ರಾಜ್ಯ

ಕುಕ್ಕೆ ಸುಬ್ರಹ್ಮಣ್ಯ: ಮೇಘಸ್ಪೋಟ;‌ ಗುಡ್ಡ ಕುಸಿದು ಎರಡು ಮಕ್ಕಳು ಮೃತ್ಯು

ಸಮಗ್ರ ನ್ಯೂಸ್: ಭಾರೀ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಬಳಿಯಲ್ಲಿ ಗುಡ್ಡ ಜರಿದು ಮನೆಯೊಂದು ಕುಸಿದು ಬಿದ್ದಿದ್ದು ಮನೆಯೊಳಗಿನ ಇಬ್ಬರು ಮಕ್ಕಳು ಮಣ್ಣಲ್ಲಿ ಹೂತು ಹೋಗಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಕುಮಾರದಾರ ಪರ್ವತಮುಖಿ ಬಳಿಯ ಕುಸುಮಾಧರ ಎಂಬವರ ಮನೆ ಕುಸಿತಗೊಂಡಿದ್ದು ಅವರ ಇಬ್ಬರು ಹೆಣ್ಣುಮಕ್ಕಳು ಮಣ್ಣು ಪಾಲಾಗಿದ್ದು, ನಿರಂತರ ಕಾರ್ಯಾಚರಣೆ ಬಳಿಕ ತಡರಾತ್ರಿ ಮೃತದೇಹಗಳನ್ನು ಹೊರತೆಗೆಯಲಾಯಿತು. ಮೇಘಸ್ಪೋಟ ಮತ್ತು‌ ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದ್ದು, ಎರಡು ದಿನ ಭಕ್ತಾದಿಗಳಿಗೆ ಪ್ರವೇಶ […]

ಕುಕ್ಕೆ ಸುಬ್ರಹ್ಮಣ್ಯ: ಮೇಘಸ್ಪೋಟ;‌ ಗುಡ್ಡ ಕುಸಿದು ಎರಡು ಮಕ್ಕಳು ಮೃತ್ಯು Read More »

ವಿದ್ಯಾರ್ಥಿನಿ ಕಾಲು ಜಾರಿ ರೈಲ್ವೆ ಹಳಿಗೆ ಬಿದ್ದು ರೈಲು ಹರಿದು ಸಾವು

ಹಾಸನ: ತಾಲೂಕಿನ ಅಂಕಪುರ ಗ್ರಾಮದ ಬಳಿ ಕಾಲು ಜಾರಿ ರೈಲ್ವೆ ಹಳಿ ಮೇಲೆ ಬಿದ್ದ ವಿದ್ಯಾರ್ಥಿನಿ ಮೇಲೆ ರೈಲು ಹರಿದಿರುವ ಘಟನೆಯೊಂದು ನಡೆದಿದೆ. ಇದರ ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಗುಡ್ಡೆ ತೆರಣ್ಯ ಗ್ರಾಮದ ಪ್ರೀತಿ ಮೃತಪಟ್ಟ ವಿದ್ಯಾರ್ಥಿನಿ. ಈಕೆ ಮೊಸಳೆ ಹೊಸಳ್ಳಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿದ್ಯಾರ್ಥಿನಿ ಕಾಲು ಜಾರಿ ರೈಲ್ವೆ ಹಳಿಗೆ ಬಿದ್ದು ರೈಲು ಹರಿದು ಸಾವು Read More »

ಮಣಿಪಾಲ್ ಮೀಡಿಯಾ ನೆಟ್ವರ್ಕ್ ಸಂಸ್ಥಾಪಕ ಟಿ.ಮೋಹನ್ ದಾಸ್ ಪೈ ಇನ್ನಿಲ್ಲ

ಸಮಗ್ರ ನ್ಯೂಸ್: ಪ್ರಖ್ಯಾತ ಪೈ ಕುಟುಂಬ ಸದಸ್ಯ ಹಾಗೂ ಹೆಸರಾಂತ ಪತ್ರಿಕೋದ್ಯಮಿಯಾಗಿದ್ದ ಟಿ ಮೋಹನದಾಸ್ ಪೈ ಭಾನುವಾರ ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ತೋನ್ಸೆ ಮೋಹನದಾಸ್ ಪೈ(89) ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ತಮ್ಮ ಕುಟುಂಬ ಸದಸ್ಯರಾದ ಡಾ. ಟಿ. ರಾಮದಾಸ್ ಪೈ, ಟಿ. ಅಶೋಕ್ ಪೈ, ನಾರಾಯಣ ಪೈ, ವಾಸಂತಿ ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ, ಸತೀಶ್ ಯು ಪೈ ಅವರನ್ನು ಟಿ ಮೋಹನದಾಸ್ ಪೈ ಅಗಲಿದ್ದಾರೆ. ಡಾ. ಟಿಎಂಎಂ ಪೈ ಫೌಂಡೇಶನ್, ಮಣಿಪಾಲ್

ಮಣಿಪಾಲ್ ಮೀಡಿಯಾ ನೆಟ್ವರ್ಕ್ ಸಂಸ್ಥಾಪಕ ಟಿ.ಮೋಹನ್ ದಾಸ್ ಪೈ ಇನ್ನಿಲ್ಲ Read More »

ಉಡುಪಿ: ಭಜರಂಗದಳ ಸಂಚಾಲಕನ ಹತ್ಯೆಗೆ ಸಂಚು ರೂಪಿಸಿದ್ದರಾ ಜಿಹಾದಿಗಳು? ದೂರು ದಾಖಲು; ಓರ್ವ ಅರೆಸ್ಟ್

ಸಮಗ್ರ ನ್ಯೂಸ್: ಉಡುಪಿಯ ಕಾಪುವಿನಲ್ಲಿ ಬಜರಂಗದಳ ಪ್ರಮುಖನ ಮನೆಗೆ ಆಯುಧದೊಂದಿಗೆ ಮುಸ್ಲಿಂ ಯುವಕರು ಆಗಮಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ. ಕಾಪು ಬಜರಂಗದಳದ ಪ್ರಮುಖ ಸುಧೀರ್ ಸೋನಾ ಮನೆಗೆ ಇಂದು ಬೆಳಿಗ್ಗೆ ಆಯುಧ ದೊಂದಿಗೆ ಮೂವರಿಂದ ನಾಲ್ಕು ಮಂದಿ ಯುವಕರು ಬಂದಿದ್ದರು ಎನ್ನಲಾಗಿದೆ. ‘ಆಶಿಫ್’ ಎಂಬವರಿಗೆ ನಿಮ್ಮ ಬಳಿ ಮಾತನಾಡಲು ಇದೆ ಎಂದು ಮನೆಯಿಂದ ಹೊರಗೆ ಬರುವಂತೆ ಹೇಳಿದ ಇಬ್ಬರು ಬಳಿಕ ಆಶಿಫ್ ಅವರು ಮೇಲೆ ಕಾರಿನಲ್ಲಿ ಇದ್ದಾರೆ‌, ನೀವು ಅವರಿಗೆ ನಿಮ್ಮ ಬಳಿ ಮಾತನಾಡಲು ಇದೆಯಂತೆ, ನೀವು

ಉಡುಪಿ: ಭಜರಂಗದಳ ಸಂಚಾಲಕನ ಹತ್ಯೆಗೆ ಸಂಚು ರೂಪಿಸಿದ್ದರಾ ಜಿಹಾದಿಗಳು? ದೂರು ದಾಖಲು; ಓರ್ವ ಅರೆಸ್ಟ್ Read More »

ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ| 5 ಲಕ್ಷ ಚೆಕ್ ವಿತರಣೆ

ಸಮಗ್ರ ನ್ಯೂಸ್: ಬಿಜೆಪಿ ಯುವ ಘಟಕದ ಮುಖಂಡ ದಿವಂಗತ‌ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕುಟುಂಸ್ಥರಿಗೆ ಸಂತ್ವಾನ ಹೇಳಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ ಎದುರು ಕುಟುಂಬಸ್ಥರು ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದರು. ಇದೇ ವೇಳೆ ನ್ಯಾಯ ದೊರಕಿಸುವ ಭರವಸೆಯನ್ನು ನೀಡಿದರು. ಬಳಿಕ ಕುಟುಂಬಸ್ಥರಿಗೆ ಐದು ಲಕ್ಷ ರೂಪಾಯಿ ನಗದು, ಅವರ ಒಂದು ತಿಂಗಳ ಸಂಬಳ ಹಾಗೂ ಚೆಕ್ ನೀಡಿದ್ದಾರೆ. ಇದೇ ವೇಳೆ

ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ| 5 ಲಕ್ಷ ಚೆಕ್ ವಿತರಣೆ Read More »

ಹುಟ್ಟೂರಲ್ಲೇ ಸಂಸದರಿಗೆ, ಶಾಸಕರಿಗೆ ಮುಖಭಂಗ|
ಇನ್ನಾದರೂ ಹಣ, ಅಧಿಕಾರದ ಆಸೆ ಬಿಟ್ಟುಬಿಡಿ| ಯುವ ನಾಯಕರ ಜೀವ ಉಳಿಸಿಕೊಡಿ|

ಸಮಗ್ರ ವಿಶೇಷ: ಜು.26ರ ರಾತ್ರಿ ಯುವ ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರವರ ಮೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಆಯುಧಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಬಳಿಕ ರಕ್ತದ ನಡುವಿನಲ್ಲಿ ಬಿದ್ದಿದ್ದ ಪ್ರವೀಣ್‌ನನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅದಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯುವ ವಯಸ್ಸಿನಿಂದಲೇ ಹಿಂದೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದಲ್ಲದೇ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದವರು ಪ್ರವೀಣ್ ನೆಟ್ಟಾರು. ಬಿಜೆಪಿ ಯುವ ಮೋರ್ಚಾದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಇದರ ಜೊತೆಗೆ ಬೆಳೆಯುತ್ತಿರುವ ಯುವಕರೊಡನೆ ಹಾಗೂ

ಹುಟ್ಟೂರಲ್ಲೇ ಸಂಸದರಿಗೆ, ಶಾಸಕರಿಗೆ ಮುಖಭಂಗ|
ಇನ್ನಾದರೂ ಹಣ, ಅಧಿಕಾರದ ಆಸೆ ಬಿಟ್ಟುಬಿಡಿ| ಯುವ ನಾಯಕರ ಜೀವ ಉಳಿಸಿಕೊಡಿ|
Read More »

ನಿತ್ಯಾನಂದನ ಸ್ವರೂಪ ಎಂದ  ಸತ್ಯಾನಂದನಿಗೆ ಕರಾವಳಿಗರಿಂದ ಭರ್ಜರಿ ಗೂಸಾ

ಕಾರವಾರ: ಬಿಡದಿ ನಿತ್ಯಾನಂದನ ಲುಕ್, ಆತನಂತೆಯೇ ಮಾತುಗಾರಿಕೆ, ಹಾವಭಾವ. ನಾನೊಬ್ಬ ನಿತ್ಯಾನಂದನ ಸ್ವರೂಪ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು, ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಇದ್ದುಕೊಂಡೇ ಮುಗ್ಧ ಜನರಿಗೆ ಮೋಸ ಮಾಡುತಿದ್ದ ಸತ್ಯಾನಂದ ಸ್ವಾಮಿಯ ಅಸಲಿ ಮುಖವನ್ನು ಮಂಗಳೂರಿನ ಭಜರಂಗದಳದ ಕಾರ್ಯಕರ್ತರು ಹೊರಗೆಳೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಚವೆಯ ಬೋರಳ್ಳಿಯಲ್ಲಿ ಸತ್ಯಾನಂದ ಉದ್ಭವವಾಗಿ ಬಿಟ್ಟಿದ್ದಾನೆ. ಈತ ತಾನು ಧರಿಸುವ ಕಾವಿಯಿಂದ ಹಿಡಿದು ಹಾವಾಭಾವದಲ್ಲೂ ನಿತ್ಯಾನಂದನ ಅನುಕರಣೆ ಮಾಡುತ್ತಾನೆ. ಈತನಿಗೆ ಮಹಿಳೆಯರು ಎಂದರೆ ತುಂಬಾ ಇಷ್ಟ.

ನಿತ್ಯಾನಂದನ ಸ್ವರೂಪ ಎಂದ  ಸತ್ಯಾನಂದನಿಗೆ ಕರಾವಳಿಗರಿಂದ ಭರ್ಜರಿ ಗೂಸಾ Read More »

ಪ್ರವೀಣ್ ಹತ್ಯೆ ಖಂಡಿಸಿ ಎಬಿವಿಪಿ ಕಾರ್ಯಕರ್ತರಿಂದ ಹೋಂ ಮಿನಿಸ್ಟರ್ ಮನೆಗೆ ಮುತ್ತಿಗೆ

ಬೆಂಗಳೂರು: ಪ್ರವೀಣ್ ಹತ್ಯೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಹೋಂ ಮಿನಿಸ್ಟರ್ ಮನೆಗೆ ಮುತ್ತಿಗೆ ಹಾಕಿದ ಘಟನೆ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿ ಜು.30 ರಂದು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಖಂಡಿಸಿ ಮೊನ್ನೆಯಷ್ಟೇ ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಇದೀಗ ಬಿಜೆಪಿಯ ಮತ್ತೊಂದು ಸಂಘಟನೆಯೇ ಸಿಡಿದೆದ್ದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಗೃಹ ಇಲಾಖೆಯನ್ನು ನಿಭಾಯಿಸುವುದರಲ್ಲಿ ಆರಗ ಜ್ಞಾನೇಂದ್ರ ಅವರು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು,

ಪ್ರವೀಣ್ ಹತ್ಯೆ ಖಂಡಿಸಿ ಎಬಿವಿಪಿ ಕಾರ್ಯಕರ್ತರಿಂದ ಹೋಂ ಮಿನಿಸ್ಟರ್ ಮನೆಗೆ ಮುತ್ತಿಗೆ Read More »

ಕಷ್ಟಕ್ಕೆ ಮಿಡಿಯುವ ರಾಮ್ ಸೇನಾ

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರ್ ರವರ ಮನೆಗೆ ಸುರಪುರ ಜಿಲ್ಲೆಯ ರಾಮ್ ಸೇನಾ ಭೇಟಿ ನೀಡಿದೆ. ಈ ವೇಳೆ ಸುರಪುರ ಶಾಸಕರು ಶ್ರೀರಾಮ ಸೇನೆ ಯುವಕರ ಮುಖಾಂತರ 2ಲಕ್ಷ ರೂ. ಯನ್ನು ಕಳುಹಿಸಿ ಕುಟುಂಬ ಸದಸ್ಯರಿಗೆ ದೂರವಾಣಿ ಮೂಲಕ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಮಾತನಾಡಿದ ರಾಜು ಗೌಡರು ಬಿಜೆಪಿ ಸರಕಾರ ಇದ್ದರೂ ಇಂತಹ ಘಟನೆ ನಡೆದದ್ದು ತುಂಬಾ ದುಃಖಕರ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ರಾಮ ಸೇನಾಯಿಂದ ಯಾವುದೇ ಸಹಾಯಕ

ಕಷ್ಟಕ್ಕೆ ಮಿಡಿಯುವ ರಾಮ್ ಸೇನಾ Read More »

ಪ್ರವೀಣ್ ಹತ್ಯೆ ತನಿಖೆ‌ ಎನ್ಐಎ ಗೆ – ಸಿ ಎಂ‌ ಬೊಮ್ಮಾಯಿ

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಎನ್ ಐಎಗೆ ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಎನ್ಐಎ ತನಿಖೆಗೆ ಒಪ್ಪಿಸುವ ಬಗ್ಗೆ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಪ್ರವೀಣ್ ಕೊಲೆ ಪ್ರಕರಣದಲ್ಲಿ ಅಂತಾರಾಜ್ಯ ನಂಟು ಇರುವ ಹಿನ್ನೆಲೆಯಲ್ಲಿ ಎನ್ ಐಎ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಪ್ರವೀಣ್ ಹತ್ಯೆ ತನಿಖೆ‌ ಎನ್ಐಎ ಗೆ – ಸಿ ಎಂ‌ ಬೊಮ್ಮಾಯಿ Read More »