೇರಿದ್ದು ಮಸಣಕ್ಕೆ|ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ 6 ಮಂದಿಯ ದೇಹ

ಸಮಗ್ರ ನ್ಯೂಸ್: ನ.15 ರಂದು ಕಾರು ಹಾಗೂ ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನಪ್ಪಿದ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ.ಮೃತರನ್ನು ಡೆಹ್ರಾಡೂನ್‌ ನಿವಾಸಿಗಳಾದ ಗುನೀತ್ ಸಿಂಗ್, ಕಾಮಾಕ್ಷಿ ಸಿಂಘಾಲ್, ನವ್ಯಾ ಗೋಯಲ್, ರಿಷಭ್ ಜೈನ್ ಮತ್ತು ಅತುಲ್ ಅಗರವಾಲ್ ಮತ್ತು ಹಿಮಾಚಲ ಪ್ರದೇಶದ ಚಂಬಾದಿಂದ ಕುನಾಲ್ ಕುಕ್ರೇಜಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಸಿದ್ದೇಶ್ ಅಗರವಾಲ್ ಸ್ಥಿತಿ ಗಂಭೀರವಾಗಿದೆ.ಸಿದ್ದೇಶ್‌ ಆಯೋಜಿಸಿದ್ದ ಪಾರ್ಟಿ ಮುಗಿಸಿ 6 ಮಂದಿ ಕಾರಿನಲ್ಲಿ ತೆರಳುತ್ತಿದ್ದರು.

ರಾತ್ರಿ ಪಾರ್ಟಿ ಮುಗಿಸಿ ಕಾರಿನಲ್ಲಿ ಹೊರಟ ವಿಧ್ಯಾರ್ಥಿಗಳು ಸೇರಿದ್ದು ಮಸಣಕ್ಕೆ|ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ 6 ಮಂದಿಯ ದೇಹ Read More »