ರಾಷ್ಟ್ರೀಯ

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆಗೆ ಏ.11ರವರೆಗೂ ಕಾಲಾವಕಾಶ| ಇಲ್ಲಿದೆ ಸಂಪೂರ್ಣ ವಿವರ

ಸಮಗ್ರ ನ್ಯೂಸ್: ಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳಬೇಕು. ಯುವಜನರು ಪ್ರಜಾಪ್ರಭುತ್ವದ ಶಿಲ್ಪಿಗಳಾಗುತ್ತಾರೆ. ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುವಲ್ಲಿ ಕನಸು ಕಟ್ಟಿ ಅದರ ಹಿಂದೆ ಬೆನ್ನಟ್ಟುವ ಯುವಜನರಿಗೆ ಪ್ರಜಾಪ್ರಭುತ್ವವು ಬೆಂಬಲವಾಗಬೇಕಾದರೆ ಪ್ರತಿಯೊಬ್ಬರು ಮತದಾನ ಮಾಡಬೇಕಾಗುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಲು ಇಂದೇ ಮತದಾರರ ಪಟ್ಟಿಯಲ್ಲಿ ನೊಂದಣಿಯಾಗುವುದು ಅತ್ಯಾವಶ್ಯಕವಾಗಿರುತ್ತದೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಭಾರತೀಯ ಪ್ರಜೆ 18 ವರ್ಷ ದಾಟಿದರೆ ಮತದಾನ ಮಾಡಲು ಅರ್ಹ. 2004ರಲ್ಲಿ ಜನಿಸಿದ ಪ್ರತಿಯೊಬ್ಬರೂ 2023ರ ಏಪ್ರಿಲ್ 1 ಕ್ಕೆ 18 ವರ್ಷ […]

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆಗೆ ಏ.11ರವರೆಗೂ ಕಾಲಾವಕಾಶ| ಇಲ್ಲಿದೆ ಸಂಪೂರ್ಣ ವಿವರ Read More »

ಇಂದಿನಿಂದ ಹೊಸ ಆರ್ಥಿಕ ವರ್ಷಾರಂಭ| ದೇಶದ ನಾಗರಿಕರು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳೇನು ಗೊತ್ತಾ?

ಸಮಗ್ರ ನ್ಯೂಸ್: ಏಪ್ರಿಲ್ 1 ರ ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿರುವ ಕೆಲವು ನಿಯಮಗಳ ಬಗ್ಗೆ ಮುಖ್ಯವಾದ ಮಾಹಿತಿಗಳನ್ನು ತಿಳಿದುಕೊಳ್ಳಬೇಕಿದೆ. ದೇಶದಲ್ಲಿ ನೂತನ ತೆರಿಗೆ ಪದ್ದತಿ ಇಂದಿನಿಂದ ಜಾರಿಗೆ ಬರಲಿದೆ. ಉಳಿತಾಯಕ್ಕಾಗಿ ಹೂಡಲಾದ ಠೇವಣಿ ಮೊತ್ತ ಹೆಚ್ಚಿಸಲಾಗಿದೆ. ಅದಾಗ್ಯೂ ಹಲವು ಅಗತ್ಯ ವಸ್ತುಗಳು ದುಬಾರಿಯಾಗಲಿದ್ದು, ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ‌ ಬೀಳಲದೆ. ಕಾರ್ ಗಳ ದರ ದುಬಾರಿಯಾಗಲಿದ್ದು, ಔಷಧಗಳ ಬೆಲೆ ಏರಿಕೆ ಆಗಲಿದೆ. ಇಂದಿನಿಂದ ಚಿನ್ನಕ್ಕೆ

ಇಂದಿನಿಂದ ಹೊಸ ಆರ್ಥಿಕ ವರ್ಷಾರಂಭ| ದೇಶದ ನಾಗರಿಕರು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳೇನು ಗೊತ್ತಾ? Read More »

ವಾಟ್ಸಪ್ ನಲ್ಲಿ ಚುನಾವಣಾ ಪ್ರಚಾರ ಮಾಡ್ತಿದೀರಾ? ಹಾಗಾದ್ರೆ ಹುಷಾರ್! ಮನೆ ಬಾಗಿಲಿಗೆ ಬರುತ್ತೆ ನೋಟೀಸ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಾದ ಮೇಲೆ ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ಹಾಗೂ ಸ್ಪರ್ಧೆಯ ಆಕಾಂಕ್ಷಿಗಳಿಗೆ ಚುನಾವಣಾ ಆಯೋಗದ ಬಿಗಿ ನಿಯಮಗಳು ದುಃಸ್ವಪ್ನವಾಗಿ ಪರಿಣಮಿಸಿವೆ. ವಾಟ್ಸಾಪ್‌ ಗ್ರೂಪ್‌ನಲ್ಲಿ ಪಕ್ಷದ ಚಿಹ್ನೆ ಬಳಸಿ ರಾಮನವಮಿಗೆ ಶುಭ ಕೋರಿದ್ದಕ್ಕಾಗಿ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ ಮಂತರ್‌ ಗೌಡ ಅವರಿಗೆ ಚುನಾವಣಾಧಿಕಾರಿ ನೋಟಿಸ್‌ ನೀಡಿದ್ದಾರೆ. ಅದೇ ರೀತಿ, ಕುಶಾಲನಗರ ವಾಟ್ಸಾಪ್‌ ಗ್ರೂಪ್‌ನಲ್ಲಿ ರಾಜಕೀಯ ಪ್ರೇರಿತ ವಿಡಿಯೋ ತುಣುಕು ಹಂಚಿಕೊಂಡಿದ್ದಕ್ಕಾಗಿ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ವಿ.ಪಿ.ಶಶಿಧರ್‌ ಅವರಿಗೂ ಚುನಾವಣಾಧಿಕಾರಿ

ವಾಟ್ಸಪ್ ನಲ್ಲಿ ಚುನಾವಣಾ ಪ್ರಚಾರ ಮಾಡ್ತಿದೀರಾ? ಹಾಗಾದ್ರೆ ಹುಷಾರ್! ಮನೆ ಬಾಗಿಲಿಗೆ ಬರುತ್ತೆ ನೋಟೀಸ್ Read More »

ಪ್ರಧಾನಿ ನರೇಂದ್ರ ಮೋದಿಯವರ ಪದವಿ ವಿವರಕ್ಕೆ ಅರ್ಜಿ|ಅರವಿಂದ್ ಕೇಜ್ರಿವಾಲ್ 25 ಸಾವಿರ ರೂ ದಂಡ

Samagra news: ಪ್ರಧಾನಿ ನರೇಂದ್ರ ಮೋದಿ ಅವರ ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದಂಡವನ್ನೂ ವಿಧಿಸಿದೆ. ಪ್ರಧಾನಿ ಮೋದಿ ಅವರ ಎಂಎ ಪದವಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ವಿವರ ಒದಗಿಸಲು ಗುಜರಾತ್ ವಿಶ್ವವಿದ್ಯಾಲಯಕ್ಕೆ 2016ರಲ್ಲಿ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನಿರ್ದೇಶನ ನೀಡಿತ್ತು. ಪ್ರಧಾನಿ ಅವರ ಪದವಿ ವಿವರವನ್ನು ಒದಗಿಸಲು ಆದೇಶಿಸುವಂತೆ ದಿಲ್ಲಿ ಸಿಎಂ ಹಾಗೂ ಎಎಪಿ

ಪ್ರಧಾನಿ ನರೇಂದ್ರ ಮೋದಿಯವರ ಪದವಿ ವಿವರಕ್ಕೆ ಅರ್ಜಿ|ಅರವಿಂದ್ ಕೇಜ್ರಿವಾಲ್ 25 ಸಾವಿರ ರೂ ದಂಡ Read More »

‘ವಂದೇ ಭಾರತ್ ರೈಲು ವಿರುದ್ಧ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದರೆ 5 ವರ್ಷ ಜೈಲು ‘

Samagra news: ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದಂತಹ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದರೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ದಕ್ಷಿಣ ಮಧ್ಯ ರೈಲ್ವೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ತೆಲಂಗಾಣದ ವಿವಿಧ ಸ್ಥಳಗಳಿಂದ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಹಲವಾರು ನಿದರ್ಶನಗಳು ವರದಿಯಾದ ನಂತರ ಈ ಎಚ್ಚರಿಕೆ ನೀಡಲಾಗಿದೆ. ಇನ್ನು ಫೆಬ್ರವರಿ 2019 ರಲ್ಲಿ ಪ್ರಾರಂಭವಾದಾಗಿನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ತೆಲಂಗಾಣ, ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಢ ಮತ್ತು

‘ವಂದೇ ಭಾರತ್ ರೈಲು ವಿರುದ್ಧ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದರೆ 5 ವರ್ಷ ಜೈಲು ‘ Read More »

ಬೇಸಿಗೆಯಲ್ಲಿ ಗೋವಾ ಟ್ರಿಪ್ ಹೋಗ್ತಿದ್ದೀರಾ?| ಹಾಗಿದ್ರೆ ಈ ಪ್ಲೇಸ್​​ ಮಿಸ್ ಮಾಡ್ಬೇಡಿ

ಸಮಗ್ರ ನ್ಯೂಸ್: ಟ್ರಾವೆಲ್(travel) ಹೋಗಬೇಕೆಂದು ನಿಮ್ಮ ಫ್ರೆಂಡ್ಸ್ ಜೊತೆ ಪ್ಲ್ಯಾನ್ ಮಾಡುವಾಗ ಮೊದಲು ಕೇಳಿಬರುವ ಹೆಸರೇ ಗೋವಾ(Goa). ಈ ಹೆಸರು ಕೇಳಿದ ತಕ್ಷಣ ಎಲ್ಲರ ಮನಸ್ಸು ಉತ್ಸಾಹದಿಂದ ತುಂಬಿರುತ್ತದೆ. ಕೊನೆಗೆ ನಾವು ಗೋವಾ ಪ್ರವಾಸಕ್ಕೆ ಹೋಗುತ್ತಿವೋ, ಇಲ್ಲವೋ ಆದ್ರೆ ಎಲ್ಲರ ಮನಸ್ಸಿನಲ್ಲಿ ಒಂದಷ್ಟು ಕಲ್ಪನೆಗಳು ಮಾತ್ರ ಇದ್ದೇ ಇರುತ್ತದೆ. ಸದ್ಯ ಈಗ ಹೇಗಿದ್ದರೂ ಬೇಸಿಗೆ ಮನಸ್ಸು ಮಾಡಿದರೆ ಈ ಸಮಯದಲ್ಲಿ ನೀವು ಗೋವಾಗೆ ಭೇಟಿ ನೀಡಬಹುದು. ಒಂದು ವೇಳೆ ಗೋವಾ ಪ್ರವಾಸಕ್ಕೆ ಹೋದರೆ ಈ 5 ಸ್ಥಳಗಳಿಗೆ

ಬೇಸಿಗೆಯಲ್ಲಿ ಗೋವಾ ಟ್ರಿಪ್ ಹೋಗ್ತಿದ್ದೀರಾ?| ಹಾಗಿದ್ರೆ ಈ ಪ್ಲೇಸ್​​ ಮಿಸ್ ಮಾಡ್ಬೇಡಿ Read More »

ನಾಲ್ಕು ಮುದ್ದಾದ ಮರಿಗಳಿಗೆ ಜನ್ಮನೀಡಿದ ಸಿಯಾಯಾ| ಸಕ್ಸಸ್ ಆದ ನಮೀಬಿಯಾ ಚೀತಾ ಪ್ರಾಜೆಕ್ಟ್

ಸಮಗ್ರ ನ್ಯೂಸ್: ಚೀತಾಗಳ ಸ್ಥಳಾಂತರ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿರುವ ವನ್ಯಜೀವಿ ಪರಿಣಿತರ ಪ್ರಕಾರ ಕುನೋ ನ್ಯಾಶನಲ್ ಪಾರ್ಕ್ ನಲ್ಲಿ ಮಾರ್ಚ್ 24ರಂದು ಸಿಯಾಯ ಹೆಸರಿನ ಚೀತಾ ಜನ್ಮ ನೀಡಿದ ಮರಿಗಳಿಗೆ ಫ್ರೆಡ್ಡಿ ಹೆಸರಿನ ಗಂಡು ಚೀತಾವೇ ತಂದೆ ಅನ್ನೋದು ಹೆಚ್ಚು ಕಡಿಮೆ ಖಚಿತವಾಗಿದೆ. ಚೀತಾಗಳ ಸ್ಥಳಾಂತರ ಪ್ರಾಜೆಕ್ಟ್ ನ ಅಂತರರಾಷ್ಟ್ರೀಯ ಸಲಹೆಗಾರರಾಗಿರುವ ಕೆರೋಲಿನಾ ಟೊರೆಸ್ ಅವರು ಡಿಸೆಂಬರ್ 26 ರಂದು ಸೆರೆಹಿಡಿದಿರುವ ವಿಡಿಯೋಗಳ ಆಧಾರದ ಮೂಲಕ ಫ್ರೆಡ್ಡಿ ಸಿಯಾಯ ಮರಿಗಳ ತಂದೆಯಾಗಿರುವ ನಂಬಿಕೆ ಬಲಗೊಳ್ಳುತ್ತಿದೆ. ಅದೇ ಅವಧಿಯಲ್ಲಿ

ನಾಲ್ಕು ಮುದ್ದಾದ ಮರಿಗಳಿಗೆ ಜನ್ಮನೀಡಿದ ಸಿಯಾಯಾ| ಸಕ್ಸಸ್ ಆದ ನಮೀಬಿಯಾ ಚೀತಾ ಪ್ರಾಜೆಕ್ಟ್ Read More »

ದೇವಾಲಯ ದುರಂತ – ಸಾವಿನ ಸಂಖ್ಯೆ 35ಕ್ಕೆ ಏರಿಕೆ

Samagra news: ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ ದೇವಾಲಯವೊಂದರಲ್ಲಿ ನೆಲ ಕುಸಿದ ಪರಿಣಾಮ ಅದರಡಿಯಲ್ಲಿದ್ದ ಸುಮಾರು 40 ಅಡಿ ಆಳದ ಬಾವಿಗೆ ಭಕ್ತರು ಬಿದ್ದ ಪ್ರಕರಣದಲ್ಲಿ ಇಲ್ಲಿಯವರೆಗೆ ಸಾವನ್ನಪ್ಪಿರುವವರ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ. ಗುರುವಾರ ರಾಮನವಮಿಯ ಹಿನ್ನೆಲೆ ನಗರದ ಬಾಳೇಶ್ವರ ಮಹಾದೇವ ದೇವಾಲಯದಲ್ಲಿ ಹೆಚ್ಚಿನ ಭಕ್ತರು ಆಗಮಿಸಿದ್ದರು. ದೇವಾಲಯದ ಆವರಣದಲ್ಲಿ ಮೆಟ್ಟಿಲು ಬಾವಿಯಿದ್ದು, ಅದಕ್ಕೆ ಮೇಲ್ಛಾವಣಿ ಹಾಕಿ ಮುಚ್ಚಲಾಗಿತ್ತು. ಆದರೆ ಕಳೆದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಕಾರಣ ಬಾವಿಯ ಮೇಲ್ಛಾವಣಿ ಭಾರ ತಡೆದುಕೊಳ್ಳಲಾರದೇ ಕುಸಿದುಬಿಟ್ಟಿದೆ.

ದೇವಾಲಯ ದುರಂತ – ಸಾವಿನ ಸಂಖ್ಯೆ 35ಕ್ಕೆ ಏರಿಕೆ Read More »

ಬಸ್ ಮೇಲಿದ್ದ ಮೋದಿ ಭಾವಚಿತ್ರಕ್ಕೆ ಮುತ್ತಿಕ್ಕಿದ ರೈತ| ವೈರಲ್ ಆಯ್ತು ಫೋಟೋ, ವಿಡಿಯೋ

ಸಮಗ್ರ ನ್ಯೂಸ್: ಕರ್ನಾಟಕದ ಗುರುತಿಸಲಾಗದ ಊರೊಂದರ ಬಸ್‌ಸ್ಟಾಂಡ್‌ನಲ್ಲಿ ರೈತರೊಬ್ಬರು ಬಸ್‌ನಲ್ಲಿ ಪ್ರಧಾನಿ ಮೋದಿಯವರ ಚಿತ್ರಕ್ಕೆ ಮುತ್ತಿಟ್ಟು ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕದಲ್ಲಿ ರೈತನೊಬ್ಬ ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿ, ಮೋದಿ ಚಿತ್ರಕ್ಕೆ ಮುತ್ತಿಟ್ಟಿರುವ ವಿಡಿಯೋವೊಂದು ವೈರಲ್‌ ಆಗಿದೆ. ಪ್ರಧಾನಮಂತ್ರಿಯವರ ಚಿತ್ರದ ಮೇಲೆ ಕೈ ಮಾಡಿ ರೈತ ಭಾವುಕರಾಗಿ ನನಗೆ ಒಂದು ಸಾವಿರ ರೂಪಾಯಿ ಸಿಗುತ್ತಿತ್ತು, ನೀವು ನನಗೆ ಇನ್ನೂ 500 ರೂಪಾಯಿ ಕೊಟ್ಟಿದ್ದೀರಿ. ನಮ್ಮ ಆರೋಗ್ಯ ರಕ್ಷಣೆಗೆ 5

ಬಸ್ ಮೇಲಿದ್ದ ಮೋದಿ ಭಾವಚಿತ್ರಕ್ಕೆ ಮುತ್ತಿಕ್ಕಿದ ರೈತ| ವೈರಲ್ ಆಯ್ತು ಫೋಟೋ, ವಿಡಿಯೋ Read More »

ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ| ಆಲ್ ದ ಬೆಸ್ಟ್ ಸ್ಟೂಡೆಂಟ್ಸ್

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆ ಗದ್ದಲದ ನಡುವೆಯೇ ಇಂದಿನಿಂದ (ಮಾರ್ಚ್ 31) ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಆರಂಭಗೊಳ್ಳುತ್ತಿದ್ದು, ಏಪ್ರಿಲ್​ 15ರವರೆಗೆ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ​ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜೆರಾಕ್ಸ್ ಅಂಗಡಿಗಳನ್ನು ಬಂದ್​ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಇನ್ನು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್‌ ಫೋನ್, ಸ್ಮಾರ್ಟ್‌ವಾಚ್​​, ಇಯರ್‌ಫೋನ್, ಎಲೆಕ್ಟ್ರಾನಿಕ್ಸ್ ಉಪಕರಣ ತರುವಂತಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ

ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ| ಆಲ್ ದ ಬೆಸ್ಟ್ ಸ್ಟೂಡೆಂಟ್ಸ್ Read More »