ಸಮಗ್ರ ನ್ಯೂಸ್: ಮುಖ್ಯಮಂತ್ರಿಯಾದ ಬಳಿಕ ಮೊದಲ ಟಾಸ್ಕ್ ನಲ್ಲೇ ಡಿ.ಕೆ.ಶಿವಕುಮಾರ್ ಗೆದ್ದು ಬೀಗಿದ್ದಾರೆ. ಮೈತ್ರಿ ಶಾಸಕರಿಂದ ಅಡ್ಡ ಮತದಾನ ಮಾಡಿಸಿ ಚೆಕ್ ಮೇಟ್ ನೀಡಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಸ್ಥಳೀಯಲು ಯತ್ನಿಸಿದ ದೋಸ್ತಿಗೆ ಕೌಂಟರ್ ಕೊಟ್ಟಿದ್ದಾರೆ. ಬಿಜೆಪಿ ಶಾಸಕರಿಂದ ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ ನಡೆದಿದೆ.
ಕಾಂಗ್ರೆಸ್ ಪರ ಬಿಜೆಪಿ, ಜೆಡಿಎಸ್ ನ 11 ಶಾಸಕರು ಮತ ಹಾಕಿದ್ದಾರೆ. ಮೈತ್ರಿ ಶಾಸಕರಿಂದ ಅಡ್ಡ ಮತದಾನ ಹಾಕಿಸಿ ಸಿಎಂ ಚೆಕ್ ಮೇಟ್ ಇಟ್ಟಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಪರ 11 ಶಾಸಕರು ಅಡ್ಡ ಮತ ಹಾಕಿದ್ದಾರೆ ಸಿಎಂ ಆದ ನಂತರ ಯಶಸ್ವಿಯಾಗಿ ಮೊದಲ ಸವಾಲನ್ನು ಡಿ.ಕೆ. ಶಿವಕುಮಾರ್ ಗೆದ್ದಿದ್ದಾರೆ. ಬಿಜೆಪಿ ಶಾಸಕರಿಂದಲೇ ಕಾಂಗ್ರೆಸ್ ಪರ ಅಡ್ಡ ಮತದಾನ ನಡೆದಿದೆ.
ಬಿಜೆಪಿಯ ಲಿಂಗರಾಜ್ ಪಾಟೀಲ್ ಗೆ 30 ಶಾಸಕರಿಂದ ಮತದಾನಕ್ಕೆ ತಿಳಿಸಿದ್ದು, 27 ಶಾಸಕರು ಮಾತ್ರ ಮತ ಹಾಕಿದ್ದಾರೆ. ಕಾಂಗ್ರೆಸ್ ನ ಐವರು ಅಭ್ಯರ್ಥಿಗಳಿಗೆ 151 ಮತಗಳು ಬಂದಿವೆ.
ವಿಧಾನ ಪರಿಷತ್ ಈ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಡಿ.ಕೆ. ಶಿವಕುಮಾರ್ ಚಾಣಾಕ್ಷ ನಡೆ ಅನುಸರಿಸಿ ಯಾವುದೇ ಒಂದು ಮತವೂ ಕೈತಪ್ಪದಂತೆ ನೋಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರನ್ನು ಬಿಡದಿಯ ರೆಸಾರ್ಟ್ನಲ್ಲಿ ಒಟ್ಟಿಗೆ ಇರಿಸಲಾಗಿತ್ತು. ಪಕ್ಷದ ಐವರೂ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಶಾಸಕರನ್ನು ಐದು ಪ್ರತ್ಯೇಕ ತಂಡಗಳಾಗಿ ವಿಂಗಡಿಸಿ ಜವಾಬ್ದಾರಿ ಹಂಚಲಾಗಿತ್ತು. ಈ ಐದು ತಂಡಗಳ ಶಾಸಕರನ್ನು ಇಂದು ಪ್ರತ್ಯೇಕ ಐದು ಬಸ್ ಗಳಲ್ಲಿ ಕರೆತಂದು ಮತ ಚಲಾಯಿಸುವಂತೆ ನೋಡಿಕೊಳ್ಳಲಾಗಿತ್ತು. ವಿರೋಧ ಪಕ್ಷಗಳು ಅಡ್ಡಮತದಾನದ ಲೆಕ್ಕಾಚಾರದಲ್ಲಿದ್ದರೂ, ತಮ್ಮ ಶಾಸಕರನ್ನು ಭದ್ರವಾಗಿ ಕಾಯ್ದುಕೊಂಡ ಡಿ.ಕೆ. ಶಿವಕುಮಾರ್ ರಣತಂತ್ರ ಫಲಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಐವರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಿಜೆಪಿಯ ಇಬ್ಬರು ಆಯ್ಕೆಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು 14 ಮತ ಪಡೆದು ಪರಾಭವಗೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್(30 ಮತ), ಬಿ.ಎಸ್. ಶಿವಣ್ಣ(30), ತಿಪ್ಪಣ್ಣಪ್ಪ ಕಮಕನೂರು(30), ಪಿ.ವಿ. ಮೋಹನ್(29), ವಿನಯ್ ಕಾರ್ತಿಕ್(32), ಬಿಜೆಪಿ ಅಭ್ಯರ್ಥಿಗಳಾದ ಆರ್. ರಘು(29), ಲಿಂಗರಾಜ ಪಾಟೀಲ್ 27 ಮತ ಪಡೆದು ಜಯಗಳಿಸಿದ್ದಾರೆ.








