ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಆಗಸ್ಟ್ 10 ರಿಂದ 16 ರವರೆಗಿನ ವಾರ ಭವಿಷ್ಯವನ್ನು ಪ್ರಸ್ತುತಪಡಿಸಲಾಗಿದೆ. ಈ ವಾರದಲ್ಲಿ ಆಷಾಢ ಮಾಸ ಅಂತ್ಯಗೊಂಡು ಶ್ರಾವಣ ಮಾಸ ಪ್ರಾರಂಭವಾಗಲಿದೆ. ಅಲ್ಲದೆ, ಸೋಮ ಪ್ರದೋಷ, ಭೀಮನ ಅಮಾವಾಸ್ಯೆ, ವಿನಾಯಕಿ ಚತುರ್ಥಿ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂತಹ ಪ್ರಮುಖ ಘಟನೆಗಳು ನಡೆಯಲಿವೆ. ಗ್ರಹಣವಿದ್ದರೂ ಭಾರತದಲ್ಲಿ ಗೋಚಾರವಿಲ್ಲದ ಕಾರಣ ಆಚಾರ-ವಿಧಿ ವಿಧಾನಗಳು ಇರುವುದಿಲ್ಲ. ಈ ವಾರದಲ್ಲಿ ಗ್ರಹಗಳ ಸಂಚಾರ, ವಿಶೇಷ ದಿನಗಳು ಮತ್ತು ದ್ವಾದಶ ರಾಶಿಗಳ ಮೇಲಿನ ಅವುಗಳ ಪರಿಣಾಮಗಳನ್ನು ನೋಡೋಣ…

Ad Widget ... .. Ad Widget .

ಮೇಷ ರಾಶಿ:
ಆಷಾಢ ಮಾಸ ಸುಬ್ರಹ್ಮಣ್ಯ ದೇವರಿಗೆ ಅತ್ಯಂತ ಪ್ರಶಸ್ತ ಹಾಗೂ ಆಷಾಡದ ಕೃತ್ತಿಕಾ ನಕ್ಷತ್ರದ ದಿನ ಕರ್ನಾಟಕ, ತಮಿಳುನಾಡಿನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಕಾವಡಿ ಹೊರುವ ಅಭ್ಯಾಸವಿದೆ. ಸುಬ್ರಹ್ಮಣ್ಯ ದೇವರ ದರ್ಶನ ಪಡೆದರೆ ಖಂಡಿತವಾಗಿಯೂ ನಿಂತುಹೋದ ಕೆಲಸಗಳಿಗೆ ಚಾಲನೆಯು ಸಿಕ್ಕಿ ಮನಸ್ಸಿಗೆ ತೃಪ್ತಿಕೊಟ್ಟು ಕಾಯುತ್ತಾನೆ. ಆ. 12ರವರೆಗೂ ಸಮಯವಿದ್ದು, ಅಷ್ಟರೊಳಗೆ ಜರೂರಾಗಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಅಭೀಷ್ಟವನ್ನು ಸಿದ್ಧಿಸಿಕೊಳ್ಳಿ.

Ad Widget

ವೃಷಭ ರಾಶಿ:
ರಾಶ್ಯಾಧಿಪತಿ ಶುಕ್ರನು ಕನ್ಯಾ ರಾಶಿಗೆ 1ನೇ ತಾರೀಖು ಬಂದಿರುತ್ತಾನೆ. ಪಂಚಮ ಸ್ಥಾನದಲ್ಲಿ ಮನುಷ್ಯನಿಗೆ ಎಲ್ಲ್ಲ ಜಯವನ್ನು ತಂದು, ಸುಖ-ಸಂತೋಷ ಸಮೃದ್ಧಿ ತರುತ್ತಾನೆ. ಬುಧನ ಮನೆಯಲ್ಲಿ ಕುಜನು ಕುಳಿತಿದ್ದು, ಬಾಂಧವ್ಯಗಳನ್ನು ಗಟ್ಟಿಗೊಳಿಸಿಕೊಳ್ಳಿ. ಯಾರೊಂದಿಗೂ ಮನಸ್ತಾಪ ಬೇಡ ಅಂಬಾಭವಾನಿ, ಬನಶಂಕರಿಯನ್ನು ಪೂಜಿಸಿ- ಪ್ರಾರ್ಥಿಸಿ.

ಮಿಥುನ ರಾಶಿ:
ಬುಧನು ಸ್ವಕ್ಷೇತ್ರದಲ್ಲಿ ಕುಳಿತಿದ್ದು, 2ರಲ್ಲಿ ಗುರು ಉಚ್ಚನಾಗಿದ್ದಾನೆ. ಏನೇ ಕಾರ್ಯಗಳಲ್ಲೂ ಜಯಿಸಿಕೊಡುತ್ತಾನೆ. ಮೂರರಲ್ಲಿ ಕೇತುವಿದ್ದು, ವಾಕ್​ಶಕ್ತಿಯನ್ನು ವೃದ್ಧಿಸಿಕೊಂಡು ಸಮಯಕ್ಕೆ ತಕ್ಕಂತೆ ಮಾತನಾಡಬೇಕು, ಕೆಲಸಕ್ಕೆ ತಕ್ಕಂತೆ ಮಾತಿರಲಿ. ಮಾತಿನಿಂದಲೇ ನಿಮಗೆ ಮುತ್ತು-ಮಾಣಿಕ್ಯ ಸಿಗುವುದು, ಲಕ್ಷ್ಮೀ ಸತ್ಯನಾರಾಯಣನನ್ನು ಪೂಜಿಸಿ.

ಕಟಕ ರಾಶಿ:
ಕಟಕ ರಾಶಿಯಲ್ಲಿ ಗುರುವಿದ್ದಾನೆ. ವ್ಯಾಪಾರ ವ್ಯವಹಾರದಲ್ಲಿ ದೃಢವಾದ ನಿರ್ಧಾರವನ್ನು ತೆಗೆದುಕೊಂಡು ಮುಂದೆ ಸಾಗಿದರೆ ಸಮಸ್ಯೆಗಳು ಎದುರಾಗುವುದಿಲ್ಲ. ಸಜ್ಜನರ ಸಂಗವಿರಲಿ, ಅದಕ್ಕೆ ತಕ್ಕಂತೆ ಶಿವಾರಾಧನೆ ಇರಲಿ. ನಿಮ್ಮಗುರುಗಳನ್ನು ನಂಬಿ- ವಿಶ್ವಾಸವಿಟ್ಟರೆ ಯಾವ ಅಡಚಣೆ ಇಲ್ಲದೆ ಕೆಲಸ ಮುಂದೆ ಸಾಗುತ್ತದೆ.

ಸಿಂಹ ರಾಶಿ:
ಸಿಂಹ ರಾಶಿಯಲ್ಲಿ ಶುಕ್ರ- ಕೇತುವಿದ್ದು, ಮಘಾ, ಹುಬ್ಬಾ ನಕ್ಷತ್ರದವರಿಗೆ ಸುಲಭವಾಗಿ ಧನವು ಸಿಗುವುದಿಲ್ಲ, ಕಷ್ಟ ಪಡಬೇಕಾಗುತ್ತದೆ. ಕೈಗೊಂಡ ಕೆಲಸಗಳು ಪೂರ್ಣಗೊಳ್ಳಲು ಕುಬೇರ ಮಂತ್ರ ಪಠಿಸಿ. ಲಕ್ಷ್ಮೀಯನ್ನು ಸಾಯಂಕಾಲದಲ್ಲಿ ಆರಾಧಿಸಿ. ನಿಮ್ಮ ದುಃಖ- ದುಮ್ಮಾನ ದೂರವಾಗಿ ಖಂಡಿತವಾಗಿಯೂ ದಡವನ್ನು ಸೇರಿಕೊಳ್ಳಬಹುದು. ಕಾಳಿಕಾದೇವಿಯನ್ನು ಪ್ರಾರ್ಥಿಸಿದರೆ ಮತ್ತಷ್ಟು ಒಳ್ಳೆಯದಾಗುತ್ತದೆ.

ಕನ್ಯಾ ರಾಶಿ:
ಏಕಾದಶದಲ್ಲಿ ಗುರುವಿದ್ದರೂ, ಸಪ್ತಮದಲ್ಲಿ ಶನಿಯಿರುವುದರಿಂದ ಯಾವುದೋ ಒಂದು ವಸ್ತುವಿನ ಆಸೆಯಿರುತ್ತದೆ. ಆ ಆಸೆಗಳು ನಿಧಾನವಾಗಿ ನೆರವೇರುತ್ತವೆ. ಕೂಡಲೇ ನೀವು ಕೇಳಿದ್ದೆಲ್ಲಾ ಕೊಡಲು ಗ್ರಹಗಳು ಒಪುಪವುದಿಲ್ಲ. ಅದಕ್ಕಾಗಿ ಗುರುವಿನ ಪ್ರಾರ್ಥನೆ ಇರಲಿ.

ತುಲಾ ರಾಶಿ:
ನೀವು ಮಾಡುವ ವೃತ್ತಿಯಲ್ಲಿ ಮುಂಚೂಣಿಯಲ್ಲಿದ್ದೀರಿ. ಕೀರ್ತಿಯೂ ಇದೆ. ಅದಕ್ಕೆ ಸರಿಯಾಗಿ ಗುರುವಿನ ಕೃಪೆ, ಪೂರ್ವ ಪುಣ್ಯ ಹಾಗೂ 6ರ ಶನಿ ಎಲ್ಲ ಕೊಟ್ಟು ಹರಸುತ್ತಾನೆ. ಧರ್ವಧರ್ಮಗಳನ್ನು ತೂಗಿ ದೇವತಾ ಪ್ರಾರ್ಥನೆಯಿಂದ ಕೆಲಸಗಳನ್ನು ಮಾಡಿಕೊಳ್ಳಬೇಕು. ತಪ್ಪದೇ ಚಂಡಿಕಾ ಅಷ್ಟೋತ್ತರ ಪಠಿಸಿ.

ವೃಶ್ಚಿಕ ರಾಶಿ:
ದೇವರು ಮನುಷ್ಯನಿಗೆ ಒಳ್ಳೆಯ ಸಮಯ ಕೊಟ್ಟಾಗ ದೇವರನ್ನು ನೆನೆಯುವುದಿಲ್ಲ. ಕೆಲವು ಕಾಲ ಸರಿದು ಗ್ರಹಗಳ, ಗುರುವಿನ ಒಲವಿಲ್ಲದೆ ಕಾರ್ಯ ನಿಧಾನವಾದಾಗ ಅಸಂತೋಷವು ವೈಫಲ್ಯದ ದುಃಖವು ಬಂದು ಸೇರುತ್ತದೆ. ದೇವಾದಿ ದೇವನನ್ನು ನಿರಂತರವಾಗಿ ಪ್ರಾರ್ಥಿಸಿ. ಲೋಭ- ಮೋಹ- ಮತ್ಸರಗಳನ್ನು ದೂರಮಾಡಿ. ನಿಮ್ಮನ್ನು ಸದಾಕಾಲ ಸಂರಕ್ಷಿಸುತ್ತಾನೆ. ಸುಬ್ರಹ್ಮಣ್ಯ ಹಾಗೂ ನರಸಿಂಹ ದೇವರನ್ನು ಪೂಜಿಸುವುದು ಅತ್ಯಗತ್ಯ. ನಿತ್ಯವು ಅಷ್ಡೋತ್ತರ ಪಠಿಸಿ.

ಧನಸ್ಸು ರಾಶಿ:
ಗುರುರಾಶಿಯಲ್ಲಿ ಹುಟ್ಟಿದ ನಿಮಗೆ ಗುರು ಅಷ್ಟಮದಲ್ಲಿ ಇದ್ದರೂ ಯಾವ ದೋಷವೂ ಇರುವುದಿಲ್ಲ. ನಿಮ್ಮ ಮೇಲೆ ಅಸೂಯೆ ಪಡುವವರು ಇರುತ್ತಾರೆ. ಮಾತನಾಡುವಾಗ ಜೋಕೆಯಿಂದಿರಬೇಕು. ಗುರು ರಾಶಿಯವರು ಜೀವನ ಪರ್ಯಂತ ದೇವರ ಧ್ಯಾನ ಬಿಡಲೇಬಾರದು. ದೋಣಿ ಸಾಗಲಿ ಮುಂದೆ ಹೋಗಲಿ. ಪರಮಾತ್ಮನ ಕೃಪೆ ನಿಮಗೆ ಸದಾ ಇರಲಿ.

ಮಕರ ರಾಶಿ:
ಮಂದಾರ ಪುಷ್ಪವು ಹೆಣ್ಣಿನ ಮುಡಿ ಸೇರಿದರೆ ಸುಂದರ. ಅದರ, ಸುವಾಸನೆಯು ಬಹಳ ಮಧುರ. ಅತ್ಯಂತ ಶ್ರೇಷ್ಠವಾದ ಪುಷ್ಪವದು. ಹಾಗೆಯೆ ಶನಿಯು ಚೆನ್ನಾಗಿದ್ದಾಗ ಎಲ್ಲವೂ ನೆಟ್ಟಗಾಗಿ ಸೊಟ್ಟಗಾದ ಜೀವನವನ್ನು ಸರಿಮಾಡಿ ನಿಮ್ಮನ್ನು ಹರಸುತ್ತಾನೆ. ಬಾಗಿಲು ತೆರೆದಿಡಿ. ಹರಿಯೇ ನಿಮ್ಮ ಕಣ್ಣೆದುರು ನಿಂತು ನಿಮ್ಮನ್ನು ರಕ್ಷಿಸುತ್ತಾನೆ.

ಕುಂಭ ರಾಶಿ:
‘ಆಲಸ್ಯಂ ಅಮೃತಂ ವಿಷಂ’ ಎಂಬಂತೆ, ಆಲಸ್ಯವು ಮನುಷ್ಯನನ್ನು ಹಾಳುಮಾಡುತ್ತದೆ. ಅತಿಯಾದ ನಿದ್ರೆಯೂ ದೇಹವನ್ನು ಜಡ ಮಾಡುತ್ತದೆ. ಇನ್ನು ಒಂದು ವರ್ಷ ಕಾಲ ಶನಿ ಸಂಚಾರವಿದ್ದು, ಮುಂದೆ ಒಳ್ಳೆಯ ದಿನಗಳು ಬರಲಿವೆ. ಧನ್ವಂತರಿಯನ್ನು ಪ್ರಾರ್ಥಿಸಿ. ಶನಿ ಅಷ್ಟೋತ್ತರ ಪಠಿಸಿ. ಕರಿಎಳ್ಳು-ಬೆಲ್ಲ ದಾನ ನೀಡಿ.

ಮೀನ ರಾಶಿ:
ಪ್ರತಿ ಜಲ, ವಾಯು, ಅಗ್ನಿಯಲ್ಲಿ ನಾನೇ ಇರುತ್ತೇನೆ ಎಂದು ಶ್ರೀರಾಮನು ಹೇಳಿದ್ದಾನೆ. ಮನುಷ್ಯನು ಒಳ್ಳೆಯ ಆಹಾರ ತಿನ್ನಬೇಕು. ಆರೋಗ್ಯವನ್ನು ಕಾಪಾಡಿಕೊಂಡು ರಾತ್ರಿ ಸುಖನಿದ್ರೆ ಮಾಡಬೇಕು. ಸಾಂಬಸದಾಶಿವನನ್ನು ಸದಾ ಪೂಜಿಸಬೇಕು. ಶನಿಕಾಟದ ತೊಳಲಾಟದಿಂದ ಹೊರಬಂದು ಮಗುವಿನಂತೆ ತೊಟ್ಟಿಲಲ್ಲಿ ಮಲಗಿ ನಿದ್ರಿಸಬಹುದು. ಕೃಷ್ಣಾಷ್ಟೋತ್ತರ ಪಠಿಸಿ.

Leave a Comment

Your email address will not be published. Required fields are marked *