ಮತದಾರರೇ ಎಚ್ಚರಿಕೆಯಿಂದ ಮತನೀಡಿ| ರಾಜ್ಯದಲ್ಲಿ ಮೋದಿ, ಶಾ ಬೇರೆ ಸರ್ಕಾರ ಬರಲು ಬಿಡೋದಿಲ್ಲ| ಚುನಾವಣೆಗೆ ಮುನ್ನವೇ ಆಪರೇಷನ್ ಸುಳಿವು ನೀಡಿದ ಆರ್. ಅಶೋಕ್
ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದಾಗಲೇ 15 ಶಾಸಕರನ್ನು ಕರೆದು ತಂದಿದ್ದೆವು. ಆಗ ಏನೂ ಮಾಡಲು ಆಗಲಿಲ್ಲ. ಬೇರೆ ಪಕ್ಷ ಅಧಿಕಾರಕ್ಕೆ ಬರಲು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ಚುನಾವಣೆಗೂ ಮೊದಲೇ ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ. ಕಗ್ಗಲಿಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಇದ್ದು, ಪೊಲೀಸರಿದ್ದರೂ ಅವರಿಗೆ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. […]










