Ad Widget

ಸುಳ್ಯ:ಎನ್ಎಂಸಿ ವಿಜ್ಞಾನ ಸಂಘದ ವಿಜ್ಞಾನ ವಿದ್ಯಾರ್ಥಿಗಳಿಗೆ ಛಾಯಾಗ್ರಹಣ ಸ್ಪರ್ಧೆ

ಸಮಗ್ರ ನ್ಯೂಸ್: ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ಅ. 27ರಂದು ಮೆಗಾ ಛಾಯಾಗ್ರಹಣ ಸ್ಪರ್ಧೆಯ ಅಂತಿಮ ಹಂತವನ್ನು ನಡೆಸಲಾಯಿತು.

Ad Widget . Ad Widget . Ad Widget . Ad Widget . Ad Widget . Ad Widget

ಸ್ಪರ್ಧೆಯನ್ನು ಮೂರು ಹಂತಗಳಲ್ಲಿ ನಡೆಸಲಾಯಿತು. ಇದರಲ್ಲಿ ಮೊದಲ ಹಂತವನ್ನು ಅ. 24ರಂದು ಮತ್ತು ಎರಡನೇ ಹಂತವನ್ನು ಅ. 25ರಂದು ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಸೌಮ್ಯ ಎಸ್ ಮತ್ತು ರಕ್ಷಿತಾ ಕೆ ತಂಡ ಪ್ರಥಮ ಮತ್ತು ಉಜಾನ ಕೆ. ಶಿಲ್ಪ ಎಸ್. ನಾಯ್ಕ್ ಹಾಗೂ ಮಹಿಮಾ ಪಿ. ಕೆ. ಮತ್ತು ಮದಿವದಿನಿ ಟಿ.ಎಸ್. ತಂಡದವರು ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

Ad Widget . Ad Widget .

ಮೊದಲ ಹಂತವು ವಿದ್ಯಾರ್ಥಿಗಳಲ್ಲಿ ಛಾಯಾಗ್ರಹಣ ಜ್ಞಾನವನ್ನು ಬೆಳೆಸುವ ಗುರಿಯೊಂದಿಗೆ ಆನ್‌ಲೈನ್ ರಸಪ್ರಶ್ನೆ ಮೂಲಕ ನಡೆಸಲಾಯಿತು. ಎರಡನೇ ಹಂತವು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಬೆಳೆಸುವ ಗುರಿಯೊಂದಿಗೆ ಕಾಲೇಜು ಉದ್ಯಾನದಲ್ಲಿ ನಡೆಯಿತು. ಈ ಹಂತದಲ್ಲಿ ವಿದ್ಯಾರ್ಥಿಗಳು ಚಿತ್ರಗಳನ್ನು ಸೆರೆಹಿಡಿಯಬೇಕು ಮತ್ತು ಅವುಗಳನ್ನು ಬಳಸಿಕೊಂಡು ಕಥೆಯನ್ನು ರಚಿಸಬೇಕು ಎಂಬ ನಿಯಮವನ್ನು ನೀಡಲಾಗಿತ್ತು. ಮೂರನೇ ಹಂತವನ್ನು ಇಂದು ದೃಶ್ಯ-ಶ್ರಾವ್ಯ ಕೋಣೆಯಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳು ತಾವು ಸೆರೆ ಹಿಡಿದ ಚಿತ್ರಗಳನ್ನ ಉಪಯೋಗಿಸಿಕೊಂಡು ಕಥೆಗಳನ್ನು ರಚಿಸಿದರು ಮತ್ತು ಚಿತ್ರದಲ್ಲಿ ಅಡಕವಾಗಿರುವ ವೈಜ್ಞಾನಿಕ ವಿದ್ಯಮಾನಗಳನ್ನು ವಿವರಿಸಿದರು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಛಾಯಾಗ್ರಹಣ ಕೌಶಲ್ಯ ಮತ್ತು ಪ್ರತಿಭೆಯನ್ನು ತೋರಿಸಿದರು.

ಹರ್ಷಕಿರಣ (ರಸಾಯನಶಾಸ್ತ್ರ ವಿಭಾಗ), ಅಶ್ವಿನಿ ಕೆ.ಸಿ.(ಭೌತಶಾಸ್ತ್ರ ವಿಭಾಗ), ತೃಪ್ತಿ(ಗಣಿತ ವಿಭಾಗ), ದೀಕ್ಷಾ(ಕಂಪ್ಯೂಟರ್ ವಿಜ್ಞಾನ ವಿಭಾಗ) ಕುಲದೀಪ(ಸಸ್ಯಶಾಸ್ತ್ರ ವಿಭಾಗ) ಮತ್ತು ಕೃತಿಕಾ(ಸಸ್ಯಶಾಸ್ತ್ರ ವಿಭಾಗ) ತೀರ್ಪುಗಾರರಾಗಿದ್ದರು.

ಕಾರ್ಯಕ್ರಮದಲ್ಲಿ ಗಣಿತ ಉಪನ್ಯಾಸಕಿ ಉಷಾ ಎಂ.ಪಿ., ಕಚೇರಿ ಸಿಬ್ಬಂದಿ ಶಿವಣ್ಣ ಉಪಸ್ಥಿತರಿದ್ದರು. ವಿಜ್ಞಾನ ಸಂಘದ ಅಧ್ಯಕ್ಷ ಚರಣ್ ಎಂ. ಕಾರ್ಯಕ್ರಮಕ್ಕೆ ಸ್ವಾಗತಿಸಿ, ವಿಜ್ಞಾನ ಸಂಘದ ಕಾರ್ಯದರ್ಶಿ ಕೀರ್ತಿಕಾ ಟಿ. ವಂದಿಸಿದರು.

Leave a Comment

Your email address will not be published. Required fields are marked *