ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಸಿಕ್ಕಿದ್ದ ಪ್ರಿಯತಮೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಯಶಸ್ ತನ್ನ ಪ್ರೇಯಸಿಯನ್ನು ಓಯೋ ಹೋಟೆಲ್ಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾನೆ. ಮೃತಳನ್ನು ಹರಿಣಿ(36) ಎಂದು ಗುರುತಿಸಲಾಗಿದೆ.
ಕೊಲೆ ಆರೋಪಿ ಸಾಫ್ಟ್ವೇರ್ ಇಂಜಿನಿಯರ್ (ಟೆಕ್ಕಿ) ಯಶಸ್ಸ್ (25) ಆಗಿದ್ದಾನೆ. ಇಬ್ಬೂ ಕೆಂಗೇರಿ ನಿವಾಸಿಗಳಾಗಿದ್ದರು. ಪೂರ್ಣ ಪ್ರಜ್ಞಾ ಲೇಔಟ್ ನ ಹೋಟೆಲ್ ಓಯೋ ರೂಮಿನಲ್ಲಿ ಶುಕ್ರವಾರ ಕೊಲೆ ನಡೆದಿದೆ. ಯಶಸ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಶುಕ್ರವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ.
ಕೆಂಗೇರಿಯಲ್ಲಿ ವಾಸವಾಗಿದ್ದ ದಂಪತಿ ಹರಿಣಿ ಹಾಗೂ ದಾಸೇಗೌಡ ಸುಂದರ ಸಂಸಾರಕ್ಕೆ ಜಾತ್ರೆಯೇ ಮುಳುವಾಗಿತ್ತು. ಕೆಲ ತಿಂಗಳ ಕೆಂಗೇರಿಯಲ್ಲಿ ಇದ್ದ ಜಾತ್ರೆಗೆ ಹರಿಣಿ ಕುಟುಂಬ ಸಮೇತರಾಗಿ ಹೋಗಿದ್ದರು. ಈ ವೇಳೆ ಗೃಹಿಣಿ ಹರಿಣಿ ಇದ್ದ ಏರಿಯಾದ ಜಾತ್ರೆಗೆ ಟೆಕ್ಕಿ ಯಶಸ್ ಕೂಡ ಹೋಗಿದ್ದನು. ಜಾತ್ರೆಯಲ್ಲಿ ಅಚಾನಕ್ ಆಗಿ ಸಿಕ್ಕಿದ್ದ ಮಹಿಳೆ ಹರಿಣಿಗೆ ಯಶಸ್ ಪರಿಚಯವಾಗಿತ್ತು. ಇಬ್ಬರು ಪೋನ್ ನಂಬರ್ ಕೂಡ ಎಕ್ಸ್ಚೇಂಜ್ ಮಾಡಿಕೊಂಡಿದ್ದರು. ಬಳಿಕ ಸ್ನೇಹ ಬೆಳೆದು, ಚಾಟಿಂಗ್ ಡೆಟಿಂಗ್ ಸುತ್ತಾಟ ಮಾಡುತ್ತಿದ್ದರು. ಕೆಲವು ಸಲ ಇಬ್ಬರು ಲೈಂಗಿಕ ಸಂಪರ್ಕ ಕೂಡ ಬೆಳೆಸಿದ್ದರು.
ಹಲವು ಬಾರಿ ಇದೆ ರೀತಿ ಭೇಟಿ ಮಾಡೋದು, ಪೋನ್ ನಲ್ಲಿ ಮಾತಾಡೋದು ನಡೆಯುತ್ತಿತ್ತು. ಬಳಿಕ ಹರಿಣಿ ಗಂಡ ದಾಸೇಗೌಡನಿಗೆ ಇವರಿಬ್ಬರ ಅನೈತಿಕ ಸಂಬಂಧ ಗೊತ್ತಾಗಿತ್ತು. ಹೆಂಡ್ತಿ ಹರಿಣಿ ಪೋನ್ ಕೂಡ ಕಿತ್ಕೊಂಡು ಮನೆಯಲ್ಲೇ ಕೂಡಿ ಹಾಕಿದ್ದ ಗಂಡ ದಾಸೇಗೌಡ. ಇದಾದ ಬಳಿಕ ಕೆಲವು ತಿಂಗಳ ನಂತರ ಗಂಡನ ಕ್ಷಮೆ ಕೇಳಿ, ಇನ್ನುಮುಂದೆ ಇಂತಹ ಕೃತ್ಯಗಳನ್ನು ಮಾಡೊಲ್ಲವೆಂದು ಹೇಳಿ ಹರಿಣಿ ಹೊರಗೆ ಬಂದಿದ್ದನು. ಆದರೆ, ಪ್ರಿಯತಮನ್ನು ಬಿಟ್ಟಿರಲಾಗದೇ ಪುನಃ ಹರಿಣಿ ತನ್ನ ಬಾಯ್ ಫ್ರೆಂಡ್ ಯಶಸ್ನನ್ನು ಸಂಪರ್ಕಿಸಿದ್ದಳು.
ಆದರೆ, ಅನೈತಿಕ ಸಂಬಂಧ ರುಚಿ ಹೊಂದಿದ್ದ ಆಕೆಯ ಲವರ್ ಯಶಸ್ ಕೂಡ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದನು. ಹೀಗಾಗಿ ಹರಿಣಿ ಸಿಕ್ಕರೇ ಸಾಯಿಸಲು ನಿರ್ಧರಿಸಿದ್ದನು. ಹೀಗಾಗಿ ಚಾಕು ಕೂಡ ಖರೀದಿಸಿ ಇಟ್ಟಿದ್ದನು. ಯಾವಾಗ ಮತ್ತೆ ಹರಿಣಿಯನ್ನು ಮೀಟ್ ಮಾಡುತ್ತಾಳೋ ಎಂದು ಕಾಯುತ್ತಿದ್ದನು. ಆ ಕಾಲ ಕೂಡಿಬಂದು, ಇಬ್ಬರು ಮೀಟ್ ಮಾಡಿದ ತಕ್ಷಣವೇ ಓಯೋ ರೂಮಿಗೆ ಹೋಗುತ್ತಾರೆ.
ಇನ್ನು ಟೆಕ್ಕಿ ಯಶಸ್ ತನ್ನ ಪ್ರೇಯಸಿಗಾಗಿ ಮೊದಲೇ ರಾಯಲ್ಸ್ ಹೊಟೇಲ್ ನಲ್ಲಿ ರೂಮ್ ಬುಕ್ ಮಾಡಿದ್ದನು. ಹೀಗಾಗಿ ಹೊಟೇಲ್ಗೆ ಹೋಗಿ ಇಬ್ಬರು ಲೈಂಗಿಕ ಸಂಪರ್ಕ ಮುಂದುವರೆಸಿದ್ದರು. ಇಬ್ಬರೂ ಸೆಕ್ಸ್ ಮಾಡಿದ ಬಳಿಕ ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಅಂತ ನಿರ್ಧಾರ ಮಾಡಿದ್ದ ಲವರ್ ಯಶಸ್, ಮೊದಲೇ ಪ್ಲಾನ್ ಮಾಡಿದಂತೆ ಚಾಕುನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ. ಶುಕ್ರವಾರ ಕೊಲೆ ಮಾಡಿದ ನಂತರ ಸಾಫ್ಟ ವೇರ್ ಇಂಜಿನಿಯರ್ ಯಶಸ್ ಅಲ್ಲಿಂದ ಪರಾರಿ ಆಗಿದ್ದನು.
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ಸುಬ್ರಮಣ್ಯಪುರ ಇನ್ಸ್ ಪೆಕ್ಟರ್ ರಾಜು ಮತ್ತು ತಂಡವು ಬಳಿಕ ಎಫ್ಎಸ್ಎಲ್ ತಂಡ ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹ ಮಾಡಿತ್ತು. ನಿನ್ನೆ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿ ಯಶಸ್ ಬಂಧನ ಮಾಡಲಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಇಂದು ಮಧ್ಯಾಹ್ನ 3 ಗಂಟೆಗೆ ಆರೋಪಿಯನ್ನು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಹರಿಣಿಗೆ ನನ್ನ ಜೊತೆ ಅನೈತಿಕ ಸಂಬಂಧ ಇತ್ತು. ಆದರೆ, ಗಂಡನಿಗೆ ವಿಚಾರ ಗೊತ್ತಾಗಿದೆ ಎಂದು ನನ್ನ ಅವೈಡ್ ಮಾಡುತ್ತಿದ್ದಳು. ಹೀಗಾಗಿ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಸುಬ್ರಮಣ್ಯಪುರ ಪೊಲೀಸರು ಆರೋಪಿ ಯಶಸ್ನನ್ನು ವಿಚಾರಣೆ ಮಾಡುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ.