ಸಮಗ್ರ ನ್ಯೂಸ್: ಅಲ್ಯೂಮಿನಿಯಂ ಏಣಿಯಲ್ಲಿಯೇ ಸುಟ್ಟು ಕರಕಲಾಗಿರುವ ದುರಂತ ಇಂದು (ಏ.4) ಪೊನ್ನಂಪೇಟೆ ತಾಲ್ಲೂಕು ಮಾಯಮುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರುದ್ರಬೀಡು ಗ್ರಾಮದ ತೋಟವೊಂದರಲ್ಲಿ ಸಂಭವಿಸಿದೆ.
ಪಂಚವಳ್ಳಿ ಗ್ರಾಮದ ಪುಷ್ಪಗಿರಿ ಎಂಬಾತ ಅಲ್ಯೂಮೀನಿಯಂ ಏಣಿಯನ್ನು ಏರಿ ಕಾಳುಮೆಣಸು ಕುಯ್ಯುತ್ತಿದ್ದ ಸಂದರ್ಭ ಮರದ ಒತ್ತಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯು ಏಣಿಗೆ ತಗಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾನೆ.








