ಜಾತ್ರೆಯ ಉಯ್ಯಾಲೆಯ ಮೋಜು ಪ್ರಾಣಕ್ಕೇ ತಂತು ಸಂಚಕಾರ |ಜೋಕಾಲಿಯಲ್ಲಿ ಕೂದಲು ಸಿಕ್ಕಿ ಬಾಲಕಿಯ ನೆತ್ತಿಯೇ ಕಿತ್ತು ಬಂತು

ಸಮಗ್ರ ನ್ಯೂಸ್: ಜಾತ್ರೆಯೊಂದರಲ್ಲಿ 13 ವರ್ಷದ ಬಾಲಕಿಯ ಕೂದಲು ಉಯ್ಯಾಲೆಯಲ್ಲಿ ಸಿಕ್ಕಿ ಬಿದ್ದು, ನೆತ್ತಿಯೇ ಕಿತ್ತು ಬಂದ ಭಯಾನಕ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿನಡೆದಿದೆ. ಸ್ಥಳೀಯರು ಉಯ್ಯಾಲೆ ಚಕ್ರವನ್ನು ನಿಲ್ಲಿಸಲು ಧಾವಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಬಾಲಕಿಯ ಸಂಪೂರ್ಣ ನೆತ್ತಿ ಕಿತ್ತು ಬಂದಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

Ad Widget ... ..

ಬಾಲಕಿ ಅನುರಾಧಾ ಕಥೇರಿಯಾ ಕೂದಲು ನೆತ್ತಿ ಸಮೇತ ಕಿತ್ತು ಬಂದ ಬಳಿಕ ಆಕೆ ಮೂರ್ಛ ಹೋಗಿದ್ದಾಳೆ.ಗಂಭೀರ ಸ್ಥಿತಿಯಲ್ಲಿ ಗಾಯಗೊಂಡ ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಂತಾಜನಕ ಸ್ಥಿತಿಯಲ್ಲಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಲಕ್ಷ್ಮೀವಿನ ಪಿಜಿಐಗೆ ವರ್ಗಾಯಿಸಲಾಗಿದೆ.

Ad Widget

Leave a Comment

Your email address will not be published. Required fields are marked *