ರಾಷ್ಟ್ರೀಯ

ಬಹು ನಿರೀಕ್ಷಿತ ಸ್ಕೋಡಾ ಕುಶಾಕ್ ಕಾರು ಬಿಡುಗಡೆ- ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಬಹು ನಿರೀಕ್ಷಿತ ಕುಶಾಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಕೋಡಾ ಕುಶಾಕ್ MQB A0 INಪ್ಲಾಟ್‌ಫಾರ್ಮ್ನಿಂದ ಹೊರಹೊಮ್ಮಿದ ಮೊದಲ ಮಾದರಿಯಾಗಿದೆ. ಇದು ಫೋಕ್ಸ್ವ್ಯಾಗನ್ ಗ್ರೂಪ್‌ನ ಎಂಕ್ಯೂಬಿ ಸ್ಕೇಲೆಬಲ್ ಆರ್ಕಿಟೆಕ್ಚರ್‌ನ ಸ್ಥಳೀಯ ಆವೃತ್ತಿಯಾಗಿದ್ದು, ಇದನ್ನು ಭಾರತೀಯ ಮಾರುಕಟ್ಟೆಗೆಂದೇ ಅಭಿವೃದ್ಧಿಪಡಿಸಲಾಗಿದೆ. ಕುಶಾಕ್ ಆಕ್ಟಿವ್, ಆಂಬಿಷನ್ ಮತ್ತು ಸ್ಟೈಲ್ ಎಂಬ ಮೂರು ಮಾದರಿಗಳಲ್ಲಿ ದೊರೆಯಲಿದೆ. ಕುಶಾಕ್ ಕಾರಿನ ಬೆಲೆ10.50 ಲಕ್ಷದಿಂದ 17.60 ಲಕ್ಷದವರೆಗೆ (ಎಕ್ಸ್ಶೋರೂಂ, ದೆಹಲಿ) ಇದೆ. ಸ್ಕೋಡಾ ಕುಶಾಕ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರ […]

ಬಹು ನಿರೀಕ್ಷಿತ ಸ್ಕೋಡಾ ಕುಶಾಕ್ ಕಾರು ಬಿಡುಗಡೆ- ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಕಾಶ್ಮೀರದ ಒಳಗೆ ಹೆಚ್ಚಿದ ಉಗ್ರ ಚಟುವಟಿಕೆ | ಮೋದಿ, ಶಾ, ಸಿಂಗ್ ಧೋವಲ್ ಸಭೆ

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಸೇನಾ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ಸೇರಿದಂತೆ ಉಗ್ರ ಚಟುವಟಿಕೆಗಳು ದಿನೇದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸೇನಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದೆ. ಕಳೆದೆರಡು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಅತಿ ಸುರಕ್ಷಿತ ವಾಯುಪಡೆಯ ವಿಮಾನ ನಿಲ್ದಾಣದ ಮೇಲೆ ಡ್ರೋನ್ ಮೂಲಕ ಉಗ್ರರು ಸ್ಪೋಟ ನಡೆಸಿದ್ದರು. ಅದರ ಬೆನ್ನಲ್ಲೇ ಪುಲ್ವಾಮಾದಲ್ಲಿ ಪೊಲೀಸ್

ಕಾಶ್ಮೀರದ ಒಳಗೆ ಹೆಚ್ಚಿದ ಉಗ್ರ ಚಟುವಟಿಕೆ | ಮೋದಿ, ಶಾ, ಸಿಂಗ್ ಧೋವಲ್ ಸಭೆ Read More »

ಬಿಲ್ಲು ಮುರಿದ ವರ, ಹೂಮಾಲೆ ಹಾಕಿದ ವಧು, ಬಿಹಾರದಲ್ಲಿ ನಡೆಯಿತು ಕಲಿಯುಗ ‘ಸೀತಾ ಸ್ವಯಂವರ’

ಬಿಹಾರ: ರಾಮಾಯಣದಲ್ಲಿ ಸೀತಾ ಸ್ವಯಂವರ ಹೇಗೆ ನಡೆಯಿತು ಎಂದು ಎಲ್ಲರಿಗೂ ಗೊತ್ತಿದೆ. ಬೃಹತ್​ ಬಿಲ್ಲನ್ನು ಎದೆಯೇರಿಸಲು ಹೆಣಗಾಡುತ್ತಿದ್ದಾಗ ಶ್ರೀರಾಮ ಬಂದು ಬಿಲ್ಲು ಎತ್ತಿ ಜಯಶಾಲಿಯಾಗುತ್ತಾನೆ. ಸ್ವಯಂವರ ಗೆದ್ದ ರಾಮನಿಗೆ ಸೀತಾಮಾತೆ ವರಮಾಲೆ ಹಾಕುವ ಮೂಲಕ ಮದುವೆ ನೆರವೇರುತ್ತೆ. ಇದೇ ರೀತಿ ಸ್ವಯಂವರ ಈಗಲೇ ನಡೆದಿದೆ ಎಂದರೆ ನೀವು ನಂಬಲೇ ಬೇಕು. ಬಿಹಾರದ ಸರಾನ ಜಿಲ್ಲೆಯಲ್ಲಿ ಆಧುನಿಕ ಸ್ವಯಂವರ ನಡೆದಿದೆ. ರಿಸೆಪ್ಷನ್​​ ವೇದಿಕೆ ಮೇಲೆ ವರ ಬಿಲ್ಲನ್ನು ಮುರಿದ ಬಳಿಕವೇ ವಧು ವರ ಮಾಲೆ ಹಾಕಿರುವ ಸ್ವಾರಸ್ಯಕರ ಘಟನೆ

ಬಿಲ್ಲು ಮುರಿದ ವರ, ಹೂಮಾಲೆ ಹಾಕಿದ ವಧು, ಬಿಹಾರದಲ್ಲಿ ನಡೆಯಿತು ಕಲಿಯುಗ ‘ಸೀತಾ ಸ್ವಯಂವರ’ Read More »

ಚೀನಾ ಗಡಿಗೆ 50 ಸಾವಿರ ಸೈನಿಕರ ರವಾನೆ, ಗಡಿಯಲ್ಲಿ ಯುದ್ದ ಭೀತಿ!?

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ ಚೀನಾ-ಭಾರತ ಗಡಿಗೆ 50,000 ಸೈನಿಕರನ್ನ ಕಳುಹಿಸಿದೆ. ಅಲ್ಲದೇ ಮೂರು ಫೈಟರ್​ ಜೆಟ್​ಗಳನ್ನೂ ಸಹ ಮೂರು ಗಡಿ ಪ್ರದೇಶಗಳಿಗೆ ಕಳುಹಿಸಿದೆ ಎನ್ನಲಾಗಿದ್ದು ಸದ್ಯ ಚೀನಾ-ಭಾರತ ಗಡಿಯಲ್ಲಿ ಒಟ್ಟು 2 ಲಕ್ಷ ಟ್ರೂಪ್​ಗಳಿವೆ. ಕಳೆದ ವರ್ಷಕ್ಕಿಂತ 40 ಪಟ್ಟು ಹೆಚ್ಚು ಸೈನಿಕರನ್ನ ನಿಯೋಜಿಸಿದಂತಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಹಿಂದೆ ಚೀನಾದಿಂದ ಎದುರಾಗುವ ದಾಳಿಯನ್ನ ತಡೆಯುವಷ್ಟು ಮಾತ್ರವೇ ಸೇನೆಯನ್ನ ನಿಯೋಜಿಸಲಾಗಿತ್ತು. ಇದೀಗ ಚೀನಾದಿಂದ ಎದುರಾಗುವ ಸಂಭಾವ್ಯ ದಾಳಿಯ ವಿರುದ್ಧ ಹೋರಾಡಿ

ಚೀನಾ ಗಡಿಗೆ 50 ಸಾವಿರ ಸೈನಿಕರ ರವಾನೆ, ಗಡಿಯಲ್ಲಿ ಯುದ್ದ ಭೀತಿ!? Read More »

ಶಾಕಿಂಗ್ ಸಮಾಚಾರ |ನಿರಂತರ‌ ಏರಿಕೆಯತ್ತ ಪೆಟ್ರೋಲ್

ನವದೆಹಲಿ: ಒಂದು ದಿನದ ವಿರಾಮದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ ಮಾಡಲಾಗಿದೆ. ಇವತ್ತು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 35 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರಿಗೆ 28 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಈಗಾಗಲೇ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುಗತಿಯಲ್ಲೇ ಸಾಗುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಅಗತ್ಯ ವಸ್ತು ಸೇರಿದಂತೆ ಹಲವು ವಸ್ತುಗಳ ಬೆಲೆ ದುಬಾರಿಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತೆ ಪ್ರತಿದಿನವೂ

ಶಾಕಿಂಗ್ ಸಮಾಚಾರ |ನಿರಂತರ‌ ಏರಿಕೆಯತ್ತ ಪೆಟ್ರೋಲ್ Read More »

ಕನ್ನಡ ಗ್ರಾಮಗಳ ಹೆಸರನ್ನು ಯಾವುದೇ ಕಾರಣಕ್ಕೂ ಮಲಯಾಳೀಕರಣ ಮಾಡುವುದಿಲ್ಲ: ಮಂಜೇಶ್ವರ ಶಾಸಕ ಕೆ. ಎಂ. ಅಶ್ರಫ್ ಸ್ಪಷ್ಟನೆ

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮಗಳ ಹೆಸರುಗಳನ್ನು ಮಲಯಾಳಂಗೆ ಬದಲಾಯಿಸಲು ಕೇರಳ ಸರ್ಕಾರ ಆದೇಶಿಸಿದೆ ಎಂದು ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಮಂಜೇಶ್ವರ ಶಾಸಕ ಸ್ಪಷ್ಟನೆ ನೀಡಿದ್ದಾರೆ. ಗ್ರಾಮಗಳ ಹೆಸರು ಬದಲಾಯಿಸುವ ಬಗ್ಗೆ ಈವರೆಗೆ ಕೇರಳ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿ ಕಚೇರಿ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಈ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಮಂಜೇಶ್ವರ ಶಾಸಕ ಕೆ ಎಂ ಅಶ್ರಫ್ ಸಾಮಾಜಿಕ ಜಾಲತಾಣಗಳ

ಕನ್ನಡ ಗ್ರಾಮಗಳ ಹೆಸರನ್ನು ಯಾವುದೇ ಕಾರಣಕ್ಕೂ ಮಲಯಾಳೀಕರಣ ಮಾಡುವುದಿಲ್ಲ: ಮಂಜೇಶ್ವರ ಶಾಸಕ ಕೆ. ಎಂ. ಅಶ್ರಫ್ ಸ್ಪಷ್ಟನೆ Read More »

ಕಾರು ಪ್ರಪಾತಕ್ಕೆ ಉರುಳಿ 9 ಜನ ಸಾವು

ಶಿಮ್ಲಾ: ಕಾರೊಂದು ಪ್ರಪಾತಕ್ಕೆ ಉರುಳಿ ಬಿದ್ದು 9 ಜನ ಮೃತ ಪಟ್ಟ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ನಡೆದಿದೆ. ಪಚಾಡ್ ಪ್ರದೇಶದ ಬಾಗ್ ಪಶೋಗ್ ಗ್ರಾಮದ ಬಳಿ ಸೋಮವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ಉರುಳಿದೆ. ಅಪಘಾತಕ್ಕೀಡಾದ ಕಾರಿನಲ್ಲಿದ್ದ ಪ್ರಯಾಣಿಕರು ಮದುವೆಯ ಪಾರ್ಟಿಗೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದು, ಮೃತರನ್ನು ಯಾರೆಂದು ಇನ್ನೂ ಗುರುತಿಸಲಾಗಿಲ್ಲ ಎಂದು ಪೌಂಟಾ ಸಾಹಿಬ್ ಡಿಎಸ್ ಪಿ ಬೀರ್ ಬಹದ್ದೂರ್ ಹೇಳಿದ್ದಾರೆ.

ಕಾರು ಪ್ರಪಾತಕ್ಕೆ ಉರುಳಿ 9 ಜನ ಸಾವು Read More »

ಮಹಿಳೆಯರನ್ನು ಎಳೆದಾಡಿ ಭೂತ ಬಿಡಿಸುತ್ತಿದ್ದವರನ್ನು ಹಿಡಿದು ಭೂತ ಬಿಡಿಸಲು ಕರೆದೊಯ್ದ ಪೊಲೀಸರು

ಪ್ರಯಾಗ್​ರಾಜ್​: ಮೈಮೇಲೆ ಬಂದ ದುಷ್ಟ ಶಕ್ತಿ ಬಿಡಿಸುತ್ತೇವೆ ಎಂದು ಹೇಳಿ ಮಹಿಳೆಯರನ್ನು ಹಿಡಿದು ಎಳೆದಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಮೈ ಮುಟ್ಟಿ, ಡ್ರಂಗಳನ್ನು ಬಾರಿಸುತ್ತಾ ಭೂತವನ್ನು ಬಿಡಿಸುತ್ತಿದ್ದ 30ಮಂದಿಯನ್ನು ಪ್ರಯಾಗ್​ರಾಜ್​ ಸಂಗಂ ನದಿಯ ತೀರದಿಂದ ಬಂಧಿಸಲಾಗಿದೆ. ಬಂಧಿತರು ಮಹೋಬಾ ಮತ್ತು ಛತ್ತರಪುರ ಜಿಲ್ಲೆಗಳ ನಿವಾಸಿಗಳು ಎನ್ನಲಾಗಿದೆ. ಇವರು ಭೂತ ಬಿಡಿಸುವ ನೆಪ ಹೇಳಿ ಮಹಿಳೆಯರನ್ನು ನದಿ ತೀರಕ್ಕೆ ಕರೆತಂದು ಮೈಮುಟ್ಟಿ , ಕೂದಲು ಹಿಡಿದು ಎಳೆದಾಡಿ ಬೆತ್ತದಿಂದ ಹೊಡೆದು ಹಿಂಸೆ ನೀಡುತ್ತಿದ್ದರು. ನಿಂಬೆಹಣ್ಣು ಹಿಡಿದುಕೊಂಡು ಕುಂಕುಮ ಎರಚಿ

ಮಹಿಳೆಯರನ್ನು ಎಳೆದಾಡಿ ಭೂತ ಬಿಡಿಸುತ್ತಿದ್ದವರನ್ನು ಹಿಡಿದು ಭೂತ ಬಿಡಿಸಲು ಕರೆದೊಯ್ದ ಪೊಲೀಸರು Read More »

ಜೈಲಿನಿಂದ ಬಿಡುಗಡೆಗೊಂಡ ಕೈದಿಗೆ ಮುಸ್ಲಿಂ ಧರ್ಮದ ಮೇಲೆ ಪ್ರೀತಿ..! | ನಾನು ದೇವಸ್ಥಾನ, ಮಸೀದಿಗೆ ಹೋಗುತ್ತಿದ್ದೆ | ಇದರಲ್ಲಿ ತಪ್ಪೇನಿದೆ..?

ಮೂರು ವರ್ಷಗಳ ಕಾಲ ಮೀರತ್​ ಜೈಲಿನಲ್ಲಿದ್ದ 46 ವರ್ಷದ ತಾರಾ ಚಂದ್​ ಈ ಅವಧಿಯಲ್ಲಿ ಕೆಲ ಕೈದಿಗಳನ್ನ ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದರು. ಇದರಲ್ಲಿ ಕೆಲವರು ಮುಸ್ಲಿಮರೂ ಇದ್ದರು. ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದ ತಾರಾಚಂದ್​ ತಮ್ಮ ಮುಸ್ಲಿಂ ಸ್ನೇಹಿತರ ನೆರವಿನಿಂದ ತಾಹೀರ್​ ಎಂದು ಹೆಸರನ್ನ ಬದಲಾಯಿಸಿಕೊಂಡಿದ್ದರು. ಅಲ್ಲದೇ ಗಡ್ಡವನ್ನ ಬೆಳೆಸಲು ಆರಂಭಿಸಿದ್ರು. ಆದರೆ ಇದೆಲ್ಲವನ್ನ ವಿರೋಧಿಸಿ ಬಲಪಂಥೀಯರು ಪ್ರತಿಭಟನೆ ಮಾಡುತ್ತಿದ್ದಂತೆಯೇ ತಾರಾಚಂದ್​ ತಮ್ಮ ಗಡ್ಡವನ್ನ ಶೇವ್​ ಮಾಡಿದ್ದಾರೆ. ನಾನು ದೇವಸ್ಥಾನ ಹಾಗೂ ಮಸೀದಿಗೆ ಹೋಗುತ್ತಿದ್ದೆ. ಇದರಲ್ಲಿ

ಜೈಲಿನಿಂದ ಬಿಡುಗಡೆಗೊಂಡ ಕೈದಿಗೆ ಮುಸ್ಲಿಂ ಧರ್ಮದ ಮೇಲೆ ಪ್ರೀತಿ..! | ನಾನು ದೇವಸ್ಥಾನ, ಮಸೀದಿಗೆ ಹೋಗುತ್ತಿದ್ದೆ | ಇದರಲ್ಲಿ ತಪ್ಪೇನಿದೆ..? Read More »

Breaking ಸಮಾಚಾರ: ಕೋವಿಡ್ ಬಾಧಿತ ವಲಯಗಳಿಗೆ ಕೇಂದ್ರದಿಂದ ಆಕ್ಸಿಜನ್, ₹1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಕೋವಿಡ್-19 ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ. ಅದರಂತೆ, ಕೇಂದ್ರ ಸರ್ಕಾರದಿಂದ ಪ್ರಮುಖ 8 ಮಾದರಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದು, ಅದ್ರಲ್ಲಿ 4 ಹೊಸ ಘೋಷಣೆ ಇವೆ ಎಂದು ಸಚಿವರು ತಿಳಿಸಿದ್ದಾರೆ. ಕೋವಿಡ್ ಬಾಧಿತ ವಲಯಗಳಿಗೆ ₹1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಘೋಷಿಸಿದ್ದು, ಆರೋಗ್ಯ ಆರೈಕೆಯು ₹50,000 ಕೋಟಿ ಪಡೆಯಲಿದೆ

Breaking ಸಮಾಚಾರ: ಕೋವಿಡ್ ಬಾಧಿತ ವಲಯಗಳಿಗೆ ಕೇಂದ್ರದಿಂದ ಆಕ್ಸಿಜನ್, ₹1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್ Read More »