ಸಮಗ್ರ ನ್ಯೂಸ್: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಸೆ.1 ರಂದು ಜಿಲ್ಲಾ ಮಾಜಿ ಸೈನಿಕ ಸಂಯೋಜಕರಾದ ಮ್ಯಾಥ್ಯೂ ಟಿ.ಜಿ ಅವರ ಮುಂದಾಳುತ್ವದಲ್ಲಿ ರಚನೆಗೊಂಡಿದ್ದು.
ಜಿಲ್ಲಾ ಅಧ್ಯಕ್ಷರಾಗಿ ನೋಬಾರ್ಟ್ ರೊಡ್ರಿಗಸ್ ಅವರನ್ನು ಆಯ್ಕೆ ಮಾಡಲಾಯಿತು.ಜಿಲ್ಲಾ ಗೌರವಾಧ್ಯಕ್ಷರುಗಳಾಗಿ ಡಾ.ಗೋಪಾಲಕೃಷ್ಣ ಕಾಂಚೋಡ್ ಬೆಳ್ತಂಗಡಿ, ದಾಸಪ್ಪ ಪೂಜಾರಿ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಸೋಮಶೇಖರ.ಎನ್ ಕಡಬ, ಉಪಾಧ್ಯಕ್ಷರು ರೂಡಲ್ಫ್ ಡಿಸೋಜಾ ಮಂಗಳೂರು, ಖಜಾಂಜಿ ಚಂದಪ್ಪ ಡಿಎಸ್ ಮಂಗಳೂರು, ಉಪ ಖಜಾಂಚಿ ಅನಿಲ್ ಜಾನ್ ಮಂಗಳೂರು,
ಜಿಲ್ಲಾ ಸಲಹಾ ಸಮಿತಿಯ ಮುಖ್ಯಸ್ಥರುಗಳಾಗಿ ವೆಂಕಪ್ಪಗೌಡ ಬಂಟ್ವಾಳ, ಸಬಾಸ್ಟಿನ್ ಕೆಕೆ ಕಡಬ, ತಂಗಚನ್ ಬೆಳ್ತಂಗಡಿ, ಗೋಪಾಲ ಗೌಡ ಬನ್ನೂರು ಪುತ್ತೂರು.
ನಿರ್ದೇಶಕರ ಸಮಿತಿ ಮುಖ್ಯಸ್ಥರುಗಳಾದ ವಾಸುದೇವ ಗೌಡ ಏನೆಕಲ್ ಕಡಬ, ಸೈಮನ್ ಕೆ.ಸಿ ಕಡಬ, ಮೋನಪ್ಪ ಪೂಜಾರಿ ಬಂಟ್ವಾಳ ಗಣೇಶ್ ಕಾಮತ್ ಮಂಗಳೂರು, ಸ್ಟೀಫನ್ ಕಡಬ ಇವರುಗಳನ್ನು ಆಯ್ಕೆ ಮಾಡಲಾಯಿತು. ಪುತ್ತೂರು ತಾಲೂಕಿನ ಅಧ್ಯಕ್ಷರಾಗಿ ಗೋಪಾಲ ಗೌಡ ಬನ್ನೂರು ಮತ್ತು ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರಾಗಿ ತಂಗಚನ್ ಅವರನ್ನು ಆಯ್ಕೆ ಮಾಡಲಾಯಿತು.







