ರಾಜ್ಯ

ಬಿಜೆಪಿಗೆ ಭಾರೀ ಮುಖಭಂಗ| ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ

ಸಮಗ್ರ ನ್ಯೂಸ್: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿಯವರು ಹೊರತರಲು ಮುಂದಾಗಿರುವ “ಸಿದ್ದು ನಿಜಕನಸು ಪುಸ್ತಕ”ದ ಬಿಡುಗಡೆಗೆ ನ್ಯಾಯಾಲಯದ ತಡೆಯಾಜ್ಞೆ ನೀಡಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತಡೆ ಕೋರಿ ಸಿದ್ದರಾಮಯ್ಯ ಪುತ್ರ ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ನ್ಯಾಯಾಲಯದಲ್ಲಿ ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿರುವ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ಕೃತಿ ಬಿಡುಗಡೆಗೆ ತಡೆಯಾಜ್ಞೆ ನೀಡಿ, ಪುಸ್ತಕ ಬಿಡುಗಡೆಗೊಳಿಸಲಿದ್ದ ಸಚಿವ ಡಾ.ಅಶ್ವತ್ಥನಾರಾಯಣ ಅವರಿಗೆ ನೋಟಿಸ್ ಜಾರಿ ಮಾಡಿದೆ. ಪುಸ್ತಕ ಬಿಡುಗಡೆ ವಿರೋಧಿಸಿ ಕಾಂಗ್ರೆಸ್ […]

ಬಿಜೆಪಿಗೆ ಭಾರೀ ಮುಖಭಂಗ| ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ Read More »

ಕೋಲಾರದಿಂದಲೇ ಮುಂದಿನ ಸ್ಪರ್ಧೆ| ಅಧಿಕೃತವಾಗಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಭೇಟಿ ನೀಡಿದ್ದು, ಕಾರ್ಯಕರ್ತರ ಸಮಾವೇಶದಲ್ಲಿ ತಾವು ಕೋಲಾರದಿಂದ ಸ್ಪರ್ದಿಸುವ ಕುರಿತು ಘೋಷಣೆ ಮಾಡಿದ್ದಾರೆ. ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಕೋಲಾರಕ್ಕೆ ಹೋಗಿ ಬಂದಿರುವ ಸಿದ್ದರಾಮಯ್ಯ ಇದೀಗ ಮತ್ತೆ ಕೋಲಾರಕ್ಕೆ ಬಂದಿದ್ದಾರೆ. ಈ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಇದೇ ವೇಳೆ ಕೋಲಾರದಲ್ಲಿ ಅಧಿಕೃತವಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಕೋಲಾರದಿಂದಲೇ ಮುಂದಿನ ಸ್ಪರ್ಧೆ| ಅಧಿಕೃತವಾಗಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ Read More »

ಹೊಸ ವಿನ್ಯಾಸದ ಬಟ್ಟೆಗಳಿಗೆ ಆದ್ಯತೆ ನೀಡಿ ಗ್ರಾಹಕರನ್ನು ಆಕರ್ಷಿಸಬೇಕು – ರಾಜಮಾತೆ ಪ್ರಮೋದಾದೇವಿ

ಸಮಗ್ರ ನ್ಯೂಸ್: ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಉತ್ಪಾದಿಸಿ ಗ್ರಾಹಕರನ್ನು ಆಕರ್ಷಿಸಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಕಿವಿಮಾತು ಹೇಳಿದರು. ಮೈಸೂರಿನಲ್ಲಿ ಭಾನುವಾರ ರೀಡ್‌ ಅಂಡ್‌ ಟೇಲರ್‌ ರಜನ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ಕೃಷ್ಟ ದರ್ಜೆಯ ಉತ್ಪನ್ನಗಳನ್ನು ಉತ್ಪಾದಿಸಿದಷ್ಟು ಗ್ರಾಹಕರಿಗೆ ಅನುಕೂಲವಾಗುತ್ತದೆ. ಹೊಸ ಹೊಸ ವಿನ್ಯಾಸದ ಬಟ್ಟೆ ಉತ್ಪಾದಿಸಬೇಕು. ಆಗ ಗ್ರಾಹಕರು ಆಕರ್ಷಿತರಾಗುತ್ತಾರೆ ಎಂದರು. ಜೋಸೆಫ್‌ ಟಾಯ್ಲರ್‌ ಎಂಬವರಿಂದ ಬ್ರಾಂಡ್‌ 1830ರಲ್ಲಿ ಆರಂಭವಾಯಿತು. ನಂತರ, 1998ರಲ್ಲಿ ಭಾರತ ದೇಶದಲ್ಲಿ ಆರಂಭವಾಯಿತು. ಮೈಸೂರಿನಲ್ಲಿ ರೀಡ್‌ ಅಂಡ್‌

ಹೊಸ ವಿನ್ಯಾಸದ ಬಟ್ಟೆಗಳಿಗೆ ಆದ್ಯತೆ ನೀಡಿ ಗ್ರಾಹಕರನ್ನು ಆಕರ್ಷಿಸಬೇಕು – ರಾಜಮಾತೆ ಪ್ರಮೋದಾದೇವಿ Read More »

ರಾಜಕಾರಣಿಗಳ‌ ಜೊತೆಗೆ ಖಾಸಾ ಸಂಬಂಧ| ಹೆಣ್ಮಕ್ಕಳ ಬಾಳಿನ ಕಿರಾತಕ| ಬಗೆದಷ್ಟೂ ಹೊರಬರ್ತಿದೆ ಸ್ಯಾಂಟ್ರೋ ರವಿಯ ಕುಕೃತ್ಯ

ಸಮಗ್ರ ನ್ಯೂಸ್: ರಾಜಕಾರಣಿಗಳ ಜತೆ ಖಾಸಾ ಸಂಬಂಧ ಹೊಂದಿರುವ, ನೂರಾರು ಹೆಣ್ಮಕ್ಕಳ ಬಾಳಿನಲ್ಲಿ ಆಟವಾಡಿರುವ ಆರೋಪ ಹೊತ್ತಿರುವ ಮೈಸೂರಿನ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಆತ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ಈ ನಡುವೆ, ಸ್ಯಾಂಟ್ರೋ ರವಿಯಿಂದ ದೌರ್ಜನ್ಯ ಮತ್ತು ವಂಚನೆಗೆ ಒಳಗಾಗಿರುವ ದಲಿತ ಮಹಿಳೆ ನ್ಯಾಯಾಧೀಶರ ಮುಂದೆ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯ ಸೆಕ್ಷನ್‌ ೧೬೪ರ ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿದ್ದು, ಹಲವು ಅಂಶಗಳ ಮೇಲೆ

ರಾಜಕಾರಣಿಗಳ‌ ಜೊತೆಗೆ ಖಾಸಾ ಸಂಬಂಧ| ಹೆಣ್ಮಕ್ಕಳ ಬಾಳಿನ ಕಿರಾತಕ| ಬಗೆದಷ್ಟೂ ಹೊರಬರ್ತಿದೆ ಸ್ಯಾಂಟ್ರೋ ರವಿಯ ಕುಕೃತ್ಯ Read More »

ಉದ್ಯೋಗ ಖಾತರಿ ಯೋಜನೆಯಲ್ಲಿ ಭ್ರಷ್ಟಾಚಾರ ಕುರಿತು ದೂರು ನೀಡಿದಾತನ ಕಗ್ಗೊಲೆ| ಭ್ರಷ್ಟಾಚಾರಿಗಳೇ ಕೊಲೆಗೈದಿರುವ ಶಂಕೆ

ಸಮಗ್ರ ನ್ಯೂಸ್: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅವ್ಯವಹಾರ ನಡೆದಿದೆ ಎಂದು ದೂರು ಸಲ್ಲಿಸಿದ್ದ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಡಾಬಾ ಬಳಿ ನಡೆದಿದೆ. ಕನ್ನಡ ಪರ ಸಂಘಟನೆ ತಾಲೂಕು ಅಧ್ಯಕ್ಷ ರಾಮಕೃಷ್ಣ (30) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್, ಪ್ರಶಾಂತ ಎಂಬುವರನ್ನು ಬಂಧಿಸಲಾಗಿದೆ. ಶನಿವಾರ ರಾತ್ರಿ ಹೊಸಕೆರೆ ಡಾಬಾದಲ್ಲಿ ರಾಮಕೃಷ್ಣ ಮತ್ತು ಇತರರು ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಬೇರೆ ವಿಚಾರ

ಉದ್ಯೋಗ ಖಾತರಿ ಯೋಜನೆಯಲ್ಲಿ ಭ್ರಷ್ಟಾಚಾರ ಕುರಿತು ದೂರು ನೀಡಿದಾತನ ಕಗ್ಗೊಲೆ| ಭ್ರಷ್ಟಾಚಾರಿಗಳೇ ಕೊಲೆಗೈದಿರುವ ಶಂಕೆ Read More »

ಚುನಾವಣೆಯಲ್ಲಿ ಸೋಲಿಸಲು ಪಕ್ಷೇತರರಿಗೆ ಹಣ ನೀಡಿಲ್ಲವೆಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ| ವಿಜಯೇಂದ್ರ, ನಿರಾಣಿಗೆ ಸವಾಲೆಸೆದ ಯತ್ನಾಳ್

ಸಮಗ್ರ ನ್ಯೂಸ್: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪಕ್ಷೇತರ ಅಭ್ಯರ್ಥಿಗಳಿಗೆ ಒಂದು ರೂಪಾಯಿ ಹಣವನ್ನೂ ನೀಡಿಲ್ಲ ಎಂದು ಸಚಿವ ನಿರಾಣಿ ಹಾಗೂ ವಿಜಯೇಂದ್ರ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ಸನ್ನಿಧಾನದಲ್ಲಿ ಆಣೆ ಮಾಡಲಿ ಎಂದು ಶಾಸಕ ಯತ್ನಾಳ್ ಸವಾಲು ಹಾಕಿದ್ದಾರೆ. ವಿಜಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾಚಣೆಯಲ್ಲಿ ನನಗೆ ಟಿಕೆಟ್ ಕೊಡಿಸಲು, ಸೋಲಿಸಲು ನಿರಾಣಿ ಯಾರು ಎಂದು ಹರಿಹಾಯ್ದು, ಪಾಲಿಕೆ ಚುನಾವಣೆಯಲ್ಲಿ ನೀವು ಯಾರಿಗೆ ಎಷ್ಟು ಹಣ ಕೊಟ್ಟಿದ್ದೀರಿ ಎಂಬುದು ಗೊತ್ತು, ಈ ವಿಚಾರ

ಚುನಾವಣೆಯಲ್ಲಿ ಸೋಲಿಸಲು ಪಕ್ಷೇತರರಿಗೆ ಹಣ ನೀಡಿಲ್ಲವೆಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ| ವಿಜಯೇಂದ್ರ, ನಿರಾಣಿಗೆ ಸವಾಲೆಸೆದ ಯತ್ನಾಳ್ Read More »

ಸುಳ್ಯ: ಧರ್ಮದಂಗಲ್ ನಡುವೆ ಮಿಂಚಿದ ಸೌಹಾರ್ದತೆಯ ಬೆಳಕು| ಅಯ್ಯಪ್ಪ ವೃತಧಾರಿ ಬಾಲಕನ ಕೈಹಿಡಿದು ದಾಟಿಸಿದ ಮುಸ್ಲಿಂ ಬಾಂಧವ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಆಗಾಗ್ಗೆ ಭುಗಿಲೇಳುವ ಹಿಂದೂ -ಮುಸ್ಲಿಂ ಕೋಮು ಸಂಘರ್ಷದ ನಡುವೆ ಧರ್ಮಕ್ಕೂ ಮಿಗಿಲಾದ ಸೌಹಾರ್ದತೆಯ ಘಟನೆಯೊಂದು ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಧರ್ಮದಂಗಲ್ ನ ನಡುವೆ ಮುಸ್ಲಿಂ ವ್ಯಕ್ತಿಯೊಬ್ಬರು ಅಯ್ಯಪ್ಪ ಮಾಲಾಧಾರಿ ಪುಟ್ಟ ಬಾಲಕನ ಕೈ ಹಿಡಿದು ರಸ್ತೆ ದಾಟಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ ಎಂಬುದನ್ನು ಸಾರಿ ಹೇಳುವಂತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿ ಎಂಬಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಸಂದೇಶ ಸಾರಿದ ವಿಶೇಷ ಘಟನೆ

ಸುಳ್ಯ: ಧರ್ಮದಂಗಲ್ ನಡುವೆ ಮಿಂಚಿದ ಸೌಹಾರ್ದತೆಯ ಬೆಳಕು| ಅಯ್ಯಪ್ಪ ವೃತಧಾರಿ ಬಾಲಕನ ಕೈಹಿಡಿದು ದಾಟಿಸಿದ ಮುಸ್ಲಿಂ ಬಾಂಧವ Read More »

ಬೆಳಗಾವಿ ನಮ್ಮದು, ಬೇಕಾದ್ರೆ ಮಹಾಜನ್ ವರದಿ ಓದ್ಕೋಳ್ಳಿ – ಸಾಹಿತ್ಯ ಸಮ್ಮೇಳನದಲ್ಲಿ ಗುಡುಗಿದ ಸಾಹಿತಿ ದೊಡ್ಡರಂಗೇಗೌಡ

ಸಮಗ್ರ ನ್ಯೂಸ್: ಮರಾಠಿಗರು ಇವತ್ತು ಬೆಳಗಾವಿ ನಮ್ಮದು ಅನ್ನುತ್ತಿದ್ದಾರೆ. ನಮ್ಮದು ಎಂದು ಹಠ ಮಾಡುತ್ತಿದ್ದಾರೆ. ಬಸ್ ಸುಡುವುದು ಮಾಡುತ್ತಿದ್ದಾರೆ. ಇದು ಬಗೆಹರಿಯುವಂತೆ ಕಾಣುತ್ತಿಲ್ಲ. ಬೆಳಗಾವಿಯ ಒಂದು ಅಂಗುಲ ಜಾಗವನ್ನೂ ಬಿಡುವುದಿಲ್ಲ. ಇದು ನಮ್ಮ ಶಪಥ. ಬೆಳಗಾವಿ ನಮ್ಮ ನಿಜವಾದ ಆಶಯ ಎಂದು ಸಾಹಿತಿ, ಹಾಗೂ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ದೊಡ್ಡರಂಗೇಗೌಡ ಹೇಳಿದರು. ‘ನೀವೂ ಬೇಕಾದರೆ ಮನೆಗೆ ಹೋಗಿ ಮಹಾಜನ ವರದಿ ಓದಿರಿ. ಎಲ್ಲ ಪ್ರಕಾರಗಳಿಂದಲೂ ಬೆಳಗಾವಿ ನಮ್ಮದು. ಅದಕ್ಕೆ ಸಂಬಂಧಿಸಿದ

ಬೆಳಗಾವಿ ನಮ್ಮದು, ಬೇಕಾದ್ರೆ ಮಹಾಜನ್ ವರದಿ ಓದ್ಕೋಳ್ಳಿ – ಸಾಹಿತ್ಯ ಸಮ್ಮೇಳನದಲ್ಲಿ ಗುಡುಗಿದ ಸಾಹಿತಿ ದೊಡ್ಡರಂಗೇಗೌಡ Read More »

ಹೆಚ್ಡಿಕೆಯನ್ನು ವೇಶ್ಯೆಗೆ ಹೋಲಿಸಿದ ಎಸ್.ಟಿ ಸೋಮಶೇಖರ್| ಸ್ಯಾಂಟ್ರೋರವಿ ಜೊತೆಗಿನ ವಿಡಿಯೋ ರಿಲೀಸ್ ಮಾಡಿ ಸಚಿವರಿಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ

ಸಮಗ್ರ ನ್ಯೂಸ್: ಸಮ್ಮಿಶ್ರ ಸರ್ಕಾರವನ್ನ ಕೆಡವಿ ಶಾಸಕರು ಮುಂಬೈನಲ್ಲಿ ಇದ್ದಾಗ, ಮೋಜು ಮಸ್ತಿಗಾಗಿ ಸ್ಯಾಂಟ್ರೋ ರವಿ ಹುಡುಗಿಯರನ್ನ ಸಪ್ಲೈ ಮಾಡಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಎಸ್ ಟಿ. ಸೋಮಶೇಖರ್ ಕುಣಿಯಲಾರದವನಿಗೇ ನೆಲ ಡೊಂಕು ಎಂಬಂತೆ, ಚುನಾವಣೆಯನ್ನು ಗೆಲ್ಲಲು ಆಗದ ಸ್ಥಿತಿಯಲ್ಲಿರುವ ಕುಮಾರಸ್ವಾಮಿ 3 ವರ್ಷ ಸುಮ್ಮನಿದ್ದು ಈಗ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಸಿಎಂ ಆಗಿದ್ದಾಗ ಕುಮಾರಸ್ವಾಮಿ ಸರಿಯಾಗಿ ಆಡಳಿತ ನಡೆಸಲಿಲ್ಲ, ಫೈವ್

ಹೆಚ್ಡಿಕೆಯನ್ನು ವೇಶ್ಯೆಗೆ ಹೋಲಿಸಿದ ಎಸ್.ಟಿ ಸೋಮಶೇಖರ್| ಸ್ಯಾಂಟ್ರೋರವಿ ಜೊತೆಗಿನ ವಿಡಿಯೋ ರಿಲೀಸ್ ಮಾಡಿ ಸಚಿವರಿಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ Read More »

ಮಂಗಳೂರು: ಎನ್ ಐಎ ದಾಳಿ|ಶಂಕಿತ ಉಗ್ರನ ಜತೆಗೆ ಸಂಪರ್ಕ ಹೊಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ವಶಕ್ಕೆ

ಸಮಗ್ರ ನ್ಯೂಸ್: ಕೊಣಾಜೆ ನಡುಪದವು ಪಿಎ ಇಂಜಿನಿಯರಿಂಗ್ ಕಾಲೇಜಿಗೆ ದಾಳಿ ನಡೆಸಿದ ಏಳು ಮಂದಿಯ ಎನ್ ಐಎ ತಂಡ ಶಿವಮೊಗ್ಗದಿಂದ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ಜತೆಗೆ ಸಂಪರ್ಕ ಹೊಂದಿದ್ದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಉಡುಪಿ ಮೂಲದ ರಿಹಾನ್ ಶೇಖ್ ವಶದಲ್ಲಿರುವಾತ. ಈತ ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಸ್ಪೋಟಕವನ್ನು ಸ್ಪೋಟಿಸುತ್ತಿದ್ದ ಪ್ರಕರಣದಲ್ಲಿ ಐಸಿಸ್ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿದ್ದರೆನ್ನಲಾದ

ಮಂಗಳೂರು: ಎನ್ ಐಎ ದಾಳಿ|ಶಂಕಿತ ಉಗ್ರನ ಜತೆಗೆ ಸಂಪರ್ಕ ಹೊಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ವಶಕ್ಕೆ Read More »