Editor

ಶೀಘ್ರದಲ್ಲೇ 12+ ಮಕ್ಕಳಿಗೆ ಲಸಿಕೆ

ನವದೆಹಲಿ: 12 ರಿಂದ 18 ವರ್ಷದ ಮಕ್ಕಳಿಗೆ ಶೀಘ್ರವೇ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಮುಖ ಔಷಧ ಕಂಪನಿ ಜೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ಜೈಕೋವ್ ಡಿ ಲಸಿಕೆಯನ್ನು 12 ರಿಂದ 18 ವರ್ಷದ ಮಕ್ಕಳಿಗೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಭಾರತ್ ಬಯೋಟೆಕ್ ಲಸಿಕೆಯನ್ನು 12 -18 ವರ್ಷದವರ ಮೇಲೆ ಪ್ರಯೋಗಕ್ಕೆ ಕಳೆದ ಮೇ ನಲ್ಲಿ ಅನುಮತಿ ನೀಡಲಾಗಿದೆ. ಅನುಮತಿ ದೊರೆತ ಕೂಡಲೇ ಕ್ಲಿನಿಕಲ್ ಪ್ರಯೋಗ ಮುಗಿಸಿದ ಜೈಡಸ್ […]

ಶೀಘ್ರದಲ್ಲೇ 12+ ಮಕ್ಕಳಿಗೆ ಲಸಿಕೆ Read More »

ಸೋಂಕಿತರಿಗೆ ಕೇರ್ ಸೆಂಟರ್’ನಲ್ಲಿ ಚಿಕಿತ್ಸೆ ಉತ್ತಮ: ಸಚಿವ ಎಸ್ ಅಂಗಾರ

ಸುಬ್ರಹ್ಮಣ್ಯ: ಕೋವಿಡ್ ಸೋಂಕಿತರು ಕೇರ್ ಸೆಂಟರ್ ನಲ್ಲಿ ಇದ್ದುಕೊಂಡೆ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಸಚಿವ ಅಂಗಾರ ಹೇಳಿದ್ದಾರೆ. ಅವರು ನಿನ್ನೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೋವಿಡ್ ಪಾಸಿಟಿವ್ ವರದಿ ಬಂದವರು ಮನೆಯಲ್ಲಿ ಇರುವುದಕ್ಕಿಂತ ಆರೈಕೆ ಕೇಂದ್ರಗಳಲ್ಲಿ ಉಳಿಯುವುದು ಸೂಕ್ತ. ಮನೆಯಲ್ಲಿದ್ದರೆ ನೆರೆಹೊರೆಯವರಿಗೆ ಸೋಂಕು ಹರಡುವ ಸಂಭವ ಹೆಚ್ಚು. ಅದಕ್ಕಾಗಿ ಸಾರ್ವಜನಿಕರು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯಬೇಕು. ಆರೈಕೆ ಕೇಂದ್ರದಲ್ಲಿ ಆಹಾರ ಮತ್ತು ಔಷಧ ವಿತರಣೆ ವ್ಯವಸ್ಥಿತವಾಗಿ

ಸೋಂಕಿತರಿಗೆ ಕೇರ್ ಸೆಂಟರ್’ನಲ್ಲಿ ಚಿಕಿತ್ಸೆ ಉತ್ತಮ: ಸಚಿವ ಎಸ್ ಅಂಗಾರ Read More »

ಇಂದು ‘ಕಬ್ಜಾ’ ಕಡೆಯಿಂದ ‘ಕಿಚ್ಚಾ-ಉಪ್ಪಿ’ ಅಭಿಮಾನಿಗಳಿಗೆ ರಸದೌತಣ

ರಿಲೀಸ್​​ಗೂ ಮೊದಲೇ ಉಪೇಂದ್ರ ಹಾಗೂ ಸುದೀಪ್ ನಟನೆಯ ‘ಕಬ್ಜ’ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ವಿನೂತನ ಹಾಲಿವುಡ್ ಶೈಲಿಯ ಪೋಸ್ಟರ್ ಇಂದು ಮುಂಜಾನೆ 6 ಗಂಟೆಗೆ ಬಿಡುಗಡೆಯಾಗಿದೆ. ಈ ಪೋಸ್ಟರ್​ನಿಂದ ಅಭಿಮಾನಿಗಳಿಗೆ ರಸದೌತಣ ಸಿಕ್ಕಿದೆ. ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ವಿಶೇಷಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ‘ಮುಕುಂದ ಮುರಾರಿ’ ಚಿತ್ರದ ನಂತರ ಈ ಜೋಡಿ ‘ಕಬ್ಜ’ ಚಿತ್ರದಲ್ಲಿ ಒಂದಾಗಿದೆ. ಖ್ಯಾತ ನಿರ್ದೇಶಕ ಆರ್. ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ,

ಇಂದು ‘ಕಬ್ಜಾ’ ಕಡೆಯಿಂದ ‘ಕಿಚ್ಚಾ-ಉಪ್ಪಿ’ ಅಭಿಮಾನಿಗಳಿಗೆ ರಸದೌತಣ Read More »

ದ ಕ: ಕಾಲೇಜು ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಮತ್ತು ಸಿಬ್ಬಂದಿಗಳಿಗೆ ನಾಳೆಯಿಂದ ವ್ಯಾಕ್ಸಿನೇಷನ್

ಮಂಗಳೂರು: ಜಿಲ್ಲೆಯ ಪದವಿ ಕಾಲೇಜಿನ ಎಲ್ಲಾ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ, ಬೋಧಕ ವೃಂದದವರಿಗೆ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ನಾಳೆಯಿಂದ ವ್ಯಾಕ್ಸಿನೇಷನ್ ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಮಾಹಿತಿ ನೀಡಿದ್ದಾರೆ. ಜುಲೈ ತಿಂಗಳಿನಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳು, ಸ್ನಾತಕೋತ್ತರ ಪದವಿ ಕಾಲೇಜುಗಳು, ಐಐಟಿ, ಡಿಪ್ಲೋಮಾ ಕಾಲೇಜುಗಳು, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು

ದ ಕ: ಕಾಲೇಜು ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಮತ್ತು ಸಿಬ್ಬಂದಿಗಳಿಗೆ ನಾಳೆಯಿಂದ ವ್ಯಾಕ್ಸಿನೇಷನ್ Read More »

‘ಯೋಗ’ ಮನಸ್ಸು ದೇಹಗಳ ಸಂಯೋಗ

ಯೋಗ’ ಎಂಬ ಪದವನ್ನು ಕೇಳಿದಾಕ್ಷಣ ಹಲವರ ಮನಸ್ಸಿಗೆ ಮೊದಲು ತೋಚುವುದೇ ಋಷಿ-ಮುನಿಗಳು, ಸಾಧಕರ ಕಲ್ಪನೆ. ಯೋಗ ಎಂದರೆ ಒಂದು ಧರ್ಮಕ್ಕೆ ಸೀಮಿತವಾದದ್ದು ಎನ್ನುವುದರಿಂದ, ಯೋಗ ಎಂದರೆ ಒಂದು ನಿರ್ದಿಷ್ಟ ರಾಷ್ಟ್ರದ ಸ್ವತ್ತು ಎಂಬಲ್ಲಿಂದ, ಇತ್ತೀಚಿಗಷ್ಟೇ ಯೋಗ ಎಂದರೆ ಧರ್ಮಾತೀತ, ಸೀಮಾತೀತ, ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಸಂಬಂಧಿಸಿದ್ದು ಎನ್ನುವ ಅರಿವಾಗಿ ಪ್ರಪಂಚದಾದ್ಯಂತ ಸ್ವೀಕರಿಸಿ, ಅಭ್ಯಸಿಸಲ್ಪಡುತ್ತಿದೆ. ಯೋಗ’ವೆಂದರೆ ಸಂಯೋಗ, ಅದು ದೇಹ ಮತ್ತು ಮನಸ್ಸಿನ ಸಂಯೋಗ. ಮತ್ತೊಬ್ಬರ ಸಮಸ್ಯೆಯನ್ನು ಅರಿತು ಸ್ಪಂದಿಸುವುದು. ನಮ್ಮ ಬಳಿ ಇರುವ ಅತ್ಯಮೂಲ್ಯ ವಸ್ತುವಿನ ಬಗ್ಗೆ

‘ಯೋಗ’ ಮನಸ್ಸು ದೇಹಗಳ ಸಂಯೋಗ Read More »

ಜಾಲತಾಣಗಳಲ್ಲಿ ಕ್ಲಬ್ ಹೌಸ್ ದೇ ಮಾತು | ಹಾಗಿದ್ರೆ ಏನಿದು ಕ್ಲಬ್ ಹೌಸ್? | ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಮಾಜಿಕ ಜಾಲತಾಣಗಳಲ್ಲಿ ಈಗ ಕ್ಲಬ್ ಹೌಸ್ ಬಗ್ಗೆಯೇ ಮಾತು ಹೆಚ್ಚುತ್ತಿದೆ. ಈ ಕ್ಲಬ್‌ನಲ್ಲಿ ಇವತ್ತು ಈ ನಟಿ, ನಿರ್ದೇಶಕ ಬಂದಿದ್ದರು. ಬಹಳ ಚೆನ್ನಾಗಿ ಮಾತನಾಡಿದರು ಎಂಬ ಮಾತುಗಳನ್ನು ನೀವು ಕೇಳಿರಬಹುದು. ಹೀಗಾಗಿ ನಾನು ಕ್ಲಬ್ ಹೌಸ್ ಸೇರಬೇಕು, ಮಾತನಾಡಬೇಕು ಎಂದು ಅನಿಸಿದ್ದರೂ ಜಾಯಿನ್ ಆಗುವುದು ಹೇಗೆ? ಜಾಯಿನ್ ಆದ ನಂತರ ಮಾತನಾಡುವುದು ಹೇಗೆ? ಕ್ಲಬ್ ಸೃಷ್ಟಿ ಮಾಡುವುದು ಹೇಗೆ? ಹೀಗೆ ಹಲವು ಪ್ರಶ್ನೆಗಳು ನಿಮ್ಮಲ್ಲಿ ಮೂಡುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಇಲ್ಲಿ ಸರಳವಾಗಿ

ಜಾಲತಾಣಗಳಲ್ಲಿ ಕ್ಲಬ್ ಹೌಸ್ ದೇ ಮಾತು | ಹಾಗಿದ್ರೆ ಏನಿದು ಕ್ಲಬ್ ಹೌಸ್? | ಇಲ್ಲಿದೆ ಸಂಪೂರ್ಣ ಮಾಹಿತಿ Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ದ್ವಾದಶ ರಾಶಿಗಳ ಜೂ.27 ರಿಂದ ಜುಲೈ.3ರವರೆಗಿನ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ. ಮೇಷರಾಶಿ:-ಖಾಸಗಿ ಕಂಪನಿ ಕೆಲಸದಲ್ಲಿದ್ದರೆ,ಸ್ವಲ್ಪ ಕೆಲಸದ ಒತ್ತಡ ಇರುತ್ತದೆ ಹಾಗೂ ಸರ್ಕಾರಿ ಕೆಲಸದವರಿಗೆ ಈ ವಾರ ಉತ್ತಮವಾಗಿದೆ. ವ್ಯಾಪಾರಸ್ಥರಿಗೆ ಉತ್ತಮವಾದ ದಿನವಾಗಿದೆ ಹಾಗೂ ಉತ್ತಮ ಲಾಭ ಸಿಗುತ್ತದೆ ಸ್ವಲ್ಪ ಹಣದ ವಿಚಾರದಲ್ಲಿ ನೋಡಿಕೊಂಡು ಖರ್ಚು ಮಾಡಬೇಕು ಹಾಗೂ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು

ದ್ವಾದಶ ರಾಶಿಗಳ ವಾರ ಭವಿಷ್ಯ Read More »

ಒಲಿಂಪಿಕ್ ನಲ್ಲಿ ಇತಿಹಾಸ ಸೃಷ್ಟಿಸಿದ ‘ಸಾಜನ್’, ಬಟರ್ ಫ್ಲೈನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ

ಹೊಸದಿಲ್ಲಿ: ಇಟಲಿಯ ರೋಮ್‌ನ ಸೆಟ್ಟೆ ಕೊಲ್ಲಿ ಟ್ರೋಫಿಯಲ್ಲಿ ಶನಿವಾರ ನಡೆದ ಪುರುಷರ 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಾಜನ್ ಪ್ರಕಾಶ್ 1:56:38 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್ ಅರ್ಹತಾ ಸಮಯವನ್ನು ಮೀರಿದ ಮೊದಲ ಭಾರತೀಯ ಈಜುಗಾರ ಎನಿಸಿಕೊಳ್ಳುವುದರೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 27 ವರ್ಷದ ಪ್ರಕಾಶ್ ಟೋಕಿಯೋ ಕ್ರೀಡಾಕೂಟದಲ್ಲಿ ನಿಗದಿಪಡಿಸಿರುವ ‘ಎ’ ಮಾನದಂಡವನ್ನು (1: 56.48 ಸೆಕೆಂಡು) ಮೀರಿ ನಿಂತರು. ಕೇರಳದ ಈಜುಗಾರ 200 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ

ಒಲಿಂಪಿಕ್ ನಲ್ಲಿ ಇತಿಹಾಸ ಸೃಷ್ಟಿಸಿದ ‘ಸಾಜನ್’, ಬಟರ್ ಫ್ಲೈನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ Read More »

30 ವರ್ಷದ ಹಿಂದೆ ಮುಳುಗಡೆಯಾಗಿದ್ದ ಹಡಗಿನ ಅವಶೇಷ ಪತ್ತೆ

ಕಾರವಾರ: ಅಂದಾಜು ಮೂವತ್ತು ವರ್ಷಗಳ ಹಿಂದೆ ಕಾರವಾರದ ಸಮುದ್ರ ಭಾಗದಲ್ಲಿ ಮುಳುಗಡೆಯಾಗಿದ್ದ ಸಿಂಗಾಪುರ ದೇಶದ ಚೆರಿಮಾಜು ಎಂಬ ಹೆಸರಿನ ಸರಕು ಸಾಗಾಣಿಕೆ ಹಡಗಿನ ಅವಶೇಷಗಳು ಇಂದು ಕಾರವಾರ ಕಡಲತೀರದಲ್ಲಿ ಪತ್ತೆಯಾಗಿದೆ. 1981 ರಲ್ಲಿ ಸಿಂಗಾಪುರದಿಂದ ಕಾರವಾರದ ಬಂದರಿಗೆ ಬಂದಿದ್ದ ಈ ಹಡಗು 14.418 ಟನ್ ಡಾಂಬರ್ ಅನ್ನು ಹೊತ್ತು ತಂದಿತ್ತು. ಈ ವೇಳೆ ಕಡಲಬ್ಬರಕ್ಕೆ ಸಿಲುಕಿದ್ದ ಈ ಹಡಗು ಇಲ್ಲಿಯೇ ಸಂಪೂರ್ಣ ಸಮುದ್ರದಾಳಕ್ಕೆ ಸೇರಿ ಹೋಗಿತ್ತು. ಈ ವೇಳೆ ಹಡಗಿನಲ್ಲಿದ್ದ 30 ನಾವಿಕರನ್ನು ರಕ್ಷಣೆ ಮಾಡಲಾಗಿತ್ತು. ಹುದುಗಿ

30 ವರ್ಷದ ಹಿಂದೆ ಮುಳುಗಡೆಯಾಗಿದ್ದ ಹಡಗಿನ ಅವಶೇಷ ಪತ್ತೆ Read More »

ಕರಾವಳಿಗರೇ ಎಚ್ಚರ… ‘ದುಶ್ಮನ್ ಬಗಲ್ ಮೆ’,ಹೆಚ್ಚುತ್ತಿವೆ ‘ಡೆಲ್ಟಾ’ ಪ್ಲಸ್ ಕೇಸ್‌

ಮಂಗಳೂರು: ಕೇರಳದ ಕರಾವಳಿ ಭಾಗಗಳಲ್ಲಿ ಕೊರೊನಾ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನೆರೆಯ ದಕ್ಷಿಣಕನ್ನಡ ಜಿಲ್ಲೆಗೂ ಭೀತಿ ಹೆಚ್ಚಾಗಿದೆ. ಕೇರಳದಿಂದ ಪ್ರತಿನಿತ್ಯ ಸಾವಿರಾರು ಮಂದಿ ದಕ್ಷಿಣ ಕನ್ನಡ ಜಿಲ್ಲೆಗೆ ವ್ಯಾಪಾರ, ಉದ್ಯೋಗಕ್ಕಾಗಿ ಬಂದು ಹೋಗುತ್ತಾರೆ. ಹೀಗಾಗಿ ಜಿಲ್ಲೆಯ ಜನತೆಗೆ ಭೀತಿ ಹೆಚ್ಚಾಗಿದ್ದು, ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ವಾರದ ವೀಕೆಂಡ್ ಕರ್ಪ್ಯೂ ಜಾರಿ ಇದ್ದ ಕಾರಣ ಗಡಿ ಭಾಗದಲ್ಲಿ ಹೆಚ್ಚಿನ ವಾಹನ ಓಡಾಟ ಇರಲಿಲ್ಲ. ಆದರೂ ಯಾವೊಂದು ತಪಾಸಣೆಯೂ

ಕರಾವಳಿಗರೇ ಎಚ್ಚರ… ‘ದುಶ್ಮನ್ ಬಗಲ್ ಮೆ’,ಹೆಚ್ಚುತ್ತಿವೆ ‘ಡೆಲ್ಟಾ’ ಪ್ಲಸ್ ಕೇಸ್‌ Read More »