ದೇಶ-ವಿದೇಶ

ಮುಂಬಯಿಯಲ್ಲಿ ನಡೆದ ಅಪಘಾತ-ಕೋಟದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್:‌ ಮುಂಬಯಿಯಲ್ಲಿ ನಡೆದ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೋಟ ಸಮೀಪ ಅಚ್ಲಾಡಿ ಮಕ್ಕಿಮನೆ ನಿವಾಸಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಅನ್ವಿಶ್‌ (19) ಚಿಕಿತ್ಸೆ ಫಲಿಸದೆ ಮುಂಬಯಿಯ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟ ಘಟನೆ ನಡೆದಿದೆ. ಈತ ಕಾವಡಿ ವರದರಾಜ್‌ ಶೆಟ್ಟಿ ಮತ್ತು ಅಚ್ಲಾಡಿಯ ಲತಾ ಶೆಟ್ಟಿ ಅವರ ಪುತ್ರನಾಗಿದ್ದು ತಂದೆ ರೈಲ್ವೆ ಉದ್ಯೋಗಿಯಾಗಿದ್ದರು.ಅನ್ವಿಶ್‌ ಮುಂಬಯಿಯಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು 15 ದಿನದ ಹಿಂದೆ ಸಂಬಂಧಿಕರ ಮನೆಯಿಂದ ರಾತ್ರಿ ಬೈಕ್‌ನಲ್ಲಿ ಮರಳುತ್ತಿದ್ದಾಗ ಸ್ಕಿಡ್‌ ಆಗಿ ಅಪಘಾತ ಸಂಭವಿಸಿದೆ ಎಂದು […]

ಮುಂಬಯಿಯಲ್ಲಿ ನಡೆದ ಅಪಘಾತ-ಕೋಟದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು Read More »

ಮಾ.31ರಂದು ದೇಶಾದ್ಯಂತ ಬ್ಯಾಂಕ್ ರಜೆ ಕ್ಯಾನ್ಸಲ್| RBI ನಿಂದ ಮಹತ್ವದ ಆದೇಶ

ಸಮಗ್ರ ನ್ಯೂಸ್: ಮಾರ್ಚ್ 31ರ ಭಾನುವಾರದಂದು ದೇಶಾದ್ಯಂತ ಬ್ಯಾಂಕ್’ಗಳನ್ನು ತೆರೆದಿಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿರ್ಧರಿಸಿದೆ. ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಟ್ವೀಟ್ ಮೂಲಕ ಆರ್ ಬಿಐ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದೆ. ಮಾರ್ಚ್ 31, 2024 ಭಾನುವಾರವಾಗಿದ್ದರೂ, ಎಲ್ಲಾ ಬ್ಯಾಂಕುಗಳು ತೆರೆದಿರುತ್ತವೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ 2023-24ರ ಕೊನೆಯ ದಿನವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ, ಆದಾಯ ತೆರಿಗೆ ಇಲಾಖೆ ತನ್ನ ಎಲ್ಲಾ ಕಚೇರಿಗಳನ್ನು

ಮಾ.31ರಂದು ದೇಶಾದ್ಯಂತ ಬ್ಯಾಂಕ್ ರಜೆ ಕ್ಯಾನ್ಸಲ್| RBI ನಿಂದ ಮಹತ್ವದ ಆದೇಶ Read More »

ನವೋದ್ಯಮದಲ್ಲಿ ಭಾರತಕ್ಕೆ ಮೂರನೇ ಸ್ಥಾನ/ ದೇಶದಲ್ಲಿ 1.25 ಲಕ್ಷ ಸ್ಟಾರ್ಟ್ ಅಪ್

ಸಮಗ್ರ ನ್ಯೂಸ್: ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ನವೋದ್ಯಮ ಹೊಂದಿರುವ ದೇಶಗಳ ಪೈಕಿ ಭಾರತಾ ಮೂರನೇ ಸ್ಥಾನ ಪಡೆದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಭಾರತ ಮಂಟಪಂನಲ್ಲಿ ನಡೆದ ‘ಸ್ಟಾರ್ಟ್ ಅಪ್ ಮಹಾಕುಂಭ’ದ ಸಮಾರೋಪ ಕಾರ್ಯಕ್ರಮದಲ್ಲಿ ಹೇಳಿದರು. “ದೇಶದಲ್ಲಿ 2014ರ ವೇಳೆ ಕೇವಲ 100 ನವೋದ್ಯಮಗಳಿದ್ದವು. ಪ್ರಸ್ತುತ ಅವುಗಳ ಸಂಖ್ಯೆ 1.25 ಲಕ್ಷಕ್ಕೆ ಮುಟ್ಟಿದೆ. ಈ ಪೈಕಿ ಶೇ 45ರಷ್ಟು ನವೋದ್ಯಮಗಳನ್ನು ಮಹಿಳೆಯರು ಮುನ್ನಡೆಸುತ್ತಿದ್ದಾರೆ. 12 ಲಕ್ಷ ಯುವಜನರು ಇವುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಬಿಲಿಯನ್ ಅಮೆರಿಕನ್ ಡಾಲರ್‍ಗಿಂತ

ನವೋದ್ಯಮದಲ್ಲಿ ಭಾರತಕ್ಕೆ ಮೂರನೇ ಸ್ಥಾನ/ ದೇಶದಲ್ಲಿ 1.25 ಲಕ್ಷ ಸ್ಟಾರ್ಟ್ ಅಪ್ Read More »

ಚುನಾವಣಾ ನೀತಿ ಸಂಹಿತೆ/ ಬಸ್‍ಗಳಲ್ಲಿ ಲಗೇಜ್ ಗಳನ್ನು ಸಾಗಿಸುವಾಗ ಎಚ್ಚರ

ಸಮಗ್ರ ನ್ಯೂಸ್: 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ದಾರಿಯುದ್ದಕ್ಕೂ ಪ್ರತಿ ಹೆಜ್ಜೆಗೂ ಪೆÇಲೀಸ್ ಕಾವಲು ಹಾಕಲಾಗುತ್ತಿದೆ. ಸಾರ್ವಜನಿಕ ಸಾರಿಗೆ ಬಸ್‍ಗಳಲ್ಲಿ ಲಗೇಜ್ ಗಳನ್ನು ಸಾಗಿಸುವಾಗ ಪ್ರಯಾಣಿಕರಿಗೆ ಕೆಲವು ನಿಬರ್ಂಧಗಳನ್ನು ವಿಧಿಸಲಾಗಿದ್ದು, ಇನ್ನು ಮುಂದೆ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಲಗೇಜ್‍ನಲ್ಲಿ ಕೆಲವು ವಸ್ತುಗಳನ್ನು ಸಾಗಿಸಲು ಅನುಮತಿಸಲಾಗುವುದಿಲ್ಲ. ಈಗಾಗಲೇ ನಾಲ್ಕು ನಿಗಮಗಳಿಗೆ ಹೊಸ ನಿಯಮಗಳನ್ನು ಪರಿಚಯಿಸಲಾಗಿದ್ದು ಚುನಾವಣಾ ಸಂಬಂಧಿತ ದಾಖಲಾತಿ ಅಥವಾ ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘಿಸುವ ಸರಕುಗಳನ್ನು ಸಾಗಿಸಲಾಗುವುದಿಲ್ಲ. ದಾಖಲೆಗಳಿಲ್ಲದೆ ಪ್ರಯಾಣಿಕರು

ಚುನಾವಣಾ ನೀತಿ ಸಂಹಿತೆ/ ಬಸ್‍ಗಳಲ್ಲಿ ಲಗೇಜ್ ಗಳನ್ನು ಸಾಗಿಸುವಾಗ ಎಚ್ಚರ Read More »

ನಿರುದ್ಯೋಗ ಪ್ರಮಾಣ/ ದೇಶದಲ್ಲಿ ಎರಡನೇ ಸ್ಥಾನ ಪಡೆದ ಕೇರಳ

ಸಮಗ್ರ ನ್ಯೂಸ್: ಡಿಸೆಂಬರ್ ತಿಂಗಳಿಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕೇರಳ ರಾಜ್ಯದ ನಗರ ಪ್ರದೇಶಗಳಲ್ಲಿ ನಿರೋದ್ಯೋಗ ಪ್ರಮಾಣದಲ್ಲಿ ಶೇ.10.3ಕ್ಕೆ ಏರಿಕೆಯಾಗಿದೆ ಎಂಬ ಅಂಶ ಕೇಂದ್ರದ ಅಂಕಿ ಅಂಶ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗವಾಗಿದೆ. ಈ ಅಂಕಿಅಂಶಗಳ ಪ್ರಕಾರ ನಿರುದ್ಯೋಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೇರಳ ಎರಡನೇ ಸ್ಥಾನದಲ್ಲಿದೆ. ನಿರುದ್ಯೋಗ ಪ್ರಮಾಣದಲ್ಲಿ ಹಿಮಾಚಲ ಪ್ರದೇಶದಲ್ಲಿ 12.3% ದಾಖಲಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಹರಿಯಾಣ ಅತ್ಯಂತ ಕಡಿಮೆ ಅಂದರೆ 3.1% ಪ್ರಮಾಣದಲ್ಲಿದೆ. ಆಂಧ್ರಪ್ರದೇಶ 8%, ತಮಿಳುನಾಡು 6.7%, ಕರ್ನಾಟಕ 3.6% ಪ್ರಮಾಣ

ನಿರುದ್ಯೋಗ ಪ್ರಮಾಣ/ ದೇಶದಲ್ಲಿ ಎರಡನೇ ಸ್ಥಾನ ಪಡೆದ ಕೇರಳ Read More »

ಲೋಕಸಭಾ ಚುನಾವಣೆ ಹಿನ್ನಲೆ/ ಯುಪಿಎಸ್‍ಸಿ ಪರೀಕ್ಷೆ ಮುಂದೂಡಿಕೆ

ಸಮಗ್ರ ನ್ಯೂಸ್: ಕೇಂದ್ರ ಲೋಕಸೇವಾ ಆಯೋಗ ನಡೆಸುವ ದೇಶದ ಉನ್ನತ ಮಟ್ಟದ ಪರೀಕ್ಷೆಗಳ ಪೈಕಿ ಒಂದಾದ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್‍ಸಿ) ಪರೀಕ್ಷೆಯನ್ನು ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ಯುಪಿಎಸ್‍ಸಿ ಪರೀಕ್ಷೆ ಮೇ 26ಕ್ಕೆ ನಿಗದಿಯಾಗಿತ್ತು. ಇದೀಗ ಪರೀಕ್ಷೆಯನ್ನು ಜೂ. 16ಕ್ಕೆ ಮುಂದೂಡಲಾಗಿದೆ.

ಲೋಕಸಭಾ ಚುನಾವಣೆ ಹಿನ್ನಲೆ/ ಯುಪಿಎಸ್‍ಸಿ ಪರೀಕ್ಷೆ ಮುಂದೂಡಿಕೆ Read More »

ರಷ್ಯಾ ಅಧ್ಯಕ್ಷನಾಗಿ ವ್ಲಾದಿಮಿರ್ ಪುತಿನ್ ಪುನರಾಯ್ಕೆ/ ಸ್ಟಾಲಿನ್ ನಂತರ ಸುದೀರ್ಘ ಕಾಲ ರಷ್ಯಾವನ್ನು ಆಳಿದ ವ್ಯಕ್ತಿ ಎಂಬ ಹೆಗ್ಗಳಿಕೆ

ಸಮಗ್ರ ನ್ಯೂಸ್: ರಷ್ಯಾ ಅಧ್ಯಕ್ಷೀಯ ಚುನಾವಣೆ ಮೂರು ದಿನಗಳ ಕಾಲ ನಡೆದು, ಬರೋಬ್ಬರಿ 7.6 ಕೋಟಿ (ಶೇ.87.29) ಮತಗಳನ್ನು ಪಡೆಯುವ ಮೂಲಕ ಹಾಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಐದನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾದ ಪುಟಿನ್ ಇದುವರೆಗೆ ಅಧ್ಯಕ್ಷ ಇಲ್ಲವೇ ಪ್ರಧಾನಿಯಾಗಿ ಸತತ ಅಧಿಕಾರ ನಡೆಸಿದ್ದಾರೆ. ಈ ಬಾರಿ ಗೆಲ್ಲುವುದರೊಂದಿಗೆ ಅವರ ಅಧಿಕಾರಾವಧಿ ಮತ್ತೆ 2030ರವರೆಗೆ ವಿಸ್ತರಣೆಗೊಂಡಿದೆ. ಈ ಮೂಲಕ ಅವರು ಸುದೀರ್ಘ ಅವಧಿಗೆ ದೇಶವನ್ನು ಆಳಿದ ಸ್ಟಾಲಿನ್ ನಂತರದ ಸ್ಥಾನ ಪಡೆದುಕೊಂಡಿದ್ದು,

ರಷ್ಯಾ ಅಧ್ಯಕ್ಷನಾಗಿ ವ್ಲಾದಿಮಿರ್ ಪುತಿನ್ ಪುನರಾಯ್ಕೆ/ ಸ್ಟಾಲಿನ್ ನಂತರ ಸುದೀರ್ಘ ಕಾಲ ರಷ್ಯಾವನ್ನು ಆಳಿದ ವ್ಯಕ್ತಿ ಎಂಬ ಹೆಗ್ಗಳಿಕೆ Read More »

ಹಿಂದೆ ಸರಿದ ಸಮುದ್ರ/ ಕೇರಳದಲ್ಲೊಂದು ವಿಚಿತ್ರ ಘಟನೆ

ಸಮಗ್ರ ನ್ಯೂಸ್: ಕೇರಳದ ಪುರಕ್ಕಾಡ್‍ನಲ್ಲಿ ಸಮುದ್ರವು ಏಕಾಏಕಿ ತೀರದಿಂದ ಸುಮಾರು 50 ಮೀಟರ್ ಸಮುದ್ರ ಹಿಂದೆ ಸರಿದು ಅಚ್ಚರಿ ಉಂಟು ಮಾಡಿದೆ. ಈ ಬೆಳವಣಿಗೆಯಿಂದ ಯಾವುದೇ ಅಪಾಯ ಉಂಟಾಗಿಲ್ಲವಾದರೂ, ತೀರದ ನಿವಾಸಿಗಳಿಗೆ ನಿದ್ದೆಯಿಲ್ಲದಂತೆ ಮಾಡಿದೆ ರಾತ್ರಿ ವೇಳೆ ಅಲೆಗಳ ಅಬ್ಬರ ಜೋರಾಗಿರುತ್ತದೆ. ಮುಂಜಾನೆ ವೇಳೆ ಇಂತಹ ವಿದ್ಯಮಾನ ಕಂಡು ಬಂದಿದೆ. ಈ ಹಿಂದೆ ಎರಡು ಬಾರಿ ಇದೇ ರೀತಿ ನಡೆದಿತ್ತು ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ. ಪುರಕ್ಕಾಡ್‍ನಿಂದ ದಕ್ಷಿಣಕ್ಕೆ 300 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು,

ಹಿಂದೆ ಸರಿದ ಸಮುದ್ರ/ ಕೇರಳದಲ್ಲೊಂದು ವಿಚಿತ್ರ ಘಟನೆ Read More »

ಬಂಗಾಳದ ನೂತನ ಡಿಜಿಪಿಯಾಗಿ ಸಂಜಯ್ ಮುಖರ್ಜಿ/ 24 ಗಂಟೆಗಳಲ್ಲಿ ಬದಲಾದ ನೇಮಕಾತಿ

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದ ಡಿಜಿಪಿ ಹುದ್ದೆಗೆ ಸಂಜಯ್ ಮುಖರ್ಜಿ ಅವರನ್ನು ನೇಮಿಸುವಂತೆ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ವಿವೇಕ್ ಸಹಾಯ್ ಅವರನ್ನು ನೇಮಕ ಮಾಡಿದ 24 ಗಂಟೆಗಳಲ್ಲಿ ಚುನಾವಣಾ ಆಯೋಗ ಅವರಿಗೆ ಗೇಟ್ ಪಾಸ್ ನೀಡಿದೆ. ವಿವೇಕ್ ಸಹಾಯ್ ಅವರ ನೇಮಕವು ಅವರ ಹಿರಿತನವನ್ನು ಆಧರಿಸಿದ್ದರೂ, ಲೋಕಸಭಾ ಚುನಾವಣೆ ಮುಗಿಯುವ ಮೊದಲು ಅವರು ಮೇ ಕೊನೆಯ ವಾರದಲ್ಲಿ ನಿವೃತ್ತರಾಗುವುದರಿಂದ ಮುಖರ್ಜಿ ಅವರನ್ನು ಡಿಜಿಪಿಯಾಗಿ ಹೆಸರಿಸಿದೆ. 1989ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಮುಖರ್ಜಿ, ಚುನಾವಣಾ

ಬಂಗಾಳದ ನೂತನ ಡಿಜಿಪಿಯಾಗಿ ಸಂಜಯ್ ಮುಖರ್ಜಿ/ 24 ಗಂಟೆಗಳಲ್ಲಿ ಬದಲಾದ ನೇಮಕಾತಿ Read More »

ಪೌರತ್ವ ತಿದ್ದುಪಡಿ ಕಾಯ್ದೆ/ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಸಮಗ್ರ ನ್ಯೂಸ್: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಡೆ ಕೋರುವಂತೆ ಸುಪ್ರೀಂ ಕೋರ್ಟ್ ಗೆ 237 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ತಡೆ ನೀಡಲು ನಿರಾಕರಿಸಿದೆ. ಜೊತೆಗೆ ವಿರೋಧ ಹಾಗೂ ತಡೆ ಕುರಿತು ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಜಸ್ಟೀಸ್ ಜೆಬಿ ಪರಿದ್ವಾಲ್, ಮನೋಜ್ ಮಿಶ್ರಾ ಸೇರಿದ ಪೀಠ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಅವಶ್ಯಕತೆ, ಇದಕ್ಕೆ ಎದುರಾಗಿರುವ ವಿರೋಧಗಳ ಕುರಿತು ಏಪ್ರಿಲ್

ಪೌರತ್ವ ತಿದ್ದುಪಡಿ ಕಾಯ್ದೆ/ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ Read More »