Ad Widget

ಪ್ರಧಾನಿಯ ಚಾರಿತ್ರ್ಯವಧೆ ಮಾಡುವ ಮುನ್ನ ಎಚ್ಚರ | ಆಧಾರರಹಿತ ಸುದ್ದಿ ಬಿತ್ತರಿಸದಂತೆ TV 5 ಮಾಧ್ಯಮಕ್ಕೆ ಕೋರ್ಟ್ ಆದೇಶ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಥವಾ ಅವರು ಪ್ರತಿನಿಧಿಸುತ್ತಿರುವ ಪಕ್ಷದ ವಿರುದ್ಧ ಆಧಾರರಹಿತವಾಗಿ ಯಾವುದೇ ಸುದ್ದಿ ಪ್ರಸಾರ ಮಾಡಬಾರದು ಎಂದು tv5 ಮಾದ್ಯಮಕ್ಕೆ ನ್ಯಾಯಾಲಯ ಆದೇಶ ನೀಡಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಧ್ಯಮವು ‘ಆರ್ ವಿ ಸ್ಟುಪ್ಪಿಡ್’ ಎಂಬ ಕಾರ್ಯಕ್ರಮದ ಮೂಲಕ ಸುಳ್ಳು ಸುದ್ದಿ ಬಿತ್ತರಿಸುತ್ತಿದೆ. ಈ ಆರೋಪಗಳಿಗೆ ಮಾಧ್ಯಮದ ಬಳಿ ಯಾವುದೇ ಸಾಕ್ಷ್ಯಧಾರವಿಲ್ಲ. ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರಾದ ಆರ್ ಹರೀಶ್ ಕುಮಾರ್ ಎಂಬವರು ಮೊಕದ್ದಮೆ ಹೂಡಿದ್ದರು. ಟಿವಿ 5 ಕನ್ನಡ ಸುದ್ದಿ ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ ಆರ್‌ ಚೇತನ್‌, ನಿರೂಪಕ ರಮಾಕಾಂತ್ ಆರ್ಯನ್‌ ಅವರ ವಿರುದ್ಧ ದೂರುದಾರರು ಆರೋಪ ಹೊರಿಸಿದ್ದರು.

Ad Widget . Ad Widget . Ad Widget .

ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಆನೇಕಲ್ ಪ್ರಧಾನ ಸಿವಿಲ್ ನ್ಯಾಯಾಲಯ ಮಾದ್ಯಮಕ್ಕೆ ಎಚ್ಚರಿಕೆ ನೀಡಿದೆ. ಹರೀಶ್ ಈ ಬಗ್ಗೆ ಸಾಕ್ಷ್ಯಧಾರ ಸಲ್ಲಿಸಿದ್ದಾರೆ. ನ್ಯಾಯಾಲಯ ಇದನ್ನು ಪರಿಶೀಲಿಸಿದ್ದು, ಮಾಧ್ಯಮ ಕಾರ್ಯಕ್ರಮದಲ್ಲಿ ಪ್ರಧಾನಿಗೆ ಕಳಂಕ ತರುವ ಸುದ್ದಿಯನ್ನು ಆಧಾರರಹಿತವಾಗಿ ಪ್ರಕಟಿಸಿದೆ. ಮಾದ್ಯಮ ನಿರೂಪಕರು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯೊಳಗೆ ಇಲ್ಲದ ಪದಗಳನ್ನು ಬಳಸಿದ್ದಾರೆ. ಇನ್ನು ಮುಂದೆ ಈ ರೀತಿಯ ಕಾರ್ಯಕ್ರಮ ನಡೆಸಬಾರದು ಇಂದು ನ್ಯಾಯಾಲಯ ಅದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 10 ಕ್ಕೆ ಮುಂದೂಡಲಾಗಿದೆ.

Leave a Comment

Your email address will not be published. Required fields are marked *