ಹಾಸನ: ಭೀಕರ ಅಪಘಾತಕ್ಕೆ ಅವಳಿ ಮಕ್ಕಳು ಛಿದ್ರಛಿದ್ರ| ಹೆತ್ತವರ ಸ್ಥಿತಿಯೂ ಚಿಂತಾಜನಕ|

Ad Widget ... ..

ಹಾಸನ: ಇಲ್ಲಿನ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಭೂವನಹಳ್ಳಿಯ ಸಮೀಪ ಸಂಭವಿಸಿರುವ ಭೀಕರ ಅಪಘಾತವೊಂದರಲ್ಲಿ 3 ವರ್ಷದ ಅವಳಿ ಮಕ್ಕಳಿಬ್ಬರೂ ಸ್ಥಳದಲ್ಲೇ ಮೃತಪಟ್ಟರೆ, ತಂದೆ-ತಾಯಿಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Ad Widget

ಘಟನೆಯಲ್ಲಿ ಹಾಸನದ ಗವೇನಹಳ್ಳಿಯ ಶಿವಾನಂದ್ ಹಾಗೂ ಜ್ಯೋತಿ ದಂಪತಿಯ ಅವಳಿ ಮಕ್ಕಳಾದ ಪ್ರಣತಿ (3), ಪ್ರಣವ್ (3) ಮೃತಪಟ್ಟ ಮಕ್ಕಳು. ದಂಪತಿಗೂ ಗಂಭೀರ ಗಾಯಗಳಾಗಿ, ಚಿಂತಾಜನಕ ಸ್ಥತಿಯಲ್ಲಿದ್ದು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೂವನಹಳ್ಳಿಯ ಸಮೀಪ ದಂಪತಿ ಸ್ಕೂಟರ್​ನಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಹಿಂಭಾಗದಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಲಾರಿ ಒಟ್ಟು ನಾಲ್ಕು ಬೈಕ್​ಗಳಿಗೆ ಡಿಕ್ಕಿ ಹೊಡೆದಿದೆ.

Leave a Comment

Your email address will not be published. Required fields are marked *