Editor

ಸುಳ್ಯ: ತಾಯಿ- ಮಗು ‘ಕೆರೆಗೆ ಹಾರ’

ಸುಳ್ಯ: ಕೆರೆಗೆ ಕಾಲು ಜಾರಿ ಬಿದ್ದ ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿ ಇಬ್ಬರೂ ಮುಳುಗಿ ಬಲಿಯಾದ ಘಟನೆ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾಪಲಕಜೆಯ. ಸಂಗೀತಾ ಮತ್ತು ಆಕೆಯ ಮಗು‌ ಮೃತ ದುರ್ದೈವಿಗಳು. ತೋಟದಲ್ಲಿನ ಕೆರೆಯ ಬಳಿ ಮಗು ಕಾಲುಜಾರಿ ಬಿದ್ದಾಗ ಅದನ್ನು ರಕ್ಷಿಸಲು ಸಂಗೀತಾ ಅವರು ಕೆರೆಗೆ ಹಾರಿದ್ದಾರೆ. ಆದರೆ ಈಜು ಭಾರದ ಅವರು ಮಗುವನ್ನು ರಕ್ಷಿಸಲೂ ಆಗದೆ ಇತ್ತ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲಾಗದೇ ಮೃತಪಟ್ಟಿದ್ದಾರೆ. ಸಂಗಿತಾ ಅವರ ಮೃತದೇಹ ಮೇಲೆತ್ತಲಾಗಿದ್ದು […]

ಸುಳ್ಯ: ತಾಯಿ- ಮಗು ‘ಕೆರೆಗೆ ಹಾರ’ Read More »

ದ.ಕ ದಲ್ಲಿ‌ ಆ.15 ರ ನಂತರ ಲಾಕ್ ಡೌನ್? ಏನಂದ್ರು ಸಚಿವರು?

ಮಂಗಳೂರು: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು, ಪಾಸಿಟಿವಿಟಿ ದರ ಮತ್ತಷ್ಟು ಹೆಚ್ಚಾದ್ರೆ ಲಾಕ್ಡೌನ್ ಆಗುವ ಅಪಾಯವಿದೆ ಎಂದು ಮಂಗಳೂರಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಪಾಸಿಟಿವಿಟಿ ದರ ಶೇಕಡಾ 3 ತಲುಪಿದೆ. ಈ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಮಾಡಲಾಗಿದೆ. ಇದು ಹೆಚ್ಚಾದ್ರೆ ಲಾಕ್ ಡೌನ್ ಮಾಡುವ ಅಪಾಯವಿದೆ ಎಂದ ಅವರು, ಕೋವಿಡ್ ನಿಯಂತ್ರಣ ಮಾಡುವುದು ಆರೋಗ್ಯ ಇಲಾಖೆಯ ಜವಾಬ್ದಾರಿ. ಅದು ನಿಯಮಗಳನ್ನು ಪಾಲಿಸುವುದು

ದ.ಕ ದಲ್ಲಿ‌ ಆ.15 ರ ನಂತರ ಲಾಕ್ ಡೌನ್? ಏನಂದ್ರು ಸಚಿವರು? Read More »

‘ಕಾವೇರಿ’ ಬಿಡಲೊಪ್ಪದ ಯಡಿಯೂರಪ್ಪ| ಮಾಜಿ ಸಿಎಂ ಗೆ ಸಂಪುಟ ದರ್ಜೆ ಸ್ಥಾನಮಾನ…!

ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ 13 ದಿನಗಳು ಕಳೆದಿದೆ. ಆದರೆ ಯಡಿಯೂರಪ್ಪ ತಮ್ಮ ಸಿಎಂ ಅಧಿಕೃತ ನಿವಾಸ ಕಾವೇರಿಯನ್ನು ಈವರೆಗೂ ತೊರೆದಿಲ್ಲ. ಅದೃಷ್ಟದ ನಿವಾಸ ಎಂದೇ ರಾಜಕೀಯ ವಲಯದಲ್ಲಿ ಪರಿಗಣಿಸಲ್ಪಟ್ಟಿರುವ ಕಾವೇರಿಯನ್ನು ತೊರೆಯಲು ಯಡಿಯೂರಪ್ಪ ಮನಸ್ಸು ಮಾಡಿರದೆ ಇರುವುದು ಕುತೂಹಲ ಕೆರಳಿಸಿದೆ. ಕಾವೇರಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ. ಅದರ ಪಕ್ಕದಲ್ಲೇ ಸಿಎಂ ಗೃಹ ಕಚೇರಿ ಕೃಷ್ಣಾ ಇದೆ. ಸಹಜವಾಗಿ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕಾರ ಮಾಡಿದವರು ಈ ನಿವಾಸದಲ್ಲಿ ವಾಸ್ತವ್ಯ ಹೂಡುತ್ತಾರೆ. ಸಿದ್ದರಾಮಯ್ಯ ಅವರು

‘ಕಾವೇರಿ’ ಬಿಡಲೊಪ್ಪದ ಯಡಿಯೂರಪ್ಪ| ಮಾಜಿ ಸಿಎಂ ಗೆ ಸಂಪುಟ ದರ್ಜೆ ಸ್ಥಾನಮಾನ…! Read More »

ಕಡಬ: ರುದ್ರಭೂಮಿಯಲ್ಲಿ ಅರೆಬೆಂದ ಶವ ತಿಂದ ಬೀದಿನಾಯಿಗಳು…!

ಕಡಬ : ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತದೇಹವನ್ನು ಸಂಬಂಧಿಕರು ಬಿಟ್ಟು ಹೋದ ಪರಿಣಾಮ ನಾಯಿಗಳು ದೇಹದ ಮಾಂಸವನ್ನು ಎಳೆದು ತಿಂದ ಘಟನೆ ಕಡಬದಲ್ಲಿ ನಡೆದಿದೆ. ಕಡಬ ಸಮೀಪದ ಗೋಳಿಯಡ್ಕ ವ್ಯಕ್ತಿ ಶನಿವಾರದಂದು ಮೃತಪಟ್ಟಿದ್ದು, ಕಡಬದ ಹಿಂದೂ ರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಮೃತದೇಹಕ್ಕೆ ಬೆಂಕಿ ಹಚ್ಚಿ ತೆರಳಿದ್ದರು. ಸ್ವಲ್ಪ ಹೊತ್ತಾದ ಮೇಲೆ ಮಾಂಸ ಬೆಂದ ವಾಸನೆಗೆ ಬಂದ ನಾಯಿಗಳು ಮಾಂಸವನ್ನು ತಿಂದಿವೆ. ಜೊತೆಗೆ ಉಳಿದ ಎಲುಬುಗಳನ್ನು ಕೆಲವು ಮನೆಗಳ ಅಂಗಳದಲ್ಲಿ

ಕಡಬ: ರುದ್ರಭೂಮಿಯಲ್ಲಿ ಅರೆಬೆಂದ ಶವ ತಿಂದ ಬೀದಿನಾಯಿಗಳು…! Read More »

ಮೊಮ್ಮಗಳ‌ ಗರ್ಭಿಣಿಯಾಗಿಸಿದವನಿಗೆ ಮಹಿಳಾ ಪೊಲೀಸರಿಂದ ನೆರವು…! ಇದೆಂತಾ ಅನ್ಯಾಯ?

ಚೆನ್ನೈ: ಸುಮಾರು 15 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ 71 ವರ್ಷದ ಅಜ್ಜನಿಗೆ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳೇ ಸಹಾಯ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೀತಾ ರಾಣಿ ಮತ್ತು ಕೋಕಿಲಾ ಎಂಬ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇತ್ತೀಚೆಗೆ, ಅತ್ಯಾಚಾರ ಮಾಡಿದ ವೃದ್ಧನನ್ನು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆಗೆ ಒಳಪಡಿಸಿದಾಗ ಮೊಮ್ಮಗಳ ಗರ್ಭಪಾತ ಮಾಡಿಸಲು ಆತ ಹಿಂಸೆ ಕೊಡುತ್ತಿದ್ದ ವಿಚಾರಣೆ ತಿಳಿದುಬಂದಿತ್ತು.

ಮೊಮ್ಮಗಳ‌ ಗರ್ಭಿಣಿಯಾಗಿಸಿದವನಿಗೆ ಮಹಿಳಾ ಪೊಲೀಸರಿಂದ ನೆರವು…! ಇದೆಂತಾ ಅನ್ಯಾಯ? Read More »

ದುರಂತ ಅಮಾವಾಸ್ಯೆ: ಮಸಣ ಸೇರಿದ ನವದಂಪತಿ

ಆಂದ್ರಪ್ರದೇಶ: ಲಾರಿ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಮದುವೆಯಾದ 23ನೇ ದಿನಕ್ಕೆ ನವ ದಂಪತಿ ದುರಂತ ಸಾವು ಕಂಡ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಬಳಿ ಇಂದು ನಡೆದಿದೆ. ಅಪಘಾತದಲ್ಲಿ ಮೂವರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ದಾಂ ಜಾತಗಾರ್(27),ಪತ್ನಿ ಸಲೀಮಾ(25),ಅತ್ತಿಗೆ ರೇಷ್ಮಾ(26) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಬಾಗಲಕೋಟೆ ಮುಧೋಳ ತಾಲೂಕಿನ ಮುಗಳಖೋಡ್ ಗ್ರಾಮದವರು ಎಂದು ತಿಳಿದು ಬಂದಿದೆ. ಮದುವೆಯಾದ ಹೊಸದರಲ್ಲಿ ಸಂಬಂಧಿಕರ ಊರಿಗೆ ಹೋದ ನವ ದಂಪತಿ ಸೇರಿ

ದುರಂತ ಅಮಾವಾಸ್ಯೆ: ಮಸಣ ಸೇರಿದ ನವದಂಪತಿ Read More »

ರೈತರಿಗೆ ಗುಡ್ ನ್ಯೂಸ್|ನಾಳೆ ಪಿಎಂ ಕಿಸಾನ್ ಸಮ್ಮಾನ್ ನ ಮತ್ತೊಂದು ಕಂತು ಬಿಡುಗಡೆ|

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮತ್ತೊಂದು ಕಂತು ದೇಶದ ರೈತರ ಖಾತೆಗೆ ನಾಳೆ ವರ್ಗಾವಣೆಯಾಗಲಿದೆ. ಪಿಎಂ-ಕಿಸಾನ್ ನ ಕಂತನ್ನು ಕೇಂದ್ರ ಸರ್ಕಾರವು ಆಗಸ್ಟ್ 9 ರಂದು ವಿತರಿಸಲಿದ್ದು, ಸರಿ ಸುಮಾರು 90 ಮಿಲಿಯನ್ ರೈತರಿಗೆ ಒಟ್ಟು 19,000 ಕೋಟಿ ರೂ ಪಿಎಂ-ಕಿಸಾನ್ ಅಡಿಯಲ್ಲಿ ರೈತರ ಖಾತೆಗೆ ಜಮೆಯಾಗಲಿದೆ. ಕೇಂದ್ರ ಸರ್ಕಾರವು ಪ್ರತಿ ಭೂಮಿ ಹೊಂದಿರುವ ರೈತರಿಗೆ ಮಾಸಿಕ ದಾಖಲಾತಿಯೊಂದಿಗೆ ವಾರ್ಷಿಕ ರೂ. 6,000 ಆದಾಯದ ಬೆಂಬಲವನ್ನು ನೀಡುತ್ತಿದೆ. ಪಿಎಂ ಕಿಸಾನ್ ಹಣವನ್ನು ವರ್ಷದಲ್ಲಿ ಮೂರು

ರೈತರಿಗೆ ಗುಡ್ ನ್ಯೂಸ್|ನಾಳೆ ಪಿಎಂ ಕಿಸಾನ್ ಸಮ್ಮಾನ್ ನ ಮತ್ತೊಂದು ಕಂತು ಬಿಡುಗಡೆ| Read More »

ದ್ವಾದಶ ರಾಶಿಗಳ ವಾರಭವಿಷ್ಯ

ರಾಶಿಗಳು ಮನುಷ್ಯನ ದೈನಂದಿನ ಚಲನಾಸ್ಥಿತಿಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ನಮ್ಮ ನಿತ್ಯಕರ್ಮಗಳು ರಾಶಿಗಳ‌ ಚಲನೆಯಂತೆ ನಡೆಯುತ್ತದೆ ಎಂದು ಪೂರ್ವಿಕರ ಅಭಿಪ್ರಾಯ. ಪ್ರತೀ ಆಗುಹೋಗುಗಳು ರಾಶಿಗಳ ಮೇಲಿನ ಪ್ರಭಾವಗಳೇ ಕಾರಣ. ಈ ವಾರದ ರಾಶಿಭವಿಷ್ಯ ನಿಮಗೆ ನೀಡಲಾಗಿದ್ದು, ಅವುಗಳ ಸಮಸ್ಯೆ, ಪರಿಹಾರಗಳನ್ನೂ ನೀಡಲಾಗಿದೆ. ದ್ವಾದಶ ರಾಶಿಗಳ ವಾರ ಭವಿಷ್ಯ ನೋಡಿ ಸುಂದರ ಬದುಕು ನಿಮ್ಮದಾಗಿಸಿಕೊಳ್ಳಿ. ಶುಭವಾಗಲಿ… ವಾರಭವಿಷ್ಯ ಆ.8ರಿಂದ 14ರವರೆಗೆ ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1) ವ್ಯವಹಾರದಲ್ಲಿ ಸ್ವಲ್ಪ ಯಶಸ್ಸನ್ನು ಕಾಣುವಿರಿ. ಸಂಗ್ರಹಿಸಿಟ್ಟಿದ್ದ ವಸ್ತುಗಳನ್ನು ಮಾರಾಟ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಆಟಿ ಅಮಾವಾಸ್ಯೆ| ಆಚಾರ ವಿಚಾರ

ತುಳುನಾಡು ಹಲವಾರು ಸಂಸ್ಕ್ರತಿ‌ ಸಂಪ್ರದಾಯಗಳ‌ ತವರೂರು. ಪರಶುರಾಮ ಸೃಷ್ಟಿಯ ಈ‌ ನಾಡಲ್ಲಿ ಅಣು ಅಣುವಿನಲ್ಲೂ ದೇವರನ್ನು ಕಾಣುವ, ಪ್ರಕೃತಿಯನ್ನು ಆರಾಧಿಸುವ ಪದ್ದತಿ ಇಂದಿಗೂ ಜನಜನಿತ. ಅಂತಹ ಆಚರಣೆಗಳಲ್ಲಿ ‘ಆಟಿ ಅಮಾವಾಸ್ಯೆ’ ಬಹುಮುಖ್ಯವಾದದ್ದು. ಸೌರಪಂಚಾಂಗದ ಪ್ರಕಾರ ಆಷಾಡ (ಆಟಿ)ಮಾಸದಲ್ಲಿ ಆಟಿ ಅಮವಾಸ್ಯೆ ತುಳುವರ ಪ್ರಮುಖ ಆಚರಣೆಗಳ ಒಂದು. ತುಳುವರು ಪ್ರಕೃತಿ ಆರಾಧಕರು. ರೋಗರುಜಿನಗಳು ಹೆಚ್ಚಾಗುವ ಈ ಮಳೆಗಾಲದಲ್ಲಿ ಔಷಧಕ್ಕಾಗಿ ಪ್ರಕೃತಿಯನ್ನೇ ನೆಚ್ಚಕೊಂಡವರು ತುಳುವರು. ಅಂತೆಯೇ ಈ ಅಮಾವಾಸ್ಯೆ ದಿನ ಔಷಧೀಯ ಗುಣಗಳಿರುವ ಹಾಲೆ ಮರದ ಕೆತ್ತೆಯ ಕಷಾಯವನ್ನು ಸೇವಿಸುವುದು

ಆಟಿ ಅಮಾವಾಸ್ಯೆ| ಆಚಾರ ವಿಚಾರ Read More »

ಆ.9 ಕ್ಕೆ ಎಸ್ ಎಸ್ಎಲ್ ಸಿ ಫಲಿತಾಂಶ- ಸಚಿವ ಬಿ.ಸಿ ನಾಗೇಶ್

ಬೆಂಗಳೂರು : ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಆ.,9 ರಂದು ಪ್ರಕಟಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಘೋಷಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ಅವರು, ಜುಲೈ.19 ಮತ್ತು 22ರಂದು ನಡೆದಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಆ.9 ಸೋಮವಾರದಂದು ಮಧ್ಯಾಹ್ನ 3.30ಕ್ಕೆ ಅಧಿಕೃತವಾಗಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಶಾಲೆ ಆರಂಭ ಯಾವಾಗ? ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರತಿಕ್ರಿಯೆ

ಆ.9 ಕ್ಕೆ ಎಸ್ ಎಸ್ಎಲ್ ಸಿ ಫಲಿತಾಂಶ- ಸಚಿವ ಬಿ.ಸಿ ನಾಗೇಶ್ Read More »