ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ದೇವಾಲಯ ಹಾಗೂ ಕುಮಾರ ಪರ್ವತಕ್ಕೆ ಟ್ರಕ್ಕಿಂಗ್ ಮಾಡಲು ಬಂದು ದೇವಾಲಯ ಹಾಗೂ ಪರ್ವತದ ಹೆಸರಿಗೆ ಮುಜುಗರ ತರುವ ರೀತಿ ವರ್ತಿಸುತಿದ್ದವರನ್ನು ನಿಷೇಧಿಸುವ ಹೋರಾಟದಲ್ಲಿ ಯಶಸ್ವಿಯಾದ ಅನೂಪ್ ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮವು ಫೆ.1 ರಂದು ನಡೆಯಿತು.
ಇತ್ತೀಚಿನ ದಿನಗಳಲ್ಲಿ ಕುಮಾರ ಪರ್ವತಕ್ಕೆ ಟ್ರಕ್ಕಿಂಗ್ ಮಾಡಲು ಸಾವಿರಾರು ಜನ ಬರುತ್ತಿದ್ದರು. ಅಲ್ಲದೆ ಒಂದೇ ಸಮಯಕ್ಕೆ ಏಕಾಏಕಿ ನುಗ್ಗಿ ಪ್ರಕೃತಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಮಾರಕವಾಗುವ ರೀತಿಯಲ್ಲಿ ಹಾಗೂ ದೇವಾಲಯದ ಹೆಸರಿಗೂ ಮುಜುಗರ ತರುವ ರೀತಿ ವರ್ತಿಸುತಿದ್ದರು.
ಇದನೆಲ್ಲ ಗಮನಿಸಿದ ಅನೂಪ್ ನರಿಯೂರು ಈ ರೀತಿಯ ವರ್ತನೆಗಳನ್ನು ನಿಷೇಧಿಸಲು ಸಾಮಾಜಿಕ ಜಾಲತಾಣದಲ್ಲಿ ಹೋರಾಟವನ್ನು ನಡೆಸುತ್ತಿದ್ದರು.
ಇದೀಗ ಆ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ದೇವಾಲಯದ ಆಡಳಿತ ಮಂಡಳಿಯು ಅನೂಪ್ ಅವರ ಹೋರಾಟದ ಯಶಸ್ಸಿನ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿದರು.
ಸುಬ್ರಹ್ಮಣ್ಯದ ಆಸುಪಾಸಿನಲ್ಲಿ ಈ ರೀತಿಯ ವರ್ತನೆಗಳನ್ನು ಇನ್ನು ನಿಷೇಧಿಸಲಾಗಿರುವುದರಿಂದ ಪ್ರವಾಸಿಗರು ಹಾಗೂ ಭಕ್ತಾದಿಗಳು ಇದನ್ನು ಗಮನಿಸಬೇಕಾಗಿದೆ.






