ರಾಜ್ಯ

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ 2023|ಫೋಟೋ ಕಳುಹಿಸಲು ಇಂದು ಕೊನೆಯ ಅವಕಾಶ

ಸಮಗ್ರ ನ್ಯೂಸ್: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮಗ್ರ ಸಮಾಚಾರ ಅರ್ಪಿಸುತ್ತಿರುವ ‘ಮುದ್ದು ಕೃಷ್ಣ ಫೋಟೋ ಸ್ಪರ್ಧೆ-2023ನ್ನು ಸೆ.6ರವರೆಗೆ ಮುಂದುವರೆಸಲಾಗಿದೆ. 3 ವರ್ಷದ ಒಳಗಿನ ಪುಟ್ಟ ಕಂದಮ್ಮಗಳಿಗೆ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ನಿಮ್ಮ ಮನೆಯಲ್ಲಿ 3 ವರ್ಷದ ಪುಟ್ಟ ಕಂದಮ್ಮಗಳು ಇದ್ದರೆ ಅವರಿಗೆ ಕೃಷ್ಣನ ವೇಷ ಹಾಕಿ ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆಗೆ ಕಳುಹಿಸಬಹುದು. ಪೋಟೋ ಕಳಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 6, ಸಂಜೆ ಗಂಟೆ 7 ರ ಒಳಗೆ ಕಳುಹಿಸಬೇಕು ,

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ 2023|ಫೋಟೋ ಕಳುಹಿಸಲು ಇಂದು ಕೊನೆಯ ಅವಕಾಶ Read More »

ಶಿರಾಡಿ: ರಾತ್ರೋರಾತ್ರಿ ರಕ್ಷಿತಾರಣ್ಯದೊಳಗೆ ಬೃಹತ್ ಮರಗಳ ಮಾರಣಹೋಮ| ಸಿಬ್ಬಂದಿ ಮನೆ ಬಳಿಯೇ ಮರಕ್ಕೆ ಕೊಡಲಿಯೇಟು| ಮರಗಳ್ಳರಿಗೆ ಸಾಥ್ ನೀಡುತ್ತಿದೆಯಾ ಅರಣ್ಯ ಇಲಾಖೆ!?

ಸಮಗ್ರ ನ್ಯೂಸ್: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಪ್ಪಿನಂಗಡಿ ವಲಯ ವ್ಯಾಪ್ತಿಯಲ್ಲಿ ಬರುವ ಶಿರಾಡಿ, ಶಿಬಾಜೆ ಮೊದಲಾದ ಪ್ರದೇಶದಲ್ಲಿರುವ ರಕ್ಷಿತಾರಣ್ಯದಲ್ಲಿ ರಾಜಾರೋಷವಾಗಿ ಅರಣ್ಯ ಸಂಪತ್ತು ಕಳ್ಳರ ಪಾಲಾಗುತ್ತಿದ್ದು, ಬೃಹತ್ ಮರಗಳ ಮಾರಣ ಹೋಮ ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾಗುತ್ತಿದ್ದರೂ ಅರಣ್ಯ ಇಲಾಖೆ ಗಾಢಮೌನಕ್ಕೆ ಶರಣಾಗಿದೆ. ಈ ಮೂಲಕ ಮರಗಳ್ಳರಿಗೆ ಅರಣ್ಯ ಇಲಾಖೆಯೇ ಸಾಥ್ ನೀಡುತ್ತಿರುವ ಅನುಮಾನ ಕಾಡುತ್ತಿದೆ. ಶಿರಾಡಿ ರಕ್ಷಿತಾರಣ್ಯದ ಶಿಬಾಜೆ ಸೆಕ್ಷನ್ ವ್ಯಾಪ್ತಿಯಲ್ಲಿರುವ ನೀರಾನದಿಂದ ಕುರುಂಬು, ಅರಂಪಾದೆ ಭೂತಮಜಲುನಿಂದ ಮೇಲಿನ ಕುರುಂಜ ತನಕ, ಪೆರ್ಲದ ಕಲ್ಲಾಜೆಯಿಂದ

ಶಿರಾಡಿ: ರಾತ್ರೋರಾತ್ರಿ ರಕ್ಷಿತಾರಣ್ಯದೊಳಗೆ ಬೃಹತ್ ಮರಗಳ ಮಾರಣಹೋಮ| ಸಿಬ್ಬಂದಿ ಮನೆ ಬಳಿಯೇ ಮರಕ್ಕೆ ಕೊಡಲಿಯೇಟು| ಮರಗಳ್ಳರಿಗೆ ಸಾಥ್ ನೀಡುತ್ತಿದೆಯಾ ಅರಣ್ಯ ಇಲಾಖೆ!? Read More »

ಚಿಕ್ಕಮಗಳೂರು : ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಚಿರತೆಗಳ ಚಲನ-ವಲನ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಸಮೀಪದ ಶಿವಗಂಗಾಗಿರಿ ಬೆಟ್ಟದಲ್ಲಿ ಮೂರು ಚಿರತೆಗಳಿರುವುದು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಗಂಗಾ ಗಿರಿಯ ಕೇಳಗಿರುವ ದೇವಾಲಯಲ್ಲಿ ಮದುವೆ ಕಾರ್ಯಕ್ರಮ ಇದ್ದರಿಂದ ಡ್ರೋನ್ ಮೂಲಕ ಮದುವೆಯ ವಿಡಿಯೋ ಹಾಗೂ ಗಿರಿಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು ಈ ವೇಳೆ ಪ್ರಸಿದ್ಧ ಶಿವಗಂಗಾಗಿರಿ ಮೇಲಿನ ಕಲ್ಲಿನ ಬಂಡೆ ಮೇಲೆ ಮೂರು ಚಿರತೆಗಳಿರುವುದು ಪತ್ತೆಯಾಗಿದೆ. ಕಡೂರು ಅರಣ್ಯ ವಲಯ ವ್ಯಾಪ್ತಿಯ ಗಿರಿಯ ತುದಿಯಲ್ಲಿ ಚಿರತೆ ಇರುವುದನ್ನ ಕಂಡು ಆತಂಕಗೊಂಡ ಗ್ರಾಮಸ್ಥರು ಬೆಟ್ಟಹೊಲಗಳಿಗೆ ಕೆಲಸಕ್ಕೆ

ಚಿಕ್ಕಮಗಳೂರು : ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಚಿರತೆಗಳ ಚಲನ-ವಲನ Read More »

ಗುರುವಾಯೂರಪ್ಪನಿಗೆ ಚಿನ್ನದ ಕಿರೀಟ| ಚಿನ್ನದ ವ್ಯಾಪಾರಿಯಿಂದ ಭರ್ಜರಿ ಸೇವೆ

ಸಮಗ್ರ ನ್ಯೂಸ್: ಚಿನ್ನದ ವ್ಯಾಪಾರಿಯೊಬ್ಬರು ಪ್ರಸಿದ್ಧ ಗುರುವಾಯೂರು ದೇಗುಲಕ್ಕೆ ಚಿನ್ನದ ಕಿರೀಟವನ್ನು ನೀಡುತ್ತಿರುವ ಮೂಲಕ ಇದೀಗ ಎಲ್ಲರ ಗಮನಸೆಳೆದಿದ್ದಾರೆ. ಕೊಯಮತ್ತೂರಿನಲ್ಲಿ ಚಿನ್ನದ ಉದ್ಯಮ ನಡೆಸುತ್ತಿರುವ ತ್ರಿಶೂರ್ ಮೂಲದ ಕೆ.ವಿ ರಾಜೇಶ್ ಆಚಾರ್ಯ ತನ್ನ ಹುಟ್ಟುಹಬ್ಬದ ದಿನದಂದು ಈ ಉಡುಗೊರೆಯನ್ನು ನೀಡಲಿದ್ದಾರೆ. ಸೆಪ್ಟೆಂಬರ್ 6ರ ಬುಧವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಇದೆ. ಅದೇ ದಿನ ದೇವರಿಗೆ 38 ಪವನ್ ನ ಈ ಚಿನ್ನದ ಕಿರೀಟವನ್ನು ಧರಿಸಲಾಗುತ್ತದೆ. ಜನ್ಮಾಷ್ಟಮಿ ದಿನ ಕಾಣಿಕೆಯಾಗಿ ಸ್ವೀಕರಿಸಿದ ವಸ್ತುಗಳನ್ನು ವಿಗ್ರಹದ ಮೇಲೆ ಧರಿಸಲಾಗುತ್ತದೆ. ನಂತರ

ಗುರುವಾಯೂರಪ್ಪನಿಗೆ ಚಿನ್ನದ ಕಿರೀಟ| ಚಿನ್ನದ ವ್ಯಾಪಾರಿಯಿಂದ ಭರ್ಜರಿ ಸೇವೆ Read More »

ಹವಾಮಾನ ಮಾಹಿತಿ| ಸೆ.14ರವರೆಗೂ ಉತ್ತಮ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ವಿವಿಧ ಪ್ರದೇಶಗಳಲ್ಲಿ ಮುಂದಿನ 10 ದಿನಗಳ ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಸೆಪ್ಟೆಂಬರ್‌ 14ರ ವರೆಗೆ ಕರಾವಳಿ, ಮಲೆನಾಡು, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದಕ್ಷಿಣ ಭಾಗಗಳಲ್ಲಿ ಗಣನೀಯ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಪ್ರದೇಶದ

ಹವಾಮಾನ ಮಾಹಿತಿ| ಸೆ.14ರವರೆಗೂ ಉತ್ತಮ ಮಳೆ ನಿರೀಕ್ಷೆ Read More »

ಯುವ ಬಾಕ್ಸರ್ ವಿರಾಜ್ ಮೆಂಡನ್ ಆತ್ಮಹತ್ಯೆ| 14 ಚಿನ್ನದ ಪದಕ ವಿಜೇತ ಪಟುವಿಗೆ ಇದೇನಾಯ್ತು?

ಸಮಗ್ರ ನ್ಯೂಸ್: ರಾಜ್ಯದ ಮಲ್ಪೆಯ ಬಂದರಿನಲ್ಲಿ ಕಣ್ಣಿ ಕೆಲಸ ಮಾಡಿಕೊಂಡು, ಬಿಡುವಿದ್ದಾಗ ಅಭ್ಯಾಸ ಮಾಡಿಕೊಂಡು, ಕರಾವಳಿಗೆ ತೀರಾ ಅಪರಿಚಿತ ಕ್ರೀಡೆಯಾಗಿರವ ಬಾಕ್ಸಿಂಗ್‌ನಲ್ಲಿ ಯಶಸ್ಸುಕಂಡ ಬಾಕ್ಸಿಂಗ್‌ ಚಾಂಪಿಯನ್‌ ವಿರಾಜ್‌ ಮೆಂಡನ್‌ ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಕ್ಸಿಂಗ್ ಕ್ಷೇತ್ರದಲ್ಲಿ ಅನೇಕ ಸ್ಪರ್ದೆಗಳಲ್ಲಿ ಪ್ರತಿನಿಧಿಸಿದ್ದ ವಿರಾಜ್ ಮೆಂಡನ್ ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರೂ, ಮೂಲ ವೃತ್ತಿಯಾಗಿ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಆದರೆ, ಈಗ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಯುವ ಬಾಕ್ಸರ್ ವಿರಾಜ್ ಮೆಂಡನ್ ಆತ್ಮಹತ್ಯೆ| 14 ಚಿನ್ನದ ಪದಕ ವಿಜೇತ ಪಟುವಿಗೆ ಇದೇನಾಯ್ತು? Read More »

ಚಿಕ್ಕಮಗಳೂರು : ಲೋಕಾಯುಕ್ತರ ಬಲೆಗೆ ಬಿದ್ದ ಆರ್.ಟಿ.ಓ. ಅಧಿಕಾರಿ ಹಾಗೂ ಅಟೆಂಡರ್

ಸಮಗ್ರ ನ್ಯೂಸ್: ಚಿಕ್ಕಮಗಳೂರು ಆರ್.ಟಿ.ಓ.ಕಚೇರಿಯಲ್ಲಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಮಹಿಳಾ ಆರ್.ಟಿ.ಓ. ಅಧಿಕಾರಿ ಹಾಗೂ ಅಟೆಂಡರ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಸೆ.4 ರಂದು ನಡೆದಿದೆ. ಬೈಕ್ ಶಾಪ್ ಓನರ್ ರಾಜ್ಯಾದ್ಯಂತ ಸಂಚರಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದ. ಆದರೆ ಆರ್.ಟಿ.ಓ. ಅಧಿಕಾರಿ ರೆಂಟೆಡ್ ಬೈಕಿಗೆ ಪರವಾನಗಿ ಮಾಡಿಕೊಡಲು 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.1 ಬೈಕಿಗೆ 500 ರಂತೆ 8 ಬೈಕಿಗೆ 4000 ಸರ್ಕಾರಿ ಫೀಸ್ ಕಟ್ಟಿದ್ದ. ಆರ್.ಟಿ.ಓ. ಅಟೆಂಡರ್ ಮೂಲಕ ಡೀಲ್ ನಡೆಸುತ್ತಿದ್ದ

ಚಿಕ್ಕಮಗಳೂರು : ಲೋಕಾಯುಕ್ತರ ಬಲೆಗೆ ಬಿದ್ದ ಆರ್.ಟಿ.ಓ. ಅಧಿಕಾರಿ ಹಾಗೂ ಅಟೆಂಡರ್ Read More »

ಡಬಲ್ ಡೆಕ್ಕರ್ ಬರ್ತಾ… ಇದೆ ದಾರಿ ಬಿಡಿ!!

ಸಮಗ್ರ ನ್ಯೂಸ್: 1979 – 80 ರ ದಶಕದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಓಡಾಡುತ್ತಿದ್ದ ಡಬಲ್ ಡೆಕ್ಕರ್ ಬಸ್ಸುಗಳ ಸಂಚಾರವನ್ನು ಆ ಬಳಿಕ ಸ್ಥಗಿತಗೊಳಿಸಲಾಗಿದ್ದು, ಇದೀಗ ಮತ್ತೆ ಡಬಲ್ ಡೆಕ್ಕರ್ ಬಸ್ಸುಗಳನ್ನು ರಸ್ತೆಗಿಳಿಸಲು ಬಿಬಿಎಂಪಿ ಸಜ್ಜಾಗಿದೆ. ಈಗಾಗಲೇ ಒಂದು ಹಂತದ ಟೆಂಡರ್ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದು ವರ್ಷದೊಳಗೆ 10 ಡಬಲ್ ಡೆಕ್ಕರ್ ಬಸ್ಸುಗಳು ಬೆಂಗಳೂರಿನಲ್ಲಿ ಸಂಚರಿಸಲಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೂಡ ಡಬಲ್ ಡೆಕ್ಕರ್ ಬಸ್ಸುಗಳ ಸಂಚಾರ ಕುರಿತು

ಡಬಲ್ ಡೆಕ್ಕರ್ ಬರ್ತಾ… ಇದೆ ದಾರಿ ಬಿಡಿ!! Read More »

ಉದಯನಿಧಿ ತಲೆ ಕತ್ತರಿಸಿ ತಂದರೆ 10 ಕೋಟಿ ಬಹುಮಾನ| ಮಹಾಂತ ಪರಮಹಂಸ ದಾಸ್ ಘೋಷಣೆ

ಸಮಗ್ರ ನ್ಯೂಸ್: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆ ಕತ್ತರಿಸಿದವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಅಯೋಧ್ಯಾ ತಪಸ್ವಿ ಛಾವನಿಯ ಮಹಾಂತ ಪರಮಹಂಸ ದಾಸ್ ಅವರು ಸೋಮವಾರ ಘೋಷಿಸಿದ್ದಾರೆ. ಮಹಾಂತ ಪರಮಹಂಸ ದಾಸ್, ಒಂದು ಕೈಯಲ್ಲಿ ಉದಯನಿಧಿಯ ಪೋಸ್ಟರ್, ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದುಕೊಂಡು ಉದಯನಿಧಿ ಅವರ ಶಿರಚ್ಛೇದನವನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ವೀಡಿಯೊವನ್ನ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಡಿಎಂಕೆ ಸಚಿವರ ತಲೆ ಕಡಿದು ತಂದವರಿಗೆ 10

ಉದಯನಿಧಿ ತಲೆ ಕತ್ತರಿಸಿ ತಂದರೆ 10 ಕೋಟಿ ಬಹುಮಾನ| ಮಹಾಂತ ಪರಮಹಂಸ ದಾಸ್ ಘೋಷಣೆ Read More »

ಕೊಟ್ಟಿಗೆಹಾರ: ಕುವೆಂಪು ಕಲಾಮಂದಿರದಲ್ಲಿ ತೇಜಸ್ವಿಯವರ ‘ಅಣ್ಣನ ನೆನಪು ನಾಟಕ’

ಸಮಗ್ರ ನ್ಯೂಸ್: ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಸೆಪ್ಟೆಂಬರ್ 9 ರಂದು ಸಂಜೆ 6 ಗಂಟೆಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ಆಧಾರಿತ ಅಣ್ಣನ ನೆನಪು ನಾಟಕ ನಡೆಯಲಿದೆ. ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಅಣ್ಣನ ನೆನಪು ನಾಟಕ ನಡೆಯಲಿದ್ದು, ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುತ್ತಿರುವ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಹನು ರಾಮಸಂಜೀವ, ರಂಗರೂಪ ಕರಣಂ ಪವನ್ ಪ್ರಸಾದ್, ಸಂಗೀತ-ಅಕ್ಷಯ್ ಭೊಂಸ್ಲೆ ಅವರದಾಗಿದೆ. ನಾಟಕಕ್ಕೆ

ಕೊಟ್ಟಿಗೆಹಾರ: ಕುವೆಂಪು ಕಲಾಮಂದಿರದಲ್ಲಿ ತೇಜಸ್ವಿಯವರ ‘ಅಣ್ಣನ ನೆನಪು ನಾಟಕ’ Read More »