‘ಶಿಳ್ಳೆ ಹಾಕಿದ್ದು ಯಾರು? ಇಷ್ಟವಿಲ್ಲದಿದ್ರೆ ಬನ್ಸ್ ತಿಂದು ಹೋಗಿ”| ಯಕ್ಷರಂಗದಿಂದಲೇ ಪ್ರೇಕ್ಷಕರ ವಿರುದ್ಧ ಕಲಾವಿದ ಅಶೋಕ್ ಭಟ್ ಉಜಿರೆ ಗರಂ

ಸಮಗ್ರ ನ್ಯೂಸ್: ಕುಂದಾಪುರದ ಹೆನ್ನಾಬೈಲಿನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನದ ವೇಳೆ ಕಲಾವಿದ ಉಜಿರೆ ಅಶೋಕ್ ಭಟ್ ಪ್ರೇಕ್ಷಕರ ವಿರುದ್ಧ ಗರಂ ಆಗಿದ್ದಾರೆ.

Ad Widget ... ..

ಭಾಗವತರು ಪದ್ಯಗಳೊಂದಿಗೆ ಆಲಾಪನೆ ನಡೆಸುತ್ತಿದ್ದಾಗ, ಕೆಲ ಪ್ರೇಕ್ಷಕರು ಶಿಳ್ಳೆ ಹಾಕಿದಿದ್ದರು. ಪದ್ಯ ಮುಗಿದ ಬಳಿಕ ಕೃಷ್ಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಅಶೋಕ್ ಭಟ್, ವೇದಿಕೆಯಲ್ಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗುತ್ತೇನೆ. ಇದು ಯಕ್ಷಗಾನವೋ? ಕಂಬಳವೋ? ನಿಮಗೆ ಈ ಕ್ಷೇತ್ರದ ಮೌಲ್ಯ ಗೊತ್ತಿದೆಯೇ?” ಎಂದು ಅವರು ಪ್ರಶ್ನಿಸಿ, ಪ್ರೇಕ್ಷಕರ ಗಮನ ಸೆಳೆದರು.

Ad Widget

ಅಶೋಕ್ ಭಟ್ ಹೆಚ್ಚಿನ ಅಕ್ರೋಶದಲ್ಲಿ, “ಹುಚ್ಚರನ್ನು ಬೆಳೆಸಬೇಡಿ. ಕಲಾವಿದರನ್ನು ಬೆಳೆಸಿ. ಭಾಗವತರ ಕಂಠ ಹಾಳು ಮಾಡುವುದಿಲ್ಲವೋ?” ಎಂದು ಹತ್ತಿರದವರಿಗೂ ಮನವಿ ಮಾಡಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಕೆಲವರು ಕಲಾವಿದನ ಧೈರ್ಯವನ್ನು ಮೆಚ್ಚಿದ್ದು, ಕೆಲವರು ಪ್ರೇಕ್ಷಕರ ವೈಚಾರಿಕ ಹಕ್ಕಿನ ಕಡೆ ಒತ್ತಡವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *